Online Order: ಬುಕ್ ಮಾಡಿದ್ದು ಬೇರೆ, ಮನೆಗೆ ಬಂದ ಪಾರ್ಸಲ್ ಬೇರೆ, ಪಾರ್ಸಲ್ ಓಪೆನ್ ಮಾಡಿ ನೋಡಿದ ಮಹಿಳೆ ಶಾಕ್, ಬಾಕ್ಸ್ ನಲ್ಲಿತ್ತು ವ್ಯಕ್ತಿಯ ಮೃತದೇಹ…!

Online Order – ಇತ್ತೀಚಿಗೆ ಆನ್ ಲೈನ್ ನಲ್ಲಿ ಜನರಿಗೆ ಬೇಕಾದ ವಸ್ತುಗಳನ್ನು ಬುಕ್ ಮಾಡುವುದು ಸಹಜವಾಗಿದೆ. ಕೆಲವೊಮ್ಮೆ ಆನ್ ಲೈನ್ ನಲ್ಲಿ ಬುಕ್ ಮಾಡಿದ ವಸ್ತುಗಳ ಬದಲಿಗೆ ಇಟ್ಟಿಗೆಗಳು, ಕಲ್ಲುಗಳು, ಸೋಪ್​ಗಳು ಬಂದಿರುವ ಕುರಿತು ಸುದ್ದಿಗಳನ್ನು ಕೇಳಿರುತ್ತೀರಾ. ಆದರೆ ಇಲ್ಲಿ ಅದಕ್ಕೂ ಮಿಗಿಲಾದ ಘಟನೆಯೊಂದು ನಡೆದಿದೆ. ಆನ್ ಲೈನ್ ನಲ್ಲಿ ಮಹಿಳೆಯೊಬ್ಬರು (Online Order) ಎಲೆಕ್ಟ್ರಾನಿಕ್ ಉಪಕರಣದ ಪಾರ್ಸಲ್ ಬಂದಿದೆ ಎಂದು ಭಾವಿಸಿ ಪಾರ್ಸಲ್ ಓಪೆನ್ ಮಾಡಿ ನೋಡಿದಾಗ ಬಾಕ್ಸ್ ನಲ್ಲಿ ಮೃತದೇಹವಿದ್ದು, ಅದನ್ನು ನೋಡಿದ ಮಹಿಳೆ ಶಾಕ್ ಆಗಿದ್ದಾಳೆ.

women shocked after opening parcel

ಆಂಧ್ರಪ್ರದೇಶದ ಪಶ್ಚಿಮ ಗೋದಾವರಿ ಜಿಲ್ಲೆಯ ಉಂಡಿ ಮಂಡಲದ ಯಂಡಗಂಡಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಯಂಡಗಂಡಿ ಎಂಬ ಗ್ರಾಮದ ಮಹಿಳೆ ನಾಗ ತುಳಸಿ ಎಂಬಾಕೆ ತನ್ನ ಮನೆ ನಿರ್ಮಾಣ ಮಾಡಲು ಹಣಕಾಸಿನ ನೆರವು ಕೋರಿ ಕ್ಷತ್ರಿಯ ಸೇವಾ ಸಮಿತಿಯನ್ನು ಆಶ್ರಯಿಸಿದ್ದರು. ಆಕೆಯ ಮನವಿಯ ಮೇಲೆ ಸಮಿತಿ ಆಕೆಗೆ ಟೈಲ್ಸ್ ಕಳುಹಿಸಿಕೊಟ್ಟಿತ್ತು. ಬಳಿಕ ಆಕೆ ಮತ್ತೆ ಹೆಚ್ಚಿನ ಸಹಾಯವನ್ನು ಕೋರಿದ್ದರು. ಆಕೆಗೆ ವಿದ್ಯುತ್ ಉಪಕರಣಗಳನ್ನು ನೀಡುವ ಭರವಸೆ ನೀಡಿತ್ತು. ಈ ಕುರಿತು ವಾಟ್ಸಾಪ್ ಮೂಲಕ ಲೈಟ್ ಗಳು, ಫ್ಯಾನ್ ಹಾಗೂ ಸ್ವಿಚ್ ಗಳಂತಹ ವಸ್ತುಗಳನ್ನು ಕಳುಹಿಸುವುದಾಗಿ ಕ್ಷತ್ರೀಯ ಸಮಿತಿ ಸಂದೇಶ ಕಳುಹಿಸಿತ್ತು.

ನಂತರ ಗುರುವಾರ ರಾತ್ರಿ ಮಹಿಳೆಯ ಮನೆಗೆ ಪಾರ್ಸಲ್ ಒಂದು ಬಂದಿದೆ. ಈ ಪಾರ್ಸಲ್ ನಲ್ಲಿ ಎಲೆಕ್ಟ್ರಾನಿಕ್ ಉಪಕರಣಗಳು ಇರಬಹುದು ಎಂದು ಮಹಿಳೆ ಪಾರ್ಸಲ್ ಓಪೆನ್ ಮಾಡಿ ನೋಡಿದ್ದಾರೆ. ಪಾರ್ಸಲ್ ನೋಡುತ್ತಿದ್ದಂತೆ ಮಹಿಳೆ ಶಾಕ್ ಆಗಿದ್ದಾರೆ. ಪಾರ್ಸಲ್ ನಲ್ಲಿ ವಿದ್ಯುತ್ ಉಪಕರಣಗಳ ಬದಲಿಗೆ ವ್ಯಕ್ತಿಯೊಬ್ಬರ ಮೃತ ದೇಹವಿತ್ತು. ಭಯಭೀತಗೊಂಡ ಮಹಿಳೆ ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾಳೆ. ಕೂಡಲೇ ಪೊಲೀಸ್‌ ತಂಡವೊಂದು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದೆ.

women shocked after opening parcel 0

ಇನ್ನೂ ಪೊಲೀಸರ ತನಿಖೆಯ ವೇಳೆ ಪಾರ್ಸೆಲ್‌ನಲ್ಲಿ 1.30 ಕೋಟಿ ರೂಪಾಯಿ ಹಣ ನೀಡುವಂತೆ ಬರೆದಿರುವ ಪತ್ರವೊಂದು ಸಿಕ್ಕಿದೆ. ಅಲ್ಲದೆ, ಈ ಕುಟುಂಬವು ಹಣವನ್ನು ಪಾವತಿಸದಿದ್ದರೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಬೆದರಿಕೆ ಹಾಕಲಾಗಿದೆ. ಪಾರ್ಸೆಲ್ ತಲುಪಿಸಿದವರ ಪತ್ತೆಗೆ ಪೊಲೀಸರು ಪ್ರಯತ್ನಿಸುತ್ತಿದ್ದಾರೆ. ಈ ಸಂಬಂಧ ಕ್ಷತ್ರಿಯ ಸೇವಾ ಸಮಿತಿಯ ಪ್ರತಿನಿಧಿಗಳಿಗೂ ಸಮನ್ಸ್‌ ಕಳುಹಿಸಲಾಗಿದೆ. ಮೃತದೇಹ ಸುಮಾರು 45 ವರ್ಷದ ವ್ಯಕ್ತಿಯದ್ದು ಇರಬಹುದು ಎಂದು ಅಂದಾಜಿಸಲಾಗಿದ್ದು, ನಾಲ್ಕೈದು ದಿನಗಳ ಹಿಂದೆ ಅವರು ಮೃತಪಟ್ಟಿದ್ದಾರೆ ಎನ್ನಲಾಗಿದೆ. ಈ ಕುರಿತು ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Leave a Reply

Your email address will not be published. Required fields are marked *

Next Post

Amit Shah : ಅಮಿತ್ ಷಾ ರವರನ್ನು ವಜಾ ಗೊಳಿಸುವಂತೆ ಗುಡಿಬಂಡೆಯಲ್ಲಿ ಪ್ರತಿಭಟನೆ…!

Fri Dec 20 , 2024
Amit Shah – ಇತ್ತಿಚಿಗಷ್ಟೆ ಕೇಂದ್ರ ಗೃಹ ಸಚಿವ ಅಮಿತ್ ಷಾ ಡಾ.ಬಿ.ಆರ್‍ ಅಂಬೇಡ್ಕರ್‍ ರವರ ಕುರಿತು ಅವಹೇಳನಕಾರಿಯಾಗಿ ಮಾತನಾಡಿದ್ದು, ಈ ಸಂಬಂಧ ಅವರನ್ನು ಕೂಡಲೇ ವಜಾಗೊಳಿಸಬೇಕೆಂದು ಆಗ್ರಹಿಸಿ ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪಟ್ಟಣದ ತಾಲೂಕು ಕಚೇರಿ ಮುಂಭಾಗ ದಲಿತಪರ ಸಂಘಟನೆಗಳು ಹಾಗೂ ಕಾಂಗ್ರೇಸ್ ಮುಖಂಡರು ಪ್ರತಿಭಟನೆ ನಡೆಸಿ ರಾಷ್ಟ್ರಪತಿಗಳ ಮೂಲಕ ಮನವಿ ಪತ್ರವನ್ನು ಸಲ್ಲಿಸಿದರು. ಈ ವೇಳೆ ಜೀವಿಕ ಸಂಘಟನೆಯ ಜಿಲ್ಲಾ ಸಂಚಾಲಕ ಡಾ.ನಾರಾಯಣಸ್ವಾಮಿ ಮಾತನಾಡಿ, ಇಂದು ಅಂಬೇಡ್ಕರ್‍ […]
Protest against Amith Sha 1
error: Content is protected !!