Close Menu
ISM Kannada News
    IPL 2025 Live Score
    What's Hot

    Crime : ಅಕ್ರಮ ಸಂಬಂಧಕ್ಕೆ ಅಡ್ಡಿಯಾದ ಪತಿಯನ್ನು ಸುಪಾರಿ ಕೊಟ್ಟು ಕೊಲೆ ಮಾಡಿಸಿದ ಪತ್ನಿ….!

    May 17, 2025

    Pakistan : ಪಾಕಿಸ್ತಾನದಲ್ಲಿ ಬೆಚ್ಚಿ ಬೀಳಿಸುವ ಸತ್ಯ: ಶೇ. 82ರಷ್ಟು ಅತ್ಯಾಚಾರಗಳು ತಂದೆ, ಅಜ್ಜ, ಅಣ್ಣಂದಿರಿಂದಲೇ ನಡೆಯುತ್ತಿವೆ ಎಂದ ಪಾಕ್ ಮಾಜಿ ಸಂಸದೆ

    May 17, 2025

    Janaspandana : ಜನರ ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ – ಶಾಸಕ ಸುಬ್ಬಾರೆಡ್ಡಿ ಭರವಸೆ…!

    May 17, 2025
    Facebook X (Twitter) Instagram
    Facebook X (Twitter) Instagram WhatsApp
    ISM Kannada NewsISM Kannada News
    Subscribe
    • Home
    • All News
      • State
      • National
      • International
    • Special
    • Entertainment
    • Technology
    • Web Stories
    • Foodies
    ISM Kannada News
    Home»State»CET Exam : ವಿದ್ಯಾರ್ಥಿಗಳ ಜನಿವಾರ ತೆಗೆಸಿದ ವಿವಾದ – ಪರೀಕ್ಷೆಯ ವಸ್ತ್ರ ಸಂಹಿತಿ ಏನು ಹೇಳುತ್ತೆ? ಈ ಸುದ್ದಿ ಓದಿ…!
    State

    CET Exam : ವಿದ್ಯಾರ್ಥಿಗಳ ಜನಿವಾರ ತೆಗೆಸಿದ ವಿವಾದ – ಪರೀಕ್ಷೆಯ ವಸ್ತ್ರ ಸಂಹಿತಿ ಏನು ಹೇಳುತ್ತೆ? ಈ ಸುದ್ದಿ ಓದಿ…!

    By by AdminApril 18, 20251 Comment3 Mins Read
    Facebook Twitter Pinterest WhatsApp
    CET Exam Janivara Controversy Karnataka 2025

    Table of Contents

    Toggle
    • CET Exam – ಜನಿವಾರ ವಿವಾದ ಏನು?
      • CET Exam – ಪುರುಷರ ವಸ್ತ್ರ ಸಂಹಿತೆ:
        • CET Exam – ಮಹಿಳೆಯರ ವಸ್ತ್ರ ಸಂಹಿತಿ:

    CET Exam – ಕರ್ನಾಟಕದಾದ್ಯಂತ ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕಾಗಿ ನಡೆದ ಸಿಇಟಿ ಪರೀಕ್ಷೆ (Karnataka CET Exam 2025) ಇತ್ತೀಚೆಗೆ ಮುಕ್ತಾಯಗೊಂಡಿದೆ. ಏಪ್ರಿಲ್ 15, 16 ಮತ್ತು 17 ರಂದು ಪರೀಕ್ಷೆಗಳು ಯಶಸ್ವಿಯಾಗಿ ನಡೆದವು. ಆದರೆ, ಕೊನೆಯ ದಿನವಾದ ಏಪ್ರಿಲ್ 17 ರಂದು ಶಿವಮೊಗ್ಗ ಮತ್ತು ಬೀದರ್‌ನ ಪರೀಕ್ಷಾ ಕೇಂದ್ರಗಳಲ್ಲಿ ನಡೆದ ಒಂದು ಘಟನೆ ತೀವ್ರ ವಿವಾದಕ್ಕೆ (Janivara controversy) ಕಾರಣವಾಗಿದೆ.

    CET Exam – ಜನಿವಾರ ವಿವಾದ ಏನು?

    ಬೀದರ್‌ನ ಸಾಯಿ ಸ್ಫೂರ್ತಿ ಪರೀಕ್ಷಾ ಕೇಂದ್ರದಲ್ಲಿ, ತಪಾಸಣೆ ವೇಳೆ ವಿದ್ಯಾರ್ಥಿಯೊಬ್ಬ ತನ್ನ ಜನಿವಾರವನ್ನು ತೆಗೆಯಲು ನಿರಾಕರಿಸಿದ್ದರಿಂದ ಗಣಿತ ಪರೀಕ್ಷೆಗೆ ಹಾಜರಾಗಲು ಸಾಧ್ಯವಾಗಲಿಲ್ಲ. ಈ ಘಟನೆಯಿಂದ ಆತನ ಎಂಜಿನಿಯರಿಂಗ್ ಭವಿಷ್ಯವು ಅತಂತ್ರ ಸ್ಥಿತಿಗೆ ತಲುಪಿದೆ. ಮತ್ತೊಂದೆಡೆ, ಶಿವಮೊಗ್ಗದ ಆದಿಚುಂಚನಗಿರಿ ಕಾಲೇಜಿನ ಪರೀಕ್ಷಾ ಕೇಂದ್ರದಲ್ಲಿ, ವಿದ್ಯಾರ್ಥಿಯೊಬ್ಬನ ಜನಿವಾರವನ್ನು ಕತ್ತರಿಸಿ ಪರೀಕ್ಷೆ ಬರೆಯಲು ಅನುಮತಿ ನೀಡಲಾಗಿದೆ ಎಂಬ ಆರೋಪ ಕೇಳಿಬಂದಿದೆ. ವಿದ್ಯಾರ್ಥಿಯು ಜನಿವಾರ ತೆಗೆಯಲು ಒಪ್ಪದಿದ್ದಾಗ ಪರೀಕ್ಷಾ ಸಿಬ್ಬಂದಿ ಅದನ್ನು ಕತ್ತರಿಸಿದ್ದಾರೆ ಎಂದು ಹೇಳಲಾಗುತ್ತಿದ್ದು, ಈ ಘಟನೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

    CET Exam Janivara Controversy Karnataka 2025

    ಹಾಗಾದರೆ, ಕರ್ನಾಟಕ ಸಿಇಟಿ ಪರೀಕ್ಷೆಯ ವಸ್ತ್ರ ಸಂಹಿತಿ (CET dress code) ಏನು ಹೇಳುತ್ತದೆ? ಪುರುಷರು ಮತ್ತು ಮಹಿಳೆಯರು ಯಾವ ರೀತಿಯ ಉಡುಪುಗಳನ್ನು ಧರಿಸಬಹುದು ಎಂಬುದರ ಕುರಿತು ಇಲ್ಲಿದೆ ವಿವರ:

    CET Exam – ಪುರುಷರ ವಸ್ತ್ರ ಸಂಹಿತೆ:

    • ಪರೀಕ್ಷೆಯ ದಿನದಂದು ಪೂರ್ಣ ತೋಳಿನ ಬಟ್ಟೆಗಳನ್ನು ಧರಿಸುವುದನ್ನು ನಿಷೇಧಿಸಲಾಗಿದೆ.
    • ಕಾಲರ್ ಇಲ್ಲದ ಸರಳ ಶರ್ಟ್/ಟೀ ಶರ್ಟ್‌ಗಳಿಗೆ ಆದ್ಯತೆ ನೀಡಲಾಗುತ್ತದೆ.
    • ಕಡಿಮೆ ಜೇಬುಗಳನ್ನು ಹೊಂದಿರುವ ಪ್ಯಾಂಟ್ ಮತ್ತು ಸರಳವಾದ ಟ್ರೌಸರ್ಸ್‌ಗಳನ್ನು ಧರಿಸಬಹುದು.
    • ಕುರ್ತಾ, ಪೈಜಾಮಾ ಮತ್ತು ಜೀನ್ಸ್ ಪ್ಯಾಂಟ್‌ಗಳನ್ನು ಧರಿಸಲು ಅವಕಾಶವಿಲ್ಲ.
    • ಪರೀಕ್ಷಾ ಹಾಲ್‌ನ ಒಳಗೆ ಶೂಗಳನ್ನು ಧರಿಸುವುದನ್ನು ನಿಷೇಧಿಸಲಾಗಿದೆ.
    • ಕುತ್ತಿಗೆಗೆ ಯಾವುದೇ ಲೋಹದ ಆಭರಣಗಳನ್ನು ಧರಿಸಬಾರದು.
    • ಕಿವಿಯೋಲೆ ಮತ್ತು ಕಡಗಗಳನ್ನು ಧರಿಸಲು ಅನುಮತಿ ಇಲ್ಲ.

    CET Exam – ಮಹಿಳೆಯರ ವಸ್ತ್ರ ಸಂಹಿತಿ:

    • ಮಹಿಳಾ ಅಭ್ಯರ್ಥಿಗಳು ವಿಸ್ತಾರವಾದ ಕಸೂತಿ, ಹೂಗಳು ಅಥವಾ ದೊಡ್ಡ ಬಟನ್‌ಗಳನ್ನು ಹೊಂದಿರುವ ಬಟ್ಟೆಗಳನ್ನು ಧರಿಸುವುದನ್ನು ನಿಷೇಧಿಸಲಾಗಿದೆ.
    • ಪರೀಕ್ಷೆಯ ದಿನದಂದು ಪೂರ್ಣ ತೋಳಿನ ಬಟ್ಟೆ ಮತ್ತು ಜೀನ್ಸ್‌ಗಳನ್ನು ಧರಿಸಬಾರದು.
    • ಬದಲಾಗಿ, ಮುಜುಗರವಾಗದ ರೀತಿಯ ಅರ್ಧ ತೋಳಿನ ಬಟ್ಟೆಗಳನ್ನು ಧರಿಸಬೇಕು. ದಪ್ಪ ಹಿಮ್ಮಡಿಯ ಚಪ್ಪಲಿಗಳನ್ನು ನಿಷೇಧಿಸಲಾಗಿದೆ.
    • ದಪ್ಪವಾದ ಶೂಗಳು, ದಪ್ಪವಾದ ಚಪ್ಪಲಿಗಳು ಮತ್ತು ಅತಿ ತೆಳುವಾದ ಶೂಗಳು ಅಥವಾ ಚಪ್ಪಲಿಗಳನ್ನು ನಿಷೇಧಿಸಲಾಗಿದೆ.
    • ಮಹಿಳಾ ಅಭ್ಯರ್ಥಿಗಳು ಯಾವುದೇ ರೀತಿಯ ಲೋಹದ ಆಭರಣಗಳನ್ನು ಧರಿಸುವುದನ್ನು ನಿಷೇಧಿಸಲಾಗಿದೆ.
    • ಕಿವಿಯೋಲೆ ಮತ್ತು ಉಂಗುರಗಳನ್ನು ಧರಿಸಲು ಅನುಮತಿ ಇಲ್ಲ.
    • ಮಂಗಳ ಸೂತ್ರ ಮತ್ತು ಕಾಲುಂಗುರಗಳನ್ನು ಧರಿಸಲು ಅವಕಾಶವಿದೆ.

    ಈ ಹಿಂದೆ, ಗೆಜೆಟೆಡ್ ಪ್ರೊಬೆಷನರಿ ಹುದ್ದೆಗಳಿಗೆ (ಕೆಎಎಸ್) ನಡೆದ ಪೂರ್ವಭಾವಿ ಪರೀಕ್ಷೆಯಲ್ಲಿ ಮಹಿಳಾ ಅಭ್ಯರ್ಥಿಗಳ ಮಂಗಳಸೂತ್ರ ಮತ್ತು ಕಾಲುಂಗುರಗಳನ್ನು ತೆಗೆಸಿದ ಪ್ರಕರಣವು ಭಾರೀ ವಿವಾದವನ್ನು ಸೃಷ್ಟಿಸಿತ್ತು. ಈ ಘಟನೆಯ ನಂತರ ಎಚ್ಚೆತ್ತ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಮಂಗಳಸೂತ್ರ ಮತ್ತು ಕಾಲುಂಗುರಗಳನ್ನು ಧರಿಸಲು ಅನುಮತಿ ನೀಡಿತ್ತು. ಆದರೆ, ಈಗ ಜನಿವಾರ ತೆಗೆಸಿದ ವಿವಾದ ಹೊಸ ಚರ್ಚೆಗೆ ಗ್ರಾಸವಾಗಿದೆ.

    CET Exam – ಕೆಇಎ ಕಾರ್ಯನಿರ್ವಾಹಕ ನಿರ್ದೇಶಕರ ಸ್ಪಷ್ಟನೆ:

    ಈ ಕುರಿತು ಪ್ರತಿಕ್ರಿಯಿಸಿರುವ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್.ಪ್ರಸನ್ನ ಅವರು, ಸಿಇಟಿ ಪರೀಕ್ಷೆಯ ವೇಳೆ ಸಿಬ್ಬಂದಿ ಜನಿವಾರ ತೆಗೆಯಬೇಕು ಎಂದು ಹೇಳಿದ್ದು ತಪ್ಪು ಎಂದು ಸ್ಪಷ್ಟಪಡಿಸಿದ್ದಾರೆ. “ನಾವು ಯಾವುದೇ ಜಾತಿ ಅಥವಾ ಧರ್ಮದ ವಿರುದ್ಧ ಮಾರ್ಗಸೂಚಿಗಳನ್ನು ಸಿದ್ಧಪಡಿಸುವುದಿಲ್ಲ. ಈಗ ತಪ್ಪು ನಡೆದಿದೆ. ಇಂತಹ ತಪ್ಪುಗಳು ಮುಂದೆ ಮರುಕಳಿಸದಂತೆ ಕ್ರಮ ಕೈಗೊಳ್ಳುತ್ತೇವೆ. ಈ ವಿಷಯವನ್ನು ದೊಡ್ಡದು ಮಾಡುವುದು ಬೇಡ. ಯಾರು ಈ ಕೆಲಸ ಮಾಡಿದ್ದಾರೆ ಅವರ ಮೇಲೆ ಕ್ರಮ ತೆಗೆದುಕೊಳ್ಳುತ್ತೇವೆ. ಜಿಲ್ಲಾಧಿಕಾರಿಗಳಿಗೆ ಈಗಾಗಲೇ ತನಿಖೆಗೆ ಆದೇಶಿಸಲಾಗಿದೆ. ವರದಿ ಬಂದ ನಂತರ ಸೂಕ್ತ ಕ್ರಮ ಕೈಗೊಳ್ಳಲಾಗುವುದು” ಎಂದು ಅವರು ತಿಳಿಸಿದ್ದಾರೆ.

    CET Exam Janivara Controversy Karnataka 2025

    CET Exam – ಸಮಾಜದಿಂದ ಆಕ್ರೋಶ, ಸರ್ಕಾರದಿಂದ ಭರವಸೆ

    ಈ ಘಟನೆಯನ್ನು ಖಂಡಿಸಿ ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ಎಸ್. ರಘುನಾಥ್ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದು, “ಜನಿವಾರ ಧಾರ್ಮಿಕ ಮತ್ತು ಸಾಂಸ್ಕೃತಿಕವಾಗಿ ಮಹತ್ವದ ಸಂಕೇತವಾಗಿದೆ. ಇದನ್ನು ತೆಗೆಯಲು ಒತ್ತಾಯಿಸುವುದು ಭಾವನೆಗಳಿಗೆ ಧಕ್ಕೆ ತರುವ ಕೃತ್ಯವಾಗಿದೆ,” ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಅವರು ಪ್ರತಿಭಟನೆಗೆ ಕರೆ ನೀಡಿದ್ದು, ಈ ವಿಷಯವನ್ನು ರಾಜ್ಯಾದ್ಯಂತ ಎತ್ತಿಹಿಡಿಯುವ ಉದ್ದೇಶವನ್ನು ತಿಳಿಸಿದ್ದಾರೆ.

    Read this also : Karnataka 2nd PUC Result ಪ್ರಕಟ: ಉಡುಪಿ ಮೊದಲು, ದಕ್ಷಿಣ ಕನ್ನಡ ಎರಡನೇ ಸ್ಥಾನ, ಫೇಲ್ ಆದರೆ ಚಿಂತೆ ಬೇಡ: ಪರೀಕ್ಷೆ-2 ವೇಳಾಪಟ್ಟಿ ಇಲ್ಲಿದೆ…!

    ಇದೇ ವಿಷಯದ ಬಗ್ಗೆ ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ್ ಮಾತನಾಡಿ, “ಜನಿವಾರ ತೆಗೆಸಿರುವುದು ನಿಜವಾದರೆ, ಇದು ಅತಿರೇಕದ ವರ್ತನೆಯಾಗಿದೆ. ವಿದ್ಯಾರ್ಥಿಗಳ ಧಾರ್ಮಿಕ ಭಾವನೆಗಳಿಗೆ ಗೌರವ ನೀಡಬೇಕು. ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು,” ಎಂದು ಭರವಸೆ ನೀಡಿದ್ದಾರೆ. ಸರ್ಕಾರವು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ, ಮುಂದಿನ ಪರೀಕ್ಷೆಗಳಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.

    CET dress code CET Exam CET Exam 2025 CET news exam dress code Janivara controversy Karnataka CET Karnataka Education KEA rules religious symbols exam student rights
    Share. Facebook Twitter Pinterest WhatsApp
    by Admin
    • Website
    • Facebook

    Welcome to ISM Kannada News, if you want to contact us, then feel free to say anything about www.ismkannadanews.com

    Related Posts

    Janaspandana : ಜನರ ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ – ಶಾಸಕ ಸುಬ್ಬಾರೆಡ್ಡಿ ಭರವಸೆ…!

    May 17, 2025

    Indira Canteen: ಬಾಗೇಪಲ್ಲಿಯಲ್ಲಿ ಬಡವರ ಬಂಧು ಇಂದಿರಾ ಕ್ಯಾಂಟೀನ್ ಉದ್ಘಾಟಿಸಿ ಶಾಸಕ ಸುಬ್ಬಾರೆಡ್ಡಿ…!

    May 17, 2025

    Gadag : ಯುವಕನ ಹಿಂದೆ ಬಿದ್ದ ಮೂರು ಮಕ್ಕಳ ತಾಯಿ, ಅನೈತಿಕ ಸಂಬಂಧ ಕೊಲೆಯಲ್ಲಿ ಅಂತ್ಯ….!

    May 17, 2025

    1 Comment

    1. Pingback: Janivara Controversy : ಜನಿವಾರ ತೆಗಿಸಿದ್ದು, ಬ್ರಾಹ್ಮಣ ಸಮುದಾಯಕ್ಕೆ ಅವಮಾನ ಮಾಡಿದಂತೆ: ನಿರಂಜನ್ ಆಕ್ರೋಷ...! - ISM Kannada News

    Leave A Reply Cancel Reply

    IPL 2025 Live Score
    Don't Miss

    Crime : ಅಕ್ರಮ ಸಂಬಂಧಕ್ಕೆ ಅಡ್ಡಿಯಾದ ಪತಿಯನ್ನು ಸುಪಾರಿ ಕೊಟ್ಟು ಕೊಲೆ ಮಾಡಿಸಿದ ಪತ್ನಿ….!

    National May 17, 2025

    Crime – ತನ್ನ ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಗಂಡನನ್ನು ಮುಗಿಸಲು ಪ್ರಿಯಕರ ಹಾಗೂ ಇನ್ನೊಬ್ಬ ವ್ಯಕ್ತಿಯ ಸಹಾಯ ಪಡೆದು ಕೊಲೆ…

    Pakistan : ಪಾಕಿಸ್ತಾನದಲ್ಲಿ ಬೆಚ್ಚಿ ಬೀಳಿಸುವ ಸತ್ಯ: ಶೇ. 82ರಷ್ಟು ಅತ್ಯಾಚಾರಗಳು ತಂದೆ, ಅಜ್ಜ, ಅಣ್ಣಂದಿರಿಂದಲೇ ನಡೆಯುತ್ತಿವೆ ಎಂದ ಪಾಕ್ ಮಾಜಿ ಸಂಸದೆ

    May 17, 2025

    Janaspandana : ಜನರ ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ – ಶಾಸಕ ಸುಬ್ಬಾರೆಡ್ಡಿ ಭರವಸೆ…!

    May 17, 2025

    Indira Canteen: ಬಾಗೇಪಲ್ಲಿಯಲ್ಲಿ ಬಡವರ ಬಂಧು ಇಂದಿರಾ ಕ್ಯಾಂಟೀನ್ ಉದ್ಘಾಟಿಸಿ ಶಾಸಕ ಸುಬ್ಬಾರೆಡ್ಡಿ…!

    May 17, 2025

    Gadag : ಯುವಕನ ಹಿಂದೆ ಬಿದ್ದ ಮೂರು ಮಕ್ಕಳ ತಾಯಿ, ಅನೈತಿಕ ಸಂಬಂಧ ಕೊಲೆಯಲ್ಲಿ ಅಂತ್ಯ….!

    May 17, 2025

    Love Marriage : ಚಿಕ್ಕಬಳ್ಳಾಪುರದಲ್ಲಿ ನಡೆದ ಮುಸ್ಲಿಂ ಯುವತಿ ಹಿಂದೂ ಯುವಕನ ಪ್ರೇಮ ವಿವಾಹ, ಪೊಲೀಸರ ಭದ್ರತೆ ಕೋರಿದ ನವಜೋಡಿ….!

    May 17, 2025
    ISM Kannada News
    Facebook X (Twitter) Instagram Pinterest
    • Home
    • About Us
    • Contact Us
    • Privacy Policy
    © 2025 ISM Kannada News. Designed by ISM News.

    Type above and press Enter to search. Press Esc to cancel.