ಸಾಮಾನ್ಯವಾಗಿ ಹಾವು ಕಂಡರೆ ಸಾಕು ಜನ ಹತ್ತಡಿ ದೂರ ಓಡುತ್ತಾರೆ. ಇನ್ನು ಹಾವು ಕಚ್ಚಿದರೆ ಹೇಳಬೇಕೆ? ಭಯದಲ್ಲೇ ಅರ್ಧ ಪ್ರಾಣ ಹೋಗಿಬಿಡುತ್ತದೆ. ಆದರೆ ಉತ್ತರ ಪ್ರದೇಶದ ವ್ಯಕ್ತಿಯೊಬ್ಬರು ತಮಗೆ (Snake Bite) ಹಾವು ಕಚ್ಚಿದಾಗ ಗಾಬರಿಯಾಗದೆ, ಆ ಹಾವನ್ನೇ ಹಿಡಿದು ಜೇಬಿನಲ್ಲಿ ಹಾಕಿಕೊಂಡು ಆಸ್ಪತ್ರೆಗೆ ಬಂದ ಘಟನೆ ಈಗ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

Snake Bite – ಏನಿದು ವಿಚಿತ್ರ ಘಟನೆ?
ಈ ಘಟನೆ ನಡೆದಿರುವುದು ಉತ್ತರ ಪ್ರದೇಶದ ಮಥುರಾ ಜಿಲ್ಲೆಯಲ್ಲಿ. ಇಲ್ಲಿನ ಈ-ರಿಕ್ಷಾ ಚಾಲಕ ದೀಪಕ್ (39) ಎಂಬುವವರಿಗೆ ಹಾವು ಕಚ್ಚಿದೆ. ಹಾವು ಕಚ್ಚಿದ ತಕ್ಷಣ ದೀಪಕ್ ಭಯಪಡುವ ಬದಲು, ತನಗೆ ಕಚ್ಚಿದ ಹಾವು ಯಾವುದು ಎಂದು ವೈದ್ಯರಿಗೆ ತೋರಿಸಿದರೆ ಚಿಕಿತ್ಸೆ ನೀಡಲು ಸುಲಭವಾಗುತ್ತದೆ ಎಂದು ಯೋಚಿಸಿದ್ದಾರೆ. ಅಷ್ಟೇ ಅಲ್ಲದೆ, ಆ ಹಾವನ್ನು ಹಿಡಿದು ಚಕಚಕನೆ ತಮ್ಮ ಶರ್ಟ್ ಜೇಬಿನೊಳಗೆ ಹಾಕಿಕೊಂಡು ನೇರವಾಗಿ ಸರ್ಕಾರಿ ಆಸ್ಪತ್ರೆಗೆ ದೌಡಾಯಿಸಿದ್ದಾರೆ.
ಆಸ್ಪತ್ರೆಯಲ್ಲಿ ನಡೆದ ಹೈಡ್ರಾಮಾ
ಆಸ್ಪತ್ರೆಗೆ ಬಂದ ದೀಪಕ್ ತನಗೆ ಹಾವು ಕಚ್ಚಿದೆ ಎಂದು ವೈದ್ಯರಿಗೆ ತಿಳಿಸಿದ್ದಾರೆ. ಆದರೆ ಅಲ್ಲಿನ ಸಿಬ್ಬಂದಿ ತುರ್ತಾಗಿ ಸ್ಪಂದಿಸದೆ, ಸ್ವಲ್ಪ ಹೊತ್ತು ಕಾಯುವಂತೆ ಹೇಳಿದ್ದಾರೆ. ಸುಮಾರು ಅರ್ಧ ಗಂಟೆ ಕಳೆದರೂ ಯಾರೂ ಚಿಕಿತ್ಸೆ (Snake Bite) ನೀಡದಿದ್ದಾಗ ದೀಪಕ್ ಅವರಿಗೆ ಸಿಟ್ಟು ನೆತ್ತಿಗೇರಿದೆ.
ವೈದ್ಯರು ಬಂದು “ಯಾವ ಹಾವು ಕಚ್ಚಿದೆ? ಅದು ಎಲ್ಲಿದೆ?” ಎಂದು ಕೇಳಿದಾಗ, ದೀಪಕ್ ತಾವು ಧರಿಸಿದ್ದ ಶರ್ಟ್ ಜೇಬಿನಿಂದ ಜೀವಂತವಾಗಿದ್ದ ಹಾವನ್ನು ಹೊರತೆಗೆದು ತೋರಿಸಿದ್ದಾರೆ! ಇದನ್ನು ಕಂಡ ರೋಗಿಗಳು ಮತ್ತು ವೈದ್ಯಕೀಯ ಸಿಬ್ಬಂದಿ ಒಂದು ಕ್ಷಣ ಬೆಚ್ಚಿಬಿದ್ದಿದ್ದಾರೆ. “ವೈದ್ಯರಿಗೆ ಹಾವಿನ ಜಾತಿ ಗೊತ್ತಾದರೆ ಸರಿಯಾದ ಔಷಧಿ ನೀಡುತ್ತಾರೆ ಎಂಬ ಕಾರಣಕ್ಕೆ ನಾನು ಹಾವನ್ನು ತಂದಿದ್ದೇನೆ” ಎಂದು ದೀಪಕ್ ಹೇಳಿದ್ದು ಎಲ್ಲರನ್ನೂ ಅಚ್ಚರಿಗೀಡು ಮಾಡಿದೆ. Read this also : ವಿಷ ಸರ್ಪ ಕಚ್ಚಿದರೂ, ಭಯಪಡದೇ ಅದನ್ನೇ ಹಿಡಿದು ಹೋಗಿ ಪ್ರಾಣ ಉಳಿಸಿಕೊಂಡ ಭೂಪ…!

ಪ್ರಸ್ತುತ ಪರಿಸ್ಥಿತಿ ಏನು?
ಸುಮಾರು ಒಂದೂವರೆ ಅಡಿ ಉದ್ದವಿದ್ದ ಆ ಹಾವನ್ನು (Snake Bite) ನಂತರ ಅರಣ್ಯ ಇಲಾಖೆ ಅಧಿಕಾರಿಗಳು ಸುರಕ್ಷಿತವಾಗಿ ರಕ್ಷಿಸಿದ್ದಾರೆ. ಇನ್ನು ದೀಪಕ್ ಅವರಿಗೆ ವೈದ್ಯರು ಕೂಡಲೇ ಆಂಟಿ-ವೆನಮ್ (ವಿಷನಿರೋಧಕ) ಚಿಕಿತ್ಸೆ ನೀಡಿದ್ದು, ಸದ್ಯ ಅವರ ಆರೋಗ್ಯ ಸ್ಥಿರವಾಗಿದೆ ಎಂದು ವರದಿಯಾಗಿದೆ.
ವೈರಲ್ ವಿಡಿಯೋ ಇಲ್ಲಿದೆ ನೋಡಿ : Click Here
ವೈರಲ್ ಆಗುತ್ತಿದೆ ವಿಡಿಯೋ
ದೀಪಕ್ ಜೇಬಿನಿಂದ ಹಾವು ತೆಗೆಯುತ್ತಿರುವ ವಿಡಿಯೋ ಈಗ ಇಂಟರ್ನೆಟ್ನಲ್ಲಿ ಧೂಳೆಬ್ಬಿಸುತ್ತಿದೆ. ನೆಟ್ಟಿಗರು ಈತನ ಧೈರ್ಯ ಕಂಡು “ಇವನು ನಿಜವಾದ ಸಾಹಸಿ” ಎನ್ನುತ್ತಿದ್ದರೆ, ಇನ್ನು ಕೆಲವರು “ಹಾವನ್ನು ಜೇಬಿನಲ್ಲಿಟ್ಟುಕೊಳ್ಳುವುದು ಅಪಾಯಕಾರಿ” ಎಂದು ಎಚ್ಚರಿಸುತ್ತಿದ್ದಾರೆ.

ನಮಸ್ಕಾರ, ನಾನು ಬಾಲಾಜಿ ಆರ್. 10+ ವರ್ಷಗಳ ಅನುಭವ ಹೊಂದಿರುವ ಕಂಟೆಂಟ್ ರೈಟರ್ ಹಾಗೂ ಕಾಪಿ ಎಡಿಟರ್ ಆಗಿದ್ದು, ಹಣಕಾಸು, ಸರ್ಕಾರಿ ಯೋಜನೆಗಳು, ತಂತ್ರಜ್ಞಾನ, ವೈರಲ್ ಸುದ್ದಿ, ರಾಜಕೀಯ ಸುದ್ದಿ ಮತ್ತು ಸಿನಿಮಾ ಸುದ್ದಿಗಳ ಬಗ್ಗೆ ಬರೆಯುತ್ತೇನೆ. ಸಂಕೀರ್ಣ ಮಾಹಿತಿಯನ್ನು ಸರಳವಾಗಿ ನೀಡುವುದು ನನ್ನ ಉದ್ದೇಶ. ISM Kannada News ಮೂಲಕ ನಿಖರ ಮತ್ತು ಉಪಯುಕ್ತ ಮಾಹಿತಿಯನ್ನು ಹಂಚಿಕೊಳ್ಳುತ್ತೇನೆ.
