Tumakuru Lovers – ಇತ್ತೀಚೆಗೆ ಯುವಜನರ ಹುಚ್ಚು ಹೆಚ್ಚಾಗಿರುವ ರೀಲ್ಸ್ ಹವ್ಯಾಸ, ಈಗ ಜೀವವನ್ನೇ ಬಲಿಪಡೆದುಕೊಂಡಿದೆ. ರೀಲ್ಸ್ ವೀಡಿಯೊವೊಂದರ ವಿಷಯಕ್ಕೆ ಪ್ರೇಮಿಗಳ ನಡುವೆ ನಡೆದ ಜಗಳ, 22 ವರ್ಷದ ಯುವತಿ ಚೈತನ್ಯಾಳ ಆತ್ಮಹತ್ಯೆಯಲ್ಲಿ ಅಂತ್ಯವಾಗಿದೆ. ತುಮಕೂರು ಗ್ರಾಮಾಂತರದ ಹೊಸಹಳ್ಳಿಯಲ್ಲಿ ಜೂನ್ 23 ರಂದು ರಾತ್ರಿ ನಡೆದ ಈ ಘಟನೆ ಎಲ್ಲೆಡೆ ತೀವ್ರ ಸಂಚಲನ ಮೂಡಿಸಿದೆ.
Tumakuru Lovers – ಪ್ರೀತಿಯ ಜತೆ ರೀಲ್ಸ್ ಹವ್ಯಾಸ
ಚೈತನ್ಯಾ ಅಂತಿಮ ವರ್ಷದ ಪದವಿ ವಿದ್ಯಾರ್ಥಿನಿಯಾಗಿದ್ದಳು. ಓದಿನ ಜತೆಗೆ ಮಾಡೆಲಿಂಗ್ ಮತ್ತು ಮೇಕಪ್ ಆರ್ಟಿಸ್ಟ್ ಆಗಿಯೂ ಕೆಲಸ ಮಾಡುತ್ತಿದ್ದಳು. ಸಾಮಾಜಿಕ ಜಾಲತಾಣಗಳಲ್ಲಿ ಫೋಟೋಶೂಟ್ ಮತ್ತು ರೀಲ್ಸ್ ಅಪ್ಲೋಡ್ ಮಾಡುವುದು ಆಕೆಯ ಹವ್ಯಾಸವಾಗಿತ್ತು. ಆದರೆ, ಇದೇ ಹವ್ಯಾಸ ಆಕೆಯ ಜೀವಕ್ಕೆ ಕುತ್ತು ತರುತ್ತದೆ ಎಂದು ಯಾರೂ ಊಹಿಸಿರಲಿಲ್ಲ.
Tumakuru Lovers – ಪ್ರೇಮಿಗಳ ನಡುವೆ ಜಗಳ: ಕಾರಣ ಆ ಒಂದು ರೀಲ್ಸ್
ಚೈತನ್ಯಾಳು ಹೊಸಹಳ್ಳಿಯಲ್ಲಿ ತನ್ನ ತಾಯಿಯೊಂದಿಗೆ ವಾಸಿಸುತ್ತಿದ್ದಳು. ಪಕ್ಕದ ರಾಮೇನಹಳ್ಳಿಯ ವಿಜಯ್ ಜೊತೆ ಹಲವು ವರ್ಷಗಳಿಂದ ಪ್ರೀತಿಯಲ್ಲಿದ್ದಳು. ಅವರ ಪ್ರೀತಿಗೆ ಮನೆಯವರ ವಿರೋಧವೂ ಇತ್ತು. ಎರಡು ವರ್ಷಗಳ ಹಿಂದೆಯೇ ಕುಟುಂಬಸ್ಥರು ಇಬ್ಬರಿಗೂ ಎಚ್ಚರಿಕೆ ನೀಡಿದ್ದರೂ, ಗುಟ್ಟಾಗಿ ತಮ್ಮ ಪ್ರೀತಿಯನ್ನು ಮುಂದುವರೆಸಿದ್ದರು.
ಆದರೆ, ನಿನ್ನೆ ರಾತ್ರಿ ಚೈತನ್ಯಾ ತನ್ನ ವಾಟ್ಸಾಪ್ ಸ್ಟೇಟಸ್ಗೆ ಹಾಕಿದ ರೀಲ್ಸ್ ವೀಡಿಯೊವೇ ವಿವಾದಕ್ಕೆ ಕಾರಣವಾಯಿತು. ಈ ವಿಡಿಯೊ ನೋಡಿ ವಿಜಯ್ ಚೈತನ್ಯಾಳ ಮನೆಗೆ ಬಂದು ಜಗಳ ಆರಂಭಿಸಿದ್ದಾನೆ. ಜಗಳ ತಾಯಿಗೆ ಕೇಳಿಸಬಾರದು ಎಂದು ಚೈತನ್ಯಾ ಕೋಣೆಯ ಬಾಗಿಲು ಹಾಕಿಕೊಂಡಿದ್ದಾಳೆ. ಬಳಿಕ ವಿಜಯ್ ಮತ್ತು ಚೈತನ್ಯಾ ನಡುವೆ ಏನು ಚರ್ಚೆ ನಡೆಯಿತೋ ಗೊತ್ತಿಲ್ಲ, ಆದರೆ ಚೈತನ್ಯಾ ಏಕಾಏಕಿ ರೂಮಿನ ಕಿಟಕಿಗೆ ಸೀರೆಯಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಜಗಳದ ನಂತರ ವಿಜಯ್ ಸ್ಥಳದಿಂದ ಹೊರಟಿದ್ದ. ಕೆಲವೇ ಕ್ಷಣಗಳಲ್ಲಿ ಚೈತನ್ಯಾ ವಿಜಯ್ಗೆ ಕರೆ ಮಾಡಿ “ನಾನು ಸಾಯ್ತೀನಿ” ಎಂದು ಹೇಳಿದ್ದಾಳೆ. ತಕ್ಷಣ ವಿಜಯ್ ಈ ವಿಷಯವನ್ನು ಆಕೆಯ ಸಂಬಂಧಿಕರಿಗೆ ತಿಳಿಸಿದ್ದಾರೆ. ಸಂಬಂಧಿಕರು ಬಂದಾಗ, ಚೈತನ್ಯಾ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾದಳು.
Tumakuru Lovers – ಸ್ಟ್ರೀಟ್ ಫೋಟೋಗ್ರಾಫರ್ ಕಾರಣನಾ?
ಚೈತನ್ಯಾ ಸಾಯಲು ಸ್ಟ್ರೀಟ್ ಫೋಟೋಗ್ರಾಫರ್ ಒಬ್ಬ ಕಾರಣ ಎಂಬ ಸಂಶಯ ವ್ಯಕ್ತವಾಗಿದೆ. ಆ ಫೋಟೋಗ್ರಾಫರ್ ಚೈತನ್ಯಾಳ ಹಲವು ಫೋಟೋಗಳನ್ನು ತೆಗೆದಿದ್ದ. ಆ ಫೋಟೋಗಳನ್ನು ಮತ್ತು ವೀಡಿಯೊವನ್ನು ಚೈತನ್ಯಾ ಇನ್ಸ್ಟಾಗ್ರಾಮ್ಗೆ ಅಪ್ಲೋಡ್ ಮಾಡಿದ್ದಳು. ಇದನ್ನು ನೋಡಿ ಕೋಪಗೊಂಡ ವಿಜಯ್ ಜಗಳ ಆರಂಭಿಸಿದ್ದಾನೆ. ಅದೇ ಸಮಯದಲ್ಲಿ ಚೈತನ್ಯಾಳ ತಾಯಿ ಸೌಭಾಗ್ಯಮ್ಮ ಮನೆಯ ಒಳಗೇ ಇದ್ದರು. ಅವರು ಇದ್ದ ಕೋಣೆಯ ಬಾಗಿಲು ಲಾಕ್ ಆಗಿದ್ದರಿಂದ ಚೈತನ್ಯಾ ಮತ್ತು ವಿಜಯ್ ಮನೆಯ ಕಿಟಕಿಯ ಬಳಿ ಜಗಳ ಮಾಡಿಕೊಂಡಿದ್ದರು.
Tumakuru Lovers – ತಾಯಿಯ ಮಾತನ್ನು ಧಿಕ್ಕರಿಸಿದ ಚೈತನ್ಯಾ
ತಾಯಿ ಸೌಭಾಗ್ಯಮ್ಮ ಕೂಡ ಆ ವಿಡಿಯೊವನ್ನು ಅಪ್ಲೋಡ್ ಮಾಡಬೇಡ ಎಂದು ಚೈತನ್ಯಾಳಿಗೆ ಬುದ್ಧಿವಾದ ಹೇಳಿದ್ದರಂತೆ. ಆದರೂ ಚೈತನ್ಯಾ ಆ ರೀಲ್ಸ್ ಅನ್ನು ಅಪ್ಲೋಡ್ ಮಾಡಿದ್ದಾಳೆ. ಇದನ್ನು ನೋಡಿದ ವಿಜಯ್ ಫೋನ್ ಮಾಡಿ ಜಗಳ ಮಾಡಿದ್ದಾನೆ. ಒಂದು ರೀಲ್ಸ್ನಿಂದ ಪ್ರೇಮಿಗಳ ನಡುವೆ ನಡೆದ ಜಗಳ, ಯುವತಿಯ ದುರಂತ ಸಾವಿನಲ್ಲಿ ಅಂತ್ಯಗೊಂಡಿದ್ದು, ಈ ಜಗಳ ಮತ್ತು ಸಾವಿಗೆ ಸ್ಟ್ರೀಟ್ ಫೋಟೋಗ್ರಾಫರ್ ಕಾರಣನಾಗಿದ್ದಾನೆಯೇ ಎಂಬ ಅನುಮಾನ ಮೂಡಿದೆ.
Read this also : ಪ್ರೀತಿಸಿ, ಮೋಸ ಮಾಡಿ ವಿದೇಶಕ್ಕೆ ಪರಾರಿಯಾದ ಯುವಕ, ಆನ್ ಲೈನ್ ಪ್ರೀತಿಗೆ ಮೋಸಹೋದ ಯುವತಿ…!
Tumakuru Lovers – ಪೊಲೀಸರ ತನಿಖೆ ಮುಂದುವರಿಕೆ
ಸದ್ಯ, ಚೈತನ್ಯಾಳ ಸಾವಿಗೆ ವಿಜಯ್ ಕಾರಣ ಎಂದು ಆರೋಪಿಸಲಾಗಿದೆ. ಘಟನೆ ಸಂಬಂಧ ತುಮಕೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ವಿಜಯ್ನನ್ನು ಪೊಲೀಸರು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ. ಪೊಲೀಸರ ಮಾಹಿತಿ ಪ್ರಕಾರ ಇಬ್ಬರ ನಡುವಿನ ಪ್ರೀತಿಯಲ್ಲಿ ಉಂಟಾದ ಜಗಳವೇ ಸಾವಿಗೆ ಕಾರಣ ಎನ್ನಲಾಗುತ್ತಿದೆ. ಪೊಲೀಸರ ತನಿಖೆಯಲ್ಲಿ ನಿಜವಾದ ಕಾರಣ ತಿಳಿದುಬರಬೇಕಿದೆ.