Monday, June 30, 2025
HomeStateLokayukta Raid : ಲಂಚ ಸ್ವೀಕರಿಸುವಾಗ ಲೋಕಾ ಬಲೆಗೆ ಬಿದ್ದ ಪುರಸಭೆ ಬಿಲ್ ಕಲೆಕ್ಟರ್ ಅರುಣ್...

Lokayukta Raid : ಲಂಚ ಸ್ವೀಕರಿಸುವಾಗ ಲೋಕಾ ಬಲೆಗೆ ಬಿದ್ದ ಪುರಸಭೆ ಬಿಲ್ ಕಲೆಕ್ಟರ್ ಅರುಣ್ ಕುಮಾರ್….!

Lokayukta Raid – ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ಪುರಸಭೆ ಬಿಲ್ ಕಲೆಕ್ಟರ್ ಅರುಣ್ ಕುಮಾರ್ ಎಂಬುವವರು ವ್ಯಕ್ತಿಯೊಬ್ಬರಿಂದ  ಲಂಚ ಸ್ವೀಕರಿಸುವ ವೇಳೆ ಲೋಕಾಯುಕ್ತ ಪೊಲೀಸರಿಗೆ  ಸಿಕ್ಕಬಿದ್ದಿರುವ ಘಟನೆ ಶುಕ್ರವಾರ ನಡೆದಿದೆ. ಇ ಖಾತೆ ಮಾಡಿಸಲು ವ್ಯಕ್ತಿಯೊಬ್ಬರಿಂದ ಹಣ ಬೇಡಿಕೆಯಿಟ್ಟ ದೂರಿನ ಮೇರೆಗೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಲಂಚ ಸ್ವೀಕರಿಸುವಾಗ ಪುರಸಭೆ ಬಿಲ್ ಕಲೆಕ್ಟರ್‍ ಸಿಕ್ಕಿಬಿದ್ದಿದ್ದಾರೆ ಎನ್ನಲಾಗಿದೆ.

Bagepalli Loka ride 0

ಬಾಗೇಪಲ್ಲಿ ಪುರಸಭೆಯಲ್ಲಿ ಬಿಲ್‍ಕಲೆಕ್ಟರ್ ಆಗಿ ಸೇವೆ ಸಲ್ಲಿಸುತ್ತಿರುವ ಅರಣ್ ಕುಮಾರ್  ಇ ಖಾತೆ ಮಾಡಿಸಲು ವ್ಯಕ್ತಿಯೊಬ್ಬರಿಂದ 30 ಸಾವಿರ ರೂ.ಗಳ ಹಣ ಬೇಡಿಕೆ ಇಟ್ಟಿದ್ದ ಎನ್ನಲಾಗಿದೆ. ಈ ಸಂಬಂಧ ಈಗಾಗಲೇ 5 ಸಾವಿರ ರೂ.ಗಳ ಹಣವನ್ನು ಹಣವನ್ನು ಪಡೆದು ಇಂದು ಉಳಿದ 25 ಸಾವಿರ ರೂ.ಗಳ ಹಣವನ್ನು ಲಂಚವಾಗಿ ಸ್ವೀಕರಿಸುವ ವೇಳೆ ಚಿಕ್ಕಬಳ್ಳಾಪುರ ಲೋಕಾಯುಕ್ತ ಪೊಲೀಸರ ಬಲೆಗೆ ಸಿಕ್ಕಿಬಿದ್ದಿರುವುದಾಗಿ ವರದಿಯಾಗಿದೆ.

ಇ ಖಾತೆ ಮಾಡಲು  ಪುರಸಭೆ ಬಿಲ್ ಕಲೆಕ್ಟರ್ ಅರಣ್ ಕುಮಾರ್ ಎಂಬುವವರು 30 ಸಾವಿರ  ರೂ.ಗಳ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಹಿನ್ನಲೆಯಲ್ಲಿ ವಕೀಲರಾದ ಅಂಜನ್ ಕುಮಾರ್ ಎಂಬುವವರು ಚಿಕ್ಕಬಳ್ಳಾಪುರ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದ ಹಿನ್ನಲೆಯಲ್ಲಿ ಲೋಕಾಯುಕ್ತ ಎಸ್. ಪಿ.  ಅಂಟೋನಿ ಜಾನ್ ರವರ ಮಾರ್ಗದರ್ಶನದಲ್ಲಿ ಡಿವೈಎಸ್‍ಪಿ ವೀರೇಂದ್ರ ಕುಮಾರ್ ರವರ ನೇತೃತ್ವದಲ್ಲಿ ಶುಕ್ರವಾರ ದಾಳಿ ನಡೆಸಿ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಅರುಣ್ ಕುಮಾರ್  ಪುರಸಭೆ ಕಚೇರಿಯಲ್ಲಿ ವ್ಯಕ್ತಿಯಿಂದ ಲಂಚ ಸ್ವೀಕರಿಸುವ ವೇಳೆ ಬಂಧಿಸಿ ತನಿಖೆ ನಡೆಸಿದರು. ಈ ದಾಳಿಯಲ್ಲಿ ಲೋಕಾಯುಕ್ತ  ಸರ್ಕಲ್ ಇನ್ಸ್‍ಪೆಕ್ಟರ್ ಶಿವಪ್ರಸಾದ್ ಸಿಬ್ಬಂದಿಗಳಾದ ಕೆ.ಪಿ.ನಾಗರಾಜ್, ಮಂಜುಳಾ, ಚೌಡಪ್ಪ, ಲಿಂಗರಾಜು ಮತ್ತಿತರರು ಈ ದಾಳಿಯಲ್ಲಿ ಭಾಗವಹಿಸಿದ್ದರು.

by Adminhttp://ismkannadanews.com
Welcome to ISM Kannada News, if you want to contact us, then feel free to say anything about www.ismkannadanews.com
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular