Close Menu
ISM Kannada News
    IPL 2025 Live Score
    What's Hot

    Ramanagara : ಮೂಕ ಬಾಲಕಿ ಅತ್ಯಾಚಾರ ಮತ್ತು ಕೊಲೆ ಆರೋಪ – ತನಿಖೆ ಚುರುಕು…!

    May 14, 2025

    NHAI ನೇಮಕಾತಿ 2025: ಉಪ ವ್ಯವಸ್ಥಾಪಕ ಹುದ್ದೆಗಳಿಗೆ ಅರ್ಜಿ ಆಹ್ವಾನ, ಕೂಡಲೇ ಅರ್ಜಿ ಸಲ್ಲಿಸಿ…!

    May 14, 2025

    Meerut : ಮೀರತ್‌ನಲ್ಲಿ ನಿಷಿದ್ಧ ತಳಿಯ ನಾಯಿ ವಿಚಾರಕ್ಕೆ ನೆರೆಹೊರೆಯವರೊಂದಿಗೆ ಜಗಳ: ದಂಪತಿಗೆ ಹಲ್ಲೆ, ಕೂದಲು ಹಿಡಿದು ಎಳೆದಾಡಿ ಹಲ್ಲೆ…!

    May 14, 2025
    Facebook X (Twitter) Instagram
    Facebook X (Twitter) Instagram WhatsApp
    ISM Kannada NewsISM Kannada News
    Subscribe
    • Home
    • All News
      • State
      • National
      • International
    • Special
    • Entertainment
    • Technology
    • Web Stories
    • Foodies
    ISM Kannada News
    Home»State»Guru Siddarameshwara Jayanti – ಜನಪರ ಕೆಲಸಗಳನ್ನು ಮಾಡುವುದೇ ನಮ್ಮ ಸರ್ಕಾರದ ಮುಖ್ಯ ಉದ್ದೇಶ: ಡಾ.ಎಂ.ಸಿ.ಸುಧಾಕರ್
    State

    Guru Siddarameshwara Jayanti – ಜನಪರ ಕೆಲಸಗಳನ್ನು ಮಾಡುವುದೇ ನಮ್ಮ ಸರ್ಕಾರದ ಮುಖ್ಯ ಉದ್ದೇಶ: ಡಾ.ಎಂ.ಸಿ.ಸುಧಾಕರ್

    By by AdminJanuary 15, 2025Updated:January 15, 2025No Comments3 Mins Read
    Facebook Twitter Pinterest WhatsApp
    Guru Siddarameshwara Jayanti in Bagepalli 1

    Table of Contents

    Toggle
    • ಕಾಂಗ್ರೇಸ್ ಶಾಸಕಾಂಗ ಪಕ್ಷದ ಶಾಸಕರ ಸಭೆಯಲ್ಲಿ ಎಲ್ಲಾ ಶಾಸಕರು ರಾಜ್ಯದ ಜನತೆಗೆ ನೀಡಿರುವ ಭರವಸೆಗಳ ಕಡೆ ಹೆಚ್ಚಿನ ಗಮನ ನೀಡಬೇಕು. ಮುಖ್ಯಮಂತ್ರಿಗಳ ಬದಲಾವಣೆ ವಿಚಾರದ ಬಗ್ಗೆ ಚರ್ಚೆ ಆಗಿಲ್ಲ.  ಕೇವಲ ಮಾಧ್ಯಮಗಳಲ್ಲಿ ಹಲವರು ಮಾತನಾಡಿರುವುದರಿಂದ ಊಹಾಪೂಹಗಳು, ಇಲ್ಲಿ ಮುಖ್ಯಮಂತ್ರಿ ಬದಲಾವಣೆ, ಒಳ ಒಪ್ಪಂದ ಇತ್ಯಾಧಿ ಅನಗತ್ಯ ವಿಚಾರಗಳ ಬಗ್ಗೆ ಗಮನಹರಿಸುವುದು ಬೇಡ, ಮುಖ್ಯಮಂತ್ರಿ ಬದಲಾವಣೆ ಬಗ್ಗೆ ಹೈಕಮಾಂಡ್‍ಗೆ ಬಿಟ್ಟ ವಿಚಾರ. ಅನಗತ್ಯ ವಿಚಾರಗಳನ್ನು ಬಿಟ್ಟು ಜನಪರ ಹಾಗೂ ಸುಸ್ಥಿರ ಸರ್ಕಾರ ನೀಡುವ ಕೆಲಸದಲ್ಲಿ ತೊಡಗಿಸಿಕೊಳ್ಳಬೇಕಾಗಿದೆ.

    Guru Siddarameshwara Jayanti – ಮಾಧ್ಯಮಗಳಲ್ಲಿನ ಊಹಾಪೂಹಗಳ ಕಡೆ ಗಮನ ಹರಿಸದೆ ಸರ್ಕಾರದ ಕಾರ್ಯಗಳನ್ನ ಜನರ ಮನೆ ಬಾಗಿಲಿಗೆ ತಲುಪಿಸುವ ಹಾಗೂ ಸುಸ್ಥಿರ, ಜನಪರ ಕೆಲಸಗಳನ್ನು ಮಾಡುವುದೇ ನಮ್ಮ ಸರ್ಕಾರದ ಮುಖ್ಯ ಉದ್ದೇಶವಾಗಿದೆ ಎಂದು ಚಿಕ್ಕಬಳ್ಳಾಪುರ ಉಸ್ತವಾರಿ ಸಚಿವ ಹಾಗೂ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ಸ್ಪಷ್ಟಪಡಿಸಿದರು.

    Guru Siddarameshwara Jayanti in Bagepalli

    ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ಪಟ್ಟಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ಹಾಗೂ ತಾಲೂಕು ಭೋವಿ(ವಡ್ಡರ) ಸಂಘ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಶ್ರೀ ಗುರು ಸಿದ್ದರಾಮೇಶ್ವರ 853ನೇ ಜಯಂತಿ ಆಚರಣೆ ಹಾಗೂ ಶ್ರೀ ಗುರು ಸಿದ್ದರಾಮೇಶ್ವರ ಭೋವಿ ಸಮುದಾಯ ಭವನದ ಲೋಕಾರ್ಪಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಚುನಾವಣೆ ಸಮಯದಲ್ಲಿ ನೀಡಿದ್ದ ಆಶ್ವಾಸನೆಯಂತೆ ಎಲ್ಲಾ 5 ಗ್ಯಾರೆಂಟಿಗಳನ್ನು  ನಮ್ಮ ಸರ್ಕಾರ ಯಶಸ್ವಿಯಾಗಿ ಅನುಷ್ಠಾನ ಮಾಡಲಾಗಿದ್ದು ಸರ್ಕಾರದ ಈ ಎಲ್ಲಾ ಕಾರ್ಯಗಳನ್ನು ಜನರ ಮನೆಗೆ ತಲುಪಿಸುವಂತಹ ಹಾಗೂ ಜನಪರ ಕಾರ್ಯಕ್ರಮಗಳಿಗೆ ಸರ್ಕಾರ ಒತ್ತುನೀಡುತ್ತಿರುವುದಾಗಿ ತಿಳಿಸಿದರು.

    ಮಕ್ಕಳ ಉಜ್ವಲ ಭವಿಷ್ಯ ರೂಪಿಸಲು ಶಿಕ್ಷಣವೊಂದೇ ಪ್ರಮುಖ ದಾರಿ. ಶೈಕ್ಷಣಿಕ ಅಭಿವೃದ್ದಿ ಆಗದಹೊರತು ಯಾವುದೇ ಸಮುದಾಯ ಸಮಾಜದ ಮುಖ್ಯವಾಹಿನಿಗೆ ಬರಲು ಸಾಧ್ಯವೇ ಇಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದ ಅವರು  ಭೋವಿ ಸಮುದಾಯ ಸೇರಿದಂತೆ ಎಲ್ಲಾ ಸಮುದಾಯಗಳು ತಮ್ಮ ಮಕ್ಕಳ ಶಿಕ್ಷಣಕ್ಕೆ ಒತ್ತು ನೀಡುವ ಮೂಲಕ ಶೈಕ್ಷಣಿಕವಾಗಿ ಬಲಿಷ್ಠರನ್ನಾಗಿಸಿದಾಗ ಮಾತ್ರ ಆರ್ಥಿಕವಾಗಿ ಸಾಮಾಜಿಕವಾಗಿ, ಶೈಕ್ಷಣಿಕÀವಾಗಿ ರಾಜಕೀಯವಾಗಿ ಅಭಿವೃದ್ದಿ ಹೊಂದಲು ಸಾಧ್ಯವಾಗುತ್ತೆ ಅಲ್ಲದೆ ಸಮಾಜದಲ್ಲಿ ನಡೆಯುತ್ತಿರುವ ತಾರತಮ್ಯಗಳಿಂದ ಹೊರಬಂದು ಸಮಸಮಾಜವನ್ನು ನಿರ್ಮಾಣ ಮಾಡಲು ಮುಮದಾಗಬೇಕೆಂದ ಅವರು ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಹಿಂದುಳಿದ ಸಮುದಾಯಗಳ ಅಭಿವೃದ್ದಿಗೆ ನಮ್ಮ ಸರ್ಕಾರ ಬದ್ಧವಾಗಿದೆ ಎಂದರು. ಸಿದ್ದರಾಮೇಶ್ವರರು ತಮ್ಮ ವಚನಗಳ ಮೂಲಕ ಸಮಾಜದಲ್ಲಿನ ಅಕ್ಕುಡೊಂಕುಗಳನ್ನು ತಿದ್ದುವಂತಹ, ಅರಿವು ಮೂಡಿಸುವಂತಹ ಕೆಲಸವನ್ನು ಮಾಡಿದ ಮಹಾನ್‍ಪುರುಷರು ಇಂತಹ ಮಹನೀಯರ ಆದರ್ಶಗಳನ್ನು, ಮಾರ್ಗದರ್ಶನಗಳನ್ನು ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದರು.

    Guru Siddarameshwara Jayanti in Bagepalli 2

    ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಮಾತನಾಡಿ,  ಭೋವಿ ಸಮುದಾಯದವರು ಆರ್ಥಿಕವಾಗಿ, ಶೈಕ್ಷಣಿಕವಾಗಿ ಹಿಂದುಳಿದ ಸಮುದಾಯವಾಗಿದೆ. ಈ ಸಮುದಾಯದ ಬಹುತೇಕರು ಬಡ್ಡೆ ಕಲ್ಲುಗಳನ್ನು ಒಡೆದು ಜೀವನ ಸಾಗಿಸುವವರಾಗಿದ್ದಾರೆ.  ಅವರ ಮಕ್ಕಳು ಸಹ ಬಂಡೆ ಒಡೆಯುವ ಕೆಲಸಕ್ಕೆ ಸಿಮೀತರಾಗದೆ ಅವರಿಗೆ ಉತ್ತಮ ಶಿಕ್ಷಣವನ್ನು ನೀಡಿ ಎಂದರು. ಕಲ್ಲು ಬಂಡೆಗಳನ್ನು ಒಡೆಯುವ ವೃತ್ತಿ ಮಾಡುತ್ತಿರುವವರನ್ನು ಗುರ್ತಿಸಿ ಅವರಿಗೆ ಸರ್ಕಾರದಿಂದ ಕಲ್ಲು ಬಂಡೆಗಳನ್ನು ಒಡೆಯಲು ಜಾಗವನ್ನು ಸರ್ಕಾರದಿಂದ ಂಜೂರು ಮಾಡಿಸುವ  ಪ್ರಮಾಣಿಕ ಪ್ರಯತ್ನ ಮಾಡುವುದಾಗಿ ಭೋವಿ ಸಮುದಾಯದವರಿಗೆ ಭರವಸೆ ನೀಡಿದರು.

    ಪಟ್ಟಣದಲ್ಲಿ ಸು.1.5 ಕೋಟಿ ರೂಗಳ ವೆಚ್ಚದಲ್ಲಿ ಭೋವಿ ಸಮುದಾಯ ಭವನ ಇಂದು ಲೋಕಾರ್ಪಯಾಗಿದೆ. ವಾಲ್ಮೀಕಿ ಭವನ ಶೀಘ್ರದಲ್ಲಿಯೇ ಉದ್ಘಾಟನೆಯಾಗಲಿದೆ ಅಲ್ಲದೆ ಸಿವಿತಾ ಸಮಾಜ ಸೇರಿದಂತೆ ತಳ ಸಮುದಾಯದವರಿಗೆ ಸಮುದಾಯ ಭವನ ನಿರ್ಮಿಸಲು ಪ್ರಯತ್ನ ಮಾಡುವು ಭರವಸೆ ನೀಡಿದ ಅವರು  ಐಎಎಸ್ ಐಪಿಎಸ್ ಕೋರ್ಸ್‍ಗಳಿಗೆ ತರಬೇತಿ ನೀಡುವ ನಿಟ್ಟಿನಲ್ಲಿ  ಪಟ್ಟಣದ ಮುಖ್ಯ ರಸ್ತೆಯಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಭವನದ ಜೊತೆಗೆ ಅಂಬೇಡ್ಕರ್ ಅಧ್ಯಾಯನ ಕೇಂದ್ರವನ್ನು ಸುಮಾರು 10 ಕೋಟಿಗಳ ವೆಚ್ಚದಲ್ಲಿ ಅತೀ ಶೀಘ್ರದಲ್ಲಿ ಗುದ್ದಲಿ ಪೂಜೆ ನೆರವೇರಿಸುವುದಾಗಿ ತಿಳಿಸಿದರು.

    ಇದೇ ವೇಳೆ ಭೋವಿ ಸಮುದಾಯದ  ಗುರುಗಳಾದ ಶ್ರೀ ಶ್ರೀ  ಇಮ್ಮಡಿ ಸಿದ್ದರಾಮೇಶ್ವರ ಸ್ವಾಮಿಗಳ ಸಾನಿಧ್ಯವಹಿಸಿ ಆರ್ಶಿವಚನ ನೀಡಿದರು. ಇದಕ್ಕೂ ಮೊದಲು ಮಹಿಳೆಯರು ಪೂರ್ಣಕುಂಭ ಮೇಳದೊಂದಿಗೆ  ಸಮುದಾಯದ ಗುರುಗಳಾದ ಶ್ರೀ ಶ್ರೀ ಸಿದ್ದರಾಮೇಶ್ವರ ಸ್ವಾಮಿ ರವರನ್ನು ಭೋವಿ ಸಮುದಾಯ ಭವನಕ್ಕೆ ಕರೆತರಲಾಯಿತು. ವಿವಿಧ ಕಲಾತಂಡಗಳೊಂದಿಗೆ ಪಟ್ಟಣದ ಮುಖ್ಯ ರಸ್ತೆಯಲ್ಲಿಮೆರವಣಿಗೆ ನಡೆಸಿ ನಂತರ  ಭೋವಿ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿದರು.  ಭೋವಿ ಸಮುದಾಯದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಮುದಾಯದ ಗಣರನ್ನು ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಲಾಯಿತು.

    Guru Siddarameshwara Jayanti in Bagepalli 3

    ಈ ಸಂದರ್ಭದಲ್ಲಿ  ಕೋಲಾರ ಕ್ಷೇತ್ರದ ಸಂಸದ ಮಲ್ಲೇಶ್ ಬಾಬು, ತಾಲೂಕು ಭೋವಿ ಸಂಘದ ಮುಖಂಡರಾದ ಜಿ.ಪಂ ಮಾಜಿ ಅಧ್ಯಕ್ಷ ಎಂ.ವಿ.ಕೃಷ್ಣಪ್ಪ, ನಾಗರಾಜ್, ಕೆ.ಶ್ರೀನಿವಾಸ್, ಕೆ.ಟಿ.ವೀರಾಂಜನೇಯಲು,  ವೆಂಕಟರಾಮ್, ಲಂಭೂ ಶ್ರೀನಿವಾಸ್, ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ತೇಜಾನಂದರೆಡ್ಡಿ, ತಹಸೀಲ್ದಾರ್  ಮನೀಷಾ ಎನ್. ಪತ್ರಿ, ಪುರಸಭೆ ಮುಖ್ಯಾಧಿಕಾರಿ ಶ್ರೀನಿವಾಸ್ ಮತ್ತಿತರರು ಇದ್ದರು.

    ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ ಸುಧಾಕರ್ –

    ಕಾಂಗ್ರೇಸ್ ಶಾಸಕಾಂಗ ಪಕ್ಷದ ಶಾಸಕರ ಸಭೆಯಲ್ಲಿ ಎಲ್ಲಾ ಶಾಸಕರು ರಾಜ್ಯದ ಜನತೆಗೆ ನೀಡಿರುವ ಭರವಸೆಗಳ ಕಡೆ ಹೆಚ್ಚಿನ ಗಮನ ನೀಡಬೇಕು. ಮುಖ್ಯಮಂತ್ರಿಗಳ ಬದಲಾವಣೆ ವಿಚಾರದ ಬಗ್ಗೆ ಚರ್ಚೆ ಆಗಿಲ್ಲ.  ಕೇವಲ ಮಾಧ್ಯಮಗಳಲ್ಲಿ ಹಲವರು ಮಾತನಾಡಿರುವುದರಿಂದ ಊಹಾಪೂಹಗಳು, ಇಲ್ಲಿ ಮುಖ್ಯಮಂತ್ರಿ ಬದಲಾವಣೆ, ಒಳ ಒಪ್ಪಂದ ಇತ್ಯಾಧಿ ಅನಗತ್ಯ ವಿಚಾರಗಳ ಬಗ್ಗೆ ಗಮನಹರಿಸುವುದು ಬೇಡ, ಮುಖ್ಯಮಂತ್ರಿ ಬದಲಾವಣೆ ಬಗ್ಗೆ ಹೈಕಮಾಂಡ್‍ಗೆ ಬಿಟ್ಟ ವಿಚಾರ. ಅನಗತ್ಯ ವಿಚಾರಗಳನ್ನು ಬಿಟ್ಟು ಜನಪರ ಹಾಗೂ ಸುಸ್ಥಿರ ಸರ್ಕಾರ ನೀಡುವ ಕೆಲಸದಲ್ಲಿ ತೊಡಗಿಸಿಕೊಳ್ಳಬೇಕಾಗಿದೆ.

    Bagepalli Chikkaballapura Congress MLA Subbareddy MLA Subbareddy Religious Festival 2025 Siddharameshwar Jayanti 2025 Siddharameshwar Jayanti Karnataka
    Share. Facebook Twitter Pinterest WhatsApp
    by Admin
    • Website
    • Facebook

    Welcome to ISM Kannada News, if you want to contact us, then feel free to say anything about www.ismkannadanews.com

    Related Posts

    Ramanagara : ಮೂಕ ಬಾಲಕಿ ಅತ್ಯಾಚಾರ ಮತ್ತು ಕೊಲೆ ಆರೋಪ – ತನಿಖೆ ಚುರುಕು…!

    May 14, 2025

    Namma Clinics : ಬೆಂಗಳೂರು ನಗರ ಜಿಲ್ಲೆಯ ನಮ್ಮ ಕ್ಲಿನಿಕ್‌ಗಳಲ್ಲಿ ಉದ್ಯೋಗಾವಕಾಶಗಳು: 48 ಹುದ್ದೆಗಳಿಗೆ ನೇರ ಸಂದರ್ಶನ…!

    May 14, 2025

    Local News : ಅದ್ದೂರಿಯಾಗಿ ನಡೆದ ಗಡಿದಂ ಲಕ್ಷ್ಮೀವೆಂಕಟೇಶ್ವರ ಸ್ವಾಮಿ ಬ್ರಹ್ಮರಥೋತ್ಸವ….!

    May 13, 2025
    Leave A Reply Cancel Reply

    IPL 2025 Live Score
    Don't Miss

    Ramanagara : ಮೂಕ ಬಾಲಕಿ ಅತ್ಯಾಚಾರ ಮತ್ತು ಕೊಲೆ ಆರೋಪ – ತನಿಖೆ ಚುರುಕು…!

    State May 14, 2025

    Ramanagara – ರಾಮನಗರ ತಾಲೂಕಿನ ಭದ್ರಾಪುರ ಗ್ರಾಮದಲ್ಲಿ ನಡೆದ ಅಮಾನುಷ ಘಟನೆಯೊಂದು ತೀವ್ರ ಆಘಾತವನ್ನುಂಟು ಮಾಡಿದೆ. ಭದ್ರಾಪುರ ಗ್ರಾಮದ ಹಕ್ಕಿಪಿಕ್ಕಿ…

    NHAI ನೇಮಕಾತಿ 2025: ಉಪ ವ್ಯವಸ್ಥಾಪಕ ಹುದ್ದೆಗಳಿಗೆ ಅರ್ಜಿ ಆಹ್ವಾನ, ಕೂಡಲೇ ಅರ್ಜಿ ಸಲ್ಲಿಸಿ…!

    May 14, 2025

    Meerut : ಮೀರತ್‌ನಲ್ಲಿ ನಿಷಿದ್ಧ ತಳಿಯ ನಾಯಿ ವಿಚಾರಕ್ಕೆ ನೆರೆಹೊರೆಯವರೊಂದಿಗೆ ಜಗಳ: ದಂಪತಿಗೆ ಹಲ್ಲೆ, ಕೂದಲು ಹಿಡಿದು ಎಳೆದಾಡಿ ಹಲ್ಲೆ…!

    May 14, 2025

    ICSI Recruitment 2025 : 54 ರಿಸರ್ಚ್ ಅಸೋಸಿಯೇಟ್ & ಕನ್ಸಲ್ಟೆಂಟ್ ಹುದ್ದೆಗಳಿಗೆ ಅರ್ಜಿ ಆಹ್ವಾನ!

    May 14, 2025

    Virat Kohli – ಅನುಷ್ಕಾ ಶರ್ಮಾ-ವಿರಾಟ್ ಕೊಹ್ಲಿ ಕೈಯಲ್ಲಿ ಎಲೆಕ್ಟ್ರಾನಿಕ್ ಉಂಗುರ: ಇದರ ವಿಶೇಷತೆ ಏನು?

    May 14, 2025

    Namma Clinics : ಬೆಂಗಳೂರು ನಗರ ಜಿಲ್ಲೆಯ ನಮ್ಮ ಕ್ಲಿನಿಕ್‌ಗಳಲ್ಲಿ ಉದ್ಯೋಗಾವಕಾಶಗಳು: 48 ಹುದ್ದೆಗಳಿಗೆ ನೇರ ಸಂದರ್ಶನ…!

    May 14, 2025
    ISM Kannada News
    Facebook X (Twitter) Instagram Pinterest
    • Home
    • About Us
    • Contact Us
    • Privacy Policy
    © 2025 ISM Kannada News. Designed by ISM News.

    Type above and press Enter to search. Press Esc to cancel.