Monday, June 30, 2025
HomeStateLocal News: ಯುವಜನತೆ ಗ್ರಂಥಾಲಯಗಳನ್ನು ಸದ್ಬಳಕೆ ಮಾಡಿಕೊಳ್ಳಿ: ಆಸಿಫ್ ವುಲ್ಲಾ

Local News: ಯುವಜನತೆ ಗ್ರಂಥಾಲಯಗಳನ್ನು ಸದ್ಬಳಕೆ ಮಾಡಿಕೊಳ್ಳಿ: ಆಸಿಫ್ ವುಲ್ಲಾ

ಇಂದಿನ ಯುವಜನತೆ ಹೆಚ್ಚಾಗಿ ಮೊಬೈಲ್ ಗೀಳಿನಿಂದ ನಮ್ಮ ಸಂಸ್ಕೃತಿ, ಭಾಷೆ, ಧರ್ಮದ ಬಗ್ಗೆ ನಿರ್ಲಕ್ಷ್ಯ ತೋರುತ್ತಿದ್ದಾರೆ. ಆದ್ದರಿಂದ ಮೊಬೈಲ್ ಗಳಲ್ಲಿ ಕಾಲ (Local News) ಕಳೆಯುವ ಬದಲು ಗ್ರಂಥಾಲಯಗಳಲ್ಲಿ ಪುಸ್ತಕಗಳನ್ನು ಓದುವ ಮೂಲಕ ಜ್ಞಾನವನ್ನು ಬೆಳೆಸಿಕೊಳ್ಳಬೇಕೆಂದು ಗುಡಿಬಂಡೆ ಜಾಮೀಯಾ ಮಸೀದಿಯ ಮೌಲಾನಾ ಆಸಿಫ್ ವುಲ್ಲಾ ಸಲಹೆ ನೀಡಿದರು.

ಚಿಕ್ಕಬಳ್ಳಾಪುರದ ಗುಡಿಬಂಡೆ ಪಟ್ಟಣದ ಜಾಮೀಯಾ ಮಸೀದಿಯ (Local News) ಬಳಿ ಕರ್ನಾಟಕ ಉರ್ದು ಸಾಹಿತ್ಯ ಪರಿಷತ್ ಕಚೇರಿ ಹಾಗೂ ಸಾರ್ವಜನಿಕ ಗ್ರಂಥಾಲಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು. ಇಂದಿನ ಕಾಲವನ್ನು ಮೊಬೈಲ್ ಯುಗ ಎಂದೇ ಕರೆಯಲಾಗುತ್ತದೆ. ಚಿಕ್ಕ ಮಗುವಿನಿಂದ ದೊಡ್ಡವರೂ ಮೊಬೈಲ್ ಬಳಕೆ ಮಾಡುತ್ತಿದ್ದಾರೆ. (Local News)  ಈ ಮೊಬೈಲ್ ನಿಂದ ಎಷ್ಟು ಉಪಯೋಗವಿದೆಯೋ ಅಷ್ಟೇ ಕೆಟ್ಟದ್ದು ಸಹ ಆಗುತ್ತದೆ. ಯುವಕರು ಹೆಚ್ಚಾಗಿ ಮೊಬೈಲ್ ಗಳಿಗೆ ದಾಸರಾಗಬಾರದು. ತಮ್ಮ ಬಿಡುವಿನ ಸಮಯದಲ್ಲಿ ಗ್ರಂಥಾಲಯಗಳಲ್ಲಿ ಕಾಲ ಕಳೆಯಬೇಕು. (Local News) ಪುಸ್ತಕಗಳನ್ನು ಓದುವ ಮೂಲಕ ಜ್ಞಾನ ವೃದ್ದಿಸಿಕೊಳ್ಳಬೇಕೆಂದು ತಿಳಿಸಿದರು.

Urdu Sahitya Parishat Library Opening 0

ಬಳಿಕ ಕರ್ನಾಟಕ ಉರ್ದು (Local News) ಸಾಹಿತ್ಯ ಪರಿಷತ್ ನ ರಾಜ್ಯಾಧ್ಯಕ್ಷ ಮೊಹಮದ್ ನಾಸೀರ್‍, ಉರ್ದು ಭಾಷೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ನಮ್ಮ ಉರ್ದು ಸಾಹಿತ್ಯ ಪರಿಷತ್ ಸುಮಾರು ವರ್ಷಗಳಿಂದ ಕೆಲಸ ಮಾಡುತ್ತಿದೆ. ಕನ್ನಡ ಹಾಗೂ ಉರ್ದು ಸಾಹಿತ್ಯ ಪರಿಷತ್ ಸಹಯೋಗದಲ್ಲಿ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಇದೀಗ ಉರ್ದು ಸಾಹಿತ್ಯ ಪರಿಷತ್ ವತಿಯಿಂದ ಸಾರ್ವಜನಿಕ ಗ್ರಂಥಾಲಯವನ್ನು ಆರಂಭಿಸಲಾಗಿದೆ. (Local News) ಈ ಗ್ರಂಥಾಲಯದಲ್ಲಿ ಕೇವಲ ಉರ್ದು ಭಾಷೆಯ ಗ್ರಂಥಗಳು, ಪುಸ್ತಕಗಳು ಮಾತ್ರವಲ್ಲದೇ ಕನ್ನಡ ಹಾಗೂ ಇಂಗ್ಲೀಷ್ ಭಾಷೆಯ ಪುಸ್ತಕಗಳನ್ನು ಸಹ ಇಡಲಾಗುತ್ತದೆ. ಜೊತೆಗೆ ಪುಸ್ತಕ ನೀಡುವಂತಹ ದಾನಿಗಳು ಸಹ ತಮ್ಮಲ್ಲಿರುವಂತಹ ಹಾಗೂ ಕೊಡುಗೆ ನೀಡಬೇಕೆಂದುಕೊಂಡಂತ ಪುಸ್ತಕಗಳನ್ನು ದಾನ ಮಾಡಬಹುದು ಎಂದರು

ಇನ್ನೂ (Local News) ಉರ್ದು ಸಾಹಿತ್ಯ ಪರಿಷತ್ ವತಿಯಿಂದ ಹೊಸದೊಂದು ಕೆಲಸವನ್ನು ಕೈಗೆತ್ತಿಕೊಳ್ಳಲಾಗಿದೆ. ಒಂದು ನಮೂನೆ ಸಿದ್ದಪಡಿಸಿಕೊಳ್ಳಲಾಗಿದೆ. ಅದರಲ್ಲಿ ಒಂದು ಕುಟುಂಬದ ಸರ್ವೆ ಮಾಡಲಾಗುತ್ತದೆ. ಅವರಿಗೆ ಏನೆಲ್ಲಾ ಸರ್ಕಾರದ ಸೌಲಭ್ಯಗಳು ದೊರೆಯುತ್ತಿವೆ. ಇನ್ನೂ ಏನು ಸೌಲಭ್ಯಗಳಿಂದ ವಂಚಿತರಾಗಿದ್ದಾರೆ ಎಂಬೆಲ್ಲಾ (Local News) ಮಾಹಿತಿಯನ್ನು ಸಂಗ್ರಹಿಸಿ ಅಂತಹ ಕುಟುಂಬಗಳಿಗೆ ಸರ್ಕಾರದ ಸೌಲಭ್ಯಗಳನ್ನು ದೊರಕಿಸಿಕೊಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. (Local News) ಈ ಕಾರ್ಯಕ್ಕೆ ಎಲ್ಲರೂ ನಮಗೆ ಸಹಕಾರ ನೀಡಬೇಕೆಂದು ಮನವಿ ಮಾಡಿದರು.

ಈ ಸಮಯದಲ್ಲಿ (Local News) ಮುಖಂಡರಾದ ಅಬ್ದುಲ್ ಸುಭಾನ್ ಸಾಬ್, ಮುನೀರ್‍ ಅಹ್ಮದ್, ಕೆಡಿಪಿ ನಾಮಿನಿ ಸದಸ್ಯ ರಿಯಾಜ್ ಪಾಷ, ಕಸಾಪ ತಾಲೂಕು ಅಧ್ಯಕ್ಷ ಬಿ.ಮಂಜುನಾಥ್, ಪತ್ರಕರ್ತರ ಸಂಘದ ತಾಲೂಕು ಅಧ್ಯಕ್ಷ ಬಾಲಾಜಿ, ಉರ್ದು ಸಾಹಿತ್ಯ ಪರಿಷತ್ ನ ಷಫಿವುಲ್ಲಾ, ಶಬೀರ್‍, ಜಬಿವುಲ್ಲಾ, ಸುಹೇಲ್, ಕಲೀಲ್, ರಾಜೇಶ್, ಶಶಿ ಸೇರಿದಂತೆ ಹಲವರು ಇದ್ದರು.

by Adminhttp://ismkannadanews.com
Welcome to ISM Kannada News, if you want to contact us, then feel free to say anything about www.ismkannadanews.com
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular