ಯುಪಿಎಸ್ಸಿ (UPSC) – ಇದು ಕೇವಲ ಇಂಗ್ಲಿಷಿನ ನಾಲ್ಕು ಅಕ್ಷರಗಳಲ್ಲ, ಬದಲಾಗಿ ಭಾರತದ ಲಕ್ಷಾಂತರ ಯುವಜನರ ಜೀವದಾಸೆ ಮತ್ತು ಭವಿಷ್ಯದ ಕನಸು. ಆದರೆ, ಆ ಕನಸಿನ ಹಾದಿಯಲ್ಲಿ ಎಲ್ಲರಿಗೂ ಯಶಸ್ಸು ಒಲಿಯುವುದಿಲ್ಲ. ಸತತ 8 ವರ್ಷಗಳ ಕಾಲ (UPSC Aspirant Story) ಯುಪಿಎಸ್ಸಿ ಪರೀಕ್ಷೆಗಾಗಿ ಹಗಲಿರುಳು ಶ್ರಮಿಸಿ, ಕೊನೆಗೆ ನಿರಾಸೆಯಿಂದ ಗುರುಗ್ರಾಮದಲ್ಲಿ ಕೇವಲ 18,000 ರೂ. ಸಂಬಳದ ಸಣ್ಣ ಕೆಲಸಕ್ಕೆ ಸೇರಿದ ಯುವತಿಯೊಬ್ಬಳ ಕಣ್ಣೀರಿನ ಕಥೆ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಈಕೆಯ ಕಥೆ ಕೇವಲ ಒಬ್ಬಳದ್ದಲ್ಲ, ತಮ್ಮ ಯೌವನವನ್ನೆಲ್ಲಾ ಪುಸ್ತಕದ ಬದಿಯಲ್ಲಿ ಕಳೆದು, ಅಂತಿಮವಾಗಿ ಬೇರೊಂದು ಹಾದಿ ಹಿಡಿಯುವ ಸಾವಿರಾರು ಆಕಾಂಕ್ಷಿಗಳ (Aspirants) ವಾಸ್ತವದ ದರ್ಪಣವಾಗಿದೆ.
UPSC Aspirant Story – ಸುದೀರ್ಘ ಹೋರಾಟ ಮತ್ತು ಭಗ್ನವಾದ ಕನಸು
ಹರವಿಂದರ್ ಕೌರ್ ಎಂಬ ಮಹಿಳಾ ಆಕಾಂಕ್ಷಿಯೇ ಈ ಭಾವನಾತ್ಮಕ ಕಥೆಯ ನಾಯಕಿ. ಐಎಎಸ್ ಅಧಿಕಾರಿಯಾಗಬೇಕೆಂಬ ಹಂಬಲದಿಂದ ತಮ್ಮ ಜೀವನದ ಅತ್ಯಮೂಲ್ಯವಾದ ‘ಪ್ರೈಮ್ ಟೈಮ್’ (ಯೌವನದ 8 ವರ್ಷಗಳು) ಅನ್ನು ಕೇವಲ ಸಿವಿಲ್ಸ್ ಸಿದ್ಧತೆಗಾಗಿಯೇ ಮುಡಿಪಾಗಿಟ್ಟಿದ್ದರು. ರಾತ್ರಿ-ಹಗಲು ಎನ್ನದೆ ಓದಿದರೂ ಅವರಿಗೆ ನಿರೀಕ್ಷಿತ ಫಲಿತಾಂಶ ಸಿಗಲಿಲ್ಲ.
ಕೊನೆಗೆ ಜೀವನದಲ್ಲಿ ಮುಂದೆ ಸಾಗಲೇಬೇಕಾದ (Move On) ಅನಿವಾರ್ಯತೆಗೆ ಸಿಲುಕಿ, ಗುರುಗ್ರಾಮ್ನಲ್ಲಿ ತಿಂಗಳಿಗೆ ಕೇವಲ 18,000 ರೂಪಾಯಿ ಸಂಬಳದ ಪ್ರೈವೇಟ್ ಕೆಲಸಕ್ಕೆ ಸೇರಿಕೊಂಡಿದ್ದಾರೆ. ಇಷ್ಟು ವರ್ಷಗಳ ಕನಸು ನುಚ್ಚುನೂರಾದಾಗ ಆಗುವ ಮಾನಸಿಕ ವೇದನೆ, ಮತ್ತು ಆ ಶೂನ್ಯತೆಯಿಂದ ಹೊರಬಂದು ಹೊಸ ಜೀವನ ಕಟ್ಟಿಕೊಳ್ಳುವುದು ಎಷ್ಟು ಕಷ್ಟ ಎಂಬುದನ್ನು ಅವರು ಸೋಷಿಯಲ್ ಮೀಡಿಯಾದಲ್ಲಿ ಬಹಳ ಭಾವುಕವಾಗಿ ಹಂಚಿಕೊಂಡಿದ್ದಾರೆ. Read this also : ನೋಯ್ಡಾದಲ್ಲಿ ನಡುರಸ್ತೆಯಲ್ಲೇ ಮಹಿಳೆಯರಿಗೆ ನಡುಕ ಹುಟ್ಟಿಸಿದ ಕಿರಾತಕರು: ಕಾರಿನಲ್ಲಿ ಬೆತ್ತಲೆಯಾಗಿ ಆಟೋ ಬೆನ್ನಟ್ಟಿದ ಕಾಮುಕರು!
ಯುಪಿಎಸ್ಸಿ ಪರೀಕ್ಷೆ ನಿಜಕ್ಕೂ ಅಷ್ಟು ಕಠಿಣವೇ?
ಯುಪಿಎಸ್ಸಿ ಭಾರತದ ಅತ್ಯಂತ ಕಠಿಣ ಪರೀಕ್ಷೆಗಳಲ್ಲಿ ಒಂದಾಗಿದೆ. ಇದರ ಸ್ಪರ್ಧೆ ಎಷ್ಟರಮಟ್ಟಿಗೆ ಇರುತ್ತದೆ ಎಂದರೆ:
- ಪ್ರಾಥಮಿಕ ಹಂತ: ಪ್ರತಿ ವರ್ಷ ಸುಮಾರು 10 ಲಕ್ಷಕ್ಕೂ ಹೆಚ್ಚು ಅಭ್ಯರ್ಥಿಗಳು ಈ ಪರೀಕ್ಷೆ ಬರೆಯುತ್ತಾರೆ.
- ಮುಖ್ಯ ಪರೀಕ್ಷೆ (Mains): ಇದರಲ್ಲಿ ಆಯ್ಕೆಯಾಗುವುದು ಕೇವಲ 14-15 ಸಾವಿರ ಮಂದಿ ಮಾತ್ರ.
- ಸಂದರ್ಶನ (Interview): ಮುಖ್ಯ ಪರೀಕ್ಷೆ ದಾಟಿ ಸಂದರ್ಶನಕ್ಕೆ ಹೋಗುವವರು 2 ರಿಂದ 3 ಸಾವಿರ ಜನ.
- ಅಂತಿಮ ಆಯ್ಕೆ: ಅಂತಿಮವಾಗಿ ಹುದ್ದೆ ಗಿಟ್ಟಿಸಿಕೊಳ್ಳುವುದು ಕೇವಲ 800 ರಿಂದ 1000 ಮಂದಿ ಮಾತ್ರ.

ಹೀಗಿರುವಾಗ, ಎಷ್ಟೇ ಸೀರಿಯಸ್ ಆಗಿ ಓದಿದ್ದರೂ ರೇಸ್ನಲ್ಲಿ ಹಿಂದೆ ಉಳಿಯುವವರ ಸಂಖ್ಯೆಯೇ ಹೆಚ್ಚು. ತಮ್ಮ ಯೌವನದ ಸುವರ್ಣ ಕ್ಷಣಗಳನ್ನು ನಾಲ್ಕು ಗೋಡೆಗಳ ನಡುವೆ ಪುಸ್ತಕದೊಂದಿಗೆ ಕಳೆದು, ಕೊನೆಗೆ ಪರೀಕ್ಷೆಯಲ್ಲಿ ವಿಫಲರಾದಾಗ ಆ ಅಭ್ಯರ್ಥಿಗಳು ಅನುಭವಿಸುವ ಮಾನಸಿಕ ತೊಳಲಾಟ ಅಷ್ಟಿಷ್ಟಲ್ಲ. ಅಲ್ಲಿಂದ ಜೀವನದ ವಾಸ್ತವಕ್ಕೆ ಮರಳುವುದು ಬಹುದೊಡ್ಡ ಸವಾಲಾಗಿ ಪರಿಣಮಿಸುತ್ತದೆ.
ನೆಟ್ಟಿಗರ ಸಾಂತ್ವನ: “ಸಿಕ್ರೆ ಕೃತಜ್ಞತೆ ಇರಲಿ, ಸಿಗದಿದ್ದರೆ ತಾಳ್ಮೆ ಇರಲಿ”
ಹರವಿಂದರ್ ಕೌರ್ ಅವರ ಈ ಭಾವುಕ ಪೋಸ್ಟ್ (Viral Video Here) ಸಾವಿರಾರು ನೆಟ್ಟಿಗರ ಹೃದಯ ಮುಟ್ಟಿದೆ. ಕಾಮೆಂಟ್ ಸೆಕ್ಷನ್ನಲ್ಲಿ ಹಲವರು ಅವರಿಗೆ ಧೈರ್ಯ ತುಂಬುತ್ತಿದ್ದಾರೆ. ಓರ್ವ ಬಳಕೆದಾರರು ಸ್ಪಂದಿಸುತ್ತಾ, “ಯಶಸ್ಸು ಎಂಬುದು ಯಾವತ್ತೂ ಒಂದೇ ನೇರ ರೇಖೆಯಲ್ಲಿ ಸಾಗುವುದಿಲ್ಲ. ಸಿಕ್ರೆ ದೇವರಿಗೆ ಕೃತಜ್ಞತೆ ಹೇಳಿ, ಸಿಗದೆ ಇದ್ದರೆ ತಾಳ್ಮೆಯಿಂದಿರಿ (ಮಿಲೇ ತೋ ಶುಕ್ರ್, ನಾ ಮಿಲೇ ತೋ ಸಬ್ರ್)” ಎಂದು ಸಾಂತ್ವನ ಹೇಳಿದ್ದಾರೆ. ಸಾವು ಬರುವವರೆಗೂ ಜೀವನದಲ್ಲಿ ಎದುರಾಗುವ ಸೋಲುಗಳೆಲ್ಲ ಕೇವಲ ಮಾನಸಿಕವಷ್ಟೇ (Psychological). ಈ ಸೋಲಿನಿಂದಲೇ ಪಾಠ ಕಲಿತು, ಹೊಸ ಹಾದಿಯಲ್ಲಿ ಆಕೆ ಮತ್ತಷ್ಟು ಎತ್ತರಕ್ಕೆ ಬೆಳೆಯಲಿ ಎಂದು ಸೋಷಿಯಲ್ ಮೀಡಿಯಾ ಬಳಕೆದಾರರು ತುಂಬು ಹೃದಯದಿಂದ ಹಾರೈಸುತ್ತಿದ್ದಾರೆ.
