Close Menu
ISM Kannada News
    IPL 2025 Live Score
    What's Hot

    Crime : ಅಕ್ರಮ ಸಂಬಂಧಕ್ಕೆ ಅಡ್ಡಿಯಾದ ಪತಿಯನ್ನು ಸುಪಾರಿ ಕೊಟ್ಟು ಕೊಲೆ ಮಾಡಿಸಿದ ಪತ್ನಿ….!

    May 17, 2025

    Pakistan : ಪಾಕಿಸ್ತಾನದಲ್ಲಿ ಬೆಚ್ಚಿ ಬೀಳಿಸುವ ಸತ್ಯ: ಶೇ. 82ರಷ್ಟು ಅತ್ಯಾಚಾರಗಳು ತಂದೆ, ಅಜ್ಜ, ಅಣ್ಣಂದಿರಿಂದಲೇ ನಡೆಯುತ್ತಿವೆ ಎಂದ ಪಾಕ್ ಮಾಜಿ ಸಂಸದೆ

    May 17, 2025

    Janaspandana : ಜನರ ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ – ಶಾಸಕ ಸುಬ್ಬಾರೆಡ್ಡಿ ಭರವಸೆ…!

    May 17, 2025
    Facebook X (Twitter) Instagram
    Facebook X (Twitter) Instagram WhatsApp
    ISM Kannada NewsISM Kannada News
    Subscribe
    • Home
    • All News
      • State
      • National
      • International
    • Special
    • Entertainment
    • Technology
    • Web Stories
    • Foodies
    ISM Kannada News
    Home»State»Karaga Mahostava : ಗುಡಿಬಂಡೆ ವೈಭವದ ಕರಗ ಮಹೋತ್ಸವ ಎಲ್ಲೆಲ್ಲೂ ಸಡಗರ, ಸಂಭ್ರಮ, ಜಾಲಾರಿ ಸಪ್ಪಲಮ್ಮ ಕರಗ ಮಹೋತ್ಸವಕ್ಕೆ ಹರಿದು ಬಂದ ಜನಸಾಗರ..!
    State

    Karaga Mahostava : ಗುಡಿಬಂಡೆ ವೈಭವದ ಕರಗ ಮಹೋತ್ಸವ ಎಲ್ಲೆಲ್ಲೂ ಸಡಗರ, ಸಂಭ್ರಮ, ಜಾಲಾರಿ ಸಪ್ಪಲಮ್ಮ ಕರಗ ಮಹೋತ್ಸವಕ್ಕೆ ಹರಿದು ಬಂದ ಜನಸಾಗರ..!

    By by AdminApril 24, 2025No Comments2 Mins Read
    Facebook Twitter Pinterest WhatsApp
    Karaga Mahostava 2025 – Gudibande’s Jaalari Sappalamma Festival Highlights

    Table of Contents

    Toggle
    • Karaga Mahostava – ಕರಗ ಮಹೋತ್ಸವ
      • Karaga Mahostava – ಕರಗ ನರ್ತನಕ್ಕೆ ಜನರು ಪುಲ್ ಖುಷ್
        • Karaga Mahostava – ಮನಸೋರೆಗೊಳಿಸಿದ ಮಹೋತ್ಸವ

    Karaga Mahostava  – ಗುಡಿಬಂಡೆ ಪಟ್ಟಣದಲ್ಲಿ ಕರಗ ನರ್ತನ, ವಾದ್ಯಗೋಷ್ಟಿ, ಗಾರುಡುಗೊಂಬೆ, ಕೀಲುಕುದುರೆ, ಕರಗದ ಸಡಗರ, ಸಂಭ್ರಮಕ್ಕೆ ಪಟ್ಟಣದಲ್ಲಿ ನಡೆದ ಕರಗ ಮಹೋತ್ಸವಕ್ಕೆ ಹರಿದು ಬಂದ ಜನಸಾಗರ ಸಾಕ್ಷಿಯಾಯಿತು. ಪಟ್ಟಣದ ಸೊಪ್ಪಿನ ಪೇಟೆಯ ಶ್ರೀ ಜಾಲಾರಿ ಸಪ್ಪಲಮ್ಮನವರ 27ನೇ ವರ್ಷದ ಮೂರು ದಿನಗಳ ಜಾತ್ರಾ ಮಹೋತ್ಸವದ ಪ್ರಯುಕ್ತ ಬುಧವಾರ ರಾತ್ರಿ ಏರ್ಪಡಿಸಿದ್ದ ಕರಗ ಮಹೋತ್ಸವಕ್ಕೆ ಅಪಾರ ಭಕ್ತಾದಿಗಳೊಂದಿಗೆ ವೈಭೋವತೀತವಾಗಿ ನೆರವೇರಿತು. ಪ್ರತೀವರ್ಷದಂತೆ ಈ ವರ್ಷವೂ ಮೂರು ದಿನಗಳು ನಡೆದೆ ಜಾತ್ರಾ ಮಹೋತ್ಸವದಲ್ಲಿ ಮಂಗಳವಾರ ರಾತ್ರಿ ಹಸಿಕರಗ, ಮಂಗಳವಾರ ಮಧ್ಯಾಹ್ನ ತಂಬಿಟ್ಟು ದೀಪೋತ್ಸವ ಹಾಗೂ ಬುಧವಾರ ಹೂವಿನ ಕರಗ, ಗುರುವಾರ ಬೆಳಗ್ಗೆ ಒನಕೆ ಕರಗವು ಅದ್ದೂರಿಯಾಗಿ ನಡೆಯಿತು.

    Karaga Mahotsava 2025 – Gudibande’s Jaalari Sappalamma Festival Highlights

    Karaga Mahostava – ಕರಗ ಮಹೋತ್ಸವ

    ಪಟ್ಟಣದ ಜಾಲಾರಿ ಸಪ್ಪಲಮ್ಮ ದೇವಿಯ ಕರಗವನ್ನು ಆಂದ್ರಪ್ರದೇಶದ ರಾಮ್ ಕುಪ್ಪಂನ  ಬಾಲಾಜಿ ಅವರು ಸೊಪ್ಪಿನ ಪೇಟೆಯ ಜಾಲಾರಿ ಸಪ್ಪಲಮ್ಮ ದೇವಿಯ ದೇವಾಲಯದಿಂದ ಮಂಗಳವಾರ ರಾತ್ರಿ ಸುಮಾರು ರಾತ್ರಿ 10:30ರ ಸಮಯದಲ್ಲಿ ಸುಮಾರು 20 ರಿಂದ 30 ಕೆಜಿ ತೂಕದ ಕರಗವನ್ನು ಹೊತ್ತು ಹೊರಬಂದು ಇಡೀ ರಾತ್ರಿ  ಪಟ್ಟಣದ 11ವಾರ್ಡುಗಳನ್ನು ಮತ್ತು ಹಳೇ ಗುಡಿಬಂಡೆ ಸುತ್ತಿದರು. ಪ್ರತೀ ಕಡೆಯೂ ಆಯಾಸವಿಲ್ಲದೆ ನಗುಮುಖದಲ್ಲಿ ಉತ್ಸಾಹದಿಂದ ನೃತ್ಯಗಳನ್ನು ಮಾಡಿ ಜನರನ್ನು ಮಂತ್ರಮುಗ್ದಾರಾಗಿಸಿ ಭಕ್ತಿ ಭಾವನೆಯಲ್ಲಿ ಮಿಂದೇಳುವಂತೆ ಮಾಡಿದರು.

    Karaga Mahostava – ಕರಗ ನರ್ತನಕ್ಕೆ ಜನರು ಪುಲ್ ಖುಷ್

    ಬುಧವಾರ ರಾತ್ರಿ ಸಪ್ಪಲಮ್ಮ ದೇವಾಲಯದಿಂದ ಹೊರಬಂದ ಕರಗ ಸುಮಾರು ಅರ್ಧಗಂಟೆಗೂ ಹೆಚ್ಚು ಸಮಯ ದೇವಾಲಯದ ಮುಂಭಾಗದಲ್ಲಿ ಹಾಗೂ ವಿವಿಧ ವೃತ್ತಗಳಲ್ಲಿ ನಾಗಿಣಿ ನೃತ್ಯ ಸೇರಿದಂತೆ ಹಲವು ನೃತ್ಯಗಳನ್ನು ಅನೇಕ ಭಂಗಿಗಳಲ್ಲಿ ಅತ್ಯದ್ಬುತವಾಗಿಪ್ರದರ್ಶಿಸಿ ನೆರೆದಿದ್ದ ನೂರಾರು ಭಕ್ತರ ಕೇಕೆ, ಚೆಪ್ಪಾಳೆಗಳನ್ನು ಗಿಟ್ಟಿಸಿಕೊಂಡರು. ಮುಖ್ಯವಾಗಿ ವಾದ್ಯಗೋಷ್ಠಿ ಹಾಗೂ ದೇವಾಲಯದ ಧರ್ಮದರ್ಶಿ ಶ್ರೀನಿವಾಸ್ ಸ್ವಾಮಿ ಅವರು ಮನೆಯಬಳಿ ಪ್ರದರ್ಶಿಸಿದ ನೃತ್ಯ ನೋಡುಗರ ಎದೆ ಬಡಿತವನ್ನು ಏಕಾಏಕಿ ಹೆಚ್ಚಿಸುವಂತಿತ್ತು. ತಲೆ ಮೇಲೆತ್ತಿ ದೇಹವನ್ನು ಮಲಗಿಸಿ ನಾಗಿನಿ ನೃತ್ಯ, ಕರಗವನ್ನು ಹಿಂದೆ ಮುಂದೆ ಮಾಡುವುದು ಹಾಗೂ ಮೊನಕಾಲಿನಲ್ಲಿ ನೃತ್ಯವನ್ನು ಪ್ರದರ್ಶಿಸಿ ಗುಡಿಬಂಡೆ ಜನತೆಯ ಮನಗೆದ್ದರಲ್ಲದೆ ಎಲ್ಲರೋಂದಿಗೆ ಸೈ ಅನಿಸಿಕೊಂಡರು. ಚಿಕ್ಕಬಳ್ಳಾಪುರದ ಯಕ್ಷಗಾನ ತಂಡ ಕರಗ ಹೊತ್ತ ಬಾಲಾಜಿ ಅವರಿಗೆ ಉತ್ತಮ ಸಾತ್ ನೀಡಿದರು.

    Karaga Mahotsava 2025 – Gudibande’s Jaalari Sappalamma Festival Highlights

    Karaga Mahostava – ಮನಸೋರೆಗೊಳಿಸಿದ ಮಹೋತ್ಸವ

    ಪಟ್ಟಣದ ಮುಖ್ಯರಸ್ತೆಯಲ್ಲಿ ಬುಧವಾರ ರಾತ್ರಿ  ವಾದ್ಯಗೋಷ್ಟಿ ಹಾಗೂ ಯಕ್ಷಗಾನ ನೃತ್ಯ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿತ್ತು. ದೇವಾಲಯ ಧರ್ಮದರ್ಶಿ ಶ್ರೀನಿವಾಸ ಸ್ವಾಮಿ ಪೂಜೆ ಸಲ್ಲಿಸಿ ಗುಡಿಬಂಡೆ ಪಟ್ಟಣ ಹಾಗೂ ತಾಲೂಕಿನ ಎಲ್ಲಾ ಜನತೆಗೆ ಕರಗ ಮಹೋತ್ಸವದ ಶುಭಾಶಯಗಳನ್ನು ತಿಳಿಸಿದರು. ಜಾತ್ರೆ ಪ್ರಯುಕ್ತ ಜಾಲಾರಿ ಸಪ್ಪಲಮ್ಮನವರಿಗೆ ವಿಶೇಷವಾದ ಹೂವಿನ ಅಲಂಕಾರ ಮಹಾ ಮಂಗಳಾರತಿ, ಪೂಜೆ ಕೈಂಕರ್ಯಗಳನ್ನು ನೆರವೇರಿಸಲಾಯಿತು.

    Karaga Mahostava – ಒನಕೆ ಕರಗದ ವೈಭವ

    ಗುರುವಾರ ಮಧ್ಯಾಹ್ನ 12ರ ಸಮಯದಲ್ಲಿ ಯಾವುದೇ ರೀತಿಯ ಆದರವಿಲ್ಲದೆ ಒಣಕೆಯ ಮೇಲೆ ನೀರು ತುಂಬಿದ ತಾಮ್ರದ ಪಾತ್ರೆಯಲ್ಲಿ ಇಟ್ಟು ಒಣಕೆಯನ್ನು ತಲೆಯಮೇಲೆ ಹೊತ್ತು ಒಣಕೆಯು ಬೀಳದಂತೆ ನೃತ್ಯವನ್ನು ಪ್ರದರ್ಶಿಸಿದರು. ಮುಖ್ಯವಾಗಿ ಒಣಕೆಯನ್ನು ತಲೆಯ ಮೇಲೆ ಹೊತ್ತು ಮೊನಕಾಲಿನಲ್ಲಿ ಪ್ರದರ್ಶಿಸಿದ ನೃತ್ಯವನ್ನು ಕಂಡ ನೋಡುಗರು ಬೆಚ್ಚಿ ಬೆರಗಾಗಿ ನಿಂತರು. Read this also : Karaga Mahostava – ಸೋಮೇನಹಳ್ಳಿಯಲ್ಲಿ ಅದ್ದೂರಿಯಾಗಿ ನಡೆದ ಶ್ರೀ ಗಂಗಾಭವಾನಿ ಹೂವಿನ ಕರಗ ಮಹೋತ್ಸವ 2025

    ಪ್ರತಿಯೊಬ್ಬರೂ ಗೋವಿಂದ ಗೋವಿಂದ ಎಂಬ ಹಾಷೋದ್ಗಾರದಿಂದ ದೇವರನ್ನು ನೆನೆದರು ಸುಮಾರು ಅರ್ದ ಗಂಟೆಗೂ ಹೆಚ್ಚು ಸಮಯ ಒಣಕೆಯನ್ನು ತಲೆಯ ಮೇಲೆ ಹೊತ್ತು ಟಮಟೆ ತಾಳಕ್ಕೆ ತಕ್ಕಂತೆ ನೃತ್ಯವನ್ನು ಪ್ರದರ್ಶಿಸಿದ ಬಾಲಾಜಿ ಅವರಿಗೆ ನೆರೆದಿದ್ದ ಜನಸಾಗರ ಹೋವಿನ ಹೊಳೆ ಹರಿಸಿ ಚಪ್ಪಾಳೆ ಸಿಳ್ಳೆಗಳಿಂದ ಮೆಚ್ಚುಗೆಗೆ ಪಾತ್ರರಾದರು.

    Karaga Mahotsava 2025 – Gudibande’s Jaalari Sappalamma Festival Highlights

    Karaga Mahostava – ಕರಗ ಮಹೋತ್ಸವದ ಉಸ್ತುವಾರಿಗಳು

    ಈ ಸಂದರ್ಭದಲ್ಲಿ ಶಾಸಕ ಎಸ್.ಎನ್. ಸುಬ್ಬಾರೆಡ್ಡಿ, ಬಿಜೆಪಿ ರಾಜ್ಯ ಕಾರ್ಯದರ್ಶಿ ಸಿ. ಮುನಿರಾಜು, ದೇವಾಲಯದ ಧರ್ಮದರ್ಶಿ ಶ್ರೀನಿವಾಸ್ ಸ್ವಾಮಿ, ಆಶಾಜಯಪ್ಪ, ಗಜನಾಣ್ಯ ನಾಗರಾಜ್, ಪ್ರತಾಪ್, ಗಂಗಿರೆಡ್ಡಿ, ರಾಜೇಶ್, ವಿಕಾಸ್ ಸೇರಿದಂತೆ ಗಣೇಶ್, ಯಶ್ವಂತ್, ಬಿ. ಮಂಜುನಾಥ ಕರಗ ಮಹೋತ್ಸವದ ನೇತೃತ್ವ ವಹಿಸಿದ್ದರು.  ಶ್ರೀ ಜಾಲಾರಿ ಸಪ್ಪಲಮ್ಮ ದೇವಾಯದ ಪೂಜಾರಿ ರಾಮಾಂಜಿ ಹಾಗೂ ಕರಗ ಮಹೋತ್ಸವದ ಸದಸ್ಯರುಗಳು ಭಾಗವಹಿಸಿದ್ದರು.

    Devotional festivals India Gudibande Karaga 2025 Hoovina Karaga celebration Indian cultural heritage Jaalari Sappalamma Festival Karaga dance Karnataka Karaga Mahotsava Gudibande Karaga night procession Karaga Utsava highlights Karnataka folk festivals Onake Karaga dance Soppina Pete festival South Indian religious events Temple festivals Karnataka Traditional Karaga procession
    Share. Facebook Twitter Pinterest WhatsApp
    by Admin
    • Website
    • Facebook

    Welcome to ISM Kannada News, if you want to contact us, then feel free to say anything about www.ismkannadanews.com

    Related Posts

    Janaspandana : ಜನರ ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ – ಶಾಸಕ ಸುಬ್ಬಾರೆಡ್ಡಿ ಭರವಸೆ…!

    May 17, 2025

    Indira Canteen: ಬಾಗೇಪಲ್ಲಿಯಲ್ಲಿ ಬಡವರ ಬಂಧು ಇಂದಿರಾ ಕ್ಯಾಂಟೀನ್ ಉದ್ಘಾಟಿಸಿ ಶಾಸಕ ಸುಬ್ಬಾರೆಡ್ಡಿ…!

    May 17, 2025

    Gadag : ಯುವಕನ ಹಿಂದೆ ಬಿದ್ದ ಮೂರು ಮಕ್ಕಳ ತಾಯಿ, ಅನೈತಿಕ ಸಂಬಂಧ ಕೊಲೆಯಲ್ಲಿ ಅಂತ್ಯ….!

    May 17, 2025
    Leave A Reply Cancel Reply

    IPL 2025 Live Score
    Don't Miss

    Crime : ಅಕ್ರಮ ಸಂಬಂಧಕ್ಕೆ ಅಡ್ಡಿಯಾದ ಪತಿಯನ್ನು ಸುಪಾರಿ ಕೊಟ್ಟು ಕೊಲೆ ಮಾಡಿಸಿದ ಪತ್ನಿ….!

    National May 17, 2025

    Crime – ತನ್ನ ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಗಂಡನನ್ನು ಮುಗಿಸಲು ಪ್ರಿಯಕರ ಹಾಗೂ ಇನ್ನೊಬ್ಬ ವ್ಯಕ್ತಿಯ ಸಹಾಯ ಪಡೆದು ಕೊಲೆ…

    Pakistan : ಪಾಕಿಸ್ತಾನದಲ್ಲಿ ಬೆಚ್ಚಿ ಬೀಳಿಸುವ ಸತ್ಯ: ಶೇ. 82ರಷ್ಟು ಅತ್ಯಾಚಾರಗಳು ತಂದೆ, ಅಜ್ಜ, ಅಣ್ಣಂದಿರಿಂದಲೇ ನಡೆಯುತ್ತಿವೆ ಎಂದ ಪಾಕ್ ಮಾಜಿ ಸಂಸದೆ

    May 17, 2025

    Janaspandana : ಜನರ ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ – ಶಾಸಕ ಸುಬ್ಬಾರೆಡ್ಡಿ ಭರವಸೆ…!

    May 17, 2025

    Indira Canteen: ಬಾಗೇಪಲ್ಲಿಯಲ್ಲಿ ಬಡವರ ಬಂಧು ಇಂದಿರಾ ಕ್ಯಾಂಟೀನ್ ಉದ್ಘಾಟಿಸಿ ಶಾಸಕ ಸುಬ್ಬಾರೆಡ್ಡಿ…!

    May 17, 2025

    Gadag : ಯುವಕನ ಹಿಂದೆ ಬಿದ್ದ ಮೂರು ಮಕ್ಕಳ ತಾಯಿ, ಅನೈತಿಕ ಸಂಬಂಧ ಕೊಲೆಯಲ್ಲಿ ಅಂತ್ಯ….!

    May 17, 2025

    Love Marriage : ಚಿಕ್ಕಬಳ್ಳಾಪುರದಲ್ಲಿ ನಡೆದ ಮುಸ್ಲಿಂ ಯುವತಿ ಹಿಂದೂ ಯುವಕನ ಪ್ರೇಮ ವಿವಾಹ, ಪೊಲೀಸರ ಭದ್ರತೆ ಕೋರಿದ ನವಜೋಡಿ….!

    May 17, 2025
    ISM Kannada News
    Facebook X (Twitter) Instagram Pinterest
    • Home
    • About Us
    • Contact Us
    • Privacy Policy
    © 2025 ISM Kannada News. Designed by ISM News.

    Type above and press Enter to search. Press Esc to cancel.