Dr B R Ambedkar: ದಲಿತ ಸಂಘಟನೆಗಳ ಒಕ್ಕೂಟದಿಂದ ಧಮ್ಮ ಚಕ್ರ ಪ್ರವರ್ತನ ದಿನ ಆಚರಣೆ….!

ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲೂಕಿನ ದಲಿತ ಸಂಘಟನೆಗಳ ಒಕ್ಕೂಟದಿಂದ 68ನೇ ಧಮ್ಮ ಚಕ್ರ ಪ್ರವರ್ತನ ದಿನಾಚರಣೆಯನ್ನು ಡಾ.ಬಿ.ಆರ್.ಅಂಬೇಡ್ಕರ್ (Dr B R Ambedkar) ರವರ ಪುತ್ಥಳಿಯ ಬಳಿ ಆಚರಣೆ ಮಾಡಿದರು. ಪಟ್ಟಣದಲ್ಲಿನ ಡಾ.ಬಿ.ಆರ್ ಅಂಬೇಡ್ಕರ್ ರವರ ಪುತ್ಥಳಿಯ ತಾಲೂಕಿನ ದಲಿತ ಸಂಘಟನೆಗಳ ಒಕ್ಕೂಟದ ಮುಖಂಡರು ಸೇರಿಕೊಂಡು ಡಾ.ಬಿ.ಆರ್.ಅಂಬೇಡ್ಕರ್ (Dr B R Ambedkar) ರವರ ಪುತ್ಥಳಿಗೆ ಹೂವಿನ ಹಾರವನ್ನು ಹಾಕಿ ಪುಷ್ಪನಮನಗಳನ್ನು ಸಲ್ಲಿಸಿ ಗೌರವಿಸಿದರು.

ನಂತರ ಈ ವೇಳೆ ಮಾತನಾಡಿದ ದಲಿತ ಮುಖಂಡ ಬಾವನ್ನರವರು ಡಾ.ಬಿ.ಆರ್ ಅಂಬೇಡ್ಕರ್ (Dr B R Ambedkar) ರವರು ನಾನು ಹಿಂದೂವಾಗಿ ಹುಟ್ಟಿದ್ದೇನೆ ಆದರೆ ಹಿಂದೂವಾಗಿ ಸಾಯುವುದಿಲ್ಲ ಎಂದು ಹೇಳಿ ಬೌದ್ಧ ಧಮ್ಮವನ್ನು ಸ್ವೀಕರಿಸಿದರು. ಅವರ ಹಾದಿಯಂತೆ ಅವರ ಆಶಯಗಳಂತೆ ಅಂಬೇಡ್ಕರ್ ರವರ ಅನುಯಾಯಿಗಳು ಪಾಲನೆ ಮಾಡಿದರೆ ಮಾತ್ರ ಅವರ ಆಶಯಗಳನ್ನು ಈಡೇರಿಸಲು ಸಾಧ್ಯವಾಗುತ್ತೆ ಎಂದು ಹೇಳಿದರು.

Ambedkar Dharma pavarthana dina 1

ಕಾರ್ಯಕ್ರಮದಲ್ಲಿ (Dr B R Ambedkar) ದಲಿತ ಕಲಾ ಮಂಡಳಿಯವರಿಂದ ಕ್ರಾಂತಿ ಗೀತೆಗಳನ್ನು ಹಾಡಿದರು. ನಂತರ ಎಲ್ಲಾರು ಸಿಹಿಯನ್ನು ಪರಸ್ಪರ ಹಂಚಿಕೊಳ್ಳುವ ಮೂಲಕ ಬೌದ್ಧ ದಮ್ಮ ಪ್ರವರ್ತನ ದಿನವನ್ನು ಸಂತೋಷ ಸಂಭ್ರಮದಿಂದ ಆಚರಣೆ ಮಾಡಿದರು. ಈ ಸಂದರ್ಭದಲ್ಲಿ ಚೆಂಡೂರು ರಮಣ, ಜೀವಿಕಾ ನಾರಾಯಣಸ್ವಾಮಿ, ಕೋರೇನಹಳ್ಳಿ ನರಸಿಂಹಪ್ಪ, ಈಶ್ವರಪ್ಪ, ಚಲಪತಿ, ಮಾದೇಶ, ಬೋಗೇನಹಳ್ಳಿ ಕೃಷ್ಣಪ್ಪ, ಬ್ಯಾಂಕ್ ಸುಬ್ಬರಾಯಪ್ಪ, ನರಸಿಂಹಪ್ಪ, ಎಂ.ಸಿ. ಚಿಕ್ಕನರಸಿಂಹಪ್ಪ, ಗಾಂಧಿ ಶ್ರೀನಿವಾಸ್, ರಾಮಾಂಜಿ, ವರ್ಲಕೊಂಡ ರಾಜು, ಎಲ್ಲೋಡು ಗಂಗಾಧರಪ್ಪ, ಅಮರಾವತಿ, ಇಸ್ಕೂಲಪ್ಪ, ಗಂಗಪ್ಪ, ಸೇರಿದ್ದಂತೆ ಇನ್ನೀತರರು ಭಾಗವಹಿಸಿದ್ದರು.

Leave a Comment

Your email address will not be published. Required fields are marked *

Scroll to Top