Maharashtra Crime : ಮಹಾರಾಷ್ಟ್ರದಲ್ಲಿ ಹೃದಯ ಕಲಕುವ ಘಟನೆ: HIV ಸೋಂಕಿತ ಬಾಲಕಿ ಮೇಲೆ ಅತ್ಯಾಚಾರ..!

Maharashtra Crime – ಮಹಾರಾಷ್ಟ್ರದ ಲಾತೂರ್‌ನಲ್ಲಿ ನಡೆದ ಘಟನೆಯೊಂದು ಎಲ್ಲರ ಮನಸ್ಸನ್ನು ಕಲಕಿದೆ. HIV ಸೋಂಕಿತ ಅಪ್ರಾಪ್ತ ಬಾಲಕಿಯ ಮೇಲೆ ಅಮಾನವೀಯವಾಗಿ ಅತ್ಯಾಚಾರವೆಸಗಿದ ಆರೋಪದಡಿ ಐವರನ್ನು ಬಂಧಿಸಲಾಗಿದೆ. ಲಾತೂರ್ ಜಿಲ್ಲೆಯ ಔಸಾ ತಾಲೂಕಿನಲ್ಲಿರುವ ಒಂದು ಆಶ್ರಮದಲ್ಲಿ ಈ ಘಟನೆ ನಡೆದಿದೆ.

HIV-positive minor victim at Latur shelter home, Maharashtra rape case

Maharashtra Crime – ಆಶ್ರಮದಲ್ಲೇ ಅಘೋರ ಅಪರಾಧ

ಕಳೆದ ಎರಡು ವರ್ಷಗಳಿಂದ ಲಾತೂರ್‌ನಲ್ಲಿರುವ HIV ಬಾಧಿತರ ಆಶ್ರಮವೊಂದರಲ್ಲಿ ವಾಸವಾಗಿದ್ದ ಬಾಲಕಿಯ ಮೇಲೆ ಈ ಭೀಕರ ಘಟನೆ ನಡೆದಿದೆ. ಅತ್ಯಾಚಾರದ ಪರಿಣಾಮವಾಗಿ ಬಾಲಕಿ ಗರ್ಭಿಣಿಯಾದದ್ದು ಮತ್ತೊಂದು ಆಘಾತಕಾರಿ ಸಂಗತಿ. ಅತ್ಯಂತ ರಹಸ್ಯವಾಗಿ ಆಕೆಯ ಗರ್ಭಪಾತ ಮಾಡಿಸಲಾಗಿದ್ದು, ಈ ಕೃತ್ಯದಲ್ಲಿ ಆಶ್ರಮದ ನಿರ್ವಾಹಕರೂ ಸಹಕರಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಇದು ನಿಜಕ್ಕೂ ಸಮಾಜಕ್ಕೆ ದೊಡ್ಡ ಆಘಾತ.

Maharashtra Crime  – ಘಟನೆ ಹೇಗೆ ಬೆಳಕಿಗೆ ಬಂತು?

ಬಾಲಕಿ ಧರಾಶಿವ್ ಜಿಲ್ಲೆಯ ಧೋಕಿ ಮೂಲದವಳಾಗಿದ್ದು, HIV ಸೋಂಕಿನಿಂದ ಬಳಲುತ್ತಿದ್ದಳು. ಆಕೆಯ ದೂರಿನ ಪ್ರಕಾರ, ಜುಲೈ 13, 2023 ರಿಂದ ಈ ವರ್ಷದ ಜುಲೈ 23ರ ನಡುವಿನ ಅವಧಿಯಲ್ಲಿ ಲಾತೂರ್‌ನ ಹಸೆಗಾಂವ್‌ನಲ್ಲಿರುವ ‘ಸೇವಾಲಯ್’ HIV ಸೋಂಕಿತ ಮಕ್ಕಳ ಗೃಹದಲ್ಲಿ ಆಕೆಯ ಮೇಲೆ ನಿರಂತರವಾಗಿ ಅತ್ಯಾಚಾರ ನಡೆದಿದೆ.

ಆಶ್ರಮದ ಒಬ್ಬ ನೌಕರ ತನ್ನ ಮೇಲೆ ನಾಲ್ಕು ಬಾರಿ ಅತ್ಯಾಚಾರ ಎಸಗಿದ್ದಾನೆ ಮತ್ತು ಈ ವಿಷಯವನ್ನು ಯಾರಿಗೂ ಹೇಳದಂತೆ ಬೆದರಿಸಿದ್ದಾನೆ ಎಂದು ಬಾಲಕಿ ಪೊಲೀಸರಿಗೆ ತಿಳಿಸಿದ್ದಾಳೆ. ಈ ವಿಷಯವನ್ನು ಆಶ್ರಮದ ಆಡಳಿತ ಮಂಡಳಿಯ ಗಮನಕ್ಕೆ ತಂದರೂ ಯಾವುದೇ ಕ್ರಮ ಕೈಗೊಂಡಿಲ್ಲವಂತೆ. ಕೊನೆಗೆ, ತನ್ನ ಮೇಲೆ ನಡೆದ ದೌರ್ಜನ್ಯದ ಬಗ್ಗೆ ಬರೆದ ಪತ್ರವನ್ನು ಪೊಲೀಸ್ ದೂರು ಪೆಟ್ಟಿಗೆಯಲ್ಲಿ ಹಾಕಿದಾಗ ಈ ಘೋರ ಅಪರಾಧ ಬೆಳಕಿಗೆ ಬಂದಿದೆ.

HIV-positive minor victim at Latur shelter home, Maharashtra rape case

ಬಾಲಕಿ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾದಾಗ, ವೈದ್ಯಕೀಯ ಪರೀಕ್ಷೆಯಲ್ಲಿ ಆಕೆ ನಾಲ್ಕು ತಿಂಗಳ ಗರ್ಭಿಣಿ ಎಂಬುದು ದೃಢಪಟ್ಟಿದೆ. ನಂತರ, ಆರೋಪಿ ಆಕೆಯ ಅನುಮತಿಯಿಲ್ಲದೆ ಗರ್ಭಪಾತ ಮಾಡಿಸಲು ವ್ಯವಸ್ಥೆ ಮಾಡಿದ್ದಾನೆ ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.

Read this also : ಬೆಂಗಳೂರಿನಲ್ಲಿ ಬೆಚ್ಚಿಬೀಳಿಸಿದ ಘಟನೆ: ಗಾಂಜಾ ನಶೆಯಲ್ಲಿ ಬಾಲಕಿ ಮೇಲೆ ಅತ್ಯಾಚಾರ, ಕೊಲೆ…!

Maharashtra Crime – ಆರೋಪಿಗಳ ಬಂಧನ ಮತ್ತು ಮುಂದಿನ ಕ್ರಮಗಳು

ಈ ಘಟನೆಗೆ ಸಂಬಂಧಿಸಿದಂತೆ ಧೋಕಿ ಪೊಲೀಸರು ತಕ್ಷಣವೇ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಆಶ್ರಮದ ಸಂಸ್ಥಾಪಕ, ಸೂಪರಿಂಟೆಂಡೆಂಟ್, ಅತ್ಯಾಚಾರ ಎಸಗಿದ ನೌಕರ ಮತ್ತು ಗರ್ಭಪಾತ ಮಾಡಿದ ವೈದ್ಯರ ವಿರುದ್ಧ ಕೇಸ್ ದಾಖಲಿಸಲಾಗಿದೆ. ಬಂಧಿತರಾದವರಲ್ಲಿ ಆಶ್ರಮದ ಸಂಸ್ಥಾಪಕ ರವಿ ಬಾಪಟ್ಲೆ, ಸೂಪರಿಂಟೆಂಡೆಂಟ್ ರಚನಾ ಬಾಪಟ್ಲೆ, ನೌಕರರಾದ ಅಮಿತ್ ಮಹಾಮುನಿ ಮತ್ತು ಪೂಜಾ ವಾಘ್ಮಾರೆ ಸೇರಿದ್ದಾರೆ. ಸದ್ಯ ಸಂತ್ರಸ್ತ ಬಾಲಕಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

Leave a Comment

Your email address will not be published. Required fields are marked *

Scroll to Top