Close Menu
ISM Kannada News
    IPL 2025 Live Score
    What's Hot

    Chikkaballapur : ಗಾಳಿ-ಮಳೆಗೆ ಚೆಂಡು ಹೂ ಬೆಳೆ ನಾಶ – ಸಂಕಷ್ಟದಲ್ಲಿ ರೈತ, ಪರಿಹಾರಕ್ಕೆ ಮೊರೆ…!

    May 19, 2025

    Soldier : ಬಾಗೇಪಲ್ಲಿಯಲ್ಲಿ ಹುತಾತ್ಮ ಯೋಧ ಮುರಳಿ ನಾಯಕ್ ಸ್ಮರಣೆ: ದೇಶಕ್ಕಾಗಿ ಬಲಿದಾನಗೈದ ವೀರನಿಗೆ ನಮನ…!

    May 19, 2025

    Teacher : ಶಿಕ್ಷಕಿಯ ಸಾಧನೆ: ರಾಷ್ಟ್ರ ಮಟ್ಟದ 100 ಮೀಟರ್ ಓಟದ ಸ್ಪರ್ಧೆಗೆ ಆಯ್ಕೆ…..!

    May 19, 2025
    Facebook X (Twitter) Instagram
    Facebook X (Twitter) Instagram WhatsApp
    ISM Kannada NewsISM Kannada News
    Subscribe
    • Home
    • All News
      • State
      • National
      • International
    • Special
    • Entertainment
    • Technology
    • Web Stories
    • Foodies
    ISM Kannada News
    Home»National»Viral News – ಮದುವೆ ಫಿಕ್ಸ್ ಆಗಿದ್ದು ಮಗಳೊಂದಿಗೆ, ನಿಖಾ ಆದ ಬಳಿಕ ವರನಿಗೆ ಕಾದಿತ್ತು ದೊಡ್ಡ ಶಾಕ್, ಆಗಿದ್ದೇನು ಗೊತ್ತಾ?
    National

    Viral News – ಮದುವೆ ಫಿಕ್ಸ್ ಆಗಿದ್ದು ಮಗಳೊಂದಿಗೆ, ನಿಖಾ ಆದ ಬಳಿಕ ವರನಿಗೆ ಕಾದಿತ್ತು ದೊಡ್ಡ ಶಾಕ್, ಆಗಿದ್ದೇನು ಗೊತ್ತಾ?

    By by AdminApril 21, 2025No Comments2 Mins Read
    Facebook Twitter Pinterest WhatsApp
    Viral News - Groom shocked to find mother of the bride at the wedding ceremony in Meerut

    Table of Contents

    Toggle
    • Viral News – ನಿಖಾ ಬಳಿಕ ವಧುವನ್ನು ನೋಡಿದ ವರನಿಗೆ ಶಾಕ್?
      • Viral News – ಪ್ರಶ್ನಿಸಿದ ವರನಿಗೆ ಬೆದರಿಕೆ!
        • Viral News – ಪೊಲೀಸರಿಗೆ ದೂರು, ನಂತರ ರಾಜಿ!

    Viral News –  ಇತ್ತೀಚಿನ ದಿನಗಳಲ್ಲಿ ನಡೆಯುತ್ತಿರುವ ಕೆಲವು ಘಟನೆಗಳನ್ನು ನೋಡಿದರೆ ನಗು ಬರುತ್ತದೆ. ಆದರೆ ಇಂತಹ ಘಟನೆಗಳು ಕೆಲವರನ್ನು ದುಃಖಕ್ಕೆ ದೂಡುತ್ತವೆ. ಇತ್ತೀಚೆಗಷ್ಟೇ ಮದುವೆಗೂ ಮುನ್ನ ವಧು ತನ್ನ ಭಾವಿ ಪತಿಯೊಂದಿಗೆ ಪರಾರಿಯಾದ ಘಟನೆಯನ್ನು ನಾವು ನೋಡಿದ್ದೇವೆ. ಆದರೆ ಈಗ ನಡೆದ ಘಟನೆಯ ಬಗ್ಗೆ ತಿಳಿದರೆ, ಮೊದಲು ನೀವು ನಗುತ್ತೀರಾ,  ಆದರೆ ನಂತರ ಖಂಡಿತವಾಗಿಯೂ ಆಘಾತಕ್ಕೊಳಗಾಗುತ್ತೀರಿ.

    Viral News - Groom shocked to find mother of the bride at the wedding ceremony in Meerut

    Viral News – ನಿಖಾ ಬಳಿಕ ವಧುವನ್ನು ನೋಡಿದ ವರನಿಗೆ ಶಾಕ್?

    ಉತ್ತರ ಪ್ರದೇಶದ ಮೀರತ್ನಲ್ಲಿ ನಡೆದ ಈ ಘಟನೆಯು ಮದುವೆಯಾಗಲು ಕನಸು ಕಂಡಿದ್ದ ಯುವಕನಿಗೆ ದೊಡ್ಡ ಆಘಾತವನ್ನುಂಟು ಮಾಡಿದೆ. ಮದುವೆಗೆಂದು ಹುಡುಗಿಯನ್ನು ತೋರಿಸಿ, ಕೊನೆಗೆ ಆಕೆಯ ತಾಯಿಯೊಂದಿಗೆ ಮದುವೆ ಮಾಡಿಸಿದ ಘಟನೆ ಬೆಳಕಿಗೆ ಬಂದಿದೆ. ಮೀರತ್ ನ  ಬ್ರಹ್ಮಪುರಿಗೆ ಸೇರಿದ 22 ವರ್ಷದ ಮೊಹಮ್ಮದ್ ಅಜೀಮ್ ಎಂಬ ಯುವಕನಿಗೆ ಮದುವೆಯಾಗಬೇಕೆಂದು ಆಸೆಯಿತ್ತು. ಆತನ ಕುಟುಂಬದವರು ಶಾಮ್ಲಿ ಜಿಲ್ಲೆಯ ಮನ್ತಾಶಾ ಎಂಬ ಯುವತಿಯನ್ನು ಮದುವೆಗೆಂದು ಗೊತ್ತುಪಡಿಸಿದ್ದರು. ಮನ್ತಾಶಾಳ ಸಹೋದರ ನದೀಮ್ ಮತ್ತು ಆತನ ಪತ್ನಿ ಶಾಯೆದಾ ಈ ಮದುವೆಯನ್ನು ನಿಶ್ಚಯಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಎಲ್ಲವೂ ಅಂದುಕೊಂಡಂತೆ ನಡೆದು ಮಾರ್ಚ್ 31 ರಂದು ಮದುವೆಯ ದಿನಾಂಕವನ್ನು ನಿಗದಿಪಡಿಸಲಾಯಿತು. ಅದ್ದೂರಿಯಾಗಿ ಮದುವೆ ಸಮಾರಂಭವು ನೆರವೇರಿತು. ಆದರೆ ಮದುವೆಯ ವಿಧಿಗಳು ಮುಗಿದ ನಂತರ ವರ ಅಜೀಮ್ ವಧುವಿನ ಪರದೆಯನ್ನು ತೆರೆದು ನೋಡಿದಾಗ ಆಘಾತಕ್ಕೊಳಗಾದನು. ಅಲ್ಲಿ ಮನ್ತಾಶಾ ಬದಲು ಆಕೆಯ ತಾಯಿ ಕುಳಿತಿದ್ದಳು. Read this also : Marriage : ಮದುವೆ ರಿಸೆಪ್ಷನ್ ದಿನದಂದೆ ಸಿನಿಮೀಯ ರೀತಿಯಲ್ಲಿ ಲವರ್ ಜೊತೆ ಪರಾರರಿಯಾದ ವಧು….!

    Viral News – ಪ್ರಶ್ನಿಸಿದ ವರನಿಗೆ ಬೆದರಿಕೆ!

    ವಧುವಿನ ಸ್ಥಾನದಲ್ಲಿ ವಧುವಿನ ತಾಯಿಯನ್ನು ಕಂಡು ಶಾಕ್ ಆದ ಅಜೀಮ್, ಕೂಡಲೇ ವಧುವಿನ ಕಡೆಯವರನ್ನು ಪ್ರಶ್ನಿಸಿದನು. ಆಗ ಮನ್ತಾಶಾಳ ಸಹೋದರ ನದೀಮ್ ಮತ್ತು ಆತನ ಪತ್ನಿ ಶಾಯೆದಾ, “ನೀನು ಇವಳೊಂದಿಗೆ ಸಂಸಾರ ಮಾಡಬೇಕು, ಇಲ್ಲದಿದ್ದರೆ ನಿನ್ನ ಮೇಲೆ ಅತ್ಯಾಚಾರದ ಕೇಸ್ ಹಾಕಿ ಜೈಲಿಗೆ ಕಳುಹಿಸುತ್ತೇವೆ” ಎಂದು ಬೆದರಿಕೆ ಹಾಕಿದ್ದಾರೆ ಎಂದು ಅಜೀಮ್ ಆರೋಪಿಸಿದ್ದಾನೆ.

    Viral News - Groom shocked to find mother of the bride at the wedding ceremony in Meerut

    Viral News – ಪೊಲೀಸರಿಗೆ ದೂರು, ನಂತರ ರಾಜಿ!

    ಬೆದರಿಕೆಗೆ ಹೆದರಿದ ಅಜೀಮ್ ಕೆಲವು ದಿನಗಳ ಕಾಲ ಮೌನವಾಗಿದ್ದನು. ಆದರೆ ಕಿರುಕುಳ ಹೆಚ್ಚಾದಾಗ ತಾನೇ ಪೊಲೀಸ್ ಠಾಣೆಗೆ ಹೋಗಿ ದೂರು ನೀಡಿದನು. ಮದುವೆಗಾಗಿ 5 ಲಕ್ಷ ರೂಪಾಯಿಗಳನ್ನು ನೀಡಿದ್ದಾಗಿ ಮತ್ತು ಮಗಳೊಂದಿಗೆ ಮದುವೆ ಎಂದು ಹೇಳಿ ತಾಯಿಯೊಂದಿಗೆ ಮದುವೆ ಮಾಡಿಸಿ ವಂಚಿಸಿದ್ದಾರೆ ಎಂದು ದೂರಿದನು. ಅಲ್ಲದೆ, ಈ ಮೋಸವನ್ನು ಪ್ರಶ್ನಿಸಿದ್ದಕ್ಕೆ ತನಗೆ ಬೆದರಿಕೆ ಹಾಕುತ್ತಿದ್ದಾರೆ ಎಂದು ತಿಳಿಸಿದನು. ಪೊಲೀಸರು ಎರಡೂ ಕಡೆಯವರನ್ನು ಕರೆಸಿ ಮಾತುಕತೆ ನಡೆಸಿದ ನಂತರ ರಾಜಿ ಸಂಧಾನ ನಡೆದಿದೆ ಎಂದು ತಿಳಿದುಬಂದಿದೆ. ಅಜೀಮ್ ತನ್ನ ದೂರಿನ ಅರ್ಜಿಯನ್ನು ಹಿಂಪಡೆದಿದ್ದಾನೆ ಎಂದು ಹೇಳಲಾಗಿದೆ.

    Bride swap incident Bride's mother Groom shocked Indian wedding shock Meerut wedding incident Nikah scandal Uttar Pradesh wedding fraud Viral News Wedding Scam Wedding scam in India
    Share. Facebook Twitter Pinterest WhatsApp
    by Admin
    • Website
    • Facebook

    Welcome to ISM Kannada News, if you want to contact us, then feel free to say anything about www.ismkannadanews.com

    Related Posts

    Death : ಕಾಲೇಜಿನ ನಾಲ್ಕನೇ ಮಹಡಿಯಿಂದ ಬಿದ್ದು ಏರೋಸ್ಪೇಸ್ ಎಂಜಿನಿಯರ್ ದುರಂತ ಸಾವು: ಪೋಷಕರ ಅನುಮಾನ!

    May 18, 2025

    Jan Aushadhi Kendra – ಸರ್ಕಾರಿ ಆಸ್ಪತ್ರೆ ಆವರಣದ ಜನ ಔಷಧಿ ಕೇಂದ್ರಗಳು ಮುಚ್ಚಲಿವೆ: ಇಲ್ಲಿದೆ ಕಾರಣ…!

    May 18, 2025

    Crime : ಅಕ್ರಮ ಸಂಬಂಧಕ್ಕೆ ಅಡ್ಡಿಯಾದ ಪತಿಯನ್ನು ಸುಪಾರಿ ಕೊಟ್ಟು ಕೊಲೆ ಮಾಡಿಸಿದ ಪತ್ನಿ….!

    May 17, 2025
    Leave A Reply Cancel Reply

    IPL 2025 Live Score
    Don't Miss

    Chikkaballapur : ಗಾಳಿ-ಮಳೆಗೆ ಚೆಂಡು ಹೂ ಬೆಳೆ ನಾಶ – ಸಂಕಷ್ಟದಲ್ಲಿ ರೈತ, ಪರಿಹಾರಕ್ಕೆ ಮೊರೆ…!

    State May 19, 2025

    Chikkaballapur – ಕಳೆದ ಮೂರು ದಿನಗಳಿಂದ ಸುರಿದ ಭಾರಿ ಗಾಳಿ ಮತ್ತು ಮಳೆಯಿಂದಾಗಿ ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲೂಕಿನ ಉಲ್ಲೋಡು…

    Soldier : ಬಾಗೇಪಲ್ಲಿಯಲ್ಲಿ ಹುತಾತ್ಮ ಯೋಧ ಮುರಳಿ ನಾಯಕ್ ಸ್ಮರಣೆ: ದೇಶಕ್ಕಾಗಿ ಬಲಿದಾನಗೈದ ವೀರನಿಗೆ ನಮನ…!

    May 19, 2025

    Teacher : ಶಿಕ್ಷಕಿಯ ಸಾಧನೆ: ರಾಷ್ಟ್ರ ಮಟ್ಟದ 100 ಮೀಟರ್ ಓಟದ ಸ್ಪರ್ಧೆಗೆ ಆಯ್ಕೆ…..!

    May 19, 2025

    ECIL Recruitment 2025: ಪದವೀಧರ ಇಂಜಿನಿಯರ್ ಮತ್ತು ಟೆಕ್ನಿಷಿಯನ್ ಹುದ್ದೆಗಳಿಗೆ ಅರ್ಜಿ ಆಹ್ವಾನ…!

    May 19, 2025

    Okra Water : ಬೆಂಡೆಕಾಯಿ ನೀರು ಮತ್ತು ಅರಿಶಿನ: ನಿಮ್ಮ ಆರೋಗ್ಯಕ್ಕೆ ಅದ್ಭುತ ಪಾನೀಯ…!

    May 19, 2025

    Shocking : ಮದುವೆಯಾದ ಕೆಲವೇ ಗಂಟೆಗಳಲ್ಲಿ ವಧುವಿನಿಂದ ವಿಚಿತ್ರ ಬೇಡಿಕೆ, ನಾವು ಅಣ್ಣ-ತಂಗಿಯಂತೆ ಇರೋಣ ಎಂದ ವಧು…!

    May 19, 2025
    ISM Kannada News
    Facebook X (Twitter) Instagram Pinterest
    • Home
    • About Us
    • Contact Us
    • Privacy Policy
    © 2025 ISM Kannada News. Designed by ISM News.

    Type above and press Enter to search. Press Esc to cancel.