Karnataka Rakshana Vedike: ಬದುಕಿನ ನಡುವೆ ಹೋರಾಟಗಳನ್ನು ಮಾಡಬೇಕು: ಟಿ.ಎ.ನಾರಾಯಣಗೌಡ

ಬಾಗೇಪಲ್ಲಿ: ಹೋರಾಟವೇ ಬದುಕಲ್ಲ ಬದುಕಿನ ನಡುವೆ ಹೋರಾಟಗಳನ್ನು ನಡೆಸಬೇಕು. ಜೀವನದಲ್ಲಿ ಹೋರಾಟ ಎಷ್ಠು ಮುಖ್ಯವೋ ಬದುಕು ಅಷ್ಠೆ ಮುಖ್ಯ ಎಂಬುದನ್ನು ಅರಿತು ಕೆಲಸ ಮಾಡಬೇಕಾಗುತ್ತದೆ. ನನ್ನನ್ನು ಹೋರಾಟದ ಹಾದಿಯಲ್ಲಿಯೇ ಸಾವು ನೀಡುವಂತೆ ಭಗವಂತನಲ್ಲಿ ಬೇಡಿಕೊಳ್ಳುವುದಾಗಿ ಕರ್ನಾಟಕ ರಕ್ಷಣಾ ವೇದಿಕೆ (Karnataka Rakshana Vedike) ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ ತಿಳಿಸಿದರು.

ಕರ್ನಾಟಕ ರಕ್ಷಣಾ ವೇದಿಕೆ (Karnataka Rakshana Vedike)  ಬೆಳ್ಳಿ ಹಬ್ಬದ ಅಂಗವಾಗಿ ಬಾಗೇಪಲ್ಲಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ‘ಕರವೇಗೆ 25 ಮತ್ತು ಹರೀಶ್‍ಗೆ 15’ ಸಂಭ್ರಮ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ನೆಲ, ಜಲ, ನಾಡು-ನುಡಿಗೆ ಧಕ್ಕೆಬಾರದ ರೀತಿಯ ವಾತಾವರಣ ಮೂಡುವಂತೆ ಮಾಡುವುದೇ ಕರವೇ ಹೋರಾಟಗಳ ಮುಖ್ಯ ಉದ್ದೇಶವಾಗಿದೆ ಎಂದ ಅವರು ಕನ್ನಡ ಭಾಷೆಗೆ 8 ಜ್ಞಾನಪೀಠ ಅಲ್ಲ 100 ಜ್ಞಾನಪೀಠ ಪ್ರಶಸ್ತಿಗಳನ್ನು ತೆಗೆದುಕೊಳ್ಳುವ ತಾಕತ್ತು,ಶಕ್ತಿ ಇರುವ ಭಾರತದ ಯಾವುದಾದರೂ ಬಾಷೆಗೆ ಇದ್ದರೆ ಅದು ನಮ್ಮ ಕನ್ನಡ ಭಾಷೆ ಎಂದು ಎದೆಯುಬ್ಬಿಸಿ ಹೇಳಬಹುದಾಗಿದೆ ಎಂದರು.

(Karnataka Rakshana Vedike) ಗೋಕಾಕ್ ಚಳುವಳಿ ನಂತರ ಡಿ. 27 ರಂದು ಕನ್ನಡ ನಾಮಫಲಕಗಳ ಕಡ್ಡಾಯಕ್ಕಾಗಿ ನಡೆಸಿದ ಕರವೇ ಹೋರಾಟ ಬಹುದೊಡ್ಡ ಐತಿಹಾಸಿಕ ಹೋರಾಟ. ಅನ್ಯಭಾಷೆಗಳ ನಾಮಫಲಕಗಳನ್ನು ಚಿಂದಿ-ಚಿಂದಿ ಮಾಡಲಾಗಿತ್ತು. ಅದನ್ನು ಹತ್ತಿಕ್ಕಬೇಕು ಎಂದು ನಡೆಸಿದ ಪೊಲೀಸರ ಯತ್ನ ಫಲಿಸಲಿಲ್ಲ, ದಂಡಿಗೆ-ದಾಳಿಗೆ ಹೆದರದ ಕರವೇ ಸೈನಿಕರು ದಾಸಯ್ಯನ ಗಲಘಂಟೆಗೆ ಹೆದರುತ್ತಾರೆಯೇ ಎಂದ ಅವರು ಕೊಲೆ, ಸುಲಿಗೆ, ದರೋಡೆ, ಮೋಸ ಇತ್ಯಾದಿಗಳನ್ನು ಮಾಡಿ ಜೈಲಿಗೆ ಹೋದಾಗ ಅಂಜಬೇಕೆ ಹೊರತು ನಾಡು-ನುಡಿಗಾಗಿ ನಡೆಸಿದ ಹೋರಾಟದಲ್ಲಿ ಜೈಲಿಗೆ ಹೋದರೆ ಹೆದರಬೇಕಾಗಿಲ್ಲ ಎಂದು ಕರವೇ ಕಾಯಕರ್ತರಿಗೆ ಧೈರ್ಯ ತುಂಬಿಸಿದರು. ನಾಡು-ನುಡಿಗಾಗಿ ಹೋರಾಟ ಮಾಡಿದ ಪರಿಣಮ ನನ್ನನ್ನು ಜೈಲಿಗೆ ಹಾಕಿದ ರಾಜ್ಯ ಸರ್ಕಾರ ನನ್ನನ್ನು ಹತ್ತಿಕ್ಕಬೇಕು ಎಂಬ ಉದ್ದೇಶದಿಂದ 2 ದಿನ ಊಟ-ತಿಂಡಿ ನೀಡದೆ ಕಿರುಕುಳ ನೀಡಿದರು.   3 ತಿಂಗಳ ಆಚೆ ಬರದಂತೆ ನೋಡಿಕೊಳ್ಳುವ ಸರ್ಕಾರದ ಪ್ರಯತ್ನ ಸಫಲವಾಗಲಿಲ್ಲ. ಒಂದೇ ದಿನ 16 ಕೇಸ್ ನನ್ನ ಮೇಲೆ ಹಾಕಿದರು. ಇನ್ನೂ ನೂರು ಕೇಸ್ ಹಾಕಲಿ ಹೆದರುವವನು ನಾನಲ್ಲ. ಯಾವುದೇ ಜೈಲಿಗೆ ಕಳುಹಿಸಿ ಕರವೇ ಹುಡುಗರು ಅಂಜುವುದಿಲ್ಲ ಎಂದರು.

KARAVE Program in BGP

ಸರೋಜಿನಿ ಮಹಿಷಿ ವರದಿ ಜಾರಿಗೊಳಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಕೇಳಿದ್ದೇನೆ. ಇದನ್ನು ಜಾರಿಗೆ ತನ್ನಿ ನೀವು ಕನ್ನಡಿಗರ ಮನಸ್ಸಿನಲ್ಲಿ ಶಾಶ್ವತವಾಗಿ ಉಳಿದುಹೋಗುತ್ತೀರಿ ಎಂದು ಮನವಿ ಮಾಡಿದ್ದು ಅದಕ್ಕೆ ಸಿಎಂ 15 ದಿನಗಳ ಕಾಲಾವಕಾಶವನ್ನು (Karnataka Rakshana Vedike) ತೆಗೆದುಕೊಂಡಿದ್ದಾರೆ. ನಾನು ಕುತೂಹಲದಿಂದ ಎದುರು ನೋಡುತ್ತಿದ್ದೇನೆ. ಆಗಲಿಲ್ಲ ಎಂದರೆ ಮತ್ತೊಮ್ಮೆ ಇಡೀ ಕರ್ನಾಟಕದಾಧ್ಯಂತ ಕರವೇ ಹೋರಾಟಕ್ಕೆ ಮುಂದಾಗಬೇಕಾಗುತ್ತೆ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಡಿ.ಎನ್.ಕೃಷ್ಣಾರೆಡ್ಡಿ, (Karnataka Rakshana Vedike)  ಕರವೇ ತಾಲೂಕು ಅಧ್ಯಕ್ಷ ಕೆ.ಎನ್. ಹರೀಶ್ ಮಾತನಾಡಿದರು. ಕಾರ್ಯಕ್ರಮದಲ್ಲಿ ಕರವೇ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ ಹಾಗೂ ತಾಲೂಕು ಅಧ್ಯಕ್ಷ ಕೆ.ಎನ್.ಹರೀಶ್ ರವರನ್ನು ಆತ್ಮೀಯವಾಗಿ ಸನ್ಮಾನಿಸಿ ಅಭಿನಂದಿಸಲಾಯಿತು. ಎಸ್.ಎಸ್.ಎಲ್.ಸಿ ಯಲ್ಲಿ ಅತಿಹೆಚ್ಚು ಅಂಕಗಳನ್ನು ಪಡೆದ ಕರವೇ ಕಾರ್ಯಕರ್ತರ ಪ್ರತಿಭಾವಂತ ಮಕ್ಕಳನ್ನು ಸನ್ಮಾನಿಸಲಾಯಿತು. ಖ್ಯಾತ ಕಲಾವಿದರಾದ ಜೂ.ರಾಜ್‍ಕುಮಾರ್,ಜೂ.ವಿಷ್ಣುವರ್ಧನ್ ಮತ್ತು ಜೂ.ಅಂಬರೀಶ್ ರವರ ನಟನೆ ಮತ್ತು ಗಾಯನ ಸಭಿಕರ ಮನರಂಜಿಸಿತ್ತು.

ವೇದಿಕೆಯಲ್ಲಿ ಕರವೇ ಜಿಲ್ಲಾಧ್ಯಕ್ಷ ಎಂ.ಆರ್.ಲೋಕೇಶ್, ಮಹಿಳಾ ಜಿಲ್ಲಾಧ್ಯಕ್ಷೆ ಸುಜಾತಮ್ಮ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಡಾ.ಸಿ.ಎನ್.ಸತ್ಯನಾರಾಯಣರೆಡ್ಡಿ, ವಕೀಲರ ಸಂಘದ ಅಧ್ಯಕ್ಷ ಎ.ನಂಜುಂಡಪ್ಪ, ಪುರಸಭೆ ಮಾಜಿ ಅಧ್ಯಕ್ಷ ಬಿ.ಆರ್.ನರಸಿಂಹನಾಯ್ಡು, ಮುಖಂಡರಾದ ಕೆ.ಶ್ರೀನಿವಾಸ್, ನಾರಾಯಣಸ್ವಾಮಿ, ಪಿ.ವಿ.ರಿಯಾಜ್ ಉಲ್ಲಾ, ಡಿ.ಎನ್.ಶಂಕರ್, ಸಿ.ಆಶೋಕ್, ಆಲೀಮ್, ಮಂಜುನಾಥ ನಾಯಕ್, ಮತ್ತಿತರರು ಇದ್ದರು.

Leave a Reply

Your email address will not be published. Required fields are marked *

Next Post

Farmer Idea: ರೈತನ ಐಡಿಯಾಗೆ ಶಾಕ್ ಮಂದಿ, ಟಮೊಟೋ ತೋಟಕ್ಕೆ ದೃಷ್ಟಿಬೊಂಬೆ ಬದಲು ರಚಿತಾ, ಸನ್ನಿ ಪೊಟೋ ..…!

Wed Jul 17 , 2024
ರೈತರು ತಮ್ಮ ಬೆಳೆಗಳಿಗೆ ದೃಷ್ಟಿಯಾಗಬಾರದು, ಪ್ರಾಣಿ-ಪಕ್ಷಿಗಳು ಬಂದು ಬೆಳೆ ಹಾಳು ಮಾಡಬಾರದು ಎಂದು ಮನುಷ್ಯನಂತಿರುವ ಬೊಂಬೆಗಳನ್ನು ರೆಡಿಮಾಡಿ ಹಾಕುವುದನ್ನು ನೋಡಿರುತ್ತೇವೆ. ಆದರೆ ತಮ್ಮ ಬೆಳೆಗೆ ಯಾರ ದೃಷ್ಟಿಯೂ ತಾಗಬಾರದು ಎಂದು ರೈತ ಮಾಡಿದ ಪ್ಲಾನ್ (Farmer Idea) ನಿಮ್ಮನ್ನು ಅಚ್ಚರಿಗೊಳಿಸು‌ತ್ತದೆ. ಚಿಕ್ಕಬಳ್ಳಾಪುರದ ರೈತರೊಬ್ಬರು ತಮ್ಮ ಟೊಮೋಟೊ ತೋಟದ ಮೇಲೆ ಯಾರ ದೃಷ್ಟಿಯೂ ಬೀಳದಂತೆ ಪ್ಲಾನ್ ಮಾಡಿದ್ದು (Farmer Idea), ದೃಷ್ಟಿ ಬೊಂಬೆ ಬದಲಿಗೆ ರಚಿತಾ ರಾಮ್ ಹಾಗೂ ಬಾಲಿವುಡ್ ನಟಿ […]
farmer idea to his crop 0
error: Content is protected !!