Close Menu
ISM Kannada News
    IPL 2025 Live Score
    What's Hot

    Hemareddy Mallamma : ಸಮಾಜ ಸುಧಾರಣೆಯಲ್ಲಿ ಹೇಮರೆಡ್ಡಿ ಮಲ್ಲಮ್ಮನವರ ಪಾತ್ರ ಅನನ್ಯ: ಪರಿಮಳ ಅಭಿಮತ

    May 10, 2025

    Soldier : ಪಾಕ್ ಪ್ರಚೋದಿತ ಗುಂಡಿನ ದಾಳಿಗೆ ಬಾಗೇಪಲ್ಲಿ ಗಡಿಯ ಯೋಧ ಹುತಾತ್ಮ; ಕಂಬನಿ ಮಿಡಿದ ಕರುನಾಡು, ಮುರಳಿ ನಾಯಕ್ ಅಮರ್‍ ರಹೇ…!

    May 10, 2025

    Google Maps : ಗೂಗಲ್ ಮ್ಯಾಪ್ಸ್ ನಿಂದ ಹೊಸ ಫೀಚರ್: ಸ್ಕ್ರೀನ್‌ಶಾಟ್ ಮೂಲಕ ಲೊಕೇಶನ್ ಸೇವ್ ಮಾಡಿ..!

    May 10, 2025
    Facebook X (Twitter) Instagram
    Facebook X (Twitter) Instagram WhatsApp
    ISM Kannada NewsISM Kannada News
    Subscribe
    • Home
    • All News
      • State
      • National
      • International
    • Special
    • Entertainment
    • Technology
    • Web Stories
    • Foodies
    ISM Kannada News
    Home»State»Hemareddy Mallamma : ಸಮಾಜ ಸುಧಾರಣೆಯಲ್ಲಿ ಹೇಮರೆಡ್ಡಿ ಮಲ್ಲಮ್ಮನವರ ಪಾತ್ರ ಅನನ್ಯ: ಪರಿಮಳ ಅಭಿಮತ
    State

    Hemareddy Mallamma : ಸಮಾಜ ಸುಧಾರಣೆಯಲ್ಲಿ ಹೇಮರೆಡ್ಡಿ ಮಲ್ಲಮ್ಮನವರ ಪಾತ್ರ ಅನನ್ಯ: ಪರಿಮಳ ಅಭಿಮತ

    By by AdminMay 10, 2025No Comments2 Mins Read
    Facebook Twitter Pinterest WhatsApp
    Dignitaries and students participating in Hemareddy Mallamma Jayanti celebration at Gudibande

    Table of Contents

    Toggle
    • Hemareddy Mallamma – ಸರಳತೆ ಮತ್ತು ದಿಟ್ಟತನದ ಪ್ರತೀಕ
      • Hemareddy Mallamma – ಹೇಮರೆಡ್ಡಿ ಮಲ್ಲಮ್ಮ ಕೇವಲ ಒಂದು ಜಾತಿಗೆ ಸೀಮಿತರಲ್ಲ: ಕೆ.ವಿ.ನಾರಾಯಣಸ್ವಾಮಿ
        • Hemareddy Mallamma – ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ

    Hemareddy Mallamma – 14ನೇ ಶತಮಾನದಲ್ಲಿ ಮೂಡನಂಬಿಕೆಗಳು ಮತ್ತು ಅನಿಷ್ಟ ಪದ್ಧತಿಗಳ ವಿರುದ್ಧ ಧ್ವನಿ ಎತ್ತಿ ಸಮಾಜವನ್ನು ತಿದ್ದುವಲ್ಲಿ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮನವರ ಪಾತ್ರ ಮಹತ್ವದ್ದು ಎಂದು ನ್ಯೂ ವಿಷನ್ ಶಾಲೆಯ ಮುಖ್ಯಸ್ಥೆ ಡಿ.ಎಲ್.ಪರಿಮಳ ಅವರು ಅಭಿಪ್ರಾಯಪಟ್ಟರು. ಚಿಕ್ಕಬಳ್ಳಾಪುರ ಗುಡಿಬಂಡೆ ಪಟ್ಟಣದ ತಾಲೂಕು ಕಚೇರಿ ಸಭಾಂಗಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ, ತಾಲ್ಲೂಕು ಆಡಳಿತ ಮತ್ತು ಬೈರೇಗೌಡ ಒಕ್ಕಲಿಗರ ಸಂಘದ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿದ್ದ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಜಯಂತಿ ಕಾರ್ಯಕ್ರಮದಲ್ಲಿ ಅವರು ಮುಖ್ಯ ಭಾಷಣಕಾರರಾಗಿ ಮಾತನಾಡಿದರು.

    Dignitaries and students participating in Hemareddy Mallamma Jayanti celebration at Gudibande

    Hemareddy Mallamma – ಸರಳತೆ ಮತ್ತು ದಿಟ್ಟತನದ ಪ್ರತೀಕ

    ಪರಿಮಳ ಅವರು ಮಾತನಾಡಿ, “ಹೇಮರೆಡ್ಡಿ ಮಲ್ಲಮ್ಮನವರು ತಮ್ಮ ಸರಳ ಹಾಗೂ ದಿಟ್ಟ ಭಕ್ತಿಯಿಂದ ದೈವತ್ವವನ್ನು ಕಂಡ ಮಹಾನ್ ಶರಣೆ. 14ನೇ ಶತಮಾನದ ಶರಣರ ಕ್ರಾಂತಿಯಲ್ಲಿ ಅವರ ಪಾತ್ರ ಪ್ರಮುಖವಾದದ್ದು. ಅವರು ಸಾಮಾಜಿಕ ಸುಧಾರಣೆಗೆ ಮಾದರಿಯಾಗಿದ್ದಾರೆ. ಮಹಾಸಾಧ್ವಿ ಹೇಮರೆಡ್ಡಿ ಮಲ್ಲಮ್ಮನವರು ಸಾಕ್ಷಾತ್ ಶಿವನನ್ನೇ ಒಲಿಸಿಕೊಂಡವರು. ತಮ್ಮ ಹಲವಾರು ವಚನಗಳ ಮೂಲಕ ಸಮಾಜದಲ್ಲಿನ ತಪ್ಪುಗಳನ್ನು ತಿದ್ದಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಪ್ರತಿಯೊಬ್ಬ ಮಹಿಳೆಯೂ ಮಲ್ಲಮ್ಮನವರ ಆದರ್ಶಗಳನ್ನು ಪಾಲಿಸಬೇಕು” ಎಂದು ಕರೆ ನೀಡಿದರು.

    Hemareddy Mallamma – ಹೇಮರೆಡ್ಡಿ ಮಲ್ಲಮ್ಮ ಕೇವಲ ಒಂದು ಜಾತಿಗೆ ಸೀಮಿತರಲ್ಲ: ಕೆ.ವಿ.ನಾರಾಯಣಸ್ವಾಮಿ

    ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಕೆ.ವಿ.ನಾರಾಯಣಸ್ವಾಮಿ ಮಾತನಾಡಿ, “ದಾನ, ದಾಸೋಹ ಮತ್ತು ನಿಸ್ವಾರ್ಥ ಭಕ್ತಿಗೆ ಹೆಸರಾದ ಹೇಮರೆಡ್ಡಿ ಮಲ್ಲಮ್ಮ ಅವರು ಮೋಕ್ಷದ ಮಾರ್ಗವನ್ನು ತೋರಿಸಿದ ಮಹಾನ್ ಸಾಧ್ವಿ. ಸಮಾಜ ಸುಧಾರಣೆಯಲ್ಲಿ ಕ್ರಾಂತಿ ಮಾಡಿದ ಅವರನ್ನು ಕೇವಲ ಒಂದು ಜಾತಿಗೆ ಸೀಮಿತಗೊಳಿಸಬಾರದು. ಅವರ ವಿಚಾರಗಳು ಮತ್ತು ತತ್ವಗಳನ್ನು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಮುಂದಿನ ಪೀಳಿಗೆಗೆ ಆದರ್ಶಪ್ರಾಯರಾಗಬೇಕು. ಸರ್ಕಾರ ಮಹನೀಯರ ಜಯಂತಿಗಳನ್ನು ಆಚರಿಸುವುದು ಸಹ ಇದೇ ಉದ್ದೇಶಕ್ಕಾಗಿಯೇ” ಎಂದು ಹೇಳಿದರು.

    Dignitaries and students participating in Hemareddy Mallamma Jayanti celebration at Gudibande

    Hemareddy Mallamma – ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ

    ಇದೇ ಸಂದರ್ಭದಲ್ಲಿ ಎಸ್.ಎಸ್.ಎಲ್.ಸಿ ಮತ್ತು ದ್ವಿತೀಯ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕಗಳನ್ನು ಗಳಿಸಿದ ಒಕ್ಕಲಿಗ ಸಮುದಾಯದ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಅಭಿನಂದಿಸಲಾಯಿತು. ಕಾರ್ಯಕ್ರಮದಲ್ಲಿ ಬಿಇಒ ಕೃಷ್ಣಕುಮಾರಿ, ತಹಸೀಲ್ದಾರ್ ಸಿಗ್ಬತ್ತುಲ್ಲಾ ಮತ್ತು ತಾಲ್ಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಮಂಜುನಾಥರೆಡ್ಡಿ ಅವರು ಸಹ ಹೇಮರೆಡ್ಡಿ ಮಲ್ಲಮ್ಮನವರ ಕುರಿತು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.

    Read this also : ಶನಿ ಸಾಡೇಸಾತಿಯಿಂದ ಮುಕ್ತಿ ಪಡೆಯಲು ಶನಿವಾರದ ಪರಿಹಾರಗಳನ್ನು ಅನುಸರಿಸಿ…!

    ಕಾರ್ಯಕ್ರಮದಲ್ಲಿ ಪಪಂ ಅಧ್ಯಕ್ಷ ವಿಕಾಸ್, ಕೃಷಿ ಇಲಾಖೆಯ ಕೇಶವರೆಡ್ಡಿ, ನೌಕರರ ಸಂಘದ ಮುನಿಕೃಷ್ಣಪ್ಪ, ಸಂಘದ ಕಾರ್ಯದರ್ಶಿ ಪಯ್ಯೂರು ವೇಣುಗೋಪಾಲ್, ಮುಖಂಡರಾದ ಪಾವಜೇನಹಳ್ಳಿ ನಾಗರಾಜರೆಡ್ಡಿ, ಆದಿರೆಡ್ಡಿ, ಪ್ರಕಾಶ್, ಗಂಗಿರೆಡ್ಡಿ, ಶಿವಣ್ಣ ಸೇರಿದಂತೆ ಒಕ್ಕಲಿಗ ಸಮುದಾಯದ ಮುಖಂಡರು ಮತ್ತು ಸಾರ್ವಜನಿಕರು ಉಪಸ್ಥಿತರಿದ್ದರು.

    14th-century social reformer Basava movement Gudibande Event Hemareddy Mallamma Karnataka women leaders Mallamma Jayanti 2025 Shivasharane social reform in India vachana literature Vokkaliga community
    Share. Facebook Twitter Pinterest WhatsApp
    by Admin
    • Website
    • Facebook

    Welcome to ISM Kannada News, if you want to contact us, then feel free to say anything about www.ismkannadanews.com

    Related Posts

    Soldier : ಪಾಕ್ ಪ್ರಚೋದಿತ ಗುಂಡಿನ ದಾಳಿಗೆ ಬಾಗೇಪಲ್ಲಿ ಗಡಿಯ ಯೋಧ ಹುತಾತ್ಮ; ಕಂಬನಿ ಮಿಡಿದ ಕರುನಾಡು, ಮುರಳಿ ನಾಯಕ್ ಅಮರ್‍ ರಹೇ…!

    May 10, 2025

    Local Problems : ರಸ್ತೆ ಮತ್ತು ಚರಂಡಿಗಾಗಿ ಸ್ಥಳೀಯರ ಆಗ್ರಹ, ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಆಕ್ರೋಶ….!

    May 10, 2025

    Health Camp : ಗುಡಿಬಂಡೆಯಲ್ಲಿ ಪ್ರತಿ ತಿಂಗಳು ಎರಡು ಉಚಿತ ಆರೋಗ್ಯ ಶಿಬಿರಗಳು – ರಾಜಣ್ಣ ಭರವಸೆ

    May 9, 2025
    Leave A Reply Cancel Reply

    IPL 2025 Live Score
    Don't Miss

    Hemareddy Mallamma : ಸಮಾಜ ಸುಧಾರಣೆಯಲ್ಲಿ ಹೇಮರೆಡ್ಡಿ ಮಲ್ಲಮ್ಮನವರ ಪಾತ್ರ ಅನನ್ಯ: ಪರಿಮಳ ಅಭಿಮತ

    State May 10, 2025

    Hemareddy Mallamma – 14ನೇ ಶತಮಾನದಲ್ಲಿ ಮೂಡನಂಬಿಕೆಗಳು ಮತ್ತು ಅನಿಷ್ಟ ಪದ್ಧತಿಗಳ ವಿರುದ್ಧ ಧ್ವನಿ ಎತ್ತಿ ಸಮಾಜವನ್ನು ತಿದ್ದುವಲ್ಲಿ ಶಿವಶರಣೆ…

    Soldier : ಪಾಕ್ ಪ್ರಚೋದಿತ ಗುಂಡಿನ ದಾಳಿಗೆ ಬಾಗೇಪಲ್ಲಿ ಗಡಿಯ ಯೋಧ ಹುತಾತ್ಮ; ಕಂಬನಿ ಮಿಡಿದ ಕರುನಾಡು, ಮುರಳಿ ನಾಯಕ್ ಅಮರ್‍ ರಹೇ…!

    May 10, 2025

    Google Maps : ಗೂಗಲ್ ಮ್ಯಾಪ್ಸ್ ನಿಂದ ಹೊಸ ಫೀಚರ್: ಸ್ಕ್ರೀನ್‌ಶಾಟ್ ಮೂಲಕ ಲೊಕೇಶನ್ ಸೇವ್ ಮಾಡಿ..!

    May 10, 2025

    SBI CBO Recruitment 2025: ಪದವೀಧರರಿಗೆ ಸುವರ್ಣಾವಕಾಶ, 2964 ಸರ್ಕಲ್ ಬೇಸ್ಡ್ ಆಫೀಸರ್ ಹುದ್ದೆಗಳಿಗೆ ಅರ್ಜಿ ಆಹ್ವಾನ…!

    May 10, 2025

    Karnataka Rains : ಕರ್ನಾಟಕದಲ್ಲಿ ವಾರಪೂರ್ತಿ ಭಾರಿ ಮಳೆ ಸಾಧ್ಯತೆ: ಈ ಜಿಲ್ಲೆಗಳಲ್ಲಿ ಅಲರ್ಟ್! ತಾಪಮಾನವೂ ಏರಿಕೆ..!

    May 10, 2025

    Saturday : ಶನಿ ಸಾಡೇಸಾತಿಯಿಂದ ಮುಕ್ತಿ ಪಡೆಯಲು ಶನಿವಾರದ ಪರಿಹಾರಗಳನ್ನು ಅನುಸರಿಸಿ…!

    May 10, 2025
    ISM Kannada News
    Facebook X (Twitter) Instagram Pinterest
    • Home
    • About Us
    • Contact Us
    • Privacy Policy
    © 2025 ISM Kannada News. Designed by ISM News.

    Type above and press Enter to search. Press Esc to cancel.