ದೀರ್ಘಕಾಲದ ಕಾಯಿಲೆಗಳಿಂದ ಬಳಲುತ್ತಿದ್ದೀರಾ? ಎಷ್ಟೇ ಆಸ್ಪತ್ರೆಗೆ ಅಲೆದಾಡಿದರೂ, ಎಷ್ಟೇ ಔಷಧಿ ತಿಂದರೂ ಆರೋಗ್ಯದಲ್ಲಿ ಚೇತರಿಕೆ ಕಾಣುತ್ತಿಲ್ಲವೇ? ಹಾಗಾದರೆ ನೀವು ಒಮ್ಮೆ ದರ್ಶನ ಪಡೆಯಲೇಬೇಕಾದ ಅದ್ಭುತ ಪವಾಡದ ತಾಣವೊಂದಿದೆ. ತಮಿಳುನಾಡಿನ ದೇವಾಲಯಗಳ ನಗರಿ ಕುಂಭಕೋಣಂ ಬಳಿ ಇರುವ ಆ ಪವಿತ್ರ ಕ್ಷೇತ್ರವೇ (Thirundudevankudi Karkadeswarar Temple) ತಿರುಂದುದೇವನ್ಗುಡಿ ಕರ್ಕಟೇಶ್ವರ ಸ್ವಾಮಿ ದೇವಾಲಯ. ಕೇವಲ ಒಂದು ಎಳ್ಳೆಣ್ಣೆಯ ಪ್ರಸಾದದಿಂದಲೇ ಎಂಥಹದ್ದೇ ಕಠಿಣ ರೋಗಗಳನ್ನೂ ಶಮನ ಮಾಡುವ ಅಪಾರ ಶಕ್ತಿ ಇಲ್ಲಿನ ಪರಮಶಿವನಿಗೆ ಇದೆ ಎಂಬುದು ಭಕ್ತರ ಅಚಲ ನಂಬಿಕೆ.

Karkadeswarar Temple – ಆರೋಗ್ಯ ಕರುಣಿಸುವ ‘ನಂಡು ಕೋವಿಲ್’
ಕುಂಭಕೋಣಂಗೆ ಸಮೀಪದಲ್ಲಿ, ಪವಿತ್ರ ಕಾವೇರಿ ನದಿಯ ದಂಡೆಯ ಮೇಲಿರುವ ಈ ಆಲಯದಲ್ಲಿ ಶಿವನು ಕರ್ಕಟೇಶ್ವರ ಸ್ವಾಮಿಯಾಗಿ ಪೂಜಿಸಲ್ಪಡುತ್ತಿದ್ದಾನೆ. ಸ್ಥಳೀಯರು ಈ ಕ್ಷೇತ್ರವನ್ನು ಪ್ರೀತಿಯಿಂದ “ನಂಡು ಕೋವಿಲ್” (ಏಡಿ ದೇವಾಲಯ) ಎಂದು ಕರೆಯುತ್ತಾರೆ. ಈ ದೇವಾಲಯದ ಅತ್ಯಂತ ದೊಡ್ಡ ವಿಶೇಷವೆಂದರೆ, ಇಲ್ಲಿ ಸ್ವಾಮಿಗೆ ಅಭಿಷೇಕ ಮಾಡಿದ ಎಳ್ಳೆಣ್ಣೆಯನ್ನು ಭಕ್ತರಿಗೆ ಪ್ರಸಾದವಾಗಿ ನೀಡಲಾಗುತ್ತದೆ. ಈ ತೀರ್ಥರೂಪದ ಎಣ್ಣೆಯನ್ನು ಭಕ್ತಿಯಿಂದ ಸ್ವೀಕರಿಸಿದರೆ, ಎಂತಹ ಮೊಂಡು ರೋಗಗಳು ಹಾಗೂ ದೀರ್ಘಕಾಲದ ದೈಹಿಕ ಬಾಧೆಗಳು ದೂರಾಗುತ್ತವೆ ಎಂಬುದು ಭಕ್ತರ ಗಾಢ ನಂಬಿಕೆ.
ಗಂಧರ್ವನಿಗೆ ಸಿಕ್ಕ ಶಾಪ ವಿಮೋಚನೆ
ಈ ಕ್ಷೇತ್ರದ ಪುರಾಣ ಕಥೆಯೂ ಅಷ್ಟೇ ರೋಚಕವಾಗಿದೆ. ಒಮ್ಮೆ ದುರ್ವಾಸ ಮಹರ್ಷಿಗಳು ಶಿವನ ಧ್ಯಾನದಲ್ಲಿ ಮುಳುಗಿದ್ದಾಗ, ಅಲ್ಲಿಗೆ ಬಂದ ಗಂಧರ್ವನೊಬ್ಬ ಅವರ ನಡಿಗೆಯನ್ನು ನೋಡಿ ಅಪಹಾಸ್ಯ (Karkadeswarar Temple) ಮಾಡಿದನು. ಇದರಿಂದ ಕೋಪಗೊಂಡ ಮಹರ್ಷಿಗಳು, “ನೀನು ಭೂಮಿಯಲ್ಲಿ ಏಡಿಯಾಗಿ (ಕರ್ಕಟ) ಜನ್ಮತಾಳು” ಎಂದು ಶಾಪ ನೀಡಿದರು. ತನ್ನ ತಪ್ಪಿನ ಅರಿವಾಗಿ ಗಂಧರ್ವನು ಕ್ಷಮೆ ಯಾಚಿಸಿದಾಗ, ಶಿವನ ಆರಾಧನೆಯಿಂದ ಮಾತ್ರ ನಿನಗೆ ಶಾಪ ವಿಮೋಚನೆ ಸಿಗಲು ಸಾಧ್ಯ ಎಂದು ಮಹರ್ಷಿಗಳು ದಾರಿ ತೋರಿಸಿದರು. ಅದರಂತೆ ಆ ಗಂಧರ್ವನು ಏಡಿಯ ರೂಪದಲ್ಲಿ ಈ ಕ್ಷೇತ್ರದಲ್ಲಿ ಶಿವಲಿಂಗವನ್ನು ನಿರಂತರವಾಗಿ ಪೂಜಿಸಲು ಪ್ರಾರಂಭಿಸಿದನು.
ಇಂದ್ರನ ಪೂಜೆ ಮತ್ತು ಶಿವಲಿಂಗದ ಮೇಲಿನ ಗಾಯದ ಗುರುತು!
ದೇವತೆಗಳ ರಾಜನಾದ ಇಂದ್ರನು ತನ್ನ ಶಕ್ತಿಯನ್ನು ಮರಳಿ ಪಡೆಯಲು ಪ್ರತಿದಿನ 1008 ಕಮಲದ ಹೂವುಗಳಿಂದ ಇಲ್ಲಿನ ಶಿವನನ್ನು ಅರ್ಚಿಸುತ್ತಿದ್ದನಂತೆ. ಆದರೆ ಒಂದು ದಿನ ಪೂಜೆಯ ವೇಳೆ ಹೂವುಗಳ ಸಂಖ್ಯೆ ಕಡಿಮೆಯಾಗಿದ್ದನ್ನು ಗಮನಿಸಿ ಇಂದ್ರನು ಕಾರಣ ಹುಡುಕತೊಡಗಿದನು. ಆಗ ಒಂದು ಪುಟ್ಟ ಏಡಿಯು ಕಮಲದ ಹೂವನ್ನು ಕಚ್ಚಿ ತಂದು ಶಿವನಿಗೆ ಅರ್ಪಿಸುತ್ತಿರುವ ಆಶ್ಚರ್ಯಕರ ದೃಶ್ಯ ಕಣ್ಣಿಗೆ ಬಿತ್ತು.
ಕೋಪಗೊಂಡ ಇಂದ್ರನು ಆ ಏಡಿಯ ಮೇಲೆ ತನ್ನ ಆಯುಧವನ್ನು ಪ್ರಯೋಗಿಸಿದನು. ಆಗ ಶಿವನು ತನ್ನ ಭಕ್ತನಾದ ಏಡಿಯನ್ನು ರಕ್ಷಿಸಲು ಲಿಂಗದ ಮೇಲ್ಭಾಗದಲ್ಲಿ ಒಂದು ರಂಧ್ರವನ್ನು ಸೃಷ್ಟಿಸಿದನು. ಏಡಿಯು ತಕ್ಷಣ ಆ ರಂಧ್ರದೊಳಗೆ ಅಡಗಿಕೊಂಡಿತು. ಆದರೆ ಇಂದ್ರನ ಆಯುಧದ ಪೆಟ್ಟು ಶಿವಲಿಂಗಕ್ಕೆ ತಾಗಿ ಅಲ್ಲಿ ಗಾಯದ ಗುರುತು ಉಂಟಾಯಿತು. (Karkadeswarar Temple) ತದನಂತರ ತನ್ನ ತಪ್ಪಿನ ಅರಿವಾಗಿ ಇಂದ್ರನು ಶಿವನ ಕ್ಷಮೆ ಕೇಳಿದಾಗ, ಭೋಲೇನಾಥನು ಪ್ರತ್ಯಕ್ಷನಾಗಿ ಇಬ್ಬರಿಗೂ ಅನುಗ್ರಹಿಸಿದನು. ಸಂಸ್ಕೃತದಲ್ಲಿ ಏಡಿಗೆ “ಕರ್ಕಟ” ಎಂದು ಕರೆಯುವುದರಿಂದ ಈ ಶಿವನಿಗೆ “ಕರ್ಕಟೇಶ್ವರ” ಎಂಬ ಹೆಸರು ಬಂತು. Read this also : ಲಿಂಗ ರೂಪವಲ್ಲ, ಇಲ್ಲಿ ಶಿವನು ಮನುಷ್ಯ ರೂಪದಲ್ಲಿ ದರ್ಶನ ನೀಡುತ್ತಾನೆ! ಹೇಮಾವತಿ ಶಿವನ ವಿಗ್ರಹದ ಅಪರೂಪದ ವೈಶಿಷ್ಟ್ಯಗಳು..!
ಚೋಳ ರಾಜನಿಗೆ ಒಲಿದ ಪರಮೇಶ್ವರ
ಒಮ್ಮೆ ಚೋಳ ರಾಜನೊಬ್ಬನು ತೀವ್ರವಾದ ಕೀಲುನೋವು (ಆರ್ಥ್ರೈಟಿಸ್) ಮತ್ತು ದೀರ್ಘಕಾಲದ ಕಾಯಿಲೆಯಿಂದ ಬಳಲುತ್ತಿದ್ದನು. ಎಷ್ಟು ವೈದ್ಯಕೀಯ ಚಿಕಿತ್ಸೆ ಪಡೆದರೂ ಫಲ ಸಿಗಲಿಲ್ಲ. ಕೊನೆಗೆ ಆತ ಪರಶಿವನನ್ನು ಅನನ್ಯವಾಗಿ ಪ್ರಾರ್ಥಿಸಿದಾಗ, ಶಿವ ಮತ್ತು ಪಾರ್ವತಿ ದೇವಿ ವೃದ್ಧ ದಂಪತಿಗಳ ರೂಪದಲ್ಲಿ ರಾಜನ ಮುಂದೆ ಪ್ರತ್ಯಕ್ಷರಾಗಿ (Karkadeswarar Temple) ಪವಿತ್ರ ವಿಭೂತಿಯನ್ನು ನೀಡಿದರು. ಅದನ್ನು ಧರಿಸಿದ ತಕ್ಷಣ ರಾಜನ ರೋಗವು ಮಾಯವಾಗಿ, ಆತ ಸಂಪೂರ್ಣ ಆರೋಗ್ಯವಂತನಾದನು. ನಂತರ ಆ ದಂಪತಿಗಳು ಕಣ್ಮರೆಯಾದ ಜಾಗವನ್ನು ಹುಡುಕಿದಾಗ, “ಏಡಿಯು ಪೂಜಿಸಿದ ಜಾಗದಲ್ಲಿ ಆಲಯ ನಿರ್ಮಿಸು” ಎಂಬ ಶಿವನ ಆಜ್ಞೆಯಾಯಿತು. ಅದರಂತೆ ರಾಜನು ಈ ಭವ್ಯ ಕ್ಷೇತ್ರವನ್ನು ಪುನರ್ನಿರ್ಮಿಸಿದನು.
ಆಲಯದ ಪ್ರಮುಖ ವಿಶೇಷತೆಗಳು
-
ಇಲ್ಲಿ ಸ್ವಾಮಿಯು ಕರ್ಕಟೇಶ್ವರನಾಗಿ ನೆಲೆಸಿದ್ದರೆ, ಅಮ್ಮನವರು ಅಪೂರ್ವನಾಯಕಿ ಅಮ್ಮನ್ ಹಾಗೂ ಅರುಮರುಂದು ನಾಯಕಿ (ಔಷಧಗಳ ರಾಣಿ) ಎಂಬ ಹೆಸರಿನಿಂದ ಭಕ್ತರಿಗೆ ದರ್ಶನ ನೀಡುತ್ತಾರೆ.
-
ಶಿವಲಿಂಗದ ಮೇಲೆ ಇಂದ್ರನ ಆಯುಧ ತಾಗಿದ ಗಾಯದ ಗುರುತು ಮತ್ತು ಏಡಿ ಅಡಗಿಕೊಂಡ ರಂಧ್ರವನ್ನು ಇಂದಿಗೂ ಅರ್ಚಕರು ರುದ್ರಾಕ್ಷಿ ಮಾಲೆಯನ್ನು ಇಳಿಸಿ ಭಕ್ತರಿಗೆ ತೋರಿಸುತ್ತಾರೆ.
-
ಚಂದ್ರ ದೋಷ ಇರುವವರು ಇಲ್ಲಿ ಪ್ರಾರ್ಥನೆ ಸಲ್ಲಿಸಿದರೆ ಉತ್ತಮ ಫಲ ಸಿಗುತ್ತದೆ.
ಕರ್ಕಾಟಕ ರಾಶಿಯವರಿಗೆ ಇದು ವಿಶೇಷ ಕ್ಷೇತ್ರ
ಪುನರ್ವಸು (ಕೊನೆಯ ಪಾದ), ಪುಷ್ಯ ಮತ್ತು ಆಶ್ಲೇಷ ನಕ್ಷತ್ರಗಳಲ್ಲಿ (Karkadeswarar Temple) ಜನಿಸಿದ ಕರ್ಕಾಟಕ ರಾಶಿಯವರಿಗೆ (Cancer Zodiac Sign) ಈ ಕ್ಷೇತ್ರವು ಅತ್ಯಂತ ವಿಶೇಷವಾದದ್ದು. ತಮ್ಮ ಜಾತಕ ದೋಷ ನಿವಾರಣೆ, ಆರೋಗ್ಯ ವೃದ್ಧಿ ಮತ್ತು ಮಾನಸಿಕ ಶಾಂತಿಗಾಗಿ ದೇಶದ ನಾನಾ ಮೂಲೆಗಳಿಂದ ಕರ್ಕಾಟಕ ರಾಶಿಯ ಭಕ್ತರು ಇಲ್ಲಿಗೆ ಆಗಮಿಸುತ್ತಾರೆ.
ತಲುಪುವುದು ಹೇಗೆ?
ತಿರುಂದುದೇವನಗುಡಿ ಕ್ಷೇತ್ರವು ತಮಿಳುನಾಡಿನ ಕುಂಭಕೋಣಂ (Karkadeswarar Temple) ಪಟ್ಟಣದಿಂದ ಸುಮಾರು 10 ರಿಂದ 12 ಕಿಲೋಮೀಟರ್ ದೂರದಲ್ಲಿದೆ. ಕುಂಭಕೋಣಂನಿಂದ ರಸ್ತೆ ಮಾರ್ಗದ ಮೂಲಕ ಆಟೋ ಅಥವಾ ಸ್ಥಳೀಯ ಬಸ್ಸುಗಳ ಸಹಾಯದಿಂದ ಸುಲಭವಾಗಿ ಈ ಕ್ಷೇತ್ರವನ್ನು ತಲುಪಬಹುದು. ನಿಮಗೂ ದೀರ್ಘಕಾಲದ ಆರೋಗ್ಯ ಸಮಸ್ಯೆಗಳಿದ್ದರೆ ಅಥವಾ ಆಧ್ಯಾತ್ಮಿಕ ಶಾಂತಿಯ ಹುಡುಕಾಟದಲ್ಲಿದ್ದರೆ, ಒಮ್ಮೆ ಈ ಸುಂದರ ಹಸಿರು ಗದ್ದೆಗಳ ಮಧ್ಯೆ ಇರುವ ಕರ್ಕಟೇಶ್ವರ ಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿ ಬನ್ನಿ.
ಗಮನಿಸಿ (Disclaimer): ಇಲ್ಲಿ ನೀಡಲಾದ ಮಾಹಿತಿಯು ಧಾರ್ಮಿಕ ನಂಬಿಕೆಗಳು, ಪುರಾಣ ಕಥೆಗಳು ಮತ್ತು ಸಾಮಾನ್ಯ ಜ್ಯೋತಿಷ್ಯದ ನಂಬಿಕೆಗಳನ್ನು ಆಧರಿಸಿದೆ. ಇದನ್ನು ಸಂಪೂರ್ಣ ವೈಜ್ಞಾನಿಕ ಎಂದು ಪರಿಗಣಿಸುವ ಮೊದಲು ಅಥವಾ ಯಾವುದೇ ವೈಯಕ್ತಿಕ ನಿರ್ಧಾರಗಳನ್ನು ತೆಗೆದುಕೊಳ್ಳುವ ಮುನ್ನ ಸಂಬಂಧಪಟ್ಟ ತಜ್ಞರನ್ನು ಸಂಪರ್ಕಿಸುವುದು ಸೂಕ್ತ.

