Crime – ಇತ್ತೀಚಿನ ದಿನಗಳಲ್ಲಿ ಕೆಲವು ಘಟನೆಗಳನ್ನು ನೋಡಿದ್ರೆ, ‘ಯಾರನ್ನು ನಂಬಬೇಕು’ ಅನ್ನೋ ಪ್ರಶ್ನೆ ಮನಸ್ಸಲ್ಲಿ ಮೂಡದೆ ಇರದು. ಗಂಡ-ಹೆಂಡತಿ ಅಂದ್ರೆ ಜೀವನದ ರಥದ ಎರಡು ಚಕ್ರಗಳಿದ್ದಂತೆ, ಒಬ್ಬರನ್ನೊಬ್ಬರು ನಂಬಿ, ಜೊತೆಯಾಗಿ ಸಾಗಬೇಕಾದವರು. ಆದರೆ, ವಿಶ್ವಾಸ ಅನ್ನೋದೇ ಹೊರಟು ಹೋಗಿ, ಯಾರು ಯಾವಾಗ ಯಾರಿಗೆ ಮುಹೂರ್ತ ಇಡ್ತಾರೋ ಅನ್ನೋ ಆತಂಕದ ಸ್ಥಿತಿ ಬಂದುಬಿಟ್ಟಿದೆ. ಇದಕ್ಕೆ ಸಾಕ್ಷಿ ಎಂಬಂತೆ ಮೈಸೂರು ಜಿಲ್ಲೆಯ ನಂಜನಗೂಡು ಪಟ್ಟಣದಲ್ಲಿ ನಡೆದ ಒಂದು ಪ್ರಕರಣ ಇಡೀ ರಾಜ್ಯದ ಗಮನ ಸೆಳೆದಿದೆ. ಸಿನಿಮೀಯ ರೀತಿಯಲ್ಲಿ ಪತಿಯ ಹತ್ಯೆಗೆ ‘ಖತರ್ನಾಕ್’ ಸ್ಕೆಚ್ ಹಾಕಿದ ಪತ್ನಿಯ ಕರಾಳ ಮುಖ ಬಯಲಾಗಿದ್ದು, ಕೊನೆಗೆ ಆಕೆ ಪೊಲೀಸರ ಅತಿಥಿಯಾಗಿದ್ದಾಳೆ.

Crime – ಸಂಸಾರದಲ್ಲಿ ಬಿರುಕು, ಕೊಲೆಗೆ ಸ್ಕೆಚ್!
ನಂಜನಗೂಡಿನ ರಾಜೇಂದ್ರ ಮತ್ತು ಆತನ ಪತ್ನಿ ಸಂಗೀತಾ ನಡುವೆ ದಾಂಪತ್ಯ ಕಲಹ ಹೆಚ್ಚಾಗಿತ್ತು. ಮನಸ್ತಾಪ ತಾರಕಕ್ಕೇರಿ, ಗಂಡನ ಮೇಲೆ ಸಂಗೀತಾ ಎಷ್ಟು ದ್ವೇಷ ಬೆಳೆಸಿಕೊಂಡಿದ್ದಳು ಅಂದರೆ, ಆತನನ್ನು ಮುಗಿಸಲು ಹೊರಟಿದ್ದಳು! ಆದರೆ, ಯಾರೂ ಅನುಮಾನಿಸದಂತೆ, ಒಂದು ‘ದರೋಡೆ ನಾಟಕ’ದ ಮೂಲಕ ಕೊಲೆ ಮಾಡಲು ಸಂಚು ರೂಪಿಸಿದ್ದಳು. ಪಾಪಿ ಪತ್ನಿಯ ಈ ಅಸಲಿಯತ್ತು ಪೊಲೀಸರ ತನಿಖೆಯಿಂದ ಬಯಲಾಗಿದೆ.
Crime – ದರೋಡೆ ನಾಟಕದ ಹಿಂದಿನ ಕರಾಳ ಸತ್ಯ!
ಅಕ್ಟೋಬರ್ 25ರಂದು ರಾಜೇಂದ್ರ ಮತ್ತು ಸಂಗೀತಾ ಬೈಕ್ನಲ್ಲಿ ನಂಜನಗೂಡಿನ ಹುಂಡುವಿನಹಳ್ಳಿ ಬಡಾವಣೆಯ ಬಳಿ ಹೋಗುತ್ತಿದ್ದರು. ಆಗ, ಅಲ್ಲಿಗೆ ಬಂದ ಒಂದು ಬಿಳಿ ಬಣ್ಣದ ಪೋಲೋ ಕಾರು ಬೈಕ್ಗೆ ಅಡ್ಡವಾಗಿ ನಿಂತಿದೆ. ಮೊದಲಿಗೆ ಕಾರಿನಲ್ಲಿದ್ದ ವ್ಯಕ್ತಿ ಬಂದು ಸ್ಕೂಟರ್ ಕೆಡವಿ, ದಂಪತಿಯನ್ನು ಬೀಳಿಸಿದ್ದಾನೆ. ನಂತರ ಕಾರಿನಿಂದ ಇಳಿದ ಮತ್ತೊಬ್ಬ ರಾಜೇಂದ್ರ ಜೊತೆ ಜಗಳ ಶುರು ಮಾಡಿದ್ದಾನೆ.
ಇದೇ ವೇಳೆ, ಸಂಗೀತಾ ಬಳಿ ಬಂದ ಇಬ್ಬರು, ಆಕೆಯ ಕುತ್ತಿಗೆಯಲ್ಲಿದ್ದ ಚೈನ್ ಕಸಿಯಲು ಯತ್ನಿಸಿ, ದರೋಡೆಕೋರರಂತೆ ನಟಿಸಿದ್ದಾರೆ. ಜೊತೆಯಲ್ಲಿದ್ದ ಇನ್ನೊಬ್ಬ ವ್ಯಕ್ತಿ ಹರಿತವಾದ ಆಯುಧದಿಂದ ರಾಜೇಂದ್ರಗೆ ತಿವಿದು ಗಂಭೀರವಾಗಿ ಗಾಯಗೊಳಿಸಿದ್ದಾನೆ. ಅಷ್ಟರಲ್ಲಿ, ಆ ರಸ್ತೆಯಲ್ಲಿ ಬೇರೊಂದು ವಾಹನ ಬಂದಿದೆ. ಹೀಗಾಗಿ, ಹಲ್ಲೆ ಮಾಡಿದವರು ಸ್ಥಳದಿಂದ ಪರಾರಿಯಾಗಿದ್ದಾರೆ. ಗಾಯಗೊಂಡ ರಾಜೇಂದ್ರ ಅವರನ್ನು ತಕ್ಷಣ ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.
Crime – ತನಿಖೆಯಿಂದ ಬಯಲಾದ ಸತ್ಯ
ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ನಂಜನಗೂಡು ಪೊಲೀಸರು ತನಿಖೆ ಶುರು ಮಾಡಿದರು. ಆರಂಭದಲ್ಲಿ ಇದು ದರೋಡೆ ಯತ್ನದಂತೆ ಕಂಡರೂ, ಪೊಲೀಸರಿಗೆ ಕೆಲವು ಅನುಮಾನಗಳು ಹುಟ್ಟಿಕೊಂಡವು. ತನಿಖೆ ಆಳಕ್ಕಿಳಿದಾಗ ಗೊತ್ತಾಗಿದ್ದು ಒಂದು ಬೆಚ್ಚಿ ಬೀಳಿಸುವ ಸಂಗತಿ! ಅಸಲಿಗೆ, ಇದೆಲ್ಲವೂ ಪತಿ ರಾಜೇಂದ್ರನನ್ನು ಕೊಲೆ ಮಾಡಲು ಆತನ ಪತ್ನಿ ಸಂಗೀತಾ ಹಾಕಿದ್ದ ಸ್ಕೆಚ್ ಎಂದು ಬಯಲಾಗಿದೆ. ಸಂಗೀತಾ ಈ ಕೃತ್ಯಕ್ಕೆ ತನ್ನ ಸಹೋದರ ಸಂಜಯ್ನನ್ನು ಬಳಸಿಕೊಂಡಿದ್ದಳು. ಸಂಜಯ್, ತನ್ನ ಸ್ನೇಹಿತ ವಿಘ್ನೇಶ್ ಮತ್ತು ಇನ್ನೊಬ್ಬ ಬಾಲಕನ ಜೊತೆ ಸೇರಿ ಈ ಸಂಚು ರೂಪಿಸಿದ್ದ.

Crime – ಹತ್ಯೆ ಮಿಸ್ ಆದದ್ದು ಹೇಗೆ?
ಯೋಜನೆಯಂತೆ, ರಾತ್ರಿ 7:30ರ ಸುಮಾರಿಗೆ ದಂಪತಿ ಬೈಕ್ನಲ್ಲಿ ತೆರಳುತ್ತಿದ್ದಾಗ, ಈ ನಾಲ್ವರ ತಂಡ ಅಪರಿಚಿತರಂತೆ ಅಟ್ಯಾಕ್ ಮಾಡಿದೆ. ಕೊಲೆಯ ಪ್ರಯತ್ನ ನಡೆಯುವಾಗ, ಸಂಗೀತಾ ಕೂಡ ಸಾಕಷ್ಟು ‘ನಟಿಸಿದ್ದಾಳೆ’. ಡ್ರಾಗರ್ನಿಂದ (ಹರಿತವಾದ ಆಯುಧ) ಚುಚ್ಚಿ ರಾಜೇಂದ್ರನನ್ನು ಮುಗಿಸುವುದೇ ಅವರ ಗುರಿಯಾಗಿತ್ತು. ಆದರೆ, ಸರಿಯಾದ ಸಮಯದಲ್ಲಿ ಅಲ್ಲಿಗೆ ವಾಹನವೊಂದು ಬಂದಿದ್ದರಿಂದ ಹತ್ಯೆ ಸಂಚು ಮಿಸ್ ಆಗಿದೆ. ರಾಜೇಂದ್ರ ಜೀವ ಉಳಿದಿದೆ. Read this also : ಮದುವೆಯಾದ ಎರಡೇ ವರ್ಷಕ್ಕೆ ವಿವಾಹಿತೆ ನಿಗೂಢ ಸಾವು, ಪ್ರೀತಿಸಿದ ಪತಿಯೇ ಜೀವ ತೆಗೆದ್ನಾ?
Crime – ಅಂತಿಮವಾಗಿ ಜೈಲು ಪಾಲಾದ ಪಾಪಿಗಳು
ತೀವ್ರ ವಿಚಾರಣೆ ವೇಳೆ, ಪತ್ನಿ ಸಂಗೀತಾ ಕೊನೆಗೆ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾಳೆ. ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು, ಸಹೋದರ ಸಂಜಯ್, ವಿಘ್ನೇಶ್ ಹಾಗೂ ಅಪ್ರಾಪ್ತ ಬಾಲಕ ಸೇರಿ ಎಲ್ಲ ಆರೋಪಿಗಳನ್ನು ಬಂಧಿಸಿದ್ದಾರೆ. ಸದ್ಯ, ಈ ನಾಲ್ವರೂ ಈಗ ಜೈಲು ಪಾಲಾಗಿದ್ದಾರೆ.
