Crime – ವಿಜಯಪುರ ನಗರದಲ್ಲಿ ಬೆಚ್ಚಿ ಬೀಳಿಸುವಂತಹ ಘಟನೆಯೊಂದು ನಡೆದಿದೆ. ನಿವೃತ್ತ ಡಿಜಿಪಿ ಅವರ ಪತ್ನಿಯಿಂದಲೇ ನಡೆದ ಕೊಲೆ ಪ್ರಕರಣದ ನೆನಪು ಮಾಸುವ ಮುನ್ನವೇ, ಇಲ್ಲೊಬ್ಬ ಪತ್ನಿ ತನ್ನ ಪತಿಯನ್ನೇ ಕೊಲೆ ಮಾಡಲು ಯತ್ನಿಸಿದ್ದಾಳೆ. ನಗರದ ಆಲಕುಂಟೆ ಬಡಾವಣೆಯಲ್ಲಿ ಇಂದು ಮುಂಜಾನೆ ಈ ಘಟನೆ ನಡೆದಿದ್ದು, ತೇಜು ರಾಠೋಡ್ ಎಂಬ ಮಹಿಳೆ ತನ್ನ ಪತಿ ಅಜೀತ್ ರಾಠೋಡ್ ಅವರ ಕತ್ತಿಗೆ ಚಾಕುವಿನಿಂದ ಇರಿದಿದ್ದಾಳೆ.
Crime – ನಿದ್ರೆಯಲ್ಲಿದ್ದ ಪತಿಯ ಮೇಲೆ ಮಾರಣಾಂತಿಕ ಹಲ್ಲೆ
ಅಜೀತ್ ರಾಠೋಡ್ ಅವರು ಗಾಢ ನಿದ್ರೆಯಲ್ಲಿದ್ದಾಗ, ಪತ್ನಿ ತೇಜು ಏಕಾಏಕಿ ಚಾಕುವಿನಿಂದ ಅವರ ಕತ್ತಿಗೆ ಬಲವಾಗಿ ಇರಿದಿದ್ದಾಳೆ. ಅಜೀತ್ ಅವರ ಕಿರುಚಾಟ ಕೇಳಿ ಮನೆಯವರೆಲ್ಲ ಎಚ್ಚರಗೊಂಡಿದ್ದು, ತಕ್ಷಣ ಅವರನ್ನು ನಗರದ ಬಿಎಲ್ಡಿಇ ಆಸ್ಪತ್ರೆಗೆ ದಾಖಲಿಸಿದ್ದಾರೆ. ವೈದ್ಯರು ತಿಳಿಸಿರುವ ಪ್ರಕಾರ, ಅಜೀತ್ ಅವರ ಆರೋಗ್ಯ ಸ್ಥಿರವಾಗಿದೆ.
Crime – ಬುದ್ಧಿವಾದವೇ ಮುಳುವಾಯಿತೇ?
ಈ ಆಘಾತಕಾರಿ ಕೃತ್ಯಕ್ಕೆ ಕಾರಣವೇನು ಎಂಬ ಪ್ರಶ್ನೆ ಎಲ್ಲರನ್ನೂ ಕಾಡುತ್ತಿದೆ. ತಿಳಿದು ಬಂದಿರುವ ಮಾಹಿತಿಯ ಪ್ರಕಾರ, ಪತ್ನಿ ತೇಜು ಸದಾ ಮೊಬೈಲ್ನಲ್ಲಿ ಬೇರೆಯವರೊಂದಿಗೆ ಚಾಟ್ ಮಾಡುತ್ತಿದ್ದಳು. ಇದನ್ನು ಕಂಡ ಪತಿ ಅಜೀತ್ ಆಕೆಗೆ ಬುದ್ಧಿವಾದ ಹೇಳಿದ್ದ. ಇದೇ ಕಾರಣಕ್ಕೆ ತೇಜು ಕೋಪಗೊಂಡು ಪತಿಯ ಮೇಲೆ ಹಲ್ಲೆ ಮಾಡಿದ್ದಾಳೆ ಎನ್ನಲಾಗಿದೆ. ಪತ್ನಿಯ ಈ ನಡೆಯಿಂದ ಬೇಸತ್ತಿದ್ದ ಅಜೀತ್ ಆಕೆಯನ್ನು ಪ್ರಶ್ನಿಸಿದ್ದೇ ಆತನಿಗೆ ಮುಳುವಾಯಿತು. Read this also : Meerut: ಮೀರತ್ ನಲ್ಲಿ ಮತ್ತೊಬ್ಬ ಪತಿಯ ಭೀಕರ ಹತ್ಯೆ, ಪತ್ನಿ-ಪ್ರಿಯಕರ ಒಟ್ಟಾಗಿ ಗಂಡನನ್ನು ಹಾವಿನಿಂದ ಕಚ್ಚಿಸಿ ಕೊಂದ್ರು…!
Crime – ಪೊಲೀಸರಿಂದ ತನಿಖೆ ಚುರುಕು
ಘಟನೆಯ ವಿಷಯ ತಿಳಿಯುತ್ತಿದ್ದಂತೆಯೇ ಡಿವೈಎಸ್ಪಿ ಬಸವರಾಜ ಯಲಿಗಾರ ಹಾಗೂ ಇತರ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆದರ್ಶನಗರ ಪೊಲೀಸರು ಆರೋಪಿ ತೇಜುಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಪೊಲೀಸರ ತನಿಖೆಯಿಂದ ಈ ಘಟನೆಗೆ ಸಂಬಂಧಿಸಿದ ಹೆಚ್ಚಿನ ಮಾಹಿತಿ ಲಭ್ಯವಾಗುವ ಸಾಧ್ಯತೆ ಇದೆ. ಸದ್ಯಕ್ಕೆ ಆದರ್ಶ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.