Sunday, June 22, 2025
HomeStateCardiac Arrest : 19ರ ಹರೆಯದಲ್ಲೇ ಇಬ್ಬರು ಯುವಕರ ದುರಂತ ಸಾವು – ಹೆಚ್ಚಿದ ಕಳವಳ!

Cardiac Arrest : 19ರ ಹರೆಯದಲ್ಲೇ ಇಬ್ಬರು ಯುವಕರ ದುರಂತ ಸಾವು – ಹೆಚ್ಚಿದ ಕಳವಳ!

Cardiac Arrest – ರಾಜ್ಯದಲ್ಲಿ ಇತ್ತೀಚೆಗೆ ಹೃದಯ ಸಂಬಂಧಿ ಸಮಸ್ಯೆಗಳಿಂದ ಚಿಕ್ಕ ವಯಸ್ಸಿನವರ ಸಾವುಗಳು ಹೆಚ್ಚುತ್ತಿರುವುದು ಆತಂಕ ಮೂಡಿಸಿದೆ. ಇದೀಗ ಹಾಸನ ಜಿಲ್ಲೆಗೆ ಸೇರಿದ 19 ವರ್ಷದ ಇಬ್ಬರು ಯುವಕ-ಯುವತಿಯರು ದಿಢೀರ್‌ ಹೃದಯಾಘಾತ (Cardiac Arrest) ಮತ್ತು ಹೃದಯ ವೈಫಲ್ಯ (Heart Failure) ದಿಂದ ಮೃತಪಟ್ಟಿದ್ದು, ಈ ಕಳವಳಕ್ಕೆ ಮತ್ತಷ್ಟು ಪುಷ್ಟಿ ನೀಡಿದಂತಾಗಿದೆ. ಈ ಎರಡೂ ದುರಂತಗಳು ಯುವ ಪೀಳಿಗೆಯ ಆರೋಗ್ಯದ ಕುರಿತು ಗಂಭೀರ ಚಿಂತನೆಗೆ ಹಚ್ಚಿವೆ.

Two 19-year-old youths from Karnataka die due to sudden cardiac arrest and heart failure, raising concern about increasing heart issues in young adults

Cardiac Arrest – ಹೊಳೆನರಸೀಪುರದಲ್ಲಿ ಸಂಧ್ಯಾ ಸಾವು

ಹೊಳೆನರಸೀಪುರ ಪಟ್ಟಣದ ಮಡಿವಾಳ ಬಡಾವಣೆಯ ನಿವಾಸಿಗಳಾದ ವೆಂಕಟೇಶ್ ಮತ್ತು ಪೂರ್ಣಿಮಾ ದಂಪತಿಗಳ ಪುತ್ರಿ, 19 ವರ್ಷದ ಸಂಧ್ಯಾ ಅಂತಿಮ ವರ್ಷದ ಡಿಪ್ಲೊಮಾ ಮುಗಿಸಿದ್ದಳು. ದುರದೃಷ್ಟವಶಾತ್, ಬಾತ್‌ರೂಂಗೆ ತೆರಳಿದ್ದಾಗ ದಿಢೀರನೇ ಕುಸಿದು ಬಿದ್ದಿದ್ದಾಳೆ. ತಕ್ಷಣವೇ ಪೋಷಕರು ಬಾಗಿಲು ಒಡೆದು ನೋಡಿದಾಗ ಸಂಧ್ಯಾ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದಳು. ಆಸ್ಪತ್ರೆಗೆ ಸಾಗಿಸುವಷ್ಟರಲ್ಲೇ ಆಕೆಯ ಜೀವಪಕ್ಷಿ ಹಾರಿಹೋಗಿದೆ ಎಂದು ವೈದ್ಯರು ದೃಢಪಡಿಸಿದ್ದಾರೆ. ಸಂಧ್ಯಾ ಅವರ ದಿಢೀರ್‌ ಸಾವು ಕುಟುಂಬಕ್ಕೆ ತೀವ್ರ ಆಘಾತ ನೀಡಿದೆ.

Read this also : ಹೃದಯಾಘಾತಕ್ಕೆ ಬಲಿಯಾದ 3 ನೇ ತರಗತಿ ಬಾಲಕಿ, ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾದ ಭಯಾನಕ ವಿಡಿಯೋ….!

Cardiac Arrest – ಬೆಂಗಳೂರಿನಲ್ಲಿ ಕ್ಯಾಬ್‌ ಚಾಲಕ ಅಭಿಷೇಕ್‌ಗೆ ಹೃದಯಾಘಾತ

ಅರಕಲಗೂಡು ತಾಲೂಕಿನ ಕಾಡನೂರು ಗ್ರಾಮದ ನಿವಾಸಿ, 19 ವರ್ಷದ ಅಭಿಷೇಕ್‌ ಬೆಂಗಳೂರಿನಲ್ಲಿ ಕ್ಯಾಬ್‌ ಚಾಲಕನಾಗಿ ಕೆಲಸ ಮಾಡುತ್ತಿದ್ದ. ಬಸವೇಶ್ವರ ನಗರದಲ್ಲಿ ನಿಂತಿದ್ದ ಜಾಗದಲ್ಲೇ ಅಭಿಷೇಕ್‌ ಕುಸಿದು ಬಿದ್ದಿದ್ದಾನೆ. ಸ್ಥಳೀಯರು ತಕ್ಷಣ ಆತನನ್ನು ಆಸ್ಪತ್ರೆಗೆ ಕರೆದೊಯ್ಯಲು ಮುಂದಾಗಿದ್ದಾರೆ. ಆದರೆ, ಮಾರ್ಗ ಮಧ್ಯೆಯೇ ಯುವಕ ಹೃದಯಾಘಾತ (Heart Attack) ದಿಂದ ಸಾವನ್ನಪ್ಪಿದ್ದಾನೆ ಎಂದು ವೈದ್ಯರು ಘೋಷಿಸಿದ್ದಾರೆ. ಅನಸೂಯ ಮತ್ತು ರಾಮಕೃಷ್ಣ ದಂಪತಿಗಳ ಪುತ್ರನಾದ ಅಭಿಷೇಕ್‌ನ ಅಗಲಿಕೆ ಅವರ ಕುಟುಂಬದಲ್ಲಿ ಹೇಳಲಾಗದ ದುಃಖವನ್ನು ತಂದಿದೆ.

Two 19-year-old youths from Karnataka die due to sudden cardiac arrest and heart failure, raising concern about increasing heart issues in young adults

ಯುವವರಲ್ಲಿ ಹೆಚ್ಚಿದ ಹೃದಯ ಸಮಸ್ಯೆಗಳು: ಕಾರಣಗಳೇನು?

ಇತ್ತೀಚಿನ ದಿನಗಳಲ್ಲಿ ಯುವಕರಲ್ಲಿ ಹೃದಯ ಸಮಸ್ಯೆ (Heart Problems) ಗಳು ಹೆಚ್ಚಾಗುತ್ತಿರುವುದು ವೈದ್ಯಕೀಯ ಲೋಕದಲ್ಲಿ ಆತಂಕ ಮೂಡಿಸಿದೆ. ಜೀವನಶೈಲಿಯ ಬದಲಾವಣೆಗಳು, ಒತ್ತಡ, ಅನಾರೋಗ್ಯಕರ ಆಹಾರ ಪದ್ಧತಿ, ದೈಹಿಕ ಚಟುವಟಿಕೆಯ ಕೊರತೆ, ಮತ್ತು ಕೆಲವೊಮ್ಮೆ ಜನ್ಮಜಾತ ಹೃದಯ ದೋಷಗಳು ಇದಕ್ಕೆ ಕಾರಣವಿರಬಹುದು ಎಂದು ತಜ್ಞರು ಅಭಿಪ್ರಾಯಪಡುತ್ತಾರೆ. ಯುವಜನರು ತಮ್ಮ ಆರೋಗ್ಯದ ಬಗ್ಗೆ ಹೆಚ್ಚು ಜಾಗೃತರಾಗಿರಬೇಕು ಮತ್ತು ನಿಯಮಿತ ಆರೋಗ್ಯ ತಪಾಸಣೆಗಳನ್ನು ಮಾಡಿಸಿಕೊಳ್ಳುವುದು ಅತ್ಯಗತ್ಯ.

by Adminhttp://ismkannadanews.com
Welcome to ISM Kannada News, if you want to contact us, then feel free to say anything about www.ismkannadanews.com
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular