HomeNationalKisan Credit Card Loan: ಕಿಸಾನ್ ಕ್ರೆಡಿಟ್ ಕಾರ್ಡ್ ಸಾಲ ಮಿತಿ 5 ಲಕ್ಷಕ್ಕೆ ಏರಿಕೆ,...

Kisan Credit Card Loan: ಕಿಸಾನ್ ಕ್ರೆಡಿಟ್ ಕಾರ್ಡ್ ಸಾಲ ಮಿತಿ 5 ಲಕ್ಷಕ್ಕೆ ಏರಿಕೆ, ಯಾರಿಗೆ ಸಿಗುತ್ತದೆ ಈ ಸೌಲಭ್ಯ?

Kisan Credit Card Loan – 2025ನೇ ಸಾಲಿನ ಕೇಂದ್ರ ಬಜೆಟ್‌ನಲ್ಲಿ ರೈತರಿಗೆ ಮಹತ್ವದ ಘೋಷಣೆ ಮಾಡಲಾಗಿದೆ. ಈ ಬಾರಿಯ ಬಜೆಟ್‌ನಲ್ಲಿ ಕೃಷಿ ಕ್ಷೇತ್ರವನ್ನು ಬಲಪಡಿಸಲು ಹಲವಾರು ತೀರ್ಮಾನಗಳನ್ನು ಕೈಗೊಳ್ಳಲಾಗಿದೆ. ಅದರ ಭಾಗವಾಗಿ, ಕಿಸಾನ್ ಕ್ರೆಡಿಟ್ ಕಾರ್ಡ್ (KCC) ಸಾಲ ಮಿತಿಯನ್ನು 3 ಲಕ್ಷ ರೂ.ನಿಂದ 5 ಲಕ್ಷ ರೂ.ಗೆ ಹೆಚ್ಚಿಸಲಾಗಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಘೋಷಿಸಿದ್ದಾರೆ. ಬಜೆಟ್​​​ನಲ್ಲಿ ಕಿಸಾನ್ ಕ್ರೆಡಿಟ್ ಕಾರ್ಡ್‌ನ ಮಿತಿಯನ್ನು ಹೆಚ್ಚಿಸಲಾಗಿದೆ. ರೈತರಿಗೆ ಕಡಿಮೆ ಬಡ್ಡಿ ದರದಲ್ಲಿ ನೀಡುವ ಸಾಲದ ಪ್ರಮಾಣವನ್ನು 3 ಲಕ್ಷ ರೂ.ನಿಂದ 5 ಲಕ್ಷ ರೂ.ಗೆ ಹೆಚ್ಚಿಸಿದ್ದು ರೈತರಿಗೆ ಶುಭ ಸುದ್ದಿಯಾಗಿದೆ.

Kisan Credit Card Loan amount raise 2

Kisan Credit Card Loan – ಕಿಸಾನ್ ಕ್ರೆಡಿಟ್ ಕಾರ್ಡ್ (KCC) ಎಂದರೇನು?

ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆ ರೈತರಿಗೆ ಕಡಿಮೆ ಬಡ್ಡಿದರದಲ್ಲಿ ಕೃಷಿ ಸಾಲವನ್ನು ನೀಡುವ ಪ್ರಮುಖ ಯೋಜನೆಯಾಗಿದೆ. ಈ ಯೋಜನೆಯನ್ನು 1998ರಲ್ಲಿ ಭಾರತ ಸರ್ಕಾರ, ಭಾರತೀಯ ರಿಸರ್ವ್ ಬ್ಯಾಂಕ್ (RBI) ಮತ್ತು ನಾಬಾರ್ಡ್ ಸಹಯೋಗದೊಂದಿಗೆ ಪ್ರಾರಂಭಿಸಿತು. ಈ ಕಾರ್ಡ್‌ನ ಮೂಲಕ ರೈತರು ಬಿತ್ತನೆ ಬೀಜಗಳು, ರಸಗೊಬ್ಬರಗಳು, ಕೀಟನಾಶಕಗಳು ಮತ್ತು ಇತರ ಕೃಷಿ ಅಗತ್ಯಗಳನ್ನು ಪೂರೈಸಬಹುದಾಗಿದೆ.

Kisan Credit Card Loan – ಕಿಸಾನ್ ಕ್ರೆಡಿಟ್ ಕಾರ್ಡ್ ಪಡೆಯಲು ಯಾರು ಅರ್ಹರು?

  • ಎಲ್ಲಾ ರೈತರು, ಒಂಟಿಯಾಗಿ ಬೇಸಾಯ ಮಾಡುವವರಿಂದ ಹಿಡಿದು, ಜಂಟಿ ಬೇಸಾಯದವರವರೆಗೆ.
  • ಭೂಮಿಯ ಮಾಲೀಕರು, ಗೇಣಿದಾರರು, ಮೌಖಿಕ ಗುತ್ತಿಗೆದಾರರು ಕೂಡ ಅರ್ಹರು.
  • ಸ್ವಸಹಾಯ ಗುಂಪು (SHG) ಅಥವಾ JLG ಕೃಷಿ ಮಾಡುವ ರೈತರು ಅರ್ಹತೆ ಪಡೆಯಬಹುದು.

Kisan Credit Card Loan – ಕಿಸಾನ್ ಕ್ರೆಡಿಟ್ ಕಾರ್ಡ್ ವಿಶೇಷ:

  • ಕೃಷಿ ಆದಾಯ ನೇರ ಖಾತೆಗೆ: ಬೆಳೆ ಮಾರಾಟದ ಹಣ ನೇರವಾಗಿ ಬ್ಯಾಂಕ್ ಖಾತೆಗೆ ಬರುತ್ತದೆ.
  • ಎಲ್ಲಾ ATMಗಳಲ್ಲಿ ಕಾರ್ಯ: ಮ್ಯಾಗ್ನೆಟಿಕ್ ಸ್ಟ್ರೈಪ್ ಮತ್ತು PIN ಸಹಿತ, ಯಾವುದೇ ಬ್ಯಾಂಕ್ ATMನಿಂದ ಹಣ ತೆಗೆಯಬಹುದು.
  • ಸುರಕ್ಷಿತ: ಆಧಾರ್-ಲಿಂಕ್ ಮತ್ತು ಬಯೋಮೆಟ್ರಿಕ್ ದೃಢೀಕರಣದೊಂದಿಗೆ ಸುರಕ್ಷಿತ ವ್ಯವಹಾರ.
  • ವಿಶ್ವಸ್ತತೆ: ವೀಸಾ, ಮಾಸ್ಟರ್ಕಾರ್ಡ್ ನೆಟ್ವರ್ಕ್ ಮೂಲಕ ದೇಶ-ವಿದೇಶಗಳಲ್ಲಿ ಬಳಕೆ ಸಾಧ್ಯ.
  • ಆಧಾರ್ ಲಿಂಕ್ಡ್ ಬ್ಯಾಂಕಿಂಗ್ ವ್ಯವಸ್ಥೆಯಡಿ, ಕೆಲವು ಬ್ಯಾಂಕ್‌ಗಳಲ್ಲಿ ಬಯೋಮೆಟ್ರಿಕ್ ದೃಢೀಕರಣದೊಂದಿಗೆ ಡೆಬಿಟ್ ಕಾರ್ಡ್‌ಗಳನ್ನು ಸಹ ನೀಡಲಾಗುತ್ತದೆ.

Kisan Credit Card Loan amount raise 0

Kisan Credit Card Loan – ಈ ಯೋಜನೆಯ ಲಾಭಗಳು:

  • ರೈತರಿಗೆ ಆರ್ಥಿಕ ಸಹಾಯ – ಶೀಘ್ರ ಸಾಲ ಮಂಜೂರು
  •  ಕೃಷಿ ಉತ್ಪಾದನೆಯಲ್ಲಿ ವೃದ್ಧಿ – ಸಮರ್ಥ ಬೆಳೆ ನಿರ್ವಹಣೆ
  • ಬಡ್ಡಿ ರಿಯಾಯಿತಿ – ಸರಳ ಸಾಲ ಮರುಪಾವತಿ ಆಯ್ಕೆ
by Baluhttp://ismkannadanews.com
ನಮಸ್ಕಾರ, ನಾನು ಬಾಲಾಜಿ ಆರ್. 10+ ವರ್ಷಗಳ ಅನುಭವ ಹೊಂದಿರುವ ಕಂಟೆಂಟ್ ರೈಟರ್ ಹಾಗೂ ಕಾಪಿ ಎಡಿಟರ್ ಆಗಿದ್ದು, ಹಣಕಾಸು, ಸರ್ಕಾರಿ ಯೋಜನೆಗಳು, ತಂತ್ರಜ್ಞಾನ, ವೈರಲ್ ಸುದ್ದಿ, ರಾಜಕೀಯ ಸುದ್ದಿ ಮತ್ತು ಸಿನಿಮಾ ಸುದ್ದಿಗಳ ಬಗ್ಗೆ ಬರೆಯುತ್ತೇನೆ. ಸಂಕೀರ್ಣ ಮಾಹಿತಿಯನ್ನು ಸರಳವಾಗಿ ನೀಡುವುದು ನನ್ನ ಉದ್ದೇಶ. ISM Kannada News ಮೂಲಕ ನಿಖರ ಮತ್ತು ಉಪಯುಕ್ತ ಮಾಹಿತಿಯನ್ನು ಹಂಚಿಕೊಳ್ಳುತ್ತೇನೆ.
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular