HomeStateH D Kumaraswamy : ಸಿಎಂ ಸಿದ್ದರಾಮಯ್ಯ 67 ಕೋಟ ಲೂಟಿ ಮಾಡಿದ್ದಾರೆ ಎಂದ ಕೇಂದ್ರ...

H D Kumaraswamy : ಸಿಎಂ ಸಿದ್ದರಾಮಯ್ಯ 67 ಕೋಟ ಲೂಟಿ ಮಾಡಿದ್ದಾರೆ ಎಂದ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ….!

H D Kumaraswamy – ಕರ್ನಾಟಕದಲ್ಲಿ ಮುಡಾ ಹಗರಣದ ಬಳಿಕ ದಿನಕ್ಕೊಂದು ಹೇಳಿಕೆಗಳು ಆಡಳಿಯ ಹಾಗೂ ವಿರೋಧ ಪಕ್ಷಗಳ ಮುಖಂಡರಿಂದ ಕೇಳಿಬರುತ್ತಿದೆ. ಇದೀಗ ಸಿಎಂ ಸಿದ್ದರಾಮಯ್ಯನವರ (Siddaramaiah) ವಿರುದ್ದ ಕೇಂದ್ರ ಸಚಿವ ಹಾಗೂ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ (H D Kumaraswamy) ಹೊಸ ಬಾಂಬ್ ಸಿಡಿಸಿದ್ದಾರೆ. ಸಿಎಂ ಸಿದ್ದರಾಮಯ್ಯ ಸುಳ್ಳು ದಾಖಲೆ ಸೃಷ್ಟಿಸಿ ಸರ್ಕಾರಿ ಜಾಗ ಲಪಟಾಯಿಸಿದ್ದಾರೆ. ಸರ್ಕಾರದ 67 ಕೋಟಿ ಹಣವನ್ನು ಲೂಟಿ ಮಾಡಿದ್ದಾರೆ. (H D Kumaraswamy) ಈಗ ದಾಖಲೆಗಳಿಗೆ ಟಾರ್ಚ್ ಬಿಟ್ಟು ನೋಡುತ್ತಿದ್ದಾರೆ. ಇಂತಹ ಪರಿಸ್ಥಿತಿ ಅವರಿಗೆ ಬೇಕಿತ್ತಾ ಎಂದು ಹೆಚ್.ಡಿ.ಕೆ ಹೊಸ ಬಾಂಬ್ ಸಿಡಿಸಿದ್ದಾರೆ.

H D Kumaraswamy Firing comments on SIddu

ಈ ಕುರಿತು ಮಂಡ್ಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಹೆಚ್.ಡಿ.ಕುಮಾರಸ್ವಾಮಿ (H D Kumaraswamy) ಸಿಎಂ ಸಿದ್ದರಾಮಯ್ಯನವರಿಗೆ ತಮ್ಮ ತಪ್ಪಿನ ಅರಿವಿಲ್ಲ. ಆ ಜಾಗ ಅವರ ಪತ್ನಿಯದ್ದಾ ಅಥವಾ ಬಾಮೈನದ್ದಾ ಎಂಬುದನ್ನು ಮೊದಲು ಹೇಳಲಿ. ಮೊದಲು ವೈಟ್ನರ್‍ ಹಚ್ಚಿದ್ದರು. ಇದೀಗ ಅದಕ್ಕೆ ಟಾರ್ಚ್ ಬಿಟ್ಟು (H D Kumaraswamy) ತೋರಿಸುವಂತಹ ವ್ಯರ್ಥ ಪ್ರಯತ್ನ ಮಾಡುತ್ತಿದ್ದಾರೆ ಎಂದು ಕಟುವಾಗಿ ಟೀಕೆ ಮಾಡಿದ್ದಾರೆ.  (H D Kumaraswamy) ಇನ್ನೂ ರಾಜ್ಯದಲ್ಲಿ ಆಪರೇಷನ್ ಕಮಲದ ಬಗ್ಗೆ ಕೆಲ ನಾಯಕರು ಹೇಳಿಕೆಗಳನ್ನು ನೀಡುತ್ತಿದ್ದಾರೆ. ಕಾಂಗ್ರೇಸ್ ಶಾಸಕರಿಗೆ ತಲಾ ನೂರು ಕೋಟಿ ಆಫರ್‍ ಮಾಡಲಾಗಿದೆ (H D Kumaraswamy) ಎಂದು ಕಾಂಗ್ರೇಸ್ ಶಾಸಕ ಗಣಿಗ ರವಿ ಹೇಳಿಕೆ ನೀಡಿದ್ದಾರೆ. ನೂರು ಕೋಟಿಗೆ ಎಷ್ಟು ಸಂಖ್ಯೆಯಿದೆ ಎಂಬುದು ಅವರಿಗೆ ಗೊತ್ತಿದೆಯಾ? ಸರ್ಕಾರ ಕೆಡವಲು ಐದು ಸಾವಿರ ಕೋಟಿ ಖರ್ಚು ಮಾಡುತ್ತಾರೆ ಎಂದರೇ ಯಾರಾದರೂ ನಂಬುತ್ತಾರೆಯೇ (H D Kumaraswamy) ಎಂದು ಆಶ್ಚರ್ಯ ವ್ಯಕ್ತಪಡಿಸಿದರು.

H D Kumaraswamy react kempegowda jayanthi invitation

ಕಾಂಗ್ರೇಸ್ ನವರಿಗೆ ಪ್ರತಿನಿತ್ಯ ಕುಮಾರಸ್ವಾಮಿ (H D Kumaraswamy) ಜಪ ಮಾಡದಿದ್ದರೇ ಆಗೊಲ್ಲ. ಸರ್ಕಾರ ಬೀಳುತ್ತೆ ಎಂದು ಅವರೇ ದಿನ ಹೇಳ್ತಾ ಇದ್ದಾರೆ. ಸರ್ಕಾರದ ಸ್ಥಿರತೆಯ ಬಗ್ಗೆ ಅವರಿಗೆ ನಂಬಿಕೆಯಿಲ್ಲ. ಅಭದ್ರತೆಯ ಭಾವನೆ ಅವರಲ್ಲಿ ಕಾಡುತ್ತಿದೆ. ನನ್ನ ಮೇಲೆ ಸಿದ್ದರಾಮಯ್ಯ ದ್ವೇಷ ರಾಜಕಾರಣ ಮಾಡುತ್ತಿದ್ದಾರೆ. (H D Kumaraswamy) ಪೊಲೀಸ್ ಇಲಾಖೆಯನ್ನು ಬಳಸಿಕೊಂಡು ಏನೇನೋ ಮಾಡುತ್ತಿದ್ದಾರೆ ಅದೂ ನನಗೆ ಗೊತ್ತಿದೆ. ಎಲ್ಲದಕ್ಕೂ ನಾನು ಸಿದ್ದವಾಗಿದ್ದೇನೆ. ಜೈಲಿಗೆ ಹೋಗುವಂತಹ ತಪ್ಪು ನಾನೇನೂ ಮಾಡಿಲ್ಲ. ನೂರು ಜನ್ಮ ಎತ್ತಿದರೂ ನನ್ನ ಏನೂ ಮಾಡೋಕೆ ಆಗೊಲ್ಲ. ಅವರು ಗಾಜಿನ ಮನೆಯಲ್ಲಿ ಕುಳಿತಿದ್ದಾರೆ, ನಾನು ಜನರ ನಡುವೆ ಇದ್ದೇನೆ. ಅಂತಹುದರಲ್ಲಿ ನಾನು ಏಕೆ ಭಯಪಡಬೇಕು. (H D Kumaraswamy)  ಸುಖಾ ಸುಮ್ಮನೆ ನನ್ನ ಮೇಲೆ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಆರೋಪ ಮಾಡಿದರು.

by Baluhttp://ismkannadanews.com
ನಮಸ್ಕಾರ, ನಾನು ಬಾಲಾಜಿ ಆರ್. 10+ ವರ್ಷಗಳ ಅನುಭವ ಹೊಂದಿರುವ ಕಂಟೆಂಟ್ ರೈಟರ್ ಹಾಗೂ ಕಾಪಿ ಎಡಿಟರ್ ಆಗಿದ್ದು, ಹಣಕಾಸು, ಸರ್ಕಾರಿ ಯೋಜನೆಗಳು, ತಂತ್ರಜ್ಞಾನ, ವೈರಲ್ ಸುದ್ದಿ, ರಾಜಕೀಯ ಸುದ್ದಿ ಮತ್ತು ಸಿನಿಮಾ ಸುದ್ದಿಗಳ ಬಗ್ಗೆ ಬರೆಯುತ್ತೇನೆ. ಸಂಕೀರ್ಣ ಮಾಹಿತಿಯನ್ನು ಸರಳವಾಗಿ ನೀಡುವುದು ನನ್ನ ಉದ್ದೇಶ. ISM Kannada News ಮೂಲಕ ನಿಖರ ಮತ್ತು ಉಪಯುಕ್ತ ಮಾಹಿತಿಯನ್ನು ಹಂಚಿಕೊಳ್ಳುತ್ತೇನೆ.
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular