Close Menu
ISM Kannada News
    IPL 2025 Live Score
    What's Hot

    Ramanagara : ಮೂಕ ಬಾಲಕಿ ಅತ್ಯಾಚಾರ ಮತ್ತು ಕೊಲೆ ಆರೋಪ – ತನಿಖೆ ಚುರುಕು…!

    May 14, 2025

    NHAI ನೇಮಕಾತಿ 2025: ಉಪ ವ್ಯವಸ್ಥಾಪಕ ಹುದ್ದೆಗಳಿಗೆ ಅರ್ಜಿ ಆಹ್ವಾನ, ಕೂಡಲೇ ಅರ್ಜಿ ಸಲ್ಲಿಸಿ…!

    May 14, 2025

    Meerut : ಮೀರತ್‌ನಲ್ಲಿ ನಿಷಿದ್ಧ ತಳಿಯ ನಾಯಿ ವಿಚಾರಕ್ಕೆ ನೆರೆಹೊರೆಯವರೊಂದಿಗೆ ಜಗಳ: ದಂಪತಿಗೆ ಹಲ್ಲೆ, ಕೂದಲು ಹಿಡಿದು ಎಳೆದಾಡಿ ಹಲ್ಲೆ…!

    May 14, 2025
    Facebook X (Twitter) Instagram
    Facebook X (Twitter) Instagram WhatsApp
    ISM Kannada NewsISM Kannada News
    Subscribe
    • Home
    • All News
      • State
      • National
      • International
    • Special
    • Entertainment
    • Technology
    • Web Stories
    • Foodies
    ISM Kannada News
    Home»State»K N Rajanna : ಬೇಸರ ಮಾಡಿಕೊಳ್ಳೋಕೆ ಅವರ ಆಸ್ತಿ ಬರೆಸಿಕೊಂಡಿದ್ದೀವಾ ಎಂದು ಡಿಸಿಎಂ ವಿರುದ್ದ ಅಸಮಾಧಾನ ಹೊರಹಾಕಿದ ಸಚಿವ ಕೆ.ಎನ್.ರಾಜಣ್ಣ….!
    State

    K N Rajanna : ಬೇಸರ ಮಾಡಿಕೊಳ್ಳೋಕೆ ಅವರ ಆಸ್ತಿ ಬರೆಸಿಕೊಂಡಿದ್ದೀವಾ ಎಂದು ಡಿಸಿಎಂ ವಿರುದ್ದ ಅಸಮಾಧಾನ ಹೊರಹಾಕಿದ ಸಚಿವ ಕೆ.ಎನ್.ರಾಜಣ್ಣ….!

    By by AdminJanuary 9, 2025No Comments2 Mins Read
    Facebook Twitter Pinterest WhatsApp
    K N Rajanna Comments on DK

    K N Rajanna ಸದ್ಯ ರಾಜ್ಯದಲ್ಲಿ ಡಿನ್ನರ್‍ ಪಾಲಿಟಿಕ್ಸ್ ತುಂಬಾನೆ ಸದ್ದು ಮಾಡುತ್ತಿದೆ. ಕೆಲವು ದಿನಗಳ ಹಿಂದೆಯಷ್ಟೆ ಲೋಕೋಪಯೋಗಿ ಇಲಾಖೆಯ ಸಚಿವ ಸತೀಶ್ ಜಾರಕಿಹೊಳಿ ಮನೆಯಲ್ಲಿ ಆಯೋಜಿಸಿದ್ದ ಡಿನ್ನರ್‍ ಮಿಟೀಂಗ್ ರಾಜ್ಯ ರಾಜಕಾರಣದಲ್ಲಿ ಭಾರಿ ಸದ್ದು ಮಾಡಿತ್ತು. ಇದರ ಬೆನ್ನಲ್ಲೇ ಗೃಹ ಸಚಿವ ಡಾ.ಪರಮೇಶ್ವರ್‍ ಡಿನ್ನರ್‍ ಪಾರ್ಟಿಯನ್ನು ಏರ್ಪಡಿಸಿದ್ದು, ಇದು ಮತಷ್ಟು ಗದ್ದಲಕ್ಕೆ ಕಾರಣವಾಗಿತ್ತು. ಆದರೆ ಈ ಪಾರ್ಟಿಯನ್ನು ಮುಂದೂಡುವಂತೆ ಹೈಕಮಾಂಡ್ ಸೂಚನೆ ನೀಡಿದ್ದು, ಇಂದು (ಜ.8) ನಡೆಯಬೇಕಿದ್ದ ಡಿನ್ನರ್‍ ಪಾರ್ಟಿ ಮುಂದೂಡಲಾಗಿದೆ.

    K N Rajanna Comments on DK 0

    ಗೃಹ ಸಚಿವ ಡಾ.ಜಿ.ಪರಮೇಶ್ವರ್‍ ರವರ ಮನೆಯಲ್ಲಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಮುಖಂಡರಿಗೆ ತುಮಕೂರು ನಗರದ ಹೋಟೆಲ್ ನಲ್ಲಿ ಡಿನ್ನರ್‍ ಪಾರ್ಟಿ ಆಯೋಜಿಸಿದ್ದು, ಇದು ಹೈಕಮಾಂಡ್ ಸೂಚನೆಯ ಮೇರೆಗೆ ಮುಂದೂಡಲಾಗಿದೆ. ಈ ಸಂಬಂಧ ಮಾತನಾಡಿದ ಸಹಕಾರ ಸಚಿವ ರಾಜಣ್ಣ, ಡಿನ್ನರ್‍ ಪಾರ್ಟಿಯನ್ನು ಮುಂದೂಡಲಾಗಿದೆಯೇ ವಿನಃ ರದ್ದು ಮಾಡಿಲ್ಲ. ಮೊನ್ನೆ ಸತೀಶ್ ಜಾರಿಕಿಹೊಳಿ ನಿವಾಸದಲ್ಲಿನ ಪಾರ್ಟಿಯ ಕಾರಣ ಗೊಂದಲ ಉಂಟಾಗಿತ್ತು. ಮತ್ತೆ ಗೊಂದಲವಾಗೋದು ಬೇಡ ಅಂತಾ ಹೈಕಮಾಂಡ್ ಸೂಚನೆ ನೀಡಿದೆ. ಆದ್ದರಿಂದ ಡಿನ್ನರ್‍ ಪಾರ್ಟಿ ಮುಂದೂಡಲಾಗಿದೆ ಎಂದರು.

    ಇನ್ನೂ ಡಿ.ಕೆ.ಶಿವಕುಮಾರ್‍ ರವರಿಗೆ ಬೇಸರವಾಗೋಕೆ ಅವರ ಆಸ್ತಿಯನ್ನು ಯಾರಾದರೂ ಬರೆಸಿಕೊಂಡಿದ್ದಾರಾ, ಪರಿಶಿಷ್ಟ ಜಾತಿ ಅಥವಾ ಪಂಗಡದ ಸಮುದಾಯದವರಿಗೆ ಪ್ರಿಯೂವರ್ಸಿಟಿ ಮಕ್ಕಳಿಗೆ, ಮ್ಯಾನೇಜ್ಮೆಂಟ್ ಕೋಟಾದಲ್ಲಿ ಎಸ್ಸಿ, ಎಸ್ಟಿ ವಿದ್ಯಾರ್ಥಿಗಳಿಗೆ ದಾಖಲು ಮಾಡುತ್ತಿದ್ದಾರೆ. ಅವರಿಗೆಲ್ಲಾ ವಿದ್ಯಾರ್ಥಿ ವೇತನ ಸಿಗ್ತಾ ಇಲ್ಲ. ಈ ಸಮಸ್ಯೆಗಳನ್ನು ಚರ್ಚೆ ಮಾಡೋಕೆ ಮೀಟಿಂಗ್ ಕರೆದರೇ ಬೇಡ ಎನ್ನುತ್ತಾರೆ ಎಂದು ಡಿಕೆಶಿ ವಿರುದ್ದ ಅಸಮಾಧಾನ ಹೊರಹಾಕಿದ್ದಾರೆ. ಹೈಕಮಾಂಡ್ ಅಥವಾ ಬೇರೆ ಯಾರೇ ಆಗಲಿ ಈ ರೀತಿ ಮಾಡಿದರೇ ಹೇಗೆ, ಇವರೆಲ್ಲಾ ಪರಿಶಿಷ್ಟ ಸಮುದಾಯಗಳ ವಿರೋಧಿಗಳೇ, ಇದೆಲ್ಲಾ ತುಂಬಾ ದಿನ ನಡೆಯಲ್ಲ. ಈ ರೀತಿಯ ಸಭೆಗಳಿಗೆ ರಾಜಕೀಯ ಮುದ್ರೆ ಹಾಕುವುದು ಸರಿಯಲ್ಲ. ಈ ರೀತಿಯ ಕೆಲಸ ಯಾರು ಮಾಡಿದರೂ ಅವರಿಗೆಲ್ಲಾ ಇದು ಅನ್ವಯವಾಗುತ್ತದೆ ಎಂದು ಆಕ್ರೋಷ ಹೊರಹಾಕಿದ್ದಾರೆ.

    K N Rajanna Comments on DK 1

    Satish Jarkiholi :ಡಿನ್ನರ್‍ ಪಾರ್ಟಿಗಳು ಹೊಸದು ಏನು ಅಲ್ಲಾ, ಇದರಲ್ಲಿ ಯಾವುದೇ ಮುಸುಕಿನ ಗುದ್ದಾಟವಿಲ್ಲ ಎಂದ ಸತೀಶ್ ಜಾರಕಿಹೊಳಿ

    ಡಿನ್ನರ್‍ ಪಾಲಿಟಿಕ್ಸ್ ಕುರಿತು ಲೋಕೋಪಯೋಗಿ ಇಲಾಖೆಯ ಸಚಿವ ಸತೀಶ್ ಜಾರಕಿಹೊಳಿ ಮಾತನಾಡಿದ್ದಾರೆ. ಬೆಂಗಳೂರಿನಲ್ಲಿ ಈ ಕುರಿತು ಮಾತನಾಡಿದ ಅವರು, ಪರಿಶಿಷ್ಟ ಜಾತಿ ಹಾಗೂ ಪಂಗಡದ ಶಾಸಕರ ಡಿನ್ನರ್‍ ಮೀಟಿಂಗ್ ವಿಚಾರ, ಯಾರು ಕರೆದಿದ್ರು ಅವರನ್ನು ಕೇಳಬೇಕು, ಕರೆದಿದ್ದರೇ ನಾವು ಭಾಗವಹಿಸುತ್ತಿದ್ದೆವು. ನಾವು ಸಭೆಗೆ ಆಹ್ವಾನಿತರಷ್ಟೆ. ಸಭೆಗೆ ನನ್ನನ್ನು ಕರೆದಿದ್ದರು. ಏನು ಚರ್ಚೆಯಾಗಿತ್ತು ನನಗೆ ಗೊತ್ತಿಲ್ಲ. ಪರಮೇಶ್ವರ್‍ ರವರ ಜೊತೆ ನಾನು ಮಾತನಾಡಿಲ್ಲ. ಪಕ್ಷ ಒಂದೇ ಇದೆ, ಎಲ್ಲರೂ ಒಂದಾಗಿದ್ದೇವೆ. ರಾಜಕೀಯ ಮಾಡಬೇಕಾದ್ರೆ ಶಕ್ತಿ ಇಟ್ಕೊಂಡು ಬರಬೇಕು ಎಂದಿದ್ದಾರೆ.

    ನಾವು ಸಭೆಗೆ ಕರೆದವರೂ ಅಲ್ಲ, ಡೆಲ್ಲಿಗೆ ಹೋದವರೂ ಅಲ್ಲ. ಇದರ ಬಗ್ಗೆ ಹೇಳಿದರೇ ಮತ್ತೇ ಬೇರೆ ಏನೋ ಆಗುತ್ತದೆ. ಮತ್ತೆ ಯಾವಾಗ ಮಾಡ್ತಾರೆ ಎಂದು ಕೇಳ್ತೇವೆ. ಡಿನ್ನರ್‍ ಪಾರ್ಟಿ ಹೊಸದೇನೂ ಅಲ್ಲ. ಇದರಲ್ಲಿ ಮುಸುಕಿನ ಗುದ್ದಾಟವೇನೂ ಇಲ್ಲ. ಹೈಕಮಾಂಡ್ ಅನುಮತಿಯನ್ನು ಗೃಹ ಮಂತ್ರಿಗಳು ತೆಗೆದುಕೊಳ್ಳುತ್ತಾರೆ. ನಂತರ ಸಭೆಯ ಬಗ್ಗೆ ನೋಡೋಣ. ಸಮಸ್ಯೆಯೊಂದು ಹುಟ್ಟಿಕೊಂಡಾಗ ಅದರ ಬಗ್ಗೆ ಕೇಳಬೇಕಲ್ಲವೇ, ಹೈಕಮಾಂಡ್ ಹತ್ತಿರವೇ ಕೇಳೋಣ ಎಂದು ಸತೀಶ್ ಜಾರಕಿಹೊಳಿ ಹೇಳಿದ್ದಾರೆ.

    D K Shivakumar Dinner Politics Dr G Parameshwar K N Rajanna Karnataka Congress Karnataka Politics Satish Jarkiholi Siddaramaiah
    Share. Facebook Twitter Pinterest WhatsApp
    by Admin
    • Website
    • Facebook

    Welcome to ISM Kannada News, if you want to contact us, then feel free to say anything about www.ismkannadanews.com

    Related Posts

    Ramanagara : ಮೂಕ ಬಾಲಕಿ ಅತ್ಯಾಚಾರ ಮತ್ತು ಕೊಲೆ ಆರೋಪ – ತನಿಖೆ ಚುರುಕು…!

    May 14, 2025

    Namma Clinics : ಬೆಂಗಳೂರು ನಗರ ಜಿಲ್ಲೆಯ ನಮ್ಮ ಕ್ಲಿನಿಕ್‌ಗಳಲ್ಲಿ ಉದ್ಯೋಗಾವಕಾಶಗಳು: 48 ಹುದ್ದೆಗಳಿಗೆ ನೇರ ಸಂದರ್ಶನ…!

    May 14, 2025

    Local News : ಅದ್ದೂರಿಯಾಗಿ ನಡೆದ ಗಡಿದಂ ಲಕ್ಷ್ಮೀವೆಂಕಟೇಶ್ವರ ಸ್ವಾಮಿ ಬ್ರಹ್ಮರಥೋತ್ಸವ….!

    May 13, 2025
    Leave A Reply Cancel Reply

    IPL 2025 Live Score
    Don't Miss

    Ramanagara : ಮೂಕ ಬಾಲಕಿ ಅತ್ಯಾಚಾರ ಮತ್ತು ಕೊಲೆ ಆರೋಪ – ತನಿಖೆ ಚುರುಕು…!

    State May 14, 2025

    Ramanagara – ರಾಮನಗರ ತಾಲೂಕಿನ ಭದ್ರಾಪುರ ಗ್ರಾಮದಲ್ಲಿ ನಡೆದ ಅಮಾನುಷ ಘಟನೆಯೊಂದು ತೀವ್ರ ಆಘಾತವನ್ನುಂಟು ಮಾಡಿದೆ. ಭದ್ರಾಪುರ ಗ್ರಾಮದ ಹಕ್ಕಿಪಿಕ್ಕಿ…

    NHAI ನೇಮಕಾತಿ 2025: ಉಪ ವ್ಯವಸ್ಥಾಪಕ ಹುದ್ದೆಗಳಿಗೆ ಅರ್ಜಿ ಆಹ್ವಾನ, ಕೂಡಲೇ ಅರ್ಜಿ ಸಲ್ಲಿಸಿ…!

    May 14, 2025

    Meerut : ಮೀರತ್‌ನಲ್ಲಿ ನಿಷಿದ್ಧ ತಳಿಯ ನಾಯಿ ವಿಚಾರಕ್ಕೆ ನೆರೆಹೊರೆಯವರೊಂದಿಗೆ ಜಗಳ: ದಂಪತಿಗೆ ಹಲ್ಲೆ, ಕೂದಲು ಹಿಡಿದು ಎಳೆದಾಡಿ ಹಲ್ಲೆ…!

    May 14, 2025

    ICSI Recruitment 2025 : 54 ರಿಸರ್ಚ್ ಅಸೋಸಿಯೇಟ್ & ಕನ್ಸಲ್ಟೆಂಟ್ ಹುದ್ದೆಗಳಿಗೆ ಅರ್ಜಿ ಆಹ್ವಾನ!

    May 14, 2025

    Virat Kohli – ಅನುಷ್ಕಾ ಶರ್ಮಾ-ವಿರಾಟ್ ಕೊಹ್ಲಿ ಕೈಯಲ್ಲಿ ಎಲೆಕ್ಟ್ರಾನಿಕ್ ಉಂಗುರ: ಇದರ ವಿಶೇಷತೆ ಏನು?

    May 14, 2025

    Namma Clinics : ಬೆಂಗಳೂರು ನಗರ ಜಿಲ್ಲೆಯ ನಮ್ಮ ಕ್ಲಿನಿಕ್‌ಗಳಲ್ಲಿ ಉದ್ಯೋಗಾವಕಾಶಗಳು: 48 ಹುದ್ದೆಗಳಿಗೆ ನೇರ ಸಂದರ್ಶನ…!

    May 14, 2025
    ISM Kannada News
    Facebook X (Twitter) Instagram Pinterest
    • Home
    • About Us
    • Contact Us
    • Privacy Policy
    © 2025 ISM Kannada News. Designed by ISM News.

    Type above and press Enter to search. Press Esc to cancel.