Snake Bite – ಸಾಮಾಜಿಕ ಮಾಧ್ಯಮದಲ್ಲಿ ಹಾವುಗಳಿಗೆ ಸಂಬಂಧಿಸಿದ ವಿಡಿಯೋಗಳು ಸಾಮಾನ್ಯವಾಗಿ ವೈರಲ್ ಆಗುತ್ತಿರುತ್ತವೆ. ಅನೇಕ ಜನರು ಇವುಗಳನ್ನು ಕುತೂಹಲದಿಂದ ನೋಡುತ್ತಾರೆ. ಹಾವುಗಳ ವಿಡಿಯೋಗಳನ್ನು ನೋಡಲು ಹೆಚ್ಚಿನ ಆಸಕ್ತಿ ತೋರುತ್ತಾರೆ. ಹೀಗಿರುವಾಗ, ಇಲ್ಲೊಬ್ಬ ಯುವಕ ಹಾವುಗೆಲಸಕ್ಕೆ ಕೈ ಹಾಕಿ ಸಂಕಷ್ಟಕ್ಕೆ ಸಿಲುಕಿರುವ ವಿಡಿಯೋ ವೈರಲ್ ಆಗಿದೆ. ಅಷ್ಟಕ್ಕೂ ಆ ವಿಡಿಯೋದಲ್ಲಿ ಏನಿದೆ ಎಂದು ನೋಡೋಣ ಬನ್ನಿ.
Snake Bite – ಹಾವು ಮುದ್ದಿಸಿದ ಯುವಕ!
ಹಿಂದೆಲ್ಲಾ ನೋಡಿದ ಹಾವುಗಳ ವಿಡಿಯೋಗಿಂತ ಇದು ವಿಚಿತ್ರವಾಗಿದೆ. ಈ ವಿಡಿಯೋದಲ್ಲಿ ಒಬ್ಬ ಯುವಕ ಅಪಾಯಕಾರಿ ವೈಪರ್ ಹಾವು ಒಂದನ್ನು ಕುತ್ತಿಗೆಗೆ ಹಾಕಿಕೊಂಡಿದ್ದಾನೆ! ಅಷ್ಟೇ ಅಲ್ಲ, ಅದನ್ನು ಮುದ್ದಾಡಲು ಹೋಗಿದ್ದಾನೆ. ಸಾಮಾನ್ಯವಾಗಿ ಹಾವುಗಳನ್ನು ಹಿಡಿಯಲು ಎಂದರೆ ಜನ ಹೆದರುತ್ತಾರೆ. ಆದರೆ ಈತ ಧೈರ್ಯ ಮಾಡಿ ಹಾವನ್ನು ಹಿಡಿದು ಮುದ್ದಿಸಲು ಪ್ರಯತ್ನಿಸಿದ್ದಾನೆ.
Snake Bite – ನಾಲಿಗೆಗೆ ಕಚ್ಚಿದ ಹಾವು!
ಯುವಕ ಹಾವುಗೆ ತುಟಿ ಹತ್ತಿಸುತ್ತಿದ್ದಂತೆ ಸಿಟ್ಟಿಗೆದ್ದ ಹಾವು ಅವನ ನಾಲಿಗೆಯ ಮೇಲೆ ಕಚ್ಚಿದೆ! ಉತ್ತರ ಪ್ರದೇಶದ ಅಮ್ರೋಹಾ ಜಿಲ್ಲೆಯ ಗಜ್ರೌಲಾ ಪೊಲೀಸ್ ಠಾಣಾ ವ್ಯಾಪ್ತಿಯ ಹೈವತ್ಪುರ ಗೋಸಾಯಿನ್ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಹಾವು ಕಚ್ಚಿದ ಕಾರಣ ಆ ವ್ಯಕ್ತಿಯ ಸ್ಥಿತಿ ಗಂಭೀರವಾಗಿದೆ. ತಕ್ಷಣ ಸ್ಥಳೀಯರು ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಸದ್ಯಕ್ಕೆ ಆತ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
Snake Bite – ಹಾವಿನೊಂದಿಗೆ ಆಟ!
ಹಳೆ ಗೋಡೆಯಿಂದ ಹಾವು ಹೊರಗೆ ಬಂದಾಗ ಈತ ಅದನ್ನು ಹಿಡಿದು ಕುತ್ತಿಗೆಗೆ ಸುತ್ತಿಕೊಂಡು ಆಟವಾಡಲು ಶುರು ಮಾಡಿದ್ದನಂತೆ. ಕೆಲವೊಮ್ಮೆ ಹಾವಿನ ಬಾಯಿಯನ್ನು ತನ್ನ ಬಾಯಿಗೆ ಹಾಕಿಕೊಳ್ಳಲು ಪ್ರಯತ್ನಿಸಿದ್ದ. ಮತ್ತೆ ಕೆಲವೊಮ್ಮೆ ತನ್ನ ನಾಲಿಗೆಯಿಂದ ಹಾವಿನ ಬಾಯಿಯನ್ನು ಮುಟ್ಟುತ್ತಿದ್ದ. ಈ ಸಂದರ್ಭದಲ್ಲಿ ಹಾವು ಆತನಿಗೆ ಕಚ್ಚಿದೆ. ಈ ದೃಶ್ಯಗಳೆಲ್ಲವೂ ವಿಡಿಯೋದಲ್ಲಿ ಸೆರೆಯಾಗಿದ್ದು, ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ವಿಡಿಯೋ ನೋಡಿದವರೆಲ್ಲಾ ಭಯಭೀತರಾಗಿದ್ದಾರೆ. ಹಾವು ಕಡಿತಕ್ಕೆ ಒಳಗಾದ ವ್ಯಕ್ತಿಯ ಹೆಸರು ಜಿತೇಂದ್ರ ಅಲಿಯಾಸ್ ಜೀತು. ಈತ ವಿದ್ಯುತ್ ಇಲಾಖೆಯಲ್ಲಿ ಖಾಸಗಿ ಲೈನ್ಮ್ಯಾನ್ ಆಗಿ ಕೆಲಸ ಮಾಡುತ್ತಿದ್ದಾನೆ.
ವೈರಲ್ ವಿಡಿಯೋ ಇಲ್ಲಿದೆ ನೋಡಿ : Click Here
Snake Bite – ವಿಡಿಯೋದಲ್ಲಿ ಏನಿದೆ?
ವೈರಲ್ ಆಗಿರುವ ವಿಡಿಯೋದಲ್ಲಿ ಜಿತೇಂದ್ರ ಹಾವನ್ನು ಹಿಡಿದು ಕುತ್ತಿಗೆಗೆ ಹಾಕಿಕೊಂಡು ಆಡುತ್ತಿರುವುದು ಸ್ಪಷ್ಟವಾಗಿ ಕಾಣಿಸುತ್ತದೆ. ಆತ ಪದೇ ಪದೇ ತನ್ನ ನಾಲಿಗೆಯಿಂದ ಹಾವಿನ ಬಾಯಿಯನ್ನು ಮುಟ್ಟುತ್ತಿರುವುದನ್ನೂ ನೋಡಬಹುದು. ಹೀಗೆ ಮಾಡುತ್ತಿರುವಾಗಲೇ ಹಾವು ಅವನ ನಾಲಿಗೆಗೆ ಕಚ್ಚುತ್ತದೆ. ತಕ್ಷಣ ಜಿತೇಂದ್ರ ಹಾವನ್ನು ಎಸೆದು ಬಿಡುತ್ತಾನೆ. ಮೊದಲು ಆತ ಚೆನ್ನಾಗಿಯೇ ಇದ್ದ. ಆದರೆ ಸ್ವಲ್ಪ ಹೊತ್ತಿನ ನಂತರ ಆರೋಗ್ಯ ಹದಗೆಡಲು ಶುರುವಾಯಿತು.
Read this also : ಪಡವಲಕಾಯಿ ಹಿಡಿದಂತೆ ಹಾವನ್ನು ಹಿಡಿದ ಭೂಪ, ವೈರಲ್ ಆದ ವಿಡಿಯೋ…!
Snake Bite – ಐಸಿಯುನಲ್ಲಿ ಚಿಕಿತ್ಸೆ!
ಜಿತೇಂದ್ರನ ಪರಿಸ್ಥಿತಿ ಗಂಭೀರವಾದ್ದರಿಂದ ಗಜ್ರೌಲಾದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಅಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿದ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಬೇರೆ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಸದ್ಯಕ್ಕೆ ಆತ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಜಿತೇಂದ್ರ ಜೀವನ್ಮರಣ ಹೋರಾಟ ನಡೆಸುತ್ತಿದ್ದಾನೆ ಎಂದು ತಿಳಿದು ಬಂದಿದೆ. ಹಾವು ವಿಷಪೂರಿತವಾಗಿದ್ದ ಕಾರಣ ಆತನ ಸ್ಥಿತಿ ಹೀಗಾಗಿದೆ ಎಂದು ಗ್ರಾಮಸ್ಥರು ಹೇಳುತ್ತಿದ್ದಾರೆ. ಜಿತೇಂದ್ರಗೆ ಪತ್ನಿ ಮತ್ತು ಮೂವರು ಗಂಡು ಮಕ್ಕಳಿದ್ದಾರೆ. ಮಕ್ಕಳು ಕೂಲಿ ಕೆಲಸ ಮಾಡಿಕೊಂಡಿದ್ದಾರೆ.