ಮನೆಯವರೇ ಮೃತ್ಯುವಾದರೆ ಮನುಷ್ಯ ಇನ್ನಾರನ್ನು ನಂಬಬೇಕು? ಪ್ರೀತಿಯಿಂದ ತುತ್ತು ನೀಡಿ ಬೆಳೆಸಿದ ಮಗ ಮತ್ತು ಹುಟ್ಟಿದ ತಂಗಿಯೇ ಆಸ್ತಿಗಾಗಿ ಹೆಣೆದ ಸಂಚು ಈಗ ಬಯಲಾಗಿದೆ. ತುಮಕೂರು ಜಿಲ್ಲೆಯಲ್ಲಿ ನಡೆದ ಈ (Tumakuru Murder Case) ಘಟನೆ ಕೇವಲ ಒಂದು ಕೊಲೆಯಲ್ಲ, ಇದು ರಕ್ತಸಂಬಂಧಗಳ ನಡುವಿನ ನಂಬಿಕೆಯ ಕತ್ತು ಸೀಳಿದ ಕರಾಳ ಕಥೆ. ಸಾವಿನಲ್ಲೂ ನಾಟಕವಾಡಿದ ಕಿರಾತಕರ ಅಸಲಿ ಮುಖವಾಡ ಈಗ ಪೊಲೀಸ್ ತನಿಖೆಯಲ್ಲಿ ಕಳಚಿ ಬಿದ್ದಿದೆ.

Tumakuru Murder Case – ನಂಬಿಕೆ ದ್ರೋಹದ ಆಘಾತಕಾರಿ ಘಟನೆ
ತುಮಕೂರು ಜಿಲ್ಲೆಯ ತುರುವೇಕೆರೆ ತಾಲೂಕಿನ ಬಿಇಒ ಕಚೇರಿಯಲ್ಲಿ ಎಫ್ಡಿಎ ಆಗಿ ಕೆಲಸ ಮಾಡುತ್ತಿದ್ದ ಜಯಲಕ್ಷ್ಮಿ ಎಂಬುವವರೇ ಕೊಲೆಯಾದ ದುರ್ದೈವಿ. ಇವರನ್ನು ಬೇರೆ ಯಾರೋ ಹತ್ಯೆ ಮಾಡಿಲ್ಲ. ಬದಲಾಗಿ ಇವರು ಅತ್ಯಂತ ಪ್ರೀತಿಯಿಂದ ಸಾಕಿ ಬೆಳೆಸಿದ್ದ ಸಾಕು ಮಗ ಚಂದ್ರಶೇಖರ್ ಮತ್ತು ಸ್ವಂತ ಸಹೋದರಿ ಅನುಸೂಯಾ ಸೇರಿ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾರೆ. ಚಿಕ್ಕನಾಯಕನಹಳ್ಳಿಯ ಜೋಗಿಹಳ್ಳಿಯಲ್ಲಿ ಈ ಘಟನೆ ನಡೆದಿದ್ದು, ಸದ್ಯ ಇಡೀ ಊರು ಈ ಘಟನೆಯಿಂದ ಸ್ತಬ್ಧವಾಗಿದೆ.
ಹಾರ್ಟ್ ಅಟ್ಯಾಕ್ ನಾಟಕವಾಡಿದ್ದ ಆರೋಪಿಗಳು
ಜಯಲಕ್ಷ್ಮಿ ಅವರಿಗೆ ಮಕ್ಕಳಿರಲಿಲ್ಲ ಮತ್ತು ಪತಿ ಕೂಡ ಮೃತಪಟ್ಟಿದ್ದರು. ಈ ಕಾರಣದಿಂದ ಅವರು ತಮ್ಮ ತಂಗಿಯ ಮಗ ಚಂದ್ರಶೇಖರ್ನನ್ನು ದತ್ತು ಪಡೆದು ಸಾಕಿ ಸಲಹಿದ್ದರು. ಜಯಲಕ್ಷ್ಮಿ ಮೃತಪಟ್ಟಾಗ ಆರೋಪಿಗಳು ಇದನ್ನೊಂದು ಸಹಜ ಸಾವು ಎಂದು ಬಿಂಬಿಸಲು ಯತ್ನಿಸಿದ್ದರು. ಜಯಲಕ್ಷ್ಮಿ ಅವರಿಗೆ ಹಾರ್ಟ್ ಅಟ್ಯಾಕ್ ಆಗಿದೆ ಎಂದು ಎಲ್ಲರನ್ನೂ ನಂಬಿಸಲು ಹೋದ ಇವರು, ಅಂತ್ಯಕ್ರಿಯೆಗೂ ಸಕಲ ಸಿದ್ಧತೆ ಮಾಡಿಕೊಂಡಿದ್ದರು. ಆದರೆ ಜಯಲಕ್ಷ್ಮಿ ಅವರ ಆತ್ಮೀಯ (Tumakuru Murder Case) ಗೆಳೆಯ ಶ್ರೀನಿವಾಸ್ ಅವರಿಗೆ ಈ ಸಾವಿನ ಬಗ್ಗೆ ತೀವ್ರ ಅನುಮಾನ ಮೂಡಿ ಪೊಲೀಸರಿಗೆ ದೂರು ನೀಡಿದ್ದರು. ಪೊಲೀಸರು ಸಮಯಪ್ರಜ್ಞೆ ಮೆರೆದು ಶವವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದಾಗ ಅಸಲಿ ಸತ್ಯ ಹೊರಬಿದ್ದಿದೆ.

ಕೊಲೆಕ್ಕೆ ಪ್ರಚೋದನೆ ನೀಡಿದ ಆಸ್ತಿ ಮತ್ತು ನೌಕರಿಯ ಆಸೆ
ಪೊಲೀಸ್ ತನಿಖೆಯಲ್ಲಿ ತಿಳಿದುಬಂದ ಅಂಶಗಳು ನಿಜಕ್ಕೂ ಅಚ್ಚರಿ ಮೂಡಿಸುತ್ತವೆ. ಜಯಲಕ್ಷ್ಮಿ ಅವರು ಸರ್ಕಾರಿ ನೌಕರರಾಗಿದ್ದರಿಂದ ಅವರು ಮೃತಪಟ್ಟರೆ ಅನುಕಂಪದ ಆಧಾರದ ಮೇಲೆ ಸರ್ಕಾರಿ ಕೆಲಸ ಮತ್ತು (Tumakuru Murder Case) ಅವರ ಆಸ್ತಿ ಸಿಗಬಹುದು ಎಂಬ ದುರಾಲೋಚನೆ ಆರೋಪಿಗಳಲ್ಲಿ ಇತ್ತು ಎನ್ನಲಾಗಿದೆ. ಕಳೆದ ಎಂಟು ತಿಂಗಳ ಹಿಂದಷ್ಟೇ ಜಯಲಕ್ಷ್ಮಿ ಅವರ ಮನೆಗೆ ಬಂದಿದ್ದ ಅನುಸೂಯಾ ಮತ್ತು ಚಂದ್ರಶೇಖರ್, ಅಲ್ಲಿಯೇ ಬೀಡು ಬಿಟ್ಟಿದ್ದರು. ಜಯಲಕ್ಷ್ಮಿ ಅವರ ಜೊತೆಗಿದ್ದ ಶ್ರೀನಿವಾಸ್ ಅವರನ್ನು ಕೂಡ ಮನೆಯಿಂದ ಹೊರಹಾಕುವಂತೆ ಒತ್ತಡ ಹೇರಿ ಯಶಸ್ವಿಯಾಗಿದ್ದರು. Read this also : ಬಳ್ಳಾರಿಯಲ್ಲಿ ಬೆಚ್ಚಿಬೀಳಿಸುವ ಘಟನೆ: ಮಂಗಳಮುಖಿ ಸುಹಾಸಿನಿ ಮತ್ತು ಪ್ರೇಮಿ ಶೇಖರ್ ನಿಗೂಢ ಸಾವು!
ಮನೆ ಬದಲಿಸುವ ನಿರ್ಧಾರವೇ ಮುಳುವಾಯಿತೇ?
ಜಯಲಕ್ಷ್ಮಿ ಅವರು ಈ ಕಿರುಕುಳದಿಂದ ಬೇಸತ್ತು ತುರುವೇಕೆರೆಯಲ್ಲಿ ಬೇರೆ ಬಾಡಿಗೆ ಮನೆ ಪಡೆದು ಅಲ್ಲಿಗೆ ಶಿಫ್ಟ್ ಆಗಲು ಸಿದ್ಧತೆ ನಡೆಸಿದ್ದರು. ಈಗಾಗಲೇ ಅಡ್ವಾನ್ಸ್ ಕೂಡ ನೀಡಲಾಗಿತ್ತು. ಒಂದು (Tumakuru Murder Case) ವೇಳೆ ಜಯಲಕ್ಷ್ಮಿ ಅವರು ಅಲ್ಲಿಗೆ ಹೋದರೆ ತಮ್ಮ ಆಟ ನಡೆಯುವುದಿಲ್ಲ ಮತ್ತು ಆಸ್ತಿ ಕೈತಪ್ಪುತ್ತದೆ ಎಂಬ ಭಯದಿಂದ ತಡರಾತ್ರಿ ಇಬ್ಬರೂ ಸೇರಿ ಜಯಲಕ್ಷ್ಮಿ ಅವರನ್ನು ಉಸಿರುಗಟ್ಟಿಸಿ ಕೊಲೆ ಮಾಡಿದ್ದಾರೆ. ಸದ್ಯ ಆರೋಪಿಗಳಾದ ಅನುಸೂಯಾ ಮತ್ತು ಚಂದ್ರಶೇಖರ್ ಈಗ ಪೊಲೀಸರ ಅತಿಥಿಯಾಗಿದ್ದಾರೆ.
