Viral Video: ವಿದ್ಯಾರ್ಥಿಯಿಂದ ಕಾಲು ಒತ್ತಿಸಿಕೊಂಡು, ಶಾಲೆಯಲ್ಲಿಯೇ ಸೊಂಪಾದ ನಿದ್ದೆಗೆ ಜಾರಿ ಶಿಕ್ಷಕ, ವೈರಲ್ ಆದ ವಿಡಿಯೋ…!

Viral Video – ಸರ್ಕಾರಿ ಶಾಲೆಯ ಶಿಕ್ಷಕನೊರ್ವ ಶಾಲೆಯಲ್ಲಿಯೇ ವಿದ್ಯಾರ್ಥಿಯಿಂದ ಪಾದಕ್ಕೆ ಮಸಾಜ್ ಮಾಡಿಸಿಕೊಂಡ ಘಟನೆಯಂದು ನಡೆದಿದ್ದು, ಈ ಹಿನ್ನೆಲೆಯಲ್ಲಿ ಆ ಶಿಕ್ಷಕನ್ನು ಅಮಾನುತುಗೊಳಿಸಲಾಗಿದೆ. ತಮಿಳುನಾಡಿನ ಪೂರ್ವ ರಾಜಪಾಳ್ಯಂನಲ್ಲಿರುವ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕ ಜಯಪ್ರಕಾಶ್ ಎಂಬುವವರು ವಿದ್ಯಾರ್ಥಿಯಿಂದ ಮಸಾಜ್ ಮಾಡಿಸಿಕೊಂಡು ಅಮಾನತ್ತಿನ ಶಿಕ್ಷೆಗೆ ಗುರಿಯಾಗಿದ್ದಾನೆ. ಇನ್ನೂ ಈ ಸಂಬಂಧ ವಿಡಿಯೋ ಒಂದು ಸಹ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ.

ತಮಿಳುನಾಡಿನ ಪೂರ್ವ ರಾಜಪಾಳ್ಯಂನಲ್ಲಿರುವ ಸರ್ಕಾರಿ ಪ್ರೌಢಶಾಲೆಯಲ್ಲಿ ಜಯಪ್ರಕಾಶ್ ಎಂಬುವವರು ಸುಮಾರು 17 ವರ್ಷಗಳಿಂದ ಗಣಿತ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಈ ಶಾಲೆಯಲ್ಲಿ 200 ಕ್ಕೂ ಹೆಚ್ಚು ಮಂದಿ ವಿದ್ಯಾರ್ಥಿಗಳು ಓದುತ್ತಿದ್ದಾರೆ. ಶಾಲೆಯಲ್ಲಿ ಮುಖ್ಯೋಪಾಧ್ಯಯರೂ ಸೇರಿದಂತೆ ಒಟ್ಟು 9 ಮಂದಿ ಶಿಕ್ಷಕರು ಈ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಈ ಶಾಲೆಯ ಶಿಕ್ಷಕ ಜಯಪ್ರಕಾಶ್ ಅದೇ ಶಾಲೆಯ ವಿದ್ಯಾರ್ಥಿಯಿಂದ ತನ್ನ ಪಾದಗಳನ್ನು ಮಸಾಜ್ ಮಾಡಿಸಿಕೊಂಡಿದ್ದಾನೆ. ಈ ಸಂಬಂಧ ವಿಡಿಯೋ ಒಂದು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ. ವಿಡಿಯೋ ವೈರಲ್ ಆಗುತ್ತಿದ್ದಂತೆ ಶಿಕ್ಷಣ ಇಲಾಖೆ ಎಚ್ಚೆತ್ತುಕೊಂಡಿದ್ದು, ಶಿಕ್ಷಕ ಜಯಪ್ರಕಾಶ್ ನನ್ನು ಅಮಾನತ್ತು ಮಾಡಿ ಆದೇಶ ಹೊರಡಿಸಿದೆ.

ವೈರಲ್ ವಿಡಿಯೋ ಇಲ್ಲಿದೆ ನೋಡಿ: Click Here

ಇನ್ನೂ ಈ ಘಟನೆಯ ಸಂಬಂಧ ತಮಿಳುನಾಡು ನಾಗರೀಕ ಸೇವೆಗಳ ನಿಯಮ 17ರ ಉಪನಿಯಮ (ಇ) ಅಡಿಯಲ್ಲಿ ಮುಂದಿನ ಆದೇಶದವರೆಗೆ ಹಾಗೂ ತಕ್ಷಣದಿಂದಲೇ ಜಾರಿಗೆ ಬರುವಂತೆ ಜಯಪ್ರಕಾಶ್ ಅವರನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದೆ. ಶಿಕ್ಷಕ ಜಯಪ್ರಕಾಶ್ ಶಾಲೆಗೆ ಸರಿಯಾಗಿ ಹಾಜರಾಗುತ್ತಿರಲಿಲ್ಲವಂತೆ. ಶಾಲೆಗೆ ಬಂದರೂ ಪಾಠ ಮಾಡದೇ ಕಚೇರಿಯಲ್ಲಿಯೆ ವಿಶ್ರಾಂತಿ ಪಡೆಯುತ್ತಿದ್ದರಂತೆ. ಈ ಸಮಯದಲ್ಲಿ ವಿದ್ಯಾರ್ಥಿಗಳನ್ನು ಕೊಠಡಿಗೆ ಕರೆಸಿಕೊಂಡು ಕಾಲು ಒತ್ತುವಂತೆ ಹೇಳುತ್ತಿದ್ದ. ಕಳೆದ ಶುಕ್ರವಾರ ವಿದ್ಯಾರ್ಥಿಯಿಂದ ತನ್ನ ಪಾದ ಒತ್ತಿಸಿಕೊಳ್ಳುತ್ತಿರುವಾಗ ಶಾಲೆಯ ಶಿಕ್ಷಕರೊಬ್ಬರು ವಿಡಿಯೋ ಮಾಡಿ ಸೊಷಿಯಲ್ ಮಿಡಿಯಾದಲ್ಲಿ ಹಂಚಿಕೊಂಡಿದ್ದು, ಈ ವಿಡಿಯೋ ನೋಡಿದ ಅನೇಕರು ತಮ್ಮದೇ ಶಿಕ್ಷಕನಿಗೆ ಸರಿಯಾದ ಶಿಕ್ಷೆಯಾಗಬೇಕೆಂದು ಆಗ್ರಹಿಸುತ್ತಿದ್ದಾರೆ.

Leave a Reply

Your email address will not be published. Required fields are marked *

Next Post

Google Maps: ಗೂಗಲ್ ಮ್ಯಾಪ್ ನಂಬಿ ಪ್ರಾಣ ಕಳೆದುಕೊಂಡ್ರು, ಗ್ಯೂಗಲ್ ಮ್ಯಾಪ್ ಬಳಸೋವಾಗ ಎಚ್ಚರ ಅಗತ್ಯ…!

Mon Nov 25 , 2024
Google Maps – ಇತ್ತೀಚಿಗೆ ತಿಳಿಯದ ಪ್ರದೇಶಗಳಿಗೆ ಹೋಗಲು ಬಹುತೇಕರು ಗೂಗಲ್ ಮ್ಯಾಪ್ಸ್ ಬಳಸುತ್ತಾರೆ. ನಮಗೆ ತಿಳಿಯದಂತಹ ಮಾರ್ಗಗಳನ್ನು ಗೂಗಲ್ ಮ್ಯಾಪ್ಸ್ ಮೂಲಕ ತಿಳಿದುಕೊಳ್ಳಬಹುದಾಗಿದೆ. ಆದರೆ ಇದೇ ಗೂಗಲ್ ಮ್ಯಾಪ್ಸ್ ನಂಬಿಕೊಂಡ ಹೋದ ಮೂರು ಮಂದಿ ಇದೀಗ ದೇವರ ಪಾದ ಸೇರಿದ್ದಾರೆ. ಉತ್ತರಪ್ರದೇಶದ ಬರೇಲಿಯಲ್ಲಿ ನ.24 ರಂದು ದೊಡ್ಡ ಪ್ರಮಾದ ನಡೆದಿದೆ. ಗೂಗಲ್ ಮ್ಯಾಪ್ಸ್ (Google Maps) ನಂಬಿದ ಮೂರು ಮಂದಿ ಕಾರು ಚಲಾಯಿಸಿಕೊಂಡು ಹೋಗುತ್ತಾ ದಾರುಣ ಸಾವನ್ನು ಕಂಡಿದ್ದಾರೆ. […]
Google maps effect accident in up 0
error: Content is protected !!