HomeNationalSnake Bite : ವಿಷ ಸರ್ಪ ಕಚ್ಚಿದರೂ, ಭಯಪಡದೇ ಅದನ್ನೇ ಹಿಡಿದು ಹೋಗಿ ಪ್ರಾಣ ಉಳಿಸಿಕೊಂಡ...

Snake Bite : ವಿಷ ಸರ್ಪ ಕಚ್ಚಿದರೂ, ಭಯಪಡದೇ ಅದನ್ನೇ ಹಿಡಿದು ಹೋಗಿ ಪ್ರಾಣ ಉಳಿಸಿಕೊಂಡ ಭೂಪ…!

ಹಾವು ಕಚ್ಚಿದರೆ (Snake Bite) ಯಾರಿಗೆ ತಾನೆ ಭಯವಾಗುವುದಿಲ್ಲ? ಸಾಮಾನ್ಯ ಮನುಷ್ಯರು ಆತಂಕದಿಂದ ನಾನಾ ರೀತಿಯ ತಪ್ಪುಗಳನ್ನು ಮಾಡುವುದು ಸಹಜ. ಆದರೆ, ಉತ್ತರ ಪ್ರದೇಶದ ಬಿಜ್ನೋರ್ ಜಿಲ್ಲೆಯ ಯುವಕನೊಬ್ಬ ಮಾತ್ರ, ತನಗೆ ಹಾವು ಕಚ್ಚಿದರೂ ಚೂರು ಕೂಡ ವಿಚಲಿತನಾಗದೆ ಒಂದು ಕೆಚ್ಚೆದೆಯ ನಿರ್ಧಾರ ತೆಗೆದುಕೊಂಡಿದ್ದಾನೆ. ಈತನ ಸಾಹಸ ಮತ್ತು ಸಮಯಪ್ರಜ್ಞೆಯನ್ನು (Presence of Mind) ಈಗ ಇಡೀ ದೇಶದ ನೆಟ್ಟಿಗರು ಕೊಂಡಾಡುತ್ತಿದ್ದಾರೆ.

A brave man from Bijnor, Uttar Pradesh walking to a hospital while holding a live snake in his hand after being bitten, showing courage and presence of mind

Snake Bite – ನುರಿತ ವೈದ್ಯರಂತೆ ಯೋಚಿಸಿದ ವ್ಯಕ್ತಿ

ಘಟನೆ ನಡೆದಿದ್ದು ಬಿಜ್ನೋರ್‌ನ ಬಿಲಾಸ್‌ಪುರ ಗ್ರಾಮದಲ್ಲಿ. ಗೌರವ್ ಕುಮಾರ್ (30) ಎಂಬಾತ ತಮ್ಮ ಮನೆ ಹತ್ತಿರ ಕೆಲಸ ಮಾಡುತ್ತಿದ್ದಾಗ, ಪೊದೆಗಳ ನಡುವಿನಿಂದ ಬಂದ ಹಾವು ಇವರ ಕೈಗೆ ಕಚ್ಚಿದೆ. ಸಾಮಾನ್ಯವಾಗಿ, ಹಾವು ಕಚ್ಚಿದಾಗ, ಅದು ಯಾವ ಜಾತಿಯ ಹಾವು ಎಂದು ತಿಳಿದರೆ ಚಿಕಿತ್ಸೆ ಸುಲಭವಾಗುತ್ತದೆ. ಒಂದು ವೇಳೆ ವಿಷಕಾರಿ ಹಾವಾಗಿದ್ದರೆ, ಅದಕ್ಕೆ ತಕ್ಕ ವಿಷನಿರೋಧಕವನ್ನು (Anti-venom) ನೀಡಲಾಗುತ್ತದೆ.

ಇದೇ ವಿಚಾರ ಗೌರವ್ ಅವರ ತಲೆಯಲ್ಲಿ ಮಿಂಚಿದೆ. ಆತಂಕಪಟ್ಟು ಓಡಿ ಹೋಗುವ ಬದಲು, ಅವರು ತಕ್ಷಣ ತಿರುಗಿ, ಅದೇ ಜೀವಂತ ಹಾವನ್ನು ದೃಢವಾಗಿ ಹಿಡಿದು, ಅದನ್ನು ತನ್ನ ಕೈಯಲ್ಲೇ ಇರಿಸಿಕೊಂಡು ಸಮೀಪದ ಪ್ರಾಥಮಿಕ ಆರೋಗ್ಯ ಕೇಂದ್ರದತ್ತ (PHC) ವೇಗವಾಗಿ ನಡೆದೇ ಹೋಗಿದ್ದಾರೆ. ಸುಮಾರು ಒಂದು ಕಿಲೋಮೀಟರ್‌ನಷ್ಟು ದೂರವನ್ನು, ಹಾವನ್ನು ಕೈಯಲ್ಲಿ ಹಿಡಿದು ನಡೆದು ಆಸ್ಪತ್ರೆ ತಲುಪಿದ್ದಾರೆ!

Snake Bite – ಚಿಕಿತ್ಸೆ ಸುಲಭ ಮಾಡಿಕೊಟ್ಟ ಯುವಕನ ಸಮಯಪ್ರಜ್ಞೆ

ಆಸ್ಪತ್ರೆ ತಲುಪಿದ ತಕ್ಷಣ, ವೈದ್ಯಕೀಯ ಸಿಬ್ಬಂದಿ ಸುರಕ್ಷಿತವಾಗಿ ಹಾವನ್ನು ಒಂದು ಪಾತ್ರೆಯಲ್ಲಿ ಇರಿಸಿ, ಗೌರವ್ ಕುಮಾರ್‌ಗೆ ತಕ್ಷಣಕ್ಕೆ ಬೇಕಾದ ಚಿಕಿತ್ಸೆ ಆರಂಭಿಸಿದ್ದಾರೆ. ಗೌರವ್ ಅವರ ಈ ಅಸಾಮಾನ್ಯ ನಡೆಯಿಂದಾಗಿ, ವೈದ್ಯರಿಗೆ ಹಾವು ಯಾವ ಜಾತಿಯದ್ದು ಎಂದು ತಕ್ಷಣ ತಿಳಿದು, ಸರಿಯಾದ ವಿಷನಿರೋಧಕ (Anti-venom) ನೀಡುವುದಕ್ಕೆ ವಿಳಂಬ ಆಗಲಿಲ್ಲ. ಸದ್ಯ ವರದಿಗಳ ಪ್ರಕಾರ, ಗೌರವ್ ಕುಮಾರ್ ಅವರು ಚೇತರಿಸಿಕೊಳ್ಳುತ್ತಿದ್ದು, ಅವರ ಆರೋಗ್ಯ ಸ್ಥಿರವಾಗಿದೆ. Read this also : ಓ ಮೈ ಗಾಡ್ ! ಹಾವು ಕಚ್ಚಿದ್ದಕ್ಕೆ ಅದರ ತಲೆಯನ್ನೇ ಕಚ್ಚಿ ತಿಂದ! ಕೊನೆಗೆ ಆಗಿದ್ದೇನು? ಉತ್ತರ ಪ್ರದೇಶದಲ್ಲಿ ನಡೆದ ಘಟನೆ..!

A brave man from Bijnor, Uttar Pradesh walking to a hospital while holding a live snake in his hand after being bitten, showing courage and presence of mind

ವೈರಲ್ ವಿಡಿಯೋ ಇಲ್ಲಿದೆ ನೋಡಿ : Click Here 

Snake Bite – ನೆಟ್ಟಿಗರಿಂದ ಭಾರೀ ಮೆಚ್ಚುಗೆ

ಇಂತಹ ಪ್ರಾಣಾಪಾಯದ ಸಂದರ್ಭದಲ್ಲೂ ಗೌರವ್ ಅವರು ಧೈರ್ಯ ಕಳೆದುಕೊಳ್ಳದೆ, ತಮ್ಮದೇ ಚಿಕಿತ್ಸೆಗೆ ಸಹಾಯ ಆಗುವಂತೆ ವರ್ತಿಸಿದ ಸಮಯಪ್ರಜ್ಞೆಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಎಲ್ಲರೂ ಹೊಗಳುತ್ತಿದ್ದಾರೆ. ‘ನೆಟ್ಟಿಗರು’ ಗೌರವ್ ಅವರ ನಡೆಯನ್ನು, “ನಮ್ಮ ಜೀವ ನಮ್ಮ ಕೈಯಲ್ಲಿ,” ಎಂದು ತೋರಿಸಿದ ಧೈರ್ಯ ಎಂದು ಕರೆದು, ಅವರ ಶ್ಲಾಘನೆ ಮಾಡುತ್ತಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular