Close Menu
ISM Kannada News
    IPL 2025 Live Score
    What's Hot

    Crime : ಅಕ್ರಮ ಸಂಬಂಧಕ್ಕೆ ಅಡ್ಡಿಯಾದ ಪತಿಯನ್ನು ಸುಪಾರಿ ಕೊಟ್ಟು ಕೊಲೆ ಮಾಡಿಸಿದ ಪತ್ನಿ….!

    May 17, 2025

    Pakistan : ಪಾಕಿಸ್ತಾನದಲ್ಲಿ ಬೆಚ್ಚಿ ಬೀಳಿಸುವ ಸತ್ಯ: ಶೇ. 82ರಷ್ಟು ಅತ್ಯಾಚಾರಗಳು ತಂದೆ, ಅಜ್ಜ, ಅಣ್ಣಂದಿರಿಂದಲೇ ನಡೆಯುತ್ತಿವೆ ಎಂದ ಪಾಕ್ ಮಾಜಿ ಸಂಸದೆ

    May 17, 2025

    Janaspandana : ಜನರ ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ – ಶಾಸಕ ಸುಬ್ಬಾರೆಡ್ಡಿ ಭರವಸೆ…!

    May 17, 2025
    Facebook X (Twitter) Instagram
    Facebook X (Twitter) Instagram WhatsApp
    ISM Kannada NewsISM Kannada News
    Subscribe
    • Home
    • All News
      • State
      • National
      • International
    • Special
    • Entertainment
    • Technology
    • Web Stories
    • Foodies
    ISM Kannada News
    Home»State»Newlywed Woman – ನವವಿವಾಹಿತೆ ಆತ್ಮಹತ್ಯೆ: ಅತ್ತೆ-ಭಾವನಿಂದ ವರ್ಣಭೇದ ಕಿರುಕುಳ, ಡೆತ್ ನೋಟ್‌ನಲ್ಲಿ ಸತ್ಯ ಬಯಲು
    State

    Newlywed Woman – ನವವಿವಾಹಿತೆ ಆತ್ಮಹತ್ಯೆ: ಅತ್ತೆ-ಭಾವನಿಂದ ವರ್ಣಭೇದ ಕಿರುಕುಳ, ಡೆತ್ ನೋಟ್‌ನಲ್ಲಿ ಸತ್ಯ ಬಯಲು

    By by AdminApril 19, 2025No Comments2 Mins Read
    Facebook Twitter Pinterest WhatsApp
    Newlywed woman dies by suicide due to colorism and harassment from in-laws in Karnataka

    Table of Contents

    Toggle
    • Newlywed Woman – ವರ್ಣಭೇದ ಕಿರುಕುಳದಿಂದ ಆತ್ಮಹತ್ಯೆ?
      • Newlywed Woman — ಡೆತ್ ನೋಟ್‌ ನಲ್ಲಿ ಅಡಗಿತ್ತು ಸತ್ಯ
        • Newlywed Woman – ಕುಟುಂಬದ ಆಕ್ರೋಶ

    Newlywed Woman – ಕನಸಿನ ಜೀವನಕ್ಕೆ ಕಾಲಿಟ್ಟ ನವವಿವಾಹಿತೆಯೊಬ್ಬಳು, ಮದುವೆಯಾದ ಕೇವಲ ನಾಲ್ಕು ತಿಂಗಳಲ್ಲಿ ಜೀವಕ್ಕೆ ಕೊನೆ ಹಾಡಿಕೊಂಡ ಘಟನೆ ಕರ್ನಾಟಕ ರಾಜ್ಯದ ಗದಗ ಜಿಲ್ಲೆಯ ಬೆಟಗೇರಿಯಲ್ಲಿ ನಡೆದಿದೆ. ಕಾರಣ? ಅತ್ತೆ ಮತ್ತು ಭಾವನಿಂದ ಸತತವಾಗಿ ಎದುರಾದ ವರ್ಣಭೇದ ಕಿರುಕುಳ. “ನೀನು ಕಪ್ಪಾಗಿದ್ದೀಯಾ” ಎಂದು ಮಾನಸಿಕವಾಗಿ ಹಿಂಸಿಸಿದ್ದರಿಂದ ಮನನೊಂದ ಯುವತಿ, ಆತ್ಮಹತ್ಯೆಗೆ ಶರಣಾದಳು. ತನ್ನ ಸಾವಿಗೆ ಅತ್ತೆ ಮತ್ತು ಭಾವನೇ ಕಾರಣ ಎಂದು ಡೆತ್ ನೋಟ್‌ನಲ್ಲಿ ಬರೆದಿಟ್ಟಿರುವ ಈ ಯುವತಿಯ ಕಥೆ, ಸಮಾಜದ ಕೊಳಕು ಮನಸ್ಥಿತಿಯನ್ನು ಬಯಲಿಗೆಳೆದಿದೆ.

    Newlywed Woman – ವರ್ಣಭೇದ ಕಿರುಕುಳದಿಂದ ಆತ್ಮಹತ್ಯೆ?

    ಗದಗದ ಬೆಟಗೇರಿ ಶರಣಬಸವೇಶ್ವರ ನಗರದ ನಿವಾಸಿಯಾದ ಅಮರೇಶ್ ಮತ್ತು ಬಳ್ಳಾರಿಯ ಪೂಜಾ ಅವರ ವಿವಾಹ ಕೇವಲ ನಾಲ್ಕು ತಿಂಗಳ ಹಿಂದೆ ಅದ್ದೂರಿಯಾಗಿ ನೆರವೇರಿತ್ತು. ಆದರೆ, ಮದುವೆಯ ಸಂತಸ ದೀರ್ಘಕಾಲ ಉಳಿಯಲಿಲ್ಲ. ಅತ್ತೆ ಶಶಿಕಲಾ ಮತ್ತು ಭಾವ ವೀರನಗೌಡ, ಪೂಜಾಳನ್ನು “ನೀನು ಕಪ್ಪಾಗಿದ್ದೀಯಾ, ನಮ್ಮ ಅಮರೇಶ್‌ಗೆ ಇನ್ನೂ ಚೆನ್ನಾಗಿರುವ ಹುಡುಗಿ ಸಿಗುತ್ತಿದ್ದಳು” ಎಂದು ಪದೇಪದೇ ಕೀಳಾಗಿ ಮಾತನಾಡಿ ಕಿರುಕುಳ ನೀಡಿದರು. ಇದರ ಜೊತೆಗೆ, “ನೀನು ನೋಡಲು ಚೆನ್ನಾಗಿಲ್ಲ, ಅಡುಗೆಯೂ ಸರಿಯಾಗಿ ಮಾಡಲು ಬರುವುದಿಲ್ಲ” ಎಂದು ನಿರಂತರವಾಗಿ ಮಾನಸಿಕವಾಗಿ ಹಿಂಸಿಸಿದರು. ಈ ವರ್ಣಭೇದ ಕಿರುಕುಳಕ್ಕೆ ತಾಳಲಾಗದೆ, ಏಪ್ರಿಲ್ 15, 2025 ರಂದು ಪೂಜಾ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಳು.

    Newlywed woman dies by suicide due to colorism and harassment from in-laws in Karnataka

    Newlywed Woman — ಡೆತ್ ನೋಟ್‌ ನಲ್ಲಿ ಅಡಗಿತ್ತು ಸತ್ಯ

    ಪೂಜಾ ತನ್ನ ಸಾವಿಗೆ ಮುನ್ನ ಡೆತ್ ನೋಟ್‌ ಬರೆದಿದ್ದಾಳೆ. “ನನ್ನ ಆತ್ಮಹತ್ಯೆಗೆ ಅತ್ತೆ ಶಶಿಕಲಾ ಮತ್ತು ಭಾವ ವೀರನಗೌಡ ಕಾರಣ. ಇವರಿಗೆ ಕಠಿಣ ಶಿಕ್ಷೆಯಾಗಲಿ. ಅಪ್ಪ-ಅಮ್ಮ, ನನ್ನನ್ನು ಕ್ಷಮಿಸಿ” ಎಂದು ಬರೆದಿಟ್ಟಿದ್ದಾಳೆ. ಈ ಡೆತ್ ನೋಟ್‌ ಆಧರಿಸಿ, ಪೊಲೀಸರು ಶಶಿಕಲಾ ಮತ್ತು ವೀರನಗೌಡರನ್ನು ಬಂಧಿಸಿದ್ದಾರೆ. ಎಸ್ಪಿ ಬಿ. ಎಸ್. ನೇಮಗೌಡ, “ಪ್ರಕರಣದ ತನಿಖೆ ನಡೆಯುತ್ತಿದೆ. ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು” ಎಂದು ತಿಳಿಸಿದ್ದಾರೆ.

    Newlywed Woman – ಕುಟುಂಬದ ಆಕ್ರೋಶ

    ಪೂಜಾಳ ಕುಟುಂಬಸ್ಥರು ಈ ಘಟನೆಯಿಂದ ಆಘಾತಕ್ಕೊಳಗಾಗಿದ್ದಾರೆ. ಅವಳು ತನ್ನ ಅಳಲನ್ನು ಕುಟುಂಬದವರೊಂದಿಗೆ ಹಂಚಿಕೊಂಡಿದ್ದಳು. ಕುಟುಂಬಸ್ಥರು ಸಮಾಧಾನ ಮಾಡಿದರೂ, ಕಿರುಕುಳ ತಡೆಗಟ್ಟಲಾಗಲಿಲ್ಲ. “ಅತ್ತೆ ಮತ್ತು ಭಾವನಿಗೆ ತಕ್ಕ ಶಿಕ್ಷೆಯಾಗಬೇಕು” ಎಂದು ಪೂಜಾಳ ಕುಟುಂಬ ಒತ್ತಾಯಿಸಿದೆ.  ಪೂಜಾಳ ಗಂಡ ಅಮರೇಶ್, ಶಹಾಪುರದ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾನೆ. ಇತ್ತೀಚೆಗೆ ಅವನಿಗೆ ಬೇರೆ ಕಡೆ ವರ್ಗಾವಣೆಯಾಗಿತ್ತು. ಈ ಸಂದರ್ಭದಲ್ಲಿ ಪೂಜಾ ಮನೆಯಲ್ಲಿಯೇ ಇರಬೇಕಿತ್ತು. ಆದರೆ, ಈ ಅವಧಿಯಲ್ಲಿ ಅತ್ತೆ ಮತ್ತು ಭಾವನ ಕಿರುಕುಳ ತಾರಕಕ್ಕೇರಿತು, ಅಂತಿಮವಾಗಿ ಆಕೆಯ ಜೀವನವನ್ನೇ ಕಸಿದುಕೊಂಡಿತು.

    Read this also : Gadag : ಡೆತ್‌ನೋಟ್ ಬರೆದಿಟ್ಟು ನವವಿವಾಹಿತೆ ಆತ್ಮಹತ್ಯೆ, ಕುಟುಂಬಸ್ಥರಿಂದ ಗಂಭೀರ ಆರೋಪ?

    ಈ ದುರ್ಘಟನೆಯ ಹಿಂದಿನ ಮುಖ್ಯ ಕಾರಣ, ವರ್ಣಭೇದದ ಮನಸ್ಥಿತಿ. ಮಗನಿಗೆ ಕನ್ಯೆ ಸಿಗುತ್ತಿಲ್ಲ ಎಂದು ಊರು ಅಲೆದಾಡಿದ ತಾಯಿ, ಕೊನೆಗೆ ಪೂಜಾಳ ಜೊತೆಗೆ ಮದುವೆ ಮಾಡಿದ್ದರು. ಆದರೆ ಹೊಸದಾಗಿ ಮದುವೆಯಾಗಿ ಮನೆಗೆ ಬಂದ್ ಪೂಜಾಳಿಗೆ ನೀನು ಕಪ್ಪಾಗಿದ್ಯಾ ಎಂದು ಕಿರುಕುಳ ನೀಡಿದ್ದರಿಂದ, ಪೂಜಾ ಸಾವಿನ ಮನೆ ಸೇರಿದ್ದಾಳೆ. ಇಂದಿನ ಸಮಾಜದಲ್ಲಿ ಇನ್ನೂ ವರ್ಣಬೇದ ನೀತಿ ಜಾರಿಯಲ್ಲಿರೋದು ವಿಷಾದನೀಯವಾದ ಸಂಗತಿ ಎಂದೇ ಹೇಳಬಹುದಾಗಿದೆ.

    Betageri Gadag suicide case bride suicide skin color colorism harassment in-laws discrimination based on skin color India domestic abuse newlywed dowry and colorism cases India harassment over dark skin India Karnataka woman suicide news newlywed woman suicide India Pooja Amarresh suicide news
    Share. Facebook Twitter Pinterest WhatsApp
    by Admin
    • Website
    • Facebook

    Welcome to ISM Kannada News, if you want to contact us, then feel free to say anything about www.ismkannadanews.com

    Related Posts

    Janaspandana : ಜನರ ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ – ಶಾಸಕ ಸುಬ್ಬಾರೆಡ್ಡಿ ಭರವಸೆ…!

    May 17, 2025

    Indira Canteen: ಬಾಗೇಪಲ್ಲಿಯಲ್ಲಿ ಬಡವರ ಬಂಧು ಇಂದಿರಾ ಕ್ಯಾಂಟೀನ್ ಉದ್ಘಾಟಿಸಿ ಶಾಸಕ ಸುಬ್ಬಾರೆಡ್ಡಿ…!

    May 17, 2025

    Gadag : ಯುವಕನ ಹಿಂದೆ ಬಿದ್ದ ಮೂರು ಮಕ್ಕಳ ತಾಯಿ, ಅನೈತಿಕ ಸಂಬಂಧ ಕೊಲೆಯಲ್ಲಿ ಅಂತ್ಯ….!

    May 17, 2025
    Leave A Reply Cancel Reply

    IPL 2025 Live Score
    Don't Miss

    Crime : ಅಕ್ರಮ ಸಂಬಂಧಕ್ಕೆ ಅಡ್ಡಿಯಾದ ಪತಿಯನ್ನು ಸುಪಾರಿ ಕೊಟ್ಟು ಕೊಲೆ ಮಾಡಿಸಿದ ಪತ್ನಿ….!

    National May 17, 2025

    Crime – ತನ್ನ ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಗಂಡನನ್ನು ಮುಗಿಸಲು ಪ್ರಿಯಕರ ಹಾಗೂ ಇನ್ನೊಬ್ಬ ವ್ಯಕ್ತಿಯ ಸಹಾಯ ಪಡೆದು ಕೊಲೆ…

    Pakistan : ಪಾಕಿಸ್ತಾನದಲ್ಲಿ ಬೆಚ್ಚಿ ಬೀಳಿಸುವ ಸತ್ಯ: ಶೇ. 82ರಷ್ಟು ಅತ್ಯಾಚಾರಗಳು ತಂದೆ, ಅಜ್ಜ, ಅಣ್ಣಂದಿರಿಂದಲೇ ನಡೆಯುತ್ತಿವೆ ಎಂದ ಪಾಕ್ ಮಾಜಿ ಸಂಸದೆ

    May 17, 2025

    Janaspandana : ಜನರ ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ – ಶಾಸಕ ಸುಬ್ಬಾರೆಡ್ಡಿ ಭರವಸೆ…!

    May 17, 2025

    Indira Canteen: ಬಾಗೇಪಲ್ಲಿಯಲ್ಲಿ ಬಡವರ ಬಂಧು ಇಂದಿರಾ ಕ್ಯಾಂಟೀನ್ ಉದ್ಘಾಟಿಸಿ ಶಾಸಕ ಸುಬ್ಬಾರೆಡ್ಡಿ…!

    May 17, 2025

    Gadag : ಯುವಕನ ಹಿಂದೆ ಬಿದ್ದ ಮೂರು ಮಕ್ಕಳ ತಾಯಿ, ಅನೈತಿಕ ಸಂಬಂಧ ಕೊಲೆಯಲ್ಲಿ ಅಂತ್ಯ….!

    May 17, 2025

    Love Marriage : ಚಿಕ್ಕಬಳ್ಳಾಪುರದಲ್ಲಿ ನಡೆದ ಮುಸ್ಲಿಂ ಯುವತಿ ಹಿಂದೂ ಯುವಕನ ಪ್ರೇಮ ವಿವಾಹ, ಪೊಲೀಸರ ಭದ್ರತೆ ಕೋರಿದ ನವಜೋಡಿ….!

    May 17, 2025
    ISM Kannada News
    Facebook X (Twitter) Instagram Pinterest
    • Home
    • About Us
    • Contact Us
    • Privacy Policy
    © 2025 ISM Kannada News. Designed by ISM News.

    Type above and press Enter to search. Press Esc to cancel.