ಇರಾನ್ ಮತ್ತು ಇಸ್ರೇಲ್ ನಡುವಿನ ಸಮರ ಈಗ ಕೇವಲ ಗಡಿಗಳಿಗೆ ಸೀಮಿತವಾಗಿಲ್ಲ. ಅಮೆರಿಕ ಮತ್ತು ಇಸ್ರೇಲ್ ನಡೆಸಿದ ಕ್ಷಿಪಣಿ ದಾಳಿಯಲ್ಲಿ ಇರಾನ್ನ ಪರಮೋಚ್ಛ ನಾಯಕ ಅಯತೊಲ್ಲಾ ಅಲಿ ಖಮೇನಿ (Ali Khamenei) ಹತ್ಯೆಯಾದ ಸುದ್ದಿ ಜಾಗತಿಕ ಮಟ್ಟದಲ್ಲಿ ದೊಡ್ಡ ಸಂಚಲನವನ್ನೇ ಸೃಷ್ಟಿಸಿದೆ. ಈ ಘಟನೆಯ ಬಿಸಿ ಈಗ ಕರ್ನಾಟಕದ ಕೊಪ್ಪಳ ಜಿಲ್ಲೆಯ ಗಂಗಾವತಿ ನಗರಕ್ಕೂ ತಟ್ಟಿದ್ದು, ಇನ್ಸ್ಟಾಗ್ರಾಂನಲ್ಲಿ ಹಾಕಿದ ಒಂದು ಸ್ಟೋರಿ ದೊಡ್ಡ ಗಲಾಟೆಗೆ ಕಾರಣವಾಗಿದೆ.

Ali Khamenei – ವ್ಯಾಪಾರ ಮಾಡುತ್ತಿದ್ದ ಯುವಕನ ಮೇಲೆ ಏಕಾಏಕಿ ದಾಳಿ
ಗಂಗಾವತಿ ನಗರದ ನಿವಾಸಿಯಾದ ಚಂದ್ರಶೇಖರ ಎಂಬ ಯುವಕ ವೃತ್ತಿಯಲ್ಲಿ ಖರ್ಜೂರ ವ್ಯಾಪಾರಿಯಾಗಿದ್ದು, ಎಂದಿನಂತೆ ತನ್ನ ವ್ಯಾಪಾರದಲ್ಲಿ ತೊಡಗಿದ್ದನು. ಈ ವೇಳೆ ಅಲ್ಲಿಗೆ ಬಂದ ಐದಾರು ಮುಸ್ಲಿಂ ಯುವಕರ ಗುಂಪು ಚಂದ್ರಶೇಖರ ಮೇಲೆ ಹಲ್ಲೆ ನಡೆಸಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಅಲಿ ಖಮೇನಿ ಹತ್ಯೆ ಕುರಿತಾದ ಸುದ್ದಿಯನ್ನು ಚಂದ್ರಶೇಖರ ತನ್ನ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದೇ ಈ ಸಂಘರ್ಷಕ್ಕೆ ಪ್ರಮುಖ ಕಾರಣ ಎನ್ನಲಾಗುತ್ತಿದೆ.
ಸಮಾಜದ ಬಗ್ಗೆ ಯಾಕೆ ಹಾಕಿದೆ ಎಂದು ಆಕ್ರೋಶ
ಹಲ್ಲೆ ನಡೆಸಿದ ಯುವಕರು “ನಮ್ಮ ಸಮಾಜದ ನಾಯಕರ ಬಗ್ಗೆ ಏಕೆ ಸ್ಟೋರಿ ಹಾಕಿದೆ? ಇದರಿಂದ ನಮಗೆ ನೋವಾಗಿದೆ” ಎಂದು ಕಿರುಚಾಡುತ್ತಾ ದೈಹಿಕವಾಗಿ (Ali Khamenei) ಹಲ್ಲೆ ಮಾಡಿದ್ದಾರೆ. ಅಷ್ಟಕ್ಕೇ ನಿಲ್ಲದ ಈ ಗುಂಪು, ಮುಂದಿನ ದಿನಗಳಲ್ಲಿ ಮನೆಗೆ ನುಗ್ಗಿ ಹೊಡೆಯುವುದಾಗಿ ಬೆದರಿಕೆ ಕೂಡ ಹಾಕಿದೆ ಎಂದು ಹೇಳಲಾಗುತ್ತಿದೆ. ಇದರಿಂದ ತೀವ್ರವಾಗಿ ಭಯಗೊಂಡ ಚಂದ್ರಶೇಖರ, ತಡರಾತ್ರಿ ಗಂಗಾವತಿ ನಗರ ಪೊಲೀಸ್ ಠಾಣೆಗೆ ಧಾವಿಸಿ ತನಗೆ ಜೀವಭಯವಿದೆ ಎಂದು ದೂರು ನೀಡಿದ್ದಾರೆ.
ರಾಜ್ಯದಾದ್ಯಂತ ಮೊಳಗಿದ ಖಮೇನಿ ಹತ್ಯೆ ಖಂಡನೆಯ ಧ್ವನಿ
ಅಲಿ ಖಮೇನಿ ಹತ್ಯೆಯನ್ನು ಖಂಡಿಸಿ ಭಾರತದಾದ್ಯಂತ ಮುಸ್ಲಿಂ ಸಮುದಾಯದವರಿಂದ ಪ್ರತಿಭಟನೆಗಳು ನಡೆಯುತ್ತಿವೆ. ಕರ್ನಾಟಕದ ಚಿಕ್ಕಬಳ್ಳಾಪುರ ಜಿಲ್ಲೆಯ ಅಲಿಪುರ ಗ್ರಾಮದಲ್ಲೂ ಈ (Ali Khamenei) ಘಟನೆಯ ಶೋಕ ಮಡುಗಟ್ಟಿತ್ತು. ಗ್ರಾಮದ ಅಂಗಡಿ ಮುಂಗಟ್ಟುಗಳನ್ನು ಸ್ವಯಂಪ್ರೇರಿತವಾಗಿ ಬಂದ್ ಮಾಡಿದ್ದ ಮುಸ್ಲಿಮರು, ಕೈಯಲ್ಲಿ ಕಪ್ಪು ಬಾವುಟಗಳನ್ನು ಹಿಡಿದು ಸಾವಿರಾರು ಸಂಖ್ಯೆಯಲ್ಲಿ ಮೆರವಣಿಗೆ ನಡೆಸುವ ಮೂಲಕ ತಮ್ಮ ಆಕ್ರೋಶ ಹೊರಹಾಕಿದ್ದಾರೆ. Read this also : ಖಮೇನಿ ಹತ್ಯೆ ಬೆನ್ನಲ್ಲೇ ಇರಾನ್ ಪ್ರತಿಭಟನಾಕಾರರ ಸಂಭ್ರಮ: ಕೆನಡಾ ರಸ್ತೆಯಲ್ಲಿ ನರ್ತಿಸಿದ ‘ಮೋರ್ಟಿಶಿಯಾ ಆಡಮ್ಸ್’!

ಶಾಂತಿ ಕಾಪಾಡುವಂತೆ ಪೊಲೀಸರ ಮನವಿ
ಸದ್ಯ ಗಂಗಾವತಿಯಲ್ಲಿ ನಡೆದ ಈ ಘಟನೆಯಿಂದಾಗಿ ಸ್ಥಳೀಯವಾಗಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಘಟನೆಯ ಕುರಿತು ದೂರು ದಾಖಲಿಸಿಕೊಂಡಿರುವ ಪೊಲೀಸರು (Ali Khamenei) ತನಿಖೆ ಆರಂಭಿಸಿದ್ದಾರೆ. ಸಾರ್ವಜನಿಕರು ಸಾಮಾಜಿಕ ಜಾಲತಾಣಗಳಲ್ಲಿ ಸಂವೇದನಾಶೀಲ ವಿಷಯಗಳನ್ನು ಹಂಚಿಕೊಳ್ಳುವಾಗ ಎಚ್ಚರಿಕೆ ವಹಿಸಬೇಕು ಮತ್ತು ಯಾವುದೇ ಕಾರಣಕ್ಕೂ ಕಾನೂನನ್ನು ಕೈಗೆತ್ತಿಕೊಳ್ಳಬಾರದು ಎಂದು ಅಧಿಕಾರಿಗಳು ಮನವಿ ಮಾಡಿದ್ದಾರೆ.
