ಅನೇಕ ಮದುವೆಗಳು ವರದಕ್ಷಿಣೆ ಕಾರಣದಿಂದ ಅಥವಾ ಚಿಕ್ಕ ಚಿಕ್ಕ ಕಾರಣಗಳಿಂದ ಮುರಿದು ಬೀಳುತ್ತಿರುತ್ತದೆ. ಮದುವೆಯಾದ ಒಂದು ತಿಂಗಳು, ಅಥವಾ ವರ್ಷಕ್ಕೆ ದಂಪತಿ ವಿಚ್ಚೇದನಕ್ಕೆ ಮುಂದಾಗುವುದನ್ನು ಕೇಳಿರುತ್ತೇವೆ. ಆದರೆ ಇಲ್ಲೊಂದು ಘಟನೆ ನಡೆದಿದ್ದು, ಮದುವೆಯಾದ ಒಂದೇ ದಿನಕ್ಕೆ ಮುರಿದು ಬಿದಿದ್ದೆ. ಮದುವೆಯಾಗಿ ಬಳಿಕ ಫಸ್ಟ್ ನೈಟ್ ನಲ್ಲಿ ವಧು ಮುಖ ನೋಡಿ ಶಾಕ್ ಆಗಿದ್ದಾನೆ, ಬೆಳಿಗ್ಗೆ ಎದ್ದ ಕೂಡಲೇ ನನಗೆ ವಿಚಚೇದನ ಬೇಕು ಎಂದು ಪಟ್ಟು ಹಿಡಿದು ವಿಚ್ಚೇದನಕ್ಕೆ ಮುಂದಾಗಿದ್ದಾನೆ.

ಹುಡುಗನೊಬ್ಬ ತಮ್ಮ ಯುವತಿಯೊಬ್ಬಳನ್ನು ನೋಡಿ ಮೆಚ್ಚಿದ್ದಾನೆ ಬಳಿಕ ಕುಟುಂಬ ಸಮೇತ ನಿಶ್ಚಿತಾರ್ಥ ಸಹ ಮಾಡಿಕೊಂಡು, ಅದ್ದೂರಿಯಾಗಿ ಮದುವೆಯಾಗಿದ್ದಾನೆ. ಮದುವೆಯ ಸಮಯದಲ್ಲಿ ತುಂಬಾನೆ ಖುಷಿ ಖುಷಿಯಾಗಿದ್ದ ವರ ಫಸ್ಟ್ ನೈಟ್ ನಲ್ಲಿ ತಕರಾರು ಶುರು ಮಾಡಿದ್ದಾನೆ. ಹೆಂಡಿತಿಯ ಮುಖ ನೋಡಿದ್ದೇ ತಡ ಎಗರಾಡಿದ್ದಾನೆ. ಅದಕ್ಕೆ ಕಾರಣವಾಗಿದ್ದು ಯುವತಿಯ ಕಣ್ಣು. ಯುವತಿಯ ಕಣ್ಣು ಹಸಿರು ಬಣ್ಣದಲ್ಲಿದ್ದು, ಮೊದಲು ನೋಡಿದಾಗ ಆಕೆಯ ಕಣ್ಣು ಕಪ್ಪಾಗಿತ್ತಂತೆ. ಆದರೆ ಮೊದಲ ರಾತ್ರಿಯಲ್ಲಿ ನೋಡಿದಾಗ ಮಾತ್ರ ಹಸಿರು ಬಣ್ಣ ಇರುವುದನ್ನು ನೋಡಿದ್ದಾನೆ. ಕೂಡಲೇ ಹೌಹಾರಿದ್ದಾನೆ.
ಇನ್ನೂ ಯುವತಿಗೆ ದೃಷ್ಟಿ ಸಮಸ್ಯೆಯಿದ್ದ ಕಾರಣ ಆಕೆ ಕಾಂಟ್ಯಾಕ್ಸ್ ಲೆನ್ಸ್ ಬಳಸಿದ್ದಳಂತೆ. ಅದರಲ್ಲಿ ಆಕೆಯ ಕಣ್ಣು ಕಪ್ಪು ಬಣ್ಣ ಕಂಡಿದೆ. ಆದರೆ ಆಕೆಯ ಕಣ್ಣಿನ ಬಣ್ಣ ಹಸಿರು. ಈ ಸತ್ಯ ಮಾತ್ರ ವರನಿಗೆ ಮೊದಲ ರಾತ್ರಿ ಗೊತ್ತಾಗಿದೆ. ಅಂದಹಾಗೆ ಈ ಘಟನೆ ನಡೆದಿರುವುದು ಕುವೈತ್ ನಲ್ಲಿ. ಇಂಜನೀಯರ್ ಆಗಿರುವ ವರ ಇದೀಗ ಹೆಂಡತಿಯ ಕಣ್ಣು ನೋಡಿ ಡಿವೋರ್ಸ್ ನೀಡಲು ಮುಂದಾಗಿದ್ದಾನೆ. ತನ್ನನ್ನು ದಾರಿ ತಪ್ಪಿಸಲಾಗಿದೆ. ವಧುವಿನ ಕಣ್ಣುಗಳ ಬಣ್ಣವು ಭವಿಷ್ಯದಲ್ಲಿ ಅವರಗೆ ಹುಟ್ಟುವ ಮಕ್ಕಳ ಮೇಲೆ ಪ್ರತಿಕೂಲಕರ ಪರಿಣಾಮ ಬೀರಬಹುದು ಎಂದು ಆತ ಆರೋಪಿಸಿ ವಿಚ್ಚೇದನಕ್ಕೆ ಮುಂದಾಗಿದ್ದಾನೆ. ಆದರೆ ವಧುವಿನ ಕಡೆಯವರು ವರನೊಂದಿಗೆ ಮಾತುಕತೆ ನಡೆಸಿ ಸಮಸ್ಯೆ ಬಗೆಹರಿಸಲು ಹರಸಾಹಸ ಪಡುತ್ತಿದ್ದಾರೆ ಎನ್ನಲಾಗಿದೆ.

ನಮಸ್ಕಾರ, ನಾನು ಬಾಲಾಜಿ ಆರ್. 10+ ವರ್ಷಗಳ ಅನುಭವ ಹೊಂದಿರುವ ಕಂಟೆಂಟ್ ರೈಟರ್ ಹಾಗೂ ಕಾಪಿ ಎಡಿಟರ್ ಆಗಿದ್ದು, ಹಣಕಾಸು, ಸರ್ಕಾರಿ ಯೋಜನೆಗಳು, ತಂತ್ರಜ್ಞಾನ, ವೈರಲ್ ಸುದ್ದಿ, ರಾಜಕೀಯ ಸುದ್ದಿ ಮತ್ತು ಸಿನಿಮಾ ಸುದ್ದಿಗಳ ಬಗ್ಗೆ ಬರೆಯುತ್ತೇನೆ. ಸಂಕೀರ್ಣ ಮಾಹಿತಿಯನ್ನು ಸರಳವಾಗಿ ನೀಡುವುದು ನನ್ನ ಉದ್ದೇಶ. ISM Kannada News ಮೂಲಕ ನಿಖರ ಮತ್ತು ಉಪಯುಕ್ತ ಮಾಹಿತಿಯನ್ನು ಹಂಚಿಕೊಳ್ಳುತ್ತೇನೆ.
