ನೀವು ಈ ಬಾರಿ ಕೇರಳದ ಪವಿತ್ರ ಕೊಟ್ಟಿಯೂರು (Kottiyoor) ದೇವಸ್ಥಾನದ ವೈಶಾಖ ಮಹೋತ್ಸವಕ್ಕೆ ಭೇಟಿ ನೀಡುವ ಪ್ಲಾನ್ ಮಾಡುತ್ತಿದ್ದೀರಾ? ಹಾಗಾದರೆ ನಿಮ್ಮ ಪ್ರಯಾಣವನ್ನು ಇನ್ನಷ್ಟು ಸುಂದರಗೊಳಿಸಿಕೊಳ್ಳಲು ಇಲ್ಲಿದೆ ಒಂದು ಅದ್ಭುತ ಅವಕಾಶ. ಕೊಟ್ಟಿಯೂರಿನಿಂದ ಕೇವಲ ಒಂದೂವರೆ ಗಂಟೆಯ ಡ್ರೈವ್ ಮಾಡಿದರೆ ಸಿಗುವ, ಅಷ್ಟೇ ಪ್ರಸಿದ್ಧವಾದ ನದೀ ತೀರದ ದೇವಸ್ಥಾನದ ಬಗ್ಗೆ ನೀವು ತಿಳಿಯಲೇಬೇಕು.

ಕೊಟ್ಟಿಯೂರು (Kottiyoor) ವೈಶಾಖ ಮಹೋತ್ಸವ: ಈ ವರ್ಷದ ವಿಶೇಷತೆ
ಕೊಟ್ಟಿಯೂರು ದೇವಸ್ಥಾನದ ವೈಶಾಖ ಮಹೋತ್ಸವವು ಪ್ರತಿ ವರ್ಷ ಮೇ ಮತ್ತು ಜೂನ್ ತಿಂಗಳಲ್ಲಿ ಅತ್ಯಂತ ಅದ್ಧೂರಿಯಾಗಿ ನಡೆಯುತ್ತದೆ. 28 ದಿನಗಳ ಕಾಲ ನಡೆಯುವ ಈ ಪುಣ್ಯೋತ್ಸವವು ಎಡವಂ ಮಾಸದ ‘ಚೋಡಿ’ ದಿನದಂದು ‘ನೆಯ್ಯಟ್ಟಂ’ ಆಚರಣೆಯೊಂದಿಗೆ ಪ್ರಾರಂಭವಾಗಿ, ‘ತ್ರಿಕ್ಕಲಶಾಟ್ಟು’ವಿನೊಂದಿಗೆ ಮುಕ್ತಾಯಗೊಳ್ಳುತ್ತದೆ.
- ಉತ್ಸವದ ದಿನಾಂಕಗಳು: ಈ ವರ್ಷದ ಮಹೋತ್ಸವವು ಮೇ 29, 2026 ರಿಂದ ಜೂನ್ 24, 2026 ರವರೆಗೆ ನಡೆಯಲಿದೆ. ಈ ಪವಿತ್ರ 28 ದಿನಗಳಲ್ಲಿ ಅಕ್ಕರೆ ಕೊಟ್ಟಿಯೂರು ದೇವಸ್ಥಾನವು ಭಕ್ತರ ದರ್ಶನಕ್ಕಾಗಿ ತೆರೆದಿರುತ್ತದೆ.
- ಮಹಿಳೆಯರಿಗೆ ವಿಶೇಷ ಅವಕಾಶ: ಮೇ 31, 2026 ರಿಂದ ಜೂನ್ 20, 2026 ರವರೆಗೆ ನಡೆಯುವ ‘ಮಕಂ ಕಳಂ ವರವು’ ಅವಧಿಯಲ್ಲಿ ಮಹಿಳೆಯರು ದೇವಸ್ಥಾನಕ್ಕೆ ಭೇಟಿ ನೀಡಬಹುದು.
ಕೇವಲ 1.5 ಗಂಟೆಯ ಪ್ರಯಾಣದಲ್ಲಿ ‘ಪರಶ್ಶಿನಿಕಡವು ಮುತ್ತಪ್ಪನ್’ ದರ್ಶನ!
ಕೊಟ್ಟಿಯೂರು ದೇವಸ್ಥಾನದ ದರ್ಶನದ ಬಳಿಕ, ನೀವು ಕಣ್ಣೂರಿನ ಮತ್ತೊಂದು ಪವಿತ್ರ ಹಾಗೂ ಪ್ರಸಿದ್ಧ ಪ್ರವಾಸಿ ತಾಣವಾದ ಪರಶ್ಶಿನಿಕಡವು ಶ್ರೀ ಮುತ್ತಪ್ಪನ್ ದೇವಸ್ಥಾನಕ್ಕೆ ಭೇಟಿ ನೀಡಬಹುದು. ಇದು (Kottiyoor) ಸುಂದರವಾದ ನದೀ ತೀರದಲ್ಲಿದ್ದು, ಮನಸ್ಸಿಗೆ ಅಪಾರವಾದ ಶಾಂತಿ ನೀಡುತ್ತದೆ. Read this also : ಅದ್ಭುತ ಶಕ್ತಿ ಹೊಂದಿರುವ ಕರ್ಕಟೇಶ್ವರ ದೇವಾಲಯ, ಈ ಎಣ್ಣೆ ಪ್ರಸಾದದಿಂದ ವಾಸಿಯಾಗುತ್ತೆ ಎಷ್ಟೋ ಕಾಯಿಲೆಗಳು!
ಪ್ರಯಾಣದ ಕಂಪ್ಲೀಟ್ ಡೀಟೇಲ್ಸ್:
- ದೂರ: ಕೊಟ್ಟಿಯೂರಿನಿಂದ ಸುಮಾರು 63 – 65 ಕಿಲೋ ಮೀಟರ್.
- ಪ್ರಯಾಣದ ಸಮಯ: ಟ್ರಾಫಿಕ್ ಪರಿಸ್ಥಿತಿಯನ್ನು ಅವಲಂಬಿಸಿ ಸುಮಾರು 1 ಗಂಟೆ 10 ನಿಮಿಷದಿಂದ 1 ಗಂಟೆ 30 ನಿಮಿಷಗಳು.
- ಬೆಸ್ಟ್ ರೂಟ್: ಕಣ್ಣೂರು – ಮಟ್ಟನೂರು – ಇರಿಟ್ಟಿ ರಸ್ತೆ ಅಥವಾ ಕೂತುಪರಂಬ ಮಾರ್ಗದ ಮೂಲಕ ನೀವು ಸುಲಭವಾಗಿ ತಲುಪಬಹುದು.
- ಟ್ಯಾಕ್ಸಿ ದರ: ಟ್ಯಾಕ್ಸಿ ಮೂಲಕ ಹೋಗುವುದಾದರೆ ಅಂದಾಜು 1700 ರೂಪಾಯಿಯಿಂದ 2100 ರೂಪಾಯಿಗಳವರೆಗೆ ಚಾರ್ಜ್ ಆಗಬಹುದು. ಇದಲ್ಲದೆ, ನಿಮ್ಮ ಅನುಕೂಲಕ್ಕಾಗಿ ಕೆಎಸ್ಆರ್ಟಿಸಿ (KSRTC) ಬಸ್ ಸೌಲಭ್ಯಗಳೂ ಕೂಡ ಲಭ್ಯವಿವೆ.
ಪರಶ್ಶಿನಿಕಡವು ದೇವಸ್ಥಾನ ಯಾಕೆ ಇಷ್ಟೊಂದು ವಿಶೇಷ?
ಈ ದೇವಸ್ಥಾನವು ಕೇವಲ ಭಕ್ತಿಯ ಕೇಂದ್ರವಲ್ಲ, (Kottiyoor) ಇದು ತನ್ನ ವಿಶಿಷ್ಟ ಹಾಗೂ ಅಪರೂಪದ ಆಚರಣೆಗಳಿಂದಲೇ ಕೇರಳದಲ್ಲಿ ಅತಿ ಹೆಚ್ಚು ಗಮನ ಸೆಳೆದಿದೆ:
- ಜಾತಿ-ಭೇದವಿಲ್ಲದ ದೈವ: ಇಲ್ಲಿ ಯಾವುದೇ ಜಾತಿ-ಮತ, ಮೇಲು-ಕೀಳು ಎಂಬ ಭೇದವಿಲ್ಲದೆ ಎಲ್ಲರಿಗೂ ಆಶೀರ್ವಾದ ಮಾಡುವ ದೈವದ ‘ತೆಯ್ಯಂ’ ನೃತ್ಯವು ಇಲ್ಲಿನ ಪ್ರಮುಖ ಆಕರ್ಷಣೆಯಾಗಿದೆ.
- ಶ್ವಾನಗಳಿಗೆ ವಿಶೇಷ ಪೂಜ್ಯ ಸ್ಥಾನ: ಬೇಟೆ ಪ್ರಿಯನಾದ ಮುತ್ತಪ್ಪನಿಗೆ ಶ್ವಾನಗಳು ಅಂದರೆ ಬಹಳ ಪ್ರೀತಿ. ಹಾಗಾಗಿ ಇಲ್ಲಿನ ದೇವಸ್ಥಾನದ ಆವರಣದಲ್ಲಿ ಶ್ವಾನಗಳಿಗೆ ಪೂಜ್ಯ ಸ್ಥಾನ ನೀಡಲಾಗಿದೆ. ಮುತ್ತಪ್ಪ ದೈವಕ್ಕೆ ಅರ್ಪಿಸುವ ನೈವೇದ್ಯದ ಮೊದಲ ಭಾಗವನ್ನು ಈ ಶ್ವಾನಗಳಿಗೇ ನೀಡಲಾಗುತ್ತದೆ.
- ಅಪರೂಪದ ಪ್ರಸಾದ: ಇಲ್ಲಿಗೆ ಆಗಮಿಸುವ ಭಕ್ತರಿಗೆ ಸುಟ್ಟ ಮೀನು ಮತ್ತು ಶೇಂದಿ (ಮಧು) ಪ್ರಸಾದವಾಗಿ ನೀಡಲಾಗುತ್ತದೆ. ಇಂತಹ ಅಪರೂಪದ ಆಚರಣೆಗಳನ್ನು ನೀವು ಬೇರೆಲ್ಲೂ ಕಾಣಲು ಸಾಧ್ಯವಿಲ್ಲ.
ನೀವು ಕೊಟ್ಟಿಯೂರು ಯಾತ್ರೆಗೆ ಹೊರಟಿದ್ದರೆ, ನಿಮ್ಮ ಪ್ಲಾನ್ನಲ್ಲಿ ಈ ಸುಂದರ ದೇವಸ್ಥಾನವನ್ನು ಸೇರಿಸಿಕೊಳ್ಳಲು ಮರೆಯದಿರಿ.

