Sunday, June 1, 2025
HomeEntertainmentAllu Arjun : ನನ್ನ ಚಾರಿತ್ಯ ಹರಣ ಮಾಡುವ ಕೆಲಸ ಆಗುತ್ತಿದೆ ಎಂದು ಬೇಸರಗೊಂಡ ಐಕಾನ್...

Allu Arjun : ನನ್ನ ಚಾರಿತ್ಯ ಹರಣ ಮಾಡುವ ಕೆಲಸ ಆಗುತ್ತಿದೆ ಎಂದು ಬೇಸರಗೊಂಡ ಐಕಾನ್ ಸ್ಟಾರ್ ಅಲ್ಲು ಅರ್ಜುನ್….!

Allu Arjun – ಪುಷ್ಪ 2 ಪ್ರೀಮಿಯರ್‌ ಶೋ ವೇಳೆ ಕಾಲ್ತುಳಿತಕ್ಕೆ ಮಹಿಳೆ ಸಾವಿಗೀಡಾದ ಪ್ರಕರಣಕ್ಕೆ ಸಂಬಂಧಿಸಿದಂತೆ ತಪ್ಪು ಮಾಹಿತಿ ಹರಡಲಾಗುತ್ತಿದೆ. ಈ ಘಟನೆ ಸಿಎಂ ರೇವಂತ್ ರೆಡ್ಡಿ ಮತ್ತು ಅಲ್ಲು ಅರ್ಜುನ್ (Allu Arjun)  ನಡುವಿನ ಜಗಳವಾಗಿ ಪರಿಣಮಿಸಿದೆ. ವಿಧಾನಸಭೆಯಲ್ಲಿ ಸಿಎಂ ರೇವಂತ್ ರೆಡ್ಡಿ ಮಾಡಿದ ಹೇಳಿಕೆಗಳಿಗೆ ಅಲ್ಲು ಅರ್ಜುನ್ ಪ್ರತಿಕ್ರಿಯಿಸಿದ್ದಾರೆ. ಈ ಕುರಿತು ಶನಿವಾರ ಮಾದ್ಯಮಗಳೊಂದಿಗೆ ಮಾತನಾಡುತ್ತಾ ಇಲ್ಲಿ ನನ್ನ ಚಾರಿತ್ಯಹರಣ ಮಾಡುವ ಕೆಲಸ ಆಗುತ್ತಿದೆ ಎಂದು ನಟ (Allu Arjun) ಅಲ್ಲು ಅರ್ಜುನ್ ಬೇಸರಗೊಂಡಿದ್ದಾರೆ ಎನ್ನಲಾಗಿದೆ.

Allu Arjun Press Meet

ಶನಿವಾರ ಅವರು ಮಾಧ್ಯಮದವರೊಂದಿಗೆ ಮಾತನಾಡಿದ (Allu Arjun) ಅವರು, ಹೈದರಾಬಾದ್​ನ ಸಂಧ್ಯಾ ಥಿಯೇಟರ್‍ ನಲ್ಲಿ ನಡೆದ (Pushpa 2) ಘಟನೆ ಸಂಪೂರ್ಣವಾಗಿ ಆಕಸ್ಮಿಕ ವಾಗಿ ನಡೆದ ಘಟನೆಯಾಗಿದೆ.  ಇದು ತುಂಬಾ ನೋವಿನ ಸಂಗತಿ. ಇಲ್ಲಿ ಯಾರದ್ದೂ ತಪ್ಪಿಲ್ಲ. ಇದೊಂದು ಅಪಘಾತ. ಇದು ಅಪಘಾತ ಅಷ್ಟೇ. ಇದು ಯಾರ (Allu Arjun) ನಿಯಂತ್ರಣದಲ್ಲೂ ಇರಲಿಲ್ಲ. ನಾನು ಕುಟುಂಬಕ್ಕೆ ಸಂತಾಪ ಸೂಚಿಸುತ್ತೇನೆ. ರೇವತಿ ಅವರ ಮಗ ಬೇಗ ಚೇತರಿಕೆ ಕಾಣಲಿ ಎಂದು ಕೋರಿಕೊಳ್ಳುತ್ತೇನೆ. ನಾನು ಅವರ ಆರೋಗ್ಯದ ಕುರಿತು ಅಪ್ಡೇಟ್ ಸಹ ಪಡೆಯುತ್ತಿದ್ದೇನೆ’ ಎಂದು ಅಲ್ಲು ಅರ್ಜುನ್ (Allu Arjun) ಸುದ್ದಿಗೋಷ್ಟಿಯಲ್ಲಿ ಹೇಳಿದ್ದಾರೆ.

ನನ್ನ ವಿರುದ್ದ ಇದೀಗ ತಪ್ಪು ಮಾಹಿತಿ ಹರಡಲಾಗುತ್ತಿದೆ. ನಾನು ಯಾರನ್ನೂ, ಯಾವುದೇ ಇಲಾಖೆ ಅಥವಾ ರಾಜಕೀಯ ನಾಯಕರನ್ನು ದೂಷಿಸಲ್ಲ. ಇದು ಅವಮಾನಕರ ಮತ್ತು ಚಾರಿತ್ರ್ಯ (Allu Arjun) ಹರಣವಾಗುತ್ತಿರುವಂತೆ ಭಾಸವಾಗುತ್ತಿದೆ. ದಯವಿಟ್ಟು ನನ್ನ ಬಗ್ಗೆ ಜಡ್ಜ್‌ ಮಾಡಬೇಡಿ. ನಾನು ಎಲ್ಲಾ ಸೆಲಬ್ರೇಷನ್​ ಗಳನ್ನು ರದ್ದು ಮಾಡಿದ್ದೇನೆ. ಮೂರು ವರ್ಷ ಕಷ್ಟಪಟ್ಟು ಮಾಡಿದ ಸಿನಿಮಾ ಹೇಗಿದೆ ಎಂಬುದನ್ನು ಕೂಡ ನಾನು ನೋಡುತ್ತಿಲ್ಲ. ಮನೆಯಲ್ಲಿ (Allu Arjun) ಒಬ್ಬನೇ ಕೂರುತ್ತಿದ್ದೇನೆ. ನಾನು ಇದಕ್ಕೆ ನೇರ ಕಾರಣ ಅಲ್ಲ ಎಂದು ನನಗೆ ನಾನೇ ಹೇಳಿಕೊಳ್ಳುತ್ತಿದ್ದೇನೆ ಎಂದು ಭಾವುಕರಾಗಿದ್ದಾರೆ. ಜನರನ್ನು ಮನರಂಜಿಸಬೇಕೆಂಬುದು ನನ್ನ ಉದ್ದೇಶ. (Allu Arjun)  ಥಿಯೇಟರ್‍ ಅಂದರೇ ಒಂದು ದೇವಸ್ಥಾನವಿದ್ದಂತೆ. ದೇವಾಲಯದಲ್ಲಿ ಏನಾದರೂ ಅವಘಡವಾದರೇ ನನಗಿಂತ ಇನ್ಯಾರು ಬೇಸರ ಮಾಡಿಕೊಳ್ಳಲು ಸಾಧ್ಯ. ಸುಮಾರು 2 ದಶಗಳಲ್ಲಿ ಗಳಿಸಿದಂತಹ ಗೌರವ ಒಂದು ದಿನದಲ್ಲಿ ನಾಶವಾಗುತ್ತದೆ ಎಂದರೇ ಅದು ತುಂಬಾನೆ ಬೇಸರ ಉಂಟು ಮಾಡುತ್ತಿದೆ ಎಂದು ಬೇಸರಗೊಂಡಿದ್ದಾರೆ.

Allu Arjun Press Meet 1

ಇನ್ನೂ ಸಂಧ್ಯಾ ಥಿಯೇಟರ್‍ ಬಳಿ ನಾನು ಒಪ್ಪಿಗೆ ಇಲ್ಲದೇ ಹೋಗಿದ್ದೇನೆ ಎಂಬುದು ಸುಳ್ಳು. ಅಲ್ಲಿ ಪೊಲೀಸರೂ ಸಹ ಇದ್ದರು. ಅನುಮತಿಯಿಲ್ಲದಿದ್ದರೇ ಅವರೇ (Allu Arjun) ಹೇಳುತ್ತಿದ್ದರಲ್ಲವೇ, ನಾನು ಒಪ್ಪಿಗೆ ಪಡೆದಿದ್ದೇನೆ ಎಂಬುದು ಸ್ಪಷ್ಟವಲ್ಲವೇ. ಅಲ್ಲಿ ರೋಡ್ ಶೋ ಆಗಿದೆ ಎಂದು ಹೇಳಲಾಗಿದೆ ಆದರೆ ಅದು ಸುಳ್ಳು. ಕೈ ಬೀಸಿದರೇ ಅಭಿಮಾನಿಗಳು ಖುಷಿ ಪಡುತ್ತಾರೆ. ಆದ್ದರಿಂದ ನಾನು ಕೈ ಬೀಸಿದೆ, ಇದನ್ನು ಎಲ್ಲಾ ಹಿರೋಗಳು ಮಾಡುತ್ತಾರೆ. ಹೊರಗೆ ಸಾಕಷ್ಟು ಜನ ಸೇರುತ್ತಿದ್ದಾರೆ ದಯವಿಟ್ಟು ನೀವು ಇಲ್ಲಿಂದ ಹೊರಡಿ ಎಂದು ಪೊಲೀಸರು ಹೇಳಿದ್ದರು. ನಾನು ಕೂಡಲೇ ಅಲ್ಲಿಂದ ಮನೆಗೆ ಹೊರಟುಬಿಟ್ಟೆ. (Allu Arjun) ಮರು ದಿನ ಮಹಿಳೆ ಸತ್ತ ವಿಚಾರ ತಿಳಿಯಿತು. ಸುದ್ದಿ ತಿಳಿಯುತ್ತಿದ್ದಂತೆ ನನಗೆ ಶಾಕ್ ಆಯಿತು. ಕೂಡಲೇ ನನ್ನ ಆಪ್ತರಿಂದ ಮಾಹಿತಿ ಪಡೆದುಕೊಂಡೆ. ಅವರನ್ನು ಹೋಗಿ ವಿಚಾರಿಸಿ ಅಂತಾ ಹೇಳಿದ್ದೆ. ಅದೇ ದಿನ ನಾನು ಸಹ ಆಸ್ಪತ್ರೆಗೆ ತೆರಳಲು ನಿರ್ಧಾರ ಮಾಡಿದ್ದೇ, ಆದರೆ ಬೇಡ ಎಂದು ಹೇಳಿದ್ದರು ಎಂದು ನಡೆದ ಘಟನೆಯನ್ನು (Allu Arjun) ನಟ ಅಲ್ಲು ಅರ್ಜುನ್ ಮಾದ್ಯಮಗಳೊಂದಿಗೆ ಹಂಚಿಕೊಂಡರು.

by Adminhttp://ismkannadanews.com
Welcome to ISM Kannada News, if you want to contact us, then feel free to say anything about www.ismkannadanews.com
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular