ಡೊನಾಲ್ಡ್ ಟ್ರಂಪ್ ಅವರ ಹೇಳಿಕೆಗೆ ಸಂಬಂಧಿಸಿದಂತೆ ರಾಹುಲ್ ಗಾಂಧಿ (Rahul Gandhi) ಅವರು ಕೇಳಿದ ಪ್ರಶ್ನೆಗೆ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಲೋಕಸಭೆಯಲ್ಲಿ ಉತ್ತರಿಸಿದ್ದಾರೆ. ಇತ್ತೀಚೆಗೆ ಪಹಲ್ಗಾಮ್ ದಾಳಿ ಮತ್ತು ಆಪರೇಷನ್ ಸಿಂಧೂರ್ (Operation Sindhur) ಕುರಿತು ನಡೆದ ಚರ್ಚೆಯಲ್ಲಿ ಪ್ರಧಾನಿಯವರು ಈ ಸ್ಪಷ್ಟನೆ ನೀಡಿದರು.

Narendra Modi – ಆಪರೇಷನ್ ಸಿಂಧೂರ್ ಬಗ್ಗೆ ಚರ್ಚೆಗೆ ಬೇಡಿಕೆ
ಸದನದಲ್ಲಿ ಆಪರೇಷನ್ ಸಿಂಧೂರ್ ಕುರಿತು ಚರ್ಚೆಗೆ ಕಾಂಗ್ರೆಸ್ (Congress) ತೀವ್ರವಾಗಿ ಪಟ್ಟು ಹಿಡಿದಿತ್ತು. ಟ್ರಂಪ್ ಹೇಳಿಕೆಯನ್ನು ವಿವಾದವನ್ನಾಗಿ ಮಾಡಿ, ಅದನ್ನು ಅಸ್ತ್ರವಾಗಿ ಬಳಸಿಕೊಂಡು ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವ ಪ್ರಯತ್ನ ನಡೆದಿತ್ತು. ಕದನ ವಿರಾಮದ ನಂತರ ರಾಹುಲ್ ಗಾಂಧಿ ಅವರು ಪ್ರಧಾನಿ ಮೋದಿ ಅವರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ರಾಹುಲ್ ಗಾಂಧಿ ಅವರು, “ಡೊನಾಲ್ಡ್ ಟ್ರಂಪ್ 29 ಬಾರಿ ಕದನ ವಿರಾಮದ ಪ್ರಸ್ತಾಪವನ್ನು ಮಾಡಿದ್ದರು ಎಂಬುದು ಸುಳ್ಳು ಎಂದು ಒಪ್ಪಿಕೊಳ್ಳಲು ನಾವು ಸಿದ್ಧರಿದ್ದೇವೆ. ಆದರೆ, ತನ್ನ ಅಜ್ಜಿ ಇಂದಿರಾ ಗಾಂಧಿ ಅವರಿಗಿರುವ ಅರ್ಧದಷ್ಟು ಧೈರ್ಯ ಇದ್ದರೆ ಪ್ರಧಾನಿ ಮೋದಿ ಧೈರ್ಯದಿಂದ ಇದು ಸುಳ್ಳೆಂದು ಹೇಳಲಿ” ಎಂದು ಸವಾಲು ಹಾಕಿದ್ದರು.
Narendra Modi – ಪ್ರಧಾನಿ ಮೋದಿಯವರ ಖಡಕ್ ಪ್ರತ್ಯುತ್ತರ
ರಾಹುಲ್ ಗಾಂಧಿ ಅವರ ಈ ಪ್ರಶ್ನೆಗೆ ಲೋಕಸಭೆಯಲ್ಲಿ ಪ್ರಧಾನಿ ಮೋದಿ ಅವರು ಉತ್ತರ ನೀಡಿದರು. “ಮೇ 9 ರ ರಾತ್ರಿ ಅಮೆರಿಕ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಅವರಿಂದ 3-4 ಬಾರಿ ಕರೆ ಬಂದಿತ್ತು. ನಾನು ಮೀಟಿಂಗ್ನಲ್ಲಿದ್ದೆ. ನಂತರ, ಅವರು ಮತ್ತೆ ಕರೆ ಮಾಡಿದಾಗ, ಪಾಕಿಸ್ತಾನವು ದೊಡ್ಡ ದಾಳಿಯನ್ನು ಯೋಜಿಸುತ್ತಿದೆ ಎಂದು ತಿಳಿಸಿದ್ದರು. ಪಾಕಿಸ್ತಾನವು ಅಂತಹ ಉದ್ದೇಶಗಳನ್ನು ಹೊಂದಿದ್ದರೆ, ಅದು ಅವರಿಗೆ ಭಾರಿ ಬೆಲೆ ತೆರಬೇಕಾಗುತ್ತದೆ. ಅವರು ಗುಂಡುಗಳನ್ನು ಹಾರಿಸಿದರೆ, ನಾವು ಬಾಂಬ್ಗಳಿಂದ ಪ್ರತಿಕ್ರಿಯಿಸುತ್ತೇವೆ ಎಂದು ನಾನು ಅವರಿಗೆ ಉತ್ತರಿಸಿದ್ದೆ. ಮುಂದುವರಿದು, ಈ ಸಂಭಾಷಣೆ ಮೇ 9 ರ ರಾತ್ರಿ ನಡೆದಿದ್ದು, ಮೇ 10 ರ ಬೆಳಗ್ಗೆ ಭಾರತವು ಪಾಕಿಸ್ತಾನದ ಮಿಲಿಟರಿ ಸಾಮರ್ಥ್ಯಗಳನ್ನು ನಾಶಪಡಿಸಿದೆ ಎಂದು ಸ್ಪಷ್ಟಪಡಿಸಿದರು.
ಪಾಕಿಸ್ತಾನದ ಕದನ ವಿರಾಮ ಮನವಿ ಸ್ಪಷ್ಟನೆ
ಮೇ 10 ರ ರಾತ್ರಿ ಪಾಕಿಸ್ತಾನ ಕದನ ವಿರಾಮಕ್ಕೆ ಮನವಿ ಮಾಡಿತು ಎಂದು ಪ್ರಧಾನಿ ನರೇಂದ್ರ ಮೋದಿ ಬಹಿರಂಗಪಡಿಸಿದರು. ಭಾರತದ ದಾಳಿಯ ತೀವ್ರತೆಯನ್ನು ಇನ್ನು ಮುಂದೆ ತಡೆದುಕೊಳ್ಳಲು ಸಾಧ್ಯವಿಲ್ಲ ಎಂದು ಪಾಕಿಸ್ತಾನ ಒಪ್ಪಿಕೊಂಡಿತು. “ನಡೆದಿದ್ದು ಇಷ್ಟೇ ಹೊರತು ಯಾವುದೇ ಜಾಗತಿಕ ನಾಯಕರೂ ‘ಆಪರೇಷನ್ ಸಿಂಧೂರ್’ ನಿಲ್ಲಿಸುವಂತೆ ಕೇಳಲಿಲ್ಲ” ಎಂಬುದನ್ನು ಪ್ರಧಾನಿ ಸ್ಪಷ್ಟಪಡಿಸಿದರು.

Narendra Modi – ಭಾರತಕ್ಕೆ ವಿಶ್ವದಿಂದ ಬೆಂಬಲ, ಕಾಂಗ್ರೆಸ್ನಿಂದ ಅಲ್ಲ: ಮೋದಿ
ಪ್ರಧಾನಿ ನರೇಂದ್ರ ಮೋದಿ ಅವರು ಲೋಕಸಭೆಯಲ್ಲಿ ಮಾತನಾಡಿ, “ಭಾರತಕ್ಕೆ ಇಡೀ ವಿಶ್ವದಿಂದಲೇ ಬೆಂಬಲ ಸಿಕ್ಕಿತ್ತು, ಆದರೆ ಕಾಂಗ್ರೆಸ್ ಬೆಂಬಲ ಸಿಗಲಿಲ್ಲ” ಎಂದು ಹೇಳಿದರು. ಪಹಲ್ಗಾಮ್ ದಾಳಿಗೆ ಪ್ರತಿಯಾಗಿ ಭಾರತವು ಪಾಕಿಸ್ತಾನದ ಮೇಲೆ ದಾಳಿ ನಡೆಸಿದಾಗ, “ನಮಗೆ ಎಲ್ಲಾ ದೇಶಗಳು ಸಹಕಾರ ನೀಡಿದವು, ಆದರೆ ಕಾಂಗ್ರೆಸ್ನಿಂದ ಬೆಂಬಲ ಸಿಗಲಿಲ್ಲ” ಎಂದು ಅವರು ತಿಳಿಸಿದರು.
“193 ದೇಶಗಳ ಪೈಕಿ ಮೂರು ದೇಶಗಳು ಮಾತ್ರ ಪಾಕಿಸ್ತಾನದ ಪರವಾಗಿದ್ದವು, ಉಳಿದೆಲ್ಲಾ ದೇಶಗಳು ಭಾರತದ ಪರವಾಗಿದ್ದವು. ಆದರೆ ಕಾಂಗ್ರೆಸ್ ನಮ್ಮ ಸೈನಿಕರ ಶಕ್ತಿ ಬಗ್ಗೆ ಅನುಮಾನ ವ್ಯಕ್ತಪಡಿಸಿತ್ತು. ನಮ್ಮ ಬಳಿ ಪಾಕಿಸ್ತಾನದಂತೆಯೇ ಪುರಾವೆ ಕೇಳಿತ್ತು” ಎಂದು ಪ್ರಧಾನಿ ಆರೋಪಿಸಿದರು. Read this also : ಪಹಲ್ಗಾಮ್ ದಾಳಿ: ಭೂಲೋಕದ ಸ್ವರ್ಗ ಕಾಶ್ಮೀರದಲ್ಲಿ ರಕ್ತಪಾತ – ಉಗ್ರರ ಕೃತ್ಯದ ಹಿಂದಿನ ಕರಾಳ ಸತ್ಯ!
ಕಾಂಗ್ರೆಸ್ ಮತ್ತು ಪಾಕಿಸ್ತಾನದ ಪಿತೂರಿಗಳ ವಕ್ತಾರರು
“ಕಾಂಗ್ರೆಸ್ ತನ್ನ ಸಮಸ್ಯೆಗಳಿಗೆ ಪಾಕಿಸ್ತಾನವನ್ನು ಅವಲಂಬಿಸಿದೆ. ಇತ್ತೀಚಿನ ದಿನಗಳಲ್ಲಿ ನಿರೂಪಣೆ ದೊಡ್ಡ ಪಾತ್ರ ವಹಿಸುತ್ತದೆ, ನಿರೂಪಣೆಗಳನ್ನು ರಚಿಸುವ ಮೂಲಕ ಮತ್ತು AI ಬಳಸಿಕೊಂಡು ಸೈನಿಕರ ನೈತಿಕತೆಯನ್ನು ಕುಗ್ಗಿಸಲು ಆಟಗಳನ್ನು ಆಡಲಾಗುತ್ತದೆ. ಸಾರ್ವಜನಿಕರಲ್ಲಿ ಅಪನಂಬಿಕೆಯನ್ನು ಸೃಷ್ಟಿಸಲು ಹಲವು ಪ್ರಯತ್ನಗಳು ನಡೆಯುತ್ತಿವೆ. ದುರದೃಷ್ಟವಶಾತ್, ಕಾಂಗ್ರೆಸ್ ಮತ್ತು ಅದರ ಮಿತ್ರಪಕ್ಷಗಳು ಪಾಕಿಸ್ತಾನದ ಇಂತಹ ಪಿತೂರಿಗಳ ವಕ್ತಾರರಾಗಿ ಮಾರ್ಪಟ್ಟಿವೆ” ಎಂದು ಪ್ರಧಾನಿ ಮೋದಿ ಲೋಕಸಭೆಯಲ್ಲಿ ಖಂಡಿಸಿದರು.
