HomeStateIllegal Affair: ಆಂಟಿಯೊಂದಿಗೆ ಲವ್ವಿ ಡವ್ವಿ, ಆಕೆ ಪೋನ್ ಲಿಫ್ಟ್ ಮಾಡಿಲ್ಲ ಅಂತಾ ಮನೆಗೆ ಹೋದ...

Illegal Affair: ಆಂಟಿಯೊಂದಿಗೆ ಲವ್ವಿ ಡವ್ವಿ, ಆಕೆ ಪೋನ್ ಲಿಫ್ಟ್ ಮಾಡಿಲ್ಲ ಅಂತಾ ಮನೆಗೆ ಹೋದ ಯುವಕ, ಬಳಿಕ ಆಗಿದ್ದೇ ಬೇರೆ…!

Illegal Affair – ಅಕ್ರಮ ಸಂಬಂಧಗಳ ಕಾರಣದಿಂದ ಅನೇಕ ಅನಾಹುತಗಳು ನಡೆಯುತ್ತಿರುತ್ತವೆ. ಇದೀಗ ಅಂತಹುದೇ ಘಟನೆಯೊಂದು ನಡೆದಿದೆ. ಮದುವೆಯಾಗಿದ್ದ ಆಂಟಿಯೊಂದಿಗೆ ಸಂಬಂಧ ಇಟ್ಟುಕೊಂಡಿದ್ದ ಯುವಕ ಕೆಲವು ದಿನಗಳಿಂದ ಆಕೆ ಪೋನ್ ರಿಸೀವ್ ಮಾಡಿಲ್ಲ ಅಂತಾ ಆಕೆಯ ಮನೆಗೆ ಹೋಗಿದ್ದಾನೆ. ಈ ನಡುವೆ ಆಂಟಿ ಹಾಗೂ ಯುವಕನ ನಡುವೆ ಮಾತಿನ ಚಕಮಕಿಯಾಗಿ ಆಂಟಿ ಯುವಕನಿಗೆ ಚಾಕುವಿನಿಂದ ಇರಿದಿದ್ದಾಳೆ. ಗಂಭೀರವಾಗಿ ಗಾಯಗೊಂಡ ಯುವಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

boy and aunty love news 2

ಗಾಯಗೊಂಡ ಯುವಕನನ್ನು ಗೋಕಾಕ್ ನ ಸಂಗಮೇಶ್ವರದ ನಿವಾಸಿ ಆನಂದ್ ಎಂದು ಗುರ್ತಿಸಲಾಗಿದೆ. ಆನಂದ್ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದ. ಸುಮಾರು ದಿನಗಳಿಂದ ಆನಂದ್ ಗೋಕಾಕ್ ಮೂಲದ ಆಂಟಿಯೊಬ್ಬಳ ಜೊತೆಗೆ ಸಂಬಂಧ ಇಟ್ಟುಕೊಂಡಿದ್ದ. ಕಳೆದ 15 ದಿನಗಳಿಂದ ಆಕೆ ಪೋನ್ ರಿಸೀವ್ ಮಾಡುತ್ತಿಲ್ಲ ಅಂತಾ ಆಕೆಯ ಮನೆಗೆ ಹೋಗಿದ್ದಾನೆ. ಈ ಸಮಯದಲ್ಲಿ ಆಂಟಿ ಹಾಗೂ ಯುವಕನ ನಡುವೆ ಗಲಾಟೆ ನಡೆದಿದೆ. ಈ ವೇಳೆ ಕೋಪಗೊಂಡ ಆಂಟಿ ಯುವಕನಿಗೆ ಚಾಕುವಿನಿಂದ ಇರಿದಿದ್ದಾಳೆ. ಈ ಘಟನೆಯಿಂದ ಗಾಯಗೊಂಡ ಯುವಕ ಆನಂದ್ ಬೆಳಗಾವಿಯ ಬೀಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ ಎಂದು ತಿಳಿದುಬಂದಿದೆ.

ಇನ್ನೂ ಮಹಿಳೆಯನ್ನು ಶೋಭಾ ಎಂದು ಗುರ್ತಿಸಲಾಗಿದ್ದು, ಆಕೆ ಗೋಕಾಕ್ ನ ಸಂಗಮೇಶ್ವರದಲ್ಲಿ ವಾಸವಿದ್ದಳು. ಈ ಹಿಂದೆ ಶೋಭಾ ಮದುವೆಯಾಗಿದ್ದು, ಮೊದಲನೆ ಗಂಡನಿಂದ ದೂರವಾಗಿದ್ದಳು. ಬಳಿಕ ಮಂಜುನಾಥ್ ಎಂಬಾತನನ್ನು 2ನೇ ಮದುವೆ ಆಗಿದ್ದಳು. ಆದರೂ ಕಳೆದ ಒಂದೂವರೆ ವರ್ಷದಿಂದ ಆನಂದ್ ಎಂಬ ಯುವಕನ ಜೊತೆಗೆ ಲವ್ವಿಡವ್ವಿ ಆಟ ಆಡುತ್ತಿದ್ದಳಂತೆ. ಆದರೆ ಕಳೆದ 15 ದಿನಗಳಿಂದ ಆನಂದ್ ಪೋನ್ ಮಾಡಿದರೂ ಶೋಭಾ ಪೋನ್ ಸ್ವಿಕರಿಸುತ್ತಿರಲಿಲ್ಲವಂತೆ. ಈ ಕಾರಣದಿಂದ ಕೋಪಗೊಂಡ ಆನಂದ್ ಕಳೆದೆರಡು ದಿನಗಳ ಹಿಂದೆ ಗೋಕಾಕ್ ಗೆ ಆಂಟಿಯನ್ನು ಭೇಟಿಯಾಗಲು ಆಕೆಯ ಮನೆಗೆ ಹೋಗಿದ್ದಾನೆ ಎನ್ನಲಾಗಿದೆ.

boy and aunty love news 0

ಇನ್ನೂ ಶೋಭಳನ್ನು ನೋಡಲು ಹೋದ ಆನಂದ್ ಗೆ ಆಕೆ ತನ್ನ ಗಂಡನೊಂದಿಗೆ ಇರೋದು ಕಂಡಿದೆ. ಇದರಿಂದ ಕೋಪಗೊಂಡ ಆನಂದ್ ಚಾಕು ತೆಗೆದು ಶೋಭಾಳ ಕೈ ಹಾಗೂ ಹಣೆಗೆ ಇರಿದಿದ್ದಾನೆ. ನಂತರ ಶೋಭಾ ಹಾಗೂ ಆಕೆಯ ಗಂಡ ಇಬ್ಬರೂ ಆನಂದ್ ಕೈನಲ್ಲಿದ್ದ ಚಾಕು ಕಸಿದುಕೊಂಡು ಆನಂದ್ ನ ತಲೆ, ಹೊಟ್ಟೆ ಹಾಗೂ ಎದೆಗೆ ಇರಿದಿದ್ದಾರೆ. ಈ ಘಟನೆಯಲ್ಲಿ ಆನಂದ್ ಹಾಗೂ ಶೋಭಾ ಇಬ್ಬರಿಗೂ ಗಾಯಗಾಳಾಗಿದ್ದು ಒಂದೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನೂ ಈ ಕುರಿತು ಗೋಕಾಕ್ ನಗರ ಠಾಣೆಯಲ್ಲಿ ಇಬ್ಬರ ಕಡೆಯಿಂದಲೂ ದೂರು ದಾಖಲಾಗಿದೆ ಎಂದು ತಿಳಿದುಬಂದಿದೆ.

by Baluhttp://ismkannadanews.com
ನಮಸ್ಕಾರ, ನಾನು ಬಾಲಾಜಿ ಆರ್. 10+ ವರ್ಷಗಳ ಅನುಭವ ಹೊಂದಿರುವ ಕಂಟೆಂಟ್ ರೈಟರ್ ಹಾಗೂ ಕಾಪಿ ಎಡಿಟರ್ ಆಗಿದ್ದು, ಹಣಕಾಸು, ಸರ್ಕಾರಿ ಯೋಜನೆಗಳು, ತಂತ್ರಜ್ಞಾನ, ವೈರಲ್ ಸುದ್ದಿ, ರಾಜಕೀಯ ಸುದ್ದಿ ಮತ್ತು ಸಿನಿಮಾ ಸುದ್ದಿಗಳ ಬಗ್ಗೆ ಬರೆಯುತ್ತೇನೆ. ಸಂಕೀರ್ಣ ಮಾಹಿತಿಯನ್ನು ಸರಳವಾಗಿ ನೀಡುವುದು ನನ್ನ ಉದ್ದೇಶ. ISM Kannada News ಮೂಲಕ ನಿಖರ ಮತ್ತು ಉಪಯುಕ್ತ ಮಾಹಿತಿಯನ್ನು ಹಂಚಿಕೊಳ್ಳುತ್ತೇನೆ.
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular