ಧೈರ್ಯ ಇದ್ದರೇ ಈ ವಿಡಿಯೋ ವೈರಲ್ ಮಾಡಿ ನೋಡೋಣ ಎಂದ ಸೀರಿಯಲ್ ನಟಿ ಜ್ಯೋತಿ ರಾಯ್, ವಿಡಿಯೋದಲ್ಲಿ ಏನಿದೆ ಗೊತ್ತಾ?

ಸೌತ್ ಸಿನಿರಂಗದ ಕಿರುತೆರೆ ನಟಿ ಜ್ಯೋತಿ ರಾಯ್ ಇತ್ತೀಚಿಗೆ ಭಾರಿ ಸುದ್ದಿಯಾಗುತ್ತಿದ್ದಾರೆ. ಸಿನೆಮಾಗಳು, ಕಿರುತೆರೆ ಸೀರಿಯಲ್ ಗಳ ಜೊತೆಗೆ ಆಕೆ ವೈಯುಕ್ತಿಕ ವಿಚಾರಗಳಿಂದಲೂ ಸುದ್ದಿಯಾದರು. ಕೆಲವು ದಿನಗಳ ಹಿಂದೆಯಷ್ಟೆ ನಟಿ ಜ್ಯೋತಿ ರಾಯ್ ರವರದ್ದು ಎನ್ನಲಾದ ಫೇಕ್ ವಿಡಿಯೋ ಒಂದು ಸೋಷಿಯಲ್ ಮಿಡಿಯಾದಲ್ಲಿ ಸಖತ್ ಸದ್ದು ಮಾಡಿತ್ತು. ಈ ವಿಡಿಯೋಗೆ ಆಕೆ ಆಕ್ರೋಷ ಹೊರಹಾಕಿ ದೂರು ಸಹ ನೀಡಿದ್ದರು. ಇದೀಗ ವಿಡಿಯೋ ಒಂದನ್ನು ಆಕೆ ಹಂಚಿಕೊಂಡು ನಿಮಗೆ ಧೈರ್ಯವಿದ್ದರೇ ಈ ವಿಡಿಯೋ ವೈರಲ್ ಮಾಡಿ ನೋಡೋಣ ಎಂದು ಫೈರ್‍ ಆಗಿದೆ. ಅಷ್ಟಕ್ಕೂ ಆಕೆ ಹಂಚಿಕೊಂಡ ವಿಡಿಯೋದಲ್ಲಿ ಏನಿದೆ ಎಂಬ ವಿಚಾರಕ್ಕೆ ಬಂದರೇ,

Jyothi Rai helped mogilaiah 2

ನಟಿ ಜ್ಯೋತಿ ರಾಯ್ ಸೀರಿಯಲ್ ಗಳ ಮೂಲಕ ತುಂಬಾನೆ ಫೇಂ ಪಡೆದುಕೊಂಡಿದ್ದಾರೆ. ತೆಲುಗಿನಲ್ಲಿ ಗುಪ್ಪಡೆಂತ ಮನಸು ಎಂಬ ಸೀರಿಯಲ್ ನಲ್ಲಿ ಹಿರೋ ತಾಯಿಯ ಪಾತ್ರದಲ್ಲಿ ನಟಿಸಿದ್ದಾರೆ. ಕೆಲವು ವರ್ಷಗಳ ಹಿಂದೆಯಷ್ಟೆ ನಟಿ ಜ್ಯೋತಿ ರಾಯ್ ನಿರ್ದೇಶಕ ಸುಕ್ಕು ಪೂರ್ವಜ್ ಎಂಬಾತನೊಂದಿಗೆ ಎರಡನೇ ಮದುವೆಯಾಗಿದ್ದಾರೆ. ಜೊತೆಗೆ ಸೋಷಿಯಲ್ ಮಿಡಿಯಾದಲ್ಲಂತೂ ಜ್ಯೋತಿ ರಾಯ್ ಬ್ಯಾಕ್ ಟು ಬ್ಯಾಕ್ ಬೋಲ್ಡ್ ಪೊಟೋಶೂಟ್ಸ್ ಮೂಲಕ ಬಾಲಿವುಡ್ ನಟಿರಯನ್ನು ಮೀರಿಸುವಂತಹ ಪೋಸ್ ಗಳನ್ನು ಕೊಡುತ್ತಿದ್ದರು. ಈ ನಡುವೆ ಜ್ಯೋತಿ ರಾಯ್ ರವರದ್ದು ಎನ್ನಲಾದ ಅಶ್ಲೀಲ ವಿಡಿಯೋ ಒಂದನ್ನು ಸೋಷಿಯಲ್ ಮಿಡಿಯಾದಲ್ಲಿ ಕಿಡಿಗೇಡಿಗಳು ಹರಿಬಿಟ್ಟಿದ್ದರು. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಜ್ಯೋತಿ ರಾಯ್ ಸಹ ಆಕ್ರೋಷಗೊಂಡು ದೂರು ಸಹ ನೀಡಿದ್ದರು. ಇದಾದ ಎರಡೇ ದಿನಗಳಲ್ಲಿ ಜ್ಯೋತಿ ರಾಯ್ ವಿಡಿಯೋ ಒಂದನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ವೈರಲ್ ಆಗುತ್ತಿದೆ.

Jyothi Rai helped mogilaiah 1

ತನ್ನ ಸೌಂದರ್ಯದ ಮೂಲಕ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಪಡೆದುಕೊಂಡ ನಟಿ ಜ್ಯೋತಿ ರಾಯ್ ಅಕ್ಷಯ ತೃತಿಯ ದಿನದಂದು ಒಳ್ಳೆಯ ಕೆಲಸ ಮಾಡಿದ್ದಾರೆ. ಎಲ್ಲರೂ ಅಕ್ಷಯ ತೃತೀಯ ದಿನದಂದು ಬಂಗಾರ ಖರೀದಿ ಮಾಡುತ್ತಾರೆ. ಆದರೆ ಬೇರೆಯವರಿಗೆ ಸಹಾಯ ಮಾಡಲು ಮುಂದಾಗೊಲ್ಲ. ಆದರೆ ನಟಿ ಜ್ಯೋತಿ ರಾಯ್ ಮಾತ್ರ ಅಕ್ಷಯ ತೃತಿಯ ದಿನದಂದು ಎಲ್ಲರೂ ಮೆಚ್ಚುವಂತಹ ಕೆಲಸ ಮಾಡಿದ್ದಾರೆ. ಅಷ್ಟಕ್ಕೂ ಆಕೆ ಮಾಡಿದ ಕೆಲಸವಾದರೂ ಏನು ಎಂಬ ವಿಚಾರಕ್ಕೆ ಬಂದರೇ,  ಪದ್ಮಶ್ರೀ ಪುರಸ್ಕೃತ ಹಾಗೂ 12 ಹಂತದ ಕಿನ್ನರ ಕಲಾವಿದ ಮುಗಿಲಯ್ಯ ಬಗ್ಗೆ ತಿಳಿದೇ ಇದೆ. ಅವರು ಆರ್ಥಿಕ ಸಂಕಷ್ಟದಿಂದ ಬಳಲುತ್ತಿದ್ದು, ಅದನ್ನು ತಿಳಿದ ಜ್ಯೋತಿ ರಾಯ್ 50 ಸಾವಿರ ರೂಪಾಯಿಯನ್ನು ಕಲಾವಿದನಿಗೆ ನೀಡಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ.

Jyothi Rai helped mogilaiah 0

ಇನ್ನೂ ಮುಗಿಲಯ್ಯ ರವರಿಗೆ ದುಡ್ಡು ಕೊಟ್ಟ ಜ್ಯೋತಿ ರಾಯ್ ಹೆಚ್ಚು ಮಾತನಾಡಿಲ್ಲ. ನಗುತ್ತಲೇ ಇದ್ದರು. ಆದರೆ ಮುಗಿಲಯ್ಯ ಮಾತನಾಡಿ ನೀವು ಎಷ್ಟು ಸುಂದರವಾಗಿ ಇದ್ದೀರೋ ಅಷ್ಟೇ ನಿಮ್ಮ ಮನಸು ಸಹ ಸುಂದರವಾಗಿದೆ ಎಂದು ಹೇಳಿದ್ದಾರೆ. ಈ ವಿಡಿಯೋವನ್ನು ಸೋಷಿಯಲ್ ಮಿಡಿಯಾದಲ್ಲಿ ಹಂಚಿಕೊಂಡಿದ್ದಾರೆ. ವಿಡಿಯೋ ಜೊತೆಗೆ ಕಿನ್ನರ ಕಲಾವಿದ ದರ್ಶನಂ ಮೊಗಿಲಯ್ಯ ರವರು ಆರ್ಥಿಕವಾಗಿ ತೊಂದರೆಯಲ್ಲಿರುವ ಬಗ್ಗೆ ವಿಚಾರ ತಿಳಿದು ಅವರಿಗೆ ಸಹಾಯ ಮಾಡಬೇಕು ಎಂಬ ಭಾವನೆ ನನ್ನ ಮನದಲ್ಲಿ ಮೂಡಿತ್ತು. ಕೂಡಲೇ ಒಳ್ಳೆಯ ಕೆಲಸ ಮಾಡಿದ್ದೇನೆ ಊಟದ ವ್ಯವಸ್ಥೆ ಕೂಡ ಮಾಡಿ ಆರ್ಥಿಕ ಸಹಾಯ ಮಾಡಿದ್ದೇನೆ. ಇನ್ನೂ ಜಾಸ್ತಿ ಸಹಾಯ ಮಾಡುವ ಮನಸು ಕೂಡ ಇದೆ ಯಾರಾದರೂ ಅವರಿಗೆ ಸಹಾಯ ಮಾಡುವವರು ಇದ್ದರೇ ಮುಂದೆ ಬನ್ನಿ ಎಂದಿದ್ದಾರೆ. ಇನ್ನೂ ಸುಳ್ಳು ವಿಡಿಯೋಗಳನ್ನು ವೈರಲ್ ಮಾಡುವುದರ ಬದಲಿಗೆ ಒಂದು ಒಳ್ಳೆಯ ಕೆಲಸದ ವಿಡಿಯೋ ಏಕೆ ಶೇರ್‍ ಮಾಡುವುದಿಲ್ಲ, ವೈರಲ್ ಮಾಡೋಕೆ ಧೈರ್ಯವಿಲ್ಲವೇ ಎಂದು ಪ್ರಶ್ನೆ ಮಾಡಿದ್ದಾರೆ.

Leave a Comment

Your email address will not be published. Required fields are marked *

Scroll to Top