Kanakadasa Jayanthi – ಸರ್ಕಾರದ ವತಿಯಿಂದ ಆಚರಣೆ ಮಾಡಲಾಗುತ್ತಿರುವ ಮಹನೀಯರ ಜಯಂತಿಗಳು ಕೇವಲ ಜಾತಿಗೆ, ಆಚರಣೆಗೆ ಮಾತ್ರ ಸೀಮಿತವಾಗುತ್ತಿದೆ. ಅದರ ಬದಲು ಮಹನೀಯರ ತತ್ವಾದರ್ಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡಾಗ ಹಾಗೂ ಪಾಲಿಸಿದಾಗ ಮಾತ್ರ ಅವರಿಗೆ ನಿಜವಾದ ಗೌರವ ಕೊಟ್ಟಂತಾಗುತ್ತದೆ ಎಂದು ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ತಿಳಿಸಿದರು. ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪಟ್ಟಣದ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಆಯೋಜಿಸಿದ್ದ ದಾಸಶ್ರೇಷ್ಟ ಕನಕದಾಸರ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

Kanakadasa Jayanthi – ಸಮಾಜಕ್ಕಾಗಿ ದುಡಿದವರ ಆದರ್ಶ ಪಾಲಿಸಿ
ಸರ್ಕಾರಗಳು ಒಳ್ಳೆಯ ಉದ್ದೇಶದಿಂದ ಸಮಾಜಕ್ಕಾಗಿ ದುಡಿದಂತಹ, ಪ್ರಾಣ ತ್ಯಾಗ ಮಾಡಿದಂತಹ, ಸಮಾಜದಲ್ಲಿ ಬದಲಾವಣೆ ತಂದಂತಹ ಮಹನೀಯರ ಜಯಂತಿಗಳನ್ನು ಆಚರಣೆ ಮಾಡಲು ಆದೇಶ ಮಾಡಿದೆ. ಆದರೆ ಇತ್ತೀಚಿಗೆ ಈ ಜಯಂತಿಗಳು ಕೇವಲ ಜಾತಿಗಳಿಗೆ, ಆಚರಣೆಗೆ ಮಾತ್ರ ಸೀಮಿತವಾಗುತ್ತಿರುವುದು ವಿಷಾದನೀಯವಾದುದು. ಎಲ್ಲಾ ಮಹನೀಯರು ಕೇವಲ ಒಂದು ಸಮುದಾಯಕ್ಕೋ ಅಥವಾ ಒಂದು ಜಾತಿಗೋ ಸೀಮೀತವಾಗಿ ಕೆಲಸ ಮಾಡಿಲ್ಲ. ಸಮಾಜದ ಒಳಿತಿಗಾಗಿ ಶ್ರಮಿಸಿದಂತಹವರು.
ಅಂತಹವರ ಹಾದಿಯಲ್ಲಿ ನಾವೆಲ್ಲರೂ ನಡೆಯಬೇಕಿದೆ. ಅಂತಹವರ ಆದರ್ಶಗಳನ್ನು ನಾವೆಲ್ಲರೂ ಪಾಲನೆ ಮಾಡಬೇಕಿದೆ. ಮುಂದಿನ ದಿನಗಳಲ್ಲಿ ಮಹನೀಯರ ಜಯಂತಿಗಳಂದು ಶಾಲಾ ಮಕ್ಕಳಿಗೆ ಅವರ ಸಾಧನೆಗಳು, ಅವರ ತತ್ವಾದರ್ಶಗಳ ಕುರಿತು ಬೋದನೆ ಮಾಡಬೇಕು. ಈ ಕೆಲಸ ಮಾಡಿದಾಗ ಮಾತ್ರ ಅವರಿಗೆ ನಿಜವಾದ ಗೌರವ ಕೊಟ್ಟಂತಾಗುತ್ತದೆ ಎಂದರು.

Kanakadasa Jayanthi – ಕನಕದಾಸರ ಕೊಡುಗೆ ಅಜರಾಮರ: ಶಿಕ್ಷಕ ರಾಮಕೃಷ್ಣ
ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ಮಾತನಾಡಿದ ಸೋಮೇನಹಳ್ಳಿ ಪಿಎಂಶ್ರೀ ಶಾಲೆಯ ಶಿಕ್ಷಕ ರಾಮಕೃಷ್ಣ, ಕನಕದಾಸರು ಏಕಾಗ್ರತೆಯ ಧ್ಯಾನ, ಭಕ್ತಿಯಿಂದ ತಮ್ಮಲ್ಲಿನ ನಕಾರಾತ್ಮಕ ಗುಣಗಳನ್ನು ತೊರೆಯಬಹುದೆಂಬ ಸತ್ಯವನ್ನು ಜನರಲ್ಲಿ ಕನಕದಾಸರು ತುಂಬಿದರು. ತಮ್ಮ ಆಲೋಚನೆ, ಭಕ್ತಿಯನ್ನು ಸರಳವಾದ ಕನ್ನಡದಲ್ಲಿ ಜನರಿಗೆ ತಲುಪಿಸಿದವರು. ಕನಕದಾಸರು ತಮ್ಮ ಜೀವನದಲ್ಲಿ ಅನೇಕ ಶ್ರೇಷ್ಠ ಕೃತಿಗಳನ್ನು ರಚಿಸಿ ಕರ್ನಾಟಕ ಸಂಗೀತಕ್ಕೆ ಅತ್ಯುತ್ತಮ ಕೊಡುಗೆ ನೀಡಿ ಜಾತಿ, ಕುಲ ವ್ಯವಸ್ಥೆಯ ವಿರುದ್ಧ ಜನಜಾಗೃತಿ ಮೂಡಿಸಿದವರು. Read this also : ಸಿಬಿಲ್ ಸ್ಕೋರ್ ಕಡಿಮೆ ಇದೆಯೇ? ಈ ಟಿಪ್ಸ್ ಪಾಲಿಸಿದರೆ 100+ ಪಾಯಿಂಟ್ಸ್ ಹೆಚ್ಚಾಗೋದು ಪಕ್ಕಾ..!
ಕನಕರು ಸಮಾಜದ ಅಸ್ಪೃಶ್ಯತೆ ಮತ್ತು ಅಸಮಾನತೆಯನ್ನು ಹೋಗಲಾಡಿಸಲು ಸಾಕಷ್ಟು ಶ್ರಮಿಸಿದ್ದಾರೆ. ಕನಕದಾಸರು ನಾಟಕಕಾರರಾಗಿ, ಸಂಗೀತಗಾರರಾಗಿ ನಾಡಿಗೆ ನಾನಾ ಕೊಡುಗೆ ನೀಡಿದ್ದು, ಅವರ ಜೀವನ ಚರಿತ್ರೆ ಹಾಗೂ ಸಿದ್ಧಾಂತವನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಅವರ ಚಿಂತನೆಗಳನ್ನು ಅನುಸರಿಸಿಕೊಂಡು ನಾವೆಲ್ಲರೂ ಒಂದೇ ಎಂಬ ಭಾವನೆಯಿಂದ ಬದುಕಬೇಕು ಎಂದರು.

Kanakadasa Jayanthi – ಗುಡಿಬಂಡೆಯ ಮುಖ್ಯರಸ್ತೆಯಲ್ಲಿ ಅದ್ದೂರಿ ಮೆರವಣಿಗೆ
ವೇದಿಕೆ ಕಾರ್ಯಕ್ರಮಕ್ಕೂ ಮುನ್ನಾ ಗುಡಿಬಂಡೆ ಪಟ್ಟಣದ ಮುಖ್ಯರಸ್ತೆಯಲ್ಲಿ ತಾಲೂಕು ಮಟ್ಟದ ಅಧಿಕಾರಿಗಳು, ಸಿಬ್ಬಂದಿ ವರ್ಗ, ಸಮುದಾಯದ ಮುಖಂಡರು ಕನಕರಥದೊಂದಿಗೆ ಮುಖ್ಯರಸ್ತೆಯಲ್ಲಿ ಮೆರವಣಿಗೆ ನಡೆಸಿದರು. ಕಾರ್ಯಕ್ರಮದಲ್ಲಿ ತಹಸೀಲ್ದಾರ್ ಸಿಗ್ಬತ್ತುಲ್ಲಾ, ತಾಪಂ ಇಒ ನಾಗಮಣಿ, ಬಿಇಒ ಕೃಷ್ಣಕುಮಾರಿ, ಪಪಂ ಅಧ್ಯಕ್ಷ ವಿಕಾಸ್, ಉಪಾಧ್ಯಕ್ಷ ಗಂಗರಾಜು, ಸರ್ಕಾರಿ ನೌಕರರ ಸಂಘದ ಮುನಿಕೃಷ್ಣಪ್ಪ, ಮುಖಂಡರಾದ ಆದಿರೆಡ್ಡಿ, ಆದಿನಾರಾಯಣರೆಡ್ಡಿ, ರಿಯಾಜ್, ಲಕ್ಷ್ಮೀನಾರಾಯಣ, ಕೃಷ್ಣೆಗೌಡ ಕುರುಬ ಸಂಘದ ಅಧ್ಯಕ್ಷ ಅಶ್ವತ್ಥಗೌಡ, ನವೀನ್, ಮಂಜುನಾಥ್ ಸೇರಿದಂತೆ ಹಲವರು ಇದ್ದರು.
