Karaga Mahostava – ಗುಡಿಬಂಡೆ ಪಟ್ಟಣದಲ್ಲಿ ಕರಗ ನರ್ತನ, ವಾದ್ಯಗೋಷ್ಟಿ, ಗಾರುಡುಗೊಂಬೆ, ಕೀಲುಕುದುರೆ, ಕರಗದ ಸಡಗರ, ಸಂಭ್ರಮಕ್ಕೆ ಪಟ್ಟಣದಲ್ಲಿ ನಡೆದ ಕರಗ ಮಹೋತ್ಸವಕ್ಕೆ ಹರಿದು ಬಂದ ಜನಸಾಗರ ಸಾಕ್ಷಿಯಾಯಿತು. ಪಟ್ಟಣದ ಸೊಪ್ಪಿನ ಪೇಟೆಯ ಶ್ರೀ ಜಾಲಾರಿ ಸಪ್ಪಲಮ್ಮನವರ 27ನೇ ವರ್ಷದ ಮೂರು ದಿನಗಳ ಜಾತ್ರಾ ಮಹೋತ್ಸವದ ಪ್ರಯುಕ್ತ ಬುಧವಾರ ರಾತ್ರಿ ಏರ್ಪಡಿಸಿದ್ದ ಕರಗ ಮಹೋತ್ಸವಕ್ಕೆ ಅಪಾರ ಭಕ್ತಾದಿಗಳೊಂದಿಗೆ ವೈಭೋವತೀತವಾಗಿ ನೆರವೇರಿತು. ಪ್ರತೀವರ್ಷದಂತೆ ಈ ವರ್ಷವೂ ಮೂರು ದಿನಗಳು ನಡೆದೆ ಜಾತ್ರಾ ಮಹೋತ್ಸವದಲ್ಲಿ ಮಂಗಳವಾರ ರಾತ್ರಿ ಹಸಿಕರಗ, ಮಂಗಳವಾರ ಮಧ್ಯಾಹ್ನ ತಂಬಿಟ್ಟು ದೀಪೋತ್ಸವ ಹಾಗೂ ಬುಧವಾರ ಹೂವಿನ ಕರಗ, ಗುರುವಾರ ಬೆಳಗ್ಗೆ ಒನಕೆ ಕರಗವು ಅದ್ದೂರಿಯಾಗಿ ನಡೆಯಿತು.
Karaga Mahostava – ಕರಗ ಮಹೋತ್ಸವ
ಪಟ್ಟಣದ ಜಾಲಾರಿ ಸಪ್ಪಲಮ್ಮ ದೇವಿಯ ಕರಗವನ್ನು ಆಂದ್ರಪ್ರದೇಶದ ರಾಮ್ ಕುಪ್ಪಂನ ಬಾಲಾಜಿ ಅವರು ಸೊಪ್ಪಿನ ಪೇಟೆಯ ಜಾಲಾರಿ ಸಪ್ಪಲಮ್ಮ ದೇವಿಯ ದೇವಾಲಯದಿಂದ ಮಂಗಳವಾರ ರಾತ್ರಿ ಸುಮಾರು ರಾತ್ರಿ 10:30ರ ಸಮಯದಲ್ಲಿ ಸುಮಾರು 20 ರಿಂದ 30 ಕೆಜಿ ತೂಕದ ಕರಗವನ್ನು ಹೊತ್ತು ಹೊರಬಂದು ಇಡೀ ರಾತ್ರಿ ಪಟ್ಟಣದ 11ವಾರ್ಡುಗಳನ್ನು ಮತ್ತು ಹಳೇ ಗುಡಿಬಂಡೆ ಸುತ್ತಿದರು. ಪ್ರತೀ ಕಡೆಯೂ ಆಯಾಸವಿಲ್ಲದೆ ನಗುಮುಖದಲ್ಲಿ ಉತ್ಸಾಹದಿಂದ ನೃತ್ಯಗಳನ್ನು ಮಾಡಿ ಜನರನ್ನು ಮಂತ್ರಮುಗ್ದಾರಾಗಿಸಿ ಭಕ್ತಿ ಭಾವನೆಯಲ್ಲಿ ಮಿಂದೇಳುವಂತೆ ಮಾಡಿದರು.
Karaga Mahostava – ಕರಗ ನರ್ತನಕ್ಕೆ ಜನರು ಪುಲ್ ಖುಷ್
ಬುಧವಾರ ರಾತ್ರಿ ಸಪ್ಪಲಮ್ಮ ದೇವಾಲಯದಿಂದ ಹೊರಬಂದ ಕರಗ ಸುಮಾರು ಅರ್ಧಗಂಟೆಗೂ ಹೆಚ್ಚು ಸಮಯ ದೇವಾಲಯದ ಮುಂಭಾಗದಲ್ಲಿ ಹಾಗೂ ವಿವಿಧ ವೃತ್ತಗಳಲ್ಲಿ ನಾಗಿಣಿ ನೃತ್ಯ ಸೇರಿದಂತೆ ಹಲವು ನೃತ್ಯಗಳನ್ನು ಅನೇಕ ಭಂಗಿಗಳಲ್ಲಿ ಅತ್ಯದ್ಬುತವಾಗಿಪ್ರದರ್ಶಿಸಿ ನೆರೆದಿದ್ದ ನೂರಾರು ಭಕ್ತರ ಕೇಕೆ, ಚೆಪ್ಪಾಳೆಗಳನ್ನು ಗಿಟ್ಟಿಸಿಕೊಂಡರು. ಮುಖ್ಯವಾಗಿ ವಾದ್ಯಗೋಷ್ಠಿ ಹಾಗೂ ದೇವಾಲಯದ ಧರ್ಮದರ್ಶಿ ಶ್ರೀನಿವಾಸ್ ಸ್ವಾಮಿ ಅವರು ಮನೆಯಬಳಿ ಪ್ರದರ್ಶಿಸಿದ ನೃತ್ಯ ನೋಡುಗರ ಎದೆ ಬಡಿತವನ್ನು ಏಕಾಏಕಿ ಹೆಚ್ಚಿಸುವಂತಿತ್ತು. ತಲೆ ಮೇಲೆತ್ತಿ ದೇಹವನ್ನು ಮಲಗಿಸಿ ನಾಗಿನಿ ನೃತ್ಯ, ಕರಗವನ್ನು ಹಿಂದೆ ಮುಂದೆ ಮಾಡುವುದು ಹಾಗೂ ಮೊನಕಾಲಿನಲ್ಲಿ ನೃತ್ಯವನ್ನು ಪ್ರದರ್ಶಿಸಿ ಗುಡಿಬಂಡೆ ಜನತೆಯ ಮನಗೆದ್ದರಲ್ಲದೆ ಎಲ್ಲರೋಂದಿಗೆ ಸೈ ಅನಿಸಿಕೊಂಡರು. ಚಿಕ್ಕಬಳ್ಳಾಪುರದ ಯಕ್ಷಗಾನ ತಂಡ ಕರಗ ಹೊತ್ತ ಬಾಲಾಜಿ ಅವರಿಗೆ ಉತ್ತಮ ಸಾತ್ ನೀಡಿದರು.
Karaga Mahostava – ಮನಸೋರೆಗೊಳಿಸಿದ ಮಹೋತ್ಸವ
ಪಟ್ಟಣದ ಮುಖ್ಯರಸ್ತೆಯಲ್ಲಿ ಬುಧವಾರ ರಾತ್ರಿ ವಾದ್ಯಗೋಷ್ಟಿ ಹಾಗೂ ಯಕ್ಷಗಾನ ನೃತ್ಯ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿತ್ತು. ದೇವಾಲಯ ಧರ್ಮದರ್ಶಿ ಶ್ರೀನಿವಾಸ ಸ್ವಾಮಿ ಪೂಜೆ ಸಲ್ಲಿಸಿ ಗುಡಿಬಂಡೆ ಪಟ್ಟಣ ಹಾಗೂ ತಾಲೂಕಿನ ಎಲ್ಲಾ ಜನತೆಗೆ ಕರಗ ಮಹೋತ್ಸವದ ಶುಭಾಶಯಗಳನ್ನು ತಿಳಿಸಿದರು. ಜಾತ್ರೆ ಪ್ರಯುಕ್ತ ಜಾಲಾರಿ ಸಪ್ಪಲಮ್ಮನವರಿಗೆ ವಿಶೇಷವಾದ ಹೂವಿನ ಅಲಂಕಾರ ಮಹಾ ಮಂಗಳಾರತಿ, ಪೂಜೆ ಕೈಂಕರ್ಯಗಳನ್ನು ನೆರವೇರಿಸಲಾಯಿತು.
Karaga Mahostava – ಒನಕೆ ಕರಗದ ವೈಭವ
ಗುರುವಾರ ಮಧ್ಯಾಹ್ನ 12ರ ಸಮಯದಲ್ಲಿ ಯಾವುದೇ ರೀತಿಯ ಆದರವಿಲ್ಲದೆ ಒಣಕೆಯ ಮೇಲೆ ನೀರು ತುಂಬಿದ ತಾಮ್ರದ ಪಾತ್ರೆಯಲ್ಲಿ ಇಟ್ಟು ಒಣಕೆಯನ್ನು ತಲೆಯಮೇಲೆ ಹೊತ್ತು ಒಣಕೆಯು ಬೀಳದಂತೆ ನೃತ್ಯವನ್ನು ಪ್ರದರ್ಶಿಸಿದರು. ಮುಖ್ಯವಾಗಿ ಒಣಕೆಯನ್ನು ತಲೆಯ ಮೇಲೆ ಹೊತ್ತು ಮೊನಕಾಲಿನಲ್ಲಿ ಪ್ರದರ್ಶಿಸಿದ ನೃತ್ಯವನ್ನು ಕಂಡ ನೋಡುಗರು ಬೆಚ್ಚಿ ಬೆರಗಾಗಿ ನಿಂತರು. Read this also : Karaga Mahostava – ಸೋಮೇನಹಳ್ಳಿಯಲ್ಲಿ ಅದ್ದೂರಿಯಾಗಿ ನಡೆದ ಶ್ರೀ ಗಂಗಾಭವಾನಿ ಹೂವಿನ ಕರಗ ಮಹೋತ್ಸವ 2025
ಪ್ರತಿಯೊಬ್ಬರೂ ಗೋವಿಂದ ಗೋವಿಂದ ಎಂಬ ಹಾಷೋದ್ಗಾರದಿಂದ ದೇವರನ್ನು ನೆನೆದರು ಸುಮಾರು ಅರ್ದ ಗಂಟೆಗೂ ಹೆಚ್ಚು ಸಮಯ ಒಣಕೆಯನ್ನು ತಲೆಯ ಮೇಲೆ ಹೊತ್ತು ಟಮಟೆ ತಾಳಕ್ಕೆ ತಕ್ಕಂತೆ ನೃತ್ಯವನ್ನು ಪ್ರದರ್ಶಿಸಿದ ಬಾಲಾಜಿ ಅವರಿಗೆ ನೆರೆದಿದ್ದ ಜನಸಾಗರ ಹೋವಿನ ಹೊಳೆ ಹರಿಸಿ ಚಪ್ಪಾಳೆ ಸಿಳ್ಳೆಗಳಿಂದ ಮೆಚ್ಚುಗೆಗೆ ಪಾತ್ರರಾದರು.
Karaga Mahostava – ಕರಗ ಮಹೋತ್ಸವದ ಉಸ್ತುವಾರಿಗಳು
ಈ ಸಂದರ್ಭದಲ್ಲಿ ಶಾಸಕ ಎಸ್.ಎನ್. ಸುಬ್ಬಾರೆಡ್ಡಿ, ಬಿಜೆಪಿ ರಾಜ್ಯ ಕಾರ್ಯದರ್ಶಿ ಸಿ. ಮುನಿರಾಜು, ದೇವಾಲಯದ ಧರ್ಮದರ್ಶಿ ಶ್ರೀನಿವಾಸ್ ಸ್ವಾಮಿ, ಆಶಾಜಯಪ್ಪ, ಗಜನಾಣ್ಯ ನಾಗರಾಜ್, ಪ್ರತಾಪ್, ಗಂಗಿರೆಡ್ಡಿ, ರಾಜೇಶ್, ವಿಕಾಸ್ ಸೇರಿದಂತೆ ಗಣೇಶ್, ಯಶ್ವಂತ್, ಬಿ. ಮಂಜುನಾಥ ಕರಗ ಮಹೋತ್ಸವದ ನೇತೃತ್ವ ವಹಿಸಿದ್ದರು. ಶ್ರೀ ಜಾಲಾರಿ ಸಪ್ಪಲಮ್ಮ ದೇವಾಯದ ಪೂಜಾರಿ ರಾಮಾಂಜಿ ಹಾಗೂ ಕರಗ ಮಹೋತ್ಸವದ ಸದಸ್ಯರುಗಳು ಭಾಗವಹಿಸಿದ್ದರು.