Soldier – ಜಮ್ಮು ಮತ್ತು ಕಾಶ್ಮೀರದಲ್ಲಿ (Jammu and Kashmir) ಭಾರತ-ಪಾಕಿಸ್ತಾನ (India-Pakistan) ಗಡಿಯಲ್ಲಿ ಉದ್ವಿಗ್ನತೆ ತಾರಕಕ್ಕೇರಿದೆ. ಗಡಿ ಭಾಗದಲ್ಲಿ (Border Conflict) ಗುಂಡಿನ ಚಕಮಕಿ (Crossfire) ನಡೆಯುತ್ತಿದ್ದು, ಈ ಸಂಘರ್ಷದಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ (Bagepalli) ಸಮೀಪದ ಆಂಧ್ರಪ್ರದೇಶದ (Andhra Pradesh) ಗೋರಂಟ್ಲ ತಾಲೂಕಿನ ಕಲ್ಲಿಕೊಂಡ ಗ್ರಾಮದ ಯೋಧ ಮುರಳಿ ನಾಯಕ್ (Murali Naik) ವೀರಮರಣವನ್ನಪ್ಪಿದ್ದಾರೆ.
Soldier – ಬಾಗೇಪಲ್ಲಿ ಸಮೀಪದ ಯೋಧ ಮುರಳಿನಾಯಕ್ ಹುತಾತ್ಮ
ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ತಾಲೂಕಿನ ಸಮೀಪವಿರುವ ಆಂಧ್ರಪ್ರದೇಶದ ಗೋರಂಟ್ಲು ತಾಲೂಕಿನ ಕಲ್ಲಿಕೊಂಡ ಗ್ರಾಮದ ಶ್ರೀರಾಮುಲು ನಾಯಕ್ ಮತ್ತು ಜ್ಯೋತಿಬಾಯಿ ಅವರ ಏಕೈಕ ಪುತ್ರ ಮುರಳಿ ನಾಯಕ್ (Murali Naik) ಅವರು ಪಾಕಿಸ್ತಾನ ಗಡಿಯಲ್ಲಿ ನಡೆದ ದಾಳಿಯಲ್ಲಿ ವೀರಮರಣವನ್ನಪ್ಪಿದ್ದಾರೆ. ದೇಶಕ್ಕಾಗಿ ಹೋರಾಡಿದ ಯೋಧನ ಸಾವಿನ ಸುದ್ದಿ ತಿಳಿಯುತ್ತಿದ್ದಂತೆಯೇ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ.
Read this also : ಆಪರೇಷನ್ ಸಿಂಧೂರ್ ಸ್ಫೂರ್ತಿಯಿಂದ ಮಗುವಿಗೆ ವಿಶಿಷ್ಟ ನಾಮಕರಣ!
Soldier – ಪಾರ್ಥೀವ ಶರೀರಕ್ಕೆ ಅಂತಿಮ ನಮನ
ಹುತಾತ್ಮ ಯೋಧ ಮುರಳಿ ನಾಯಕ್ರ ಪಾರ್ಥೀವ ಶರೀರವನ್ನು (Mortal Remains) ಜಮ್ಮುವಿನಿಂದ ದೆಹಲಿ ವಿಮಾನ ನಿಲ್ದಾಣಕ್ಕೆ (Delhi Airport) ತಂದು, ಅಲ್ಲಿಂದ ಇಂಡಿಗೋ ವಿಮಾನದ ಮೂಲಕ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ (Kempegowda International Airport) ಕೊಂಡೊಯ್ಯಲಾಯಿತು. ಏರ್ಪೋರ್ಟ್ನ ಕಾರ್ಗೋ ಟರ್ಮಿನಲ್ನಲ್ಲಿ (Cargo Terminal) ಸೇನಾ ಸಿಬ್ಬಂದಿಯಿಂದ ಅಂತಿಮ ಗೌರವ ಸಲ್ಲಿಸಲಾಯಿತು.
ಅನಂತರ, ದೇವನಹಳ್ಳಿ-ಚಿಕ್ಕಬಳ್ಳಾಪುರ-ಬಾಗೇಪಲ್ಲಿ (Devanahalli-Chikkaballapura-Bagepalli) ಮಾರ್ಗವಾಗಿ ಸ್ವಗ್ರಾಮ ಕಲ್ಲಿಕೊಂಡಕ್ಕೆ ಪಾರ್ಥೀವ ಶರೀರವನ್ನು ಸೇನಾ ವಾಹನದ ಸಾರಥಿಯೊಂದಿಗೆ ಅಂಬುಲೆನ್ಸ್ನಲ್ಲಿ (Ambulance) ಕೊಂಡೊಯ್ಯಲಾಯಿತು. ಮಳೆಯ ನಡುವೆಯೂ (Rainy Weather) ರಸ್ತೆಯುದ್ದಕ್ಕೂ ಭಾರತಾಂಬೆಯ ಅಭಿಮಾನಿಗಳು (Patriotic Citizens) ಯೋಧನಿಗೆ ಕಣ್ಣೀರಿನ ನಮನ ಸಲ್ಲಿಸಿದರು.