Sunday, June 1, 2025
HomeStateUrdu : ಉರ್ದು ಭಾಷೆ ಬೆಳೆಸಲು ಎಲ್ಲರ ಸಹಕಾರ ಅಗತ್ಯ ಕರ್ನಾಟಕ ಉರ್ದು ಅಕಾಡೆಮಿ ಮೌಲಾನಾ...

Urdu : ಉರ್ದು ಭಾಷೆ ಬೆಳೆಸಲು ಎಲ್ಲರ ಸಹಕಾರ ಅಗತ್ಯ ಕರ್ನಾಟಕ ಉರ್ದು ಅಕಾಡೆಮಿ ಮೌಲಾನಾ ಮುಫ್ತಿ ಮಹಮದ್ ಅಲಿ ಖಾಜಿ

Urdu  – ಉರ್ದು ಭಾಷೆ ಬೆಳೆಸಿ ಅಭಿವೃದ್ಧಿಪಡಿಸುವುದಕ್ಕಾಗಿ ಉರ್ದು ಅಕಾಡೆಮಿ ವತಿಯಿಂದ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಉರ್ದು ಶಾಲೆಗಳ ದಾಖಲಾತಿ ಹೆಚ್ಚಳವಾಗಬೇಕು, ಗುಡಿಬಂಡೆಯಲ್ಲಿ ಉರ್ದು ಅಂಗನವಾಡಿಗಳ ಸ್ಥಾಪನೆ ಮಾಡಬೇಕೆಂದು  ಕರ್ನಾಟಕ ಉರ್ದು ಅಕಾಡೆಮಿ ಅಧ್ಯಕ್ಷ ಮೌಲಾನ ಮುಫ್ತಿ ಮಹಮದ್ ಅಲಿಖಾಜಿ ತಿಳಿಸಿದರು.

Urdu Kavighosti

ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪಟ್ಟಣದ ಬಾಪೂಜಿನಗರದ ಶಾದಿ ಮಹಲ್ ನಲ್ಲಿ ಕರ್ನಾಟಕ ಉರ್ದು ಅಕಾಡಮಿ, ಉರ್ದು ಸಾಹಿತ್ಯ ಪರಿಷತ್ತು ವತಿಯಿಂದ ಹಮ್ಮಿಕೊಂಡಿದ್ದ ಉರ್ದು ಉತ್ಸವ ಹಾಗೂ ಕವಿ ಗೋಷ್ಟಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಉರ್ದು ಕೇವಲ ಮುಸ್ಲಿಂ ಭಾಷೆಯಲ್ಲ.  ದೇಶದ ಐಕ್ಯತೆ ಬೆಸೆಯುವ ಸಾಧನವಾಗಿ ಕೆಲಸ ಮಾಡುತ್ತಿದೆ. ಉರ್ದು ಕೇವಲ ಒಂದು ಸಮುದಾಯಕ್ಕೆ ಸೇರಿದ ಭಾಷೆಯೆಂದು ತಿಳಿಯುವುದು ತಪ್ಪು. ಉರ್ದು ಶಾಲೆಗಳ ದಾಖಲಾತಿ ಹೆಚ್ಚಿಸಲು ಪೋಷಕರ ಸಹಕಾರ ಬೇಕಿದೆ.  ಉರ್ದು ಶಿಕ್ಷಕರು ತಮ್ಮ ಮಕ್ಕಳಲ್ಲಿ ಒಬ್ಬರನ್ನಾದರೂ ಉರ್ದು ಶಾಲೆಗೆ ಸೇರಿಸಿದಾಗ ಮಾತ್ರ ಉರ್ದು ಭಾಷೆ ಉಳಿಯಲು ಸಾಧ್ಯ ಎಂದರು.

Urdu Kavighosti 3

ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಬಾಲಾಜಿ ಮಾತನಾಡಿ, ಉರ್ದು ಶಾಲೆಗೆ ಬೇಕಾಗುವ ಮೂಲಭೂತ ಸೌಲಭ್ಯಗಳನ್ನು ಒದಗಿಸಿ, ಉರ್ದು ಶಾಲೆ ಮುಚ್ಚುವ ಹಂತಕ್ಕ ಬಂದಿದೆ ಇದನ್ನು ಉಳಿಸಲು ಉರ್ದು ಅಕಾಡಮಿಯಿಂದ ಸಹಾಯ ಮಾಡಬೇಕು. ಉರ್ದು ಸಾಹಿತ್ಯ ಉಳಿಸಿ ಬೆಳೆಸಲು ಎಲ್ಲರ ಸಹಕಾರ ಮುಖ್ಯ.  ಉರ್ದು ಸಾಹಿತ್ಯ ಪರಿಷತ್ ನ ಮಹ್ಮದ್ ನಾಸೀರ್ ರವರಂತೆ ಪ್ರತಿಯೊಂದ ತಾಲೂಕಿನಲ್ಲಿ ಉರ್ದು ಭಾಷೆಯನ್ನು ಉಳಿಸಿ ಬೆಳೆಸಲು ಯುವಜನತೆ ಮುಂದಾಗಬೇಕೆಂದರು.

ಕನ್ನಡ, ಇಂಗ್ಲೀಷ್ ಸೇರಿದಂತೆ ಇತರೆ ಮಾತೃ ಭಾಷೆಗಳಿಗೆ ನೀಡುವ ಪ್ರಾಮುಖ್ಯತೆಯನ್ನು ಉರ್ದು ಭಾಷೆಗೆ ನೀಡಬೇಕೆಂದು ಕರ್ನಾಟಕ ಉರ್ದು ಅಕಾಡೆಮಿಯ ಸದಸ್ಯ ನತಿಕ್ ಅಲಿಪುರ್ ತಿಳಿಸಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎಸ್. ಕೃಷ್ಣಪ್ಪ ಮಾತನಾಡಿದರು. ಉರ್ದು ಶಾಲಾ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು. ರಾಜ್ಯದ ವಿವಿಧ ಭಾಗಗಳಿಂದ ಬಂದಿರುವ ಕವಿಗಳು ತಮ್ಮ ಸ್ವರಚಿತ ಉರ್ದು ಕವಿತೆಗಳನ್ನು ವಾಚನ ಮಾಡಿದರು.

Urdu Kavighosti 2

ಈ ಸಂರ್ಭದಲ್ಲಿ ಪಟ್ಟಣ ಪಂಚಾಯತಿ ಅಧ್ಯಕ್ಷ ವಿಕಾಸ್, ಮಾಜಿ ಅಧ್ಯಕ್ಷ ಹಾಗೂ ಕೆ ಡಿ. ಪಿ ಸದಸ್ಯ ರಿಯಾಜ್ ಪಾಷ, ನೌಕರರ ಸಂಘದ ಅಧ್ಯಕ್ಷ ಕೆ.ವಿ.ನಾರಾಯಣಸ್ವಾಮಿ, ಅಬ್ದುಲ್ ಸುಭಾನ್ ಸಾಬ್ .ಉರ್ದು ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷ ಮೊಹ್ಮದ್ ನಾಸೀರ್, ಅಲ್ಪ ಸಂಖ್ಯಾತರ ಅಧ್ಯಕ್ಷ ಅಬ್ದುಲ್ ವಹಾಬ್, ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಿ. ಮಂಜುನಾಥ, ಮುಖಂಡರಾದ ಚಾಂದ್ ಪಾಷ, ಶಫೀವುಲ್ಲ, ಖಲೀಲ್ ಪಾಷ ಸೇರಿದಂತೆ ಹಲವರು ಭಾಗವಹಿಸಿದ್ದರು.

by Adminhttp://ismkannadanews.com
Welcome to ISM Kannada News, if you want to contact us, then feel free to say anything about www.ismkannadanews.com
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular