Solapur : ಕನಸಿನಲ್ಲಿ ಸತ್ತ ಅಮ್ಮ ಕರೆದಳು ಅಂತಾ, ತನ್ನ ಆತ್ಮಹತ್ಯೆ ಮಾಡಿಕೊಂಡ 16ರ ಬಾಲಕ, ಮಹಾರಾಷ್ಟ್ರದಲ್ಲಿ ನಡೆದ ಘಟನೆ…!

Solapur – ಕನಸಿನಲ್ಲಿ ಮೃತಪಟ್ಟ ಅಮ್ಮ ಕರೆದಳು ಎಂಬ ಕಾರಣಕ್ಕೆ, 10ನೇ ತರಗತಿಯಲ್ಲಿ ಶೇ. 92 ಅಂಕ ಗಳಿಸಿದ್ದ, ವೈದ್ಯನಾಗುವ ಕನಸು ಕಂಡಿದ್ದ 16 ವರ್ಷದ ಪ್ರತಿಭಾವಂತ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಮನ ಕಲಕುವ ಘಟನೆ ಮಹಾರಾಷ್ಟ್ರದ ಸೋಲಾಪುರದಲ್ಲಿ ನಡೆದಿದೆ. ಈ ಘಟನೆ ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿದೆ.

Solapur Teen boy mourns mother seen in dream – tragic suicide of NEET aspirant

 

Solapur – ಭವಿಷ್ಯ ಕಮರಿದ ಬಾಲ ಪ್ರತಿಭೆ

ಶಿವಶರಣ್ ಭೂತಾಲಿ ಟಾಲ್ಕೋಟಿ ಎಂಬ ಬಾಲಕ ತನ್ನ ಅಚ್ಚುಮೆಚ್ಚಿನ ಅಮ್ಮನನ್ನು ಕಳೆದುಕೊಂಡ ಕೆಲವೇ ತಿಂಗಳುಗಳಲ್ಲಿ ಈ ದುರದೃಷ್ಟಕರ ನಿರ್ಧಾರ ತೆಗೆದುಕೊಂಡಿದ್ದಾನೆ. ಕೆಲ ತಿಂಗಳ ಹಿಂದೆ ತಾಯಿಯನ್ನು ಕಳೆದುಕೊಂಡ ನೋವಿನಲ್ಲಿದ್ದ ಶಿವಶರಣ್, ತನ್ನ ಚಿಕ್ಕಪ್ಪನ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಕೇವಲ 3 ತಿಂಗಳ ಹಿಂದೆ ಶಿವಶರಣ್ ತಾಯಿ ಕಾಮಾಲೆ ಕಾಯಿಲೆಯಿಂದ ನಿಧನರಾಗಿದ್ದರು.

Solapur – ಅಮ್ಮನ ಕರೆಗೆ ಓಗೊಟ್ಟೆ ಎಂದ ಸೂಸೈಡ್ ನೋಟ್

ಶಿವಶರಣ್ ಸಾವಿಗೂ ಮುನ್ನ ಬರೆದಿಟ್ಟಿದ್ದ ಒಂದು ಸೂಸೈಡ್ ನೋಟ್ ಸಿಕ್ಕಿದ್ದು, ಆತನ ಮನಸ್ಸಿನ ತಳಮಳವನ್ನು ಬಿಚ್ಚಿಟ್ಟಿದೆ. “ನಾನು ಶಿವಶರಣ್. ನನಗೆ ಬದುಕಲು ಇಷ್ಟವಿಲ್ಲ, ಹಾಗಾಗಿ ನಾನು ಸಾಯುತ್ತಿದ್ದೇನೆ. ನನ್ನ ತಾಯಿ ಹೋದಾಗಲೇ ನಾನು ಹೋಗಬೇಕಿತ್ತು, ಆದರೆ ನನ್ನ ಚಿಕ್ಕಪ್ಪ ಮತ್ತು ಅಜ್ಜಿಯ ಮುಖ ನೋಡಿ ಬದುಕಿದ್ದೆ. ನನ್ನ ಸಾವಿಗೆ ಕಾರಣ, ನಿನ್ನೆ ನನ್ನ ತಾಯಿ ನನ್ನ ಕನಸಿನಲ್ಲಿ ಬಂದರು. ನಾನು ಯಾಕೆ ಇಷ್ಟು ದುಃಖಿತನಾಗಿದ್ದೇನೆ ಎಂದು ಕೇಳಿ, ನನ್ನನ್ನು ತನ್ನ ಬಳಿಗೆ ಬರುವಂತೆ ಅಮ್ಮ ಕರೆದರು. ಹಾಗಾಗಿ, ನಾನು ಸಾಯಲು ನಿರ್ಧರಿಸಿದೆ” ಎಂದು ಆತ ಬರೆದಿದ್ದಾನೆ.

Solapur – ಕುಟುಂಬದ ಪ್ರೀತಿಗೆ ಕೃತಜ್ಞತೆ

ತನ್ನ ಸೂಸೈಡ್ ನೋಟ್‌ನಲ್ಲಿ ಶಿವಶರಣ್, ತನ್ನ ಚಿಕ್ಕಪ್ಪ ಮತ್ತು ಅಜ್ಜಿಗೆ ಕೃತಜ್ಞತೆ ಸಲ್ಲಿಸಿದ್ದಾನೆ. “ನನ್ನ ಚಿಕ್ಕಪ್ಪ ಮತ್ತು ಅಜ್ಜಿಗೆ ನಾನು ತುಂಬಾ ಕೃತಜ್ಞನಾಗಿದ್ದೇನೆ, ಏಕೆಂದರೆ ಅವರು ನನ್ನನ್ನು ತುಂಬಾ ಚೆನ್ನಾಗಿ ನೋಡಿಕೊಂಡರು” ಎಂದು ಬರೆದಿದ್ದಾನೆ.

Solapur Teen boy mourns mother seen in dream – tragic suicide of NEET aspirant

Solapur – ತಂಗಿಗಾಗಿ ಕಡೆಯ ಸಂದೇಶ

ತನ್ನ ಚಿಕ್ಕಪ್ಪನಿಗೆ ಭಾವನಾತ್ಮಕ ಸಂದೇಶ ಬರೆದಿರುವ ಶಿವಶರಣ್, “ಚಿಕ್ಕಪ್ಪ, ನಾನು ಸಾಯುತ್ತಿದ್ದೇನೆ. ನಾನು ಹೋದ ನಂತರ, ನನ್ನ ತಂಗಿಯನ್ನು ಸಂತೋಷವಾಗಿಡಿ. ಚಿಕ್ಕಪ್ಪ, ನಾನು ನಿಮಗೆ ಒಂದು ವಿಷಯ ಹೇಳಲು ಬಯಸುತ್ತೇನೆ, ಅಜ್ಜಿಯನ್ನು ಅಪ್ಪನ ಬಳಿಗೆ ಕಳುಹಿಸಬೇಡಿ. ಎಲ್ಲರೂ, ನಿಮ್ಮ ಬಗ್ಗೆ ಕಾಳಜಿ ವಹಿಸಿ. ನನ್ನ ಹೆತ್ತವರಿಗಿಂತ ನೀವು ನನಗಾಗಿ ಹೆಚ್ಚಿನ ಪ್ರೀತಿ ತೋರಿಸಿದ್ದೀರಿ” ಎಂದು ಬರೆದಿದ್ದಾನೆ.

Read this also : ಮಗಳ ಮದುವೆಯ ದಿನವೇ ಮಸಣ ಸೇರಿದ ತಂದೆ, ಸಾವಿನ ಸುದ್ದಿ ಮುಚ್ಚಿಟ್ಟು ಮದುವೆ, ಚಿಕ್ಕಮಗಳೂರಿನಲ್ಲಿ ನಡೆದ ಹೃದಯವಿದ್ರಾವಕ ಘಟನೆ…!

Solapur – ವೈದ್ಯನಾಗುವ ಕನಸು ಕಂಡಿದ್ದ ವಿದ್ಯಾರ್ಥಿ

ಅಧಿಕಾರಿಗಳ ಮಾಹಿತಿ ಪ್ರಕಾರ, ಶಿವಶರಣ್ ನೀಟ್ (NEET) ಪರೀಕ್ಷೆಗೆ ತಯಾರಿ ನಡೆಸುತ್ತಿದ್ದನು. 10ನೇ ತರಗತಿಯಲ್ಲಿ ಶೇಕಡಾ 92 ರಷ್ಟು ಅಂಕಗಳನ್ನು ಗಳಿಸಿದ್ದ ಈ ಪ್ರತಿಭಾವಂತ ವಿದ್ಯಾರ್ಥಿ, ವೈದ್ಯನಾಗುವ ಕನಸು ಕಂಡಿದ್ದನು. ಆದರೆ, ಅಕಾಲಿಕ ಮರಣ ಆತನ ಕನಸುಗಳನ್ನು ಕಮರುವಂತೆ ಮಾಡಿದೆ. ಸೋಲಾಪುರ ನಗರ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.

Leave a Comment

Your email address will not be published. Required fields are marked *

Scroll to Top