ಯಾದಗಿರಿ ಜಿಲ್ಲೆಯ ಗೋನಾಳ ಗ್ರಾಮದಲ್ಲಿ ನಡೆದ ಈ ಘಟನೆ ಈಗ ರಾಜ್ಯಾದ್ಯಂತ ಸಂಚಲನ ಮೂಡಿಸಿದೆ. ಆರಂಭದಲ್ಲಿ ಇದೊಂದು ಸಾಮಾನ್ಯ ಕೊಲೆ ಪ್ರಕರಣದಂತೆ ಕಂಡರೂ, ಪೊಲೀಸರು ತನಿಖೆ ಆಳಕ್ಕಿಳಿದಂತೆ ಬಯಲಾದ (Yadgir Murder Case) ಸತ್ಯಗಳು ಬೆಚ್ಚಿಬೀಳಿಸುವಂತಿವೆ. ತನ್ನ ಕಾಮದ ಹಸಿವಿಗೆ ಸ್ವಂತ ಸೊಸೆಯನ್ನೂ ಬಿಡದ ತಂದೆಯನ್ನು ಮಗನೇ ಸುಪಾರಿ ಕೊಟ್ಟು ಕೊಲ್ಲಿಸಿರುವ ಆಘಾತಕಾರಿ ಸಂಗತಿ ಈಗ ಬೆಳಕಿಗೆ ಬಂದಿದೆ.

Yadgir Murder Case – ತನಿಖೆಗೆ ಸಿಕ್ಕ ಬಿಗ್ ಟ್ವಿಸ್ಟ್ ಮತ್ತು ಹಂತಕರ ಬಂಧನ
ಮಾರ್ಚ್ 12 ರಂದು ಗೋನಾಳ ಗ್ರಾಮದ ನಿವಾಸಿ 74 ವರ್ಷದ ಪಂಪಣ್ಣ ಸಜ್ಜನ ಎಂಬುವವರ ಕೊಲೆಯಾಗಿತ್ತು. ಘಟನೆ ನಡೆದ ನಂತರ ಪಂಪಣ್ಣನ ಪುತ್ರ ಶರಣಬಸಪ್ಪ ಪೊಲೀಸರಿಗೆ ದೂರು ನೀಡಿದ್ದನು. ಆರಂಭದಲ್ಲಿ ಪೊಲೀಸರಿಗೆ ಈ ಕೊಲೆ ಯಾರು ಮಾಡಿದ್ದಾರೆ ಎಂಬ ಬಗ್ಗೆ ಯಾವುದೇ ಸುಳಿವು ಇರಲಿಲ್ಲ. ಆದರೆ ವಡಗೇರಾ ಪೊಲೀಸರು ಹಗಲಿರುಳು ಶ್ರಮಿಸಿ ತನಿಖೆ ನಡೆಸಿದಾಗ ಕೇವಲ ನಾಲ್ಕು ದಿನಗಳಲ್ಲಿ ಕೊಲೆಗಡುಕರನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾದರು. ತಿರುಪತಿ ಮೂಲದ ರಮೇಶ್, ಜಿ.ವಿರೇಶ್, ಎಂ.ವಿರೇಶ್ ಹಾಗೂ ಕೃಷ್ಣ ಎಂಬ ನಾಲ್ವರನ್ನು ಬಂಧಿಸಿದಾಗ ಅಸಲಿ ರಹಸ್ಯ ಬಯಲಾಗಿದೆ.
ವೃದ್ಧನ ಮೊಬೈಲ್ನಲ್ಲಿದ್ದ ಅಸಲಿ ರಹಸ್ಯ
ಪೊಲೀಸರು ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಿದಾಗ ಕೊಲೆಗೆ ಸುಪಾರಿ ಕೊಟ್ಟಿದ್ದು ಪಂಪಣ್ಣನ ಇನ್ನೊಬ್ಬ ಮಗ ನರಸರೆಡ್ಡಿ ಎಂಬುದು ತಿಳಿದುಬಂದಿದೆ. ಮೊದಮೊದಲು ಆಸ್ತಿಗಾಗಿ ಈ ಕೊಲೆ ನಡೆದಿದೆ (Yadgir Murder Case) ಎಂದು ಶಂಕಿಸಲಾಗಿತ್ತು. ಆದರೆ ಪಂಪಣ್ಣ ಬಳಸುತ್ತಿದ್ದ ಮೊಬೈಲ್ ಫೋನ್ ಪರೀಕ್ಷಿಸಿದಾಗ ಪೊಲೀಸರಿಗೆ ಅಚ್ಚರಿಯ ಸಂಗತಿಗಳು ಎದುರಾಗಿವೆ. ಪಂಪಣ್ಣ ಹಲವು ಮಹಿಳೆಯರ ಜೊತೆ ಅನೈತಿಕ ಸಂಬಂಧ ಹೊಂದಿದ್ದ ಫೋಟೋಗಳು ಮತ್ತು ಮಾಹಿತಿಗಳು ಮೊಬೈಲ್ನಲ್ಲಿ ಲಭ್ಯವಾಗಿವೆ. ಈ ಮೂಲಕ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ.
ಆಸ್ತಿ ಸುಖ ಮತ್ತು ಐಷಾರಾಮಿ ಜೀವನದ ಚಟ
ಪಂಪಣ್ಣನಿಗೆ ಸುಮಾರು 48 ಎಕರೆ ಜಮೀನು ಇತ್ತು. ಅದರಲ್ಲಿ ತನ್ನ ಮೂವರು ಮಕ್ಕಳಿಗೆ ತಲಾ 4 ಎಕರೆಯಂತೆ ಕೇವಲ 12 ಎಕರೆ ನೀಡಿ, ಉಳಿದ 36 ಎಕರೆಯನ್ನು ತನ್ನ ಹೆಸರಲ್ಲೇ ಇಟ್ಟುಕೊಂಡಿದ್ದನು. ಈ ಜಮೀನಿನಿಂದ ಬರುತ್ತಿದ್ದ ಲಕ್ಷಾಂತರ ರೂಪಾಯಿ ಆದಾಯವನ್ನು ತನ್ನ ಕಾಮದಾಟಕ್ಕೆ ಮತ್ತು ಮದ್ಯದ ವ್ಯಸನಕ್ಕೆ ಬಳಸುತ್ತಿದ್ದನು. (Yadgir Murder Case) ತನ್ನ ಮಕ್ಕಳ ಜೊತೆ ಊರಲ್ಲಿ ಇರದೆ, ಕಳೆದ 15 ವರ್ಷಗಳಿಂದ ಜಮೀನಿನಲ್ಲಿಯೇ ಶೆಡ್ ಹಾಕಿಕೊಂಡು ಪತ್ನಿಯ ಜೊತೆ ವಾಸವಾಗಿದ್ದನು. ಎಂಟು ವರ್ಷಗಳ ಹಿಂದೆ ಪತ್ನಿ ತೀರಿಕೊಂಡ ನಂತರ ಆತನ ಹಾದಿ ತಪ್ಪಿದ ಜೀವನ ಮತ್ತಷ್ಟು ವಿಕೋಪಕ್ಕೆ ಹೋಗಿತ್ತು. Read this also : ತೆಲಂಗಾಣದಲ್ಲಿ ಬೆಚ್ಚಿಬೀಳಿಸುವ ಘಟನೆ: ಮಕ್ಕಳ ಮೇಲೆಯೇ ಕತ್ತಿಯಿಂದ ಹಲ್ಲೆ ಮಾಡಿದ ತಾಯಿ, ಮಗಳು ಸಾವು!
ಸೊಸೆಯ ಮೇಲೂ ಕಣ್ಣಿಟ್ಟಿದ್ದ ಕಾಮಿಷ್ಟ ತಂದೆ
ಪಂಪಣ್ಣ ತನ್ನ ಕಾಮದ ಹಸಿವನ್ನು ನೀಗಿಸಿಕೊಳ್ಳಲು ಬೇರೆ ಬೇರೆ ಮಹಿಳೆಯರಿಗೆ ಹಣದ ಆಮಿಷ ಒಡ್ಡಿ ತನ್ನ ಶೆಡ್ಗೆ ಕರೆಸಿಕೊಳ್ಳುತ್ತಿದ್ದನು. ಅಷ್ಟೇ ಅಲ್ಲದೆ, ಜಮೀನಿಗೆ ಕೆಲಸಕ್ಕೆ ಬರುವ ಮಹಿಳೆಯರಿಗೂ ಕಿರುಕುಳ ನೀಡುತ್ತಿದ್ದನು. ಎಲ್ಲಕ್ಕಿಂತ ಹೆಚ್ಚಾಗಿ ತನ್ನ ಮಗನ ಹೆಂಡತಿ ಅಂದರೆ ಸ್ವಂತ ಸೊಸೆಯ ಮೇಲೂ ಕಣ್ಣು ಹಾಕಿ ಆಕೆಯೊಂದಿಗೆ ಅಕ್ರಮ ಸಂಬಂಧ (Yadgir Murder Case) ಬೆಳೆಸಲು ಯತ್ನಿಸಿದ್ದನು. ಈ ವಿಷಯ ಮಗ ನರಸರೆಡ್ಡಿಗೆ ತಿಳಿಯುತ್ತಿದ್ದಂತೆಯೇ ಆತ ತೀವ್ರ ಆಕ್ರೋಶಗೊಂಡಿದ್ದನು. ಊರಲ್ಲಿ ಮರ್ಯಾದೆ ಹೋಗುತ್ತಿದೆ ಮತ್ತು ಅಪ್ಪನ ಕಾಮದಾಟ ಮಿತಿ ಮೀರುತ್ತಿದೆ ಎಂದು ಭಾವಿಸಿದ ಮಗ, ತಂದೆಯನ್ನೇ ಮುಗಿಸಲು ನಿರ್ಧರಿಸಿದ್ದನು.

2 ಲಕ್ಷ ರೂಪಾಯಿ ಸುಪಾರಿ ಮತ್ತು ಕೊನೆಯಾದ ಕಾಮದಾಟ
ತಂದೆಯ ವರ್ತನೆಯಿಂದ ರೋಸಿ ಹೋಗಿದ್ದ ನರಸರೆಡ್ಡಿ, ಹೇಗಾದರೂ ಮಾಡಿ ಈತನನ್ನು ಮುಗಿಸಬೇಕೆಂದು ಪ್ಲ್ಯಾನ್ ಮಾಡಿದ್ದನು. ಇದಕ್ಕಾಗಿ ತಿರುಪತಿ ಮೂಲದ ನಾಲ್ವರು ಹಂತಕರಿಗೆ 2 ಲಕ್ಷ ರೂಪಾಯಿ (Yadgir Murder Case) ಸುಪಾರಿ ನೀಡಿ ತನ್ನ ತಂದೆಯನ್ನು ಕೊಲೆ ಮಾಡಿಸಿದ್ದಾನೆ ಎಂಬುದು ತನಿಖೆಯಲ್ಲಿ ಸಾಬೀತಾಗಿದೆ. ಸದ್ಯ ಪೊಲೀಸರು ಸುಪಾರಿ ನೀಡಿದ ಮಗ ಸೇರಿದಂತೆ ಒಟ್ಟು ಐವರು ಆರೋಪಿಗಳನ್ನು ಜೈಲಿಗೆ ಕಳುಹಿಸಿದ್ದಾರೆ. ನೈತಿಕತೆ ಮರೆತ ತಂದೆ ಹಾಗೂ ಕಾನೂನು ಕೈಗೆತ್ತಿಕೊಂಡ ಮಗನ ಈ ಕಥೆ ಇಡೀ ಸಮಾಜಕ್ಕೆ ಒಂದು ಕರಾಳ ಎಚ್ಚರಿಕೆಯಂತಿದೆ.
