HomeNationalತೆಲಂಗಾಣದಲ್ಲಿ ಬೆಚ್ಚಿಬೀಳಿಸುವ (Dogs Attack) ಘಟನೆ : ಆಡುತ್ತಿದ್ದ ಮಗುವಿನ ಮೇಲೆ ಮುಗಿಬಿದ್ದ 12ಕ್ಕೂ ಹೆಚ್ಚು...

ತೆಲಂಗಾಣದಲ್ಲಿ ಬೆಚ್ಚಿಬೀಳಿಸುವ (Dogs Attack) ಘಟನೆ : ಆಡುತ್ತಿದ್ದ ಮಗುವಿನ ಮೇಲೆ ಮುಗಿಬಿದ್ದ 12ಕ್ಕೂ ಹೆಚ್ಚು ಬೀದಿ ನಾಯಿಗಳು..!

ತೆಲಂಗಾಣದ ಸಂಗಾರೆಡ್ಡಿ ಜಿಲ್ಲೆಯಲ್ಲಿ ಮೈ ಜುಂ ಎನಿಸುವ ಘಟನೆಯೊಂದು ನಡೆದಿದೆ. ಮನೆಯ ಮುಂದೆ ಆಟವಾಡುತ್ತಿದ್ದ ಕೇವಲ ಮೂರು ವರ್ಷದ ಹಸುಗೂಸಿನ ಮೇಲೆ ಹನ್ನೆರಡಕ್ಕೂ ಹೆಚ್ಚು ಬೀದಿ ನಾಯಿಗಳ ಗುಂಪು ಏಕಾಏಕಿ ದಾಳಿ ಮಾಡಿ ಗಂಭೀರವಾಗಿ ಗಾಯಗೊಳಿಸಿವೆ. ಈ ಭೀಕರ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, (Dogs Attack) ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

Over 12 stray dogs attack a three-year-old child in Sangareddy district, Telangana, captured on CCTV

Dogs Attack – ಏನಿದು ಘಟನೆ?

ಸಂಗಾರೆಡ್ಡಿ ಜಿಲ್ಲೆಯ ಹತ್ನೂರ್ ಮಂಡಲದ ದೌಲತಾಬಾದ್ ಗ್ರಾಮದಲ್ಲಿ ಬುಧವಾರ ಈ ಘಟನೆ ಸಂಭವಿಸಿದೆ. ಮೊಹಮ್ಮದ್ ಫರೀದ್ ಎಂಬುವವರ ಮೂರು ವರ್ಷದ ಪುತ್ರ ಅಬೂಬಕರ್, ತನ್ನ ಮನೆಯ ಮುಂದಿನ ರಸ್ತೆಯಲ್ಲಿ ಆಟವಾಡುತ್ತಿದ್ದನು. ಈ ವೇಳೆ ಹತ್ತಿರದ ಮನೆಯ ನೆರಳಿನಲ್ಲಿ ಮಲಗಿದ್ದ ಬೀದಿ ನಾಯಿಗಳ ಹಿಂಡು ದಿಢೀರನೆ ಬಾಲಕನ ಮೇಲೆರಗಿವೆ. Read this also : ಅಬ್ಬಬ್ಬಾ.. ಸ್ವಲ್ಪದರಲ್ಲೇ ತಪ್ಪಿದ ಗಂಡಾಂತರ! ಶಾಲಾ ಆವರಣದಲ್ಲೇ ಸೆಕ್ಯುರಿಟಿ ಗಾರ್ಡ್ ಮೇಲೆ ನಾಯಿ ದಾಳಿ; ಬೆಚ್ಚಿಬೀಳಿಸುವ ವಿಡಿಯೋ ನೋಡಿ

ನೋಡನೋಡುತ್ತಿದ್ದಂತೆಯೇ ಸುಮಾರು 12ಕ್ಕೂ ಹೆಚ್ಚು ನಾಯಿಗಳು ಮಗುವನ್ನು ಸುತ್ತುವರಿದು ಕಚ್ಚತೊಡಗಿವೆ. ಮಗುವಿನ ಚೀರಾಟ ಕೇಳಿ ಓಡಿ ಬಂದ ಮಹಿಳೆಯೊಬ್ಬರು ಸಮಯಪ್ರಜ್ಞೆ ಮೆರೆದು ನಾಯಿಗಳನ್ನು ಓಡಿಸಿದ್ದಾರೆ. ಕೂಡಲೇ ಸ್ಥಳೀಯರು ಮತ್ತು ಕುಟುಂಬಸ್ಥರು ಧಾವಿಸಿ ಬಂದು ಮಗುವನ್ನು ರಕ್ಷಿಸಿದ್ದಾರೆ. (Dogs Attack) ಒಂದು ವೇಳೆ ಮಹಿಳೆ ತಕ್ಷಣ ಬರದೇ ಇದ್ದಿದ್ದರೆ ದೊಡ್ಡ ಅನಾಹುತವೇ ಸಂಭವಿಸುತ್ತಿತ್ತು.

ಮಗುವಿನ ಸ್ಥಿತಿ ಹೇಗಿದೆ?

ನಾಯಿಗಳ ದಾಳಿಯಿಂದ ಬಾಲಕನ ಮೈಮೇಲೆ ತೀವ್ರವಾದ ಗಾಯಗಳಾಗಿವೆ. ತಕ್ಷಣವೇ ಅಬೂಬಕರ್‌ನನ್ನು ಸಂಗಾರೆಡ್ಡಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸದ್ಯ ಮಗು ಚಿಕಿತ್ಸೆ ಪಡೆಯುತ್ತಿದೆ. ಮಗುವಿನ ಸ್ಥಿತಿ ಗಂಭೀರವಾಗಿದ್ದರೂ, ಪ್ರಾಣಾಪಾಯದಿಂದ ಪಾರಾಗಿದ್ದಾನೆ ಎಂದು ವೈದ್ಯಕೀಯ ಮೂಲಗಳು ತಿಳಿಸಿವೆ.

Over 12 stray dogs attack a three-year-old child in Sangareddy district, Telangana, captured on CCTV

ವೈರಲ್ ವಿಡಿಯೋ ಇಲ್ಲಿದೆ ನೋಡಿ : Click Here 

ಹೆಚ್ಚುತ್ತಿರುವ ಬೀದಿ ನಾಯಿಗಳ ಕಾಟ: ಜನರ ಆಕ್ರೋಶ

ಈ ಘಟನೆಯ ವಿಡಿಯೋ ವೈರಲ್ (Dogs Attack) ಆಗುತ್ತಿದ್ದಂತೆಯೇ ಸ್ಥಳೀಯರಲ್ಲಿ ಭೀತಿ ಆವರಿಸಿದೆ. ಹಗಲು ಹೊತ್ತಿನಲ್ಲೇ ರಸ್ತೆಯಲ್ಲಿ ಓಡಾಡಲು ಜನ ಹೆದರುವಂತಾಗಿದೆ. “ನಮ್ಮ ಮಕ್ಕಳು ಮನೆಯಿಂದ ಹೊರಗೆ ಬರಲು ಭಯಪಡುತ್ತಿದ್ದಾರೆ, ಅಧಿಕಾರಿಗಳು ಇನ್ನಾದರೂ ಎಚ್ಚೆತ್ತುಕೊಂಡು ಬೀದಿ ನಾಯಿಗಳ ಹಾವಳಿ ತಡೆಗಟ್ಟಲು ಕ್ರಮ ಕೈಗೊಳ್ಳಬೇಕು” ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

by Baluhttp://ismkannadanews.com
ನಮಸ್ಕಾರ, ನಾನು ಬಾಲಾಜಿ ಆರ್. 10+ ವರ್ಷಗಳ ಅನುಭವ ಹೊಂದಿರುವ ಕಂಟೆಂಟ್ ರೈಟರ್ ಹಾಗೂ ಕಾಪಿ ಎಡಿಟರ್ ಆಗಿದ್ದು, ಹಣಕಾಸು, ಸರ್ಕಾರಿ ಯೋಜನೆಗಳು, ತಂತ್ರಜ್ಞಾನ, ವೈರಲ್ ಸುದ್ದಿ, ರಾಜಕೀಯ ಸುದ್ದಿ ಮತ್ತು ಸಿನಿಮಾ ಸುದ್ದಿಗಳ ಬಗ್ಗೆ ಬರೆಯುತ್ತೇನೆ. ಸಂಕೀರ್ಣ ಮಾಹಿತಿಯನ್ನು ಸರಳವಾಗಿ ನೀಡುವುದು ನನ್ನ ಉದ್ದೇಶ. ISM Kannada News ಮೂಲಕ ನಿಖರ ಮತ್ತು ಉಪಯುಕ್ತ ಮಾಹಿತಿಯನ್ನು ಹಂಚಿಕೊಳ್ಳುತ್ತೇನೆ.
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular