HomeStateShocking News: ಪತ್ನಿಯ ರೀಲ್ಸ್ ಹುಚ್ಚಾಟಕ್ಕೆ ಬೇಸತ್ತ ಪತಿ, ಪತ್ನಿಯನ್ನು ಕೊಂದೇ ಬಿಟ್ಟ….!

Shocking News: ಪತ್ನಿಯ ರೀಲ್ಸ್ ಹುಚ್ಚಾಟಕ್ಕೆ ಬೇಸತ್ತ ಪತಿ, ಪತ್ನಿಯನ್ನು ಕೊಂದೇ ಬಿಟ್ಟ….!

Shocking News – ಇಂದಿನ ತಾಂತ್ರಿಕ ಯುಗದಲ್ಲಿ ಬಹುತೇಕ ಸ್ಮಾರ್ಟ್ ಪೋನ್ ಬಳಕೆದಾರರು ಸೋಷಿಯಲ್ ಮಿಡಿಯಾವನ್ನು ಬಳಸುತ್ತಾರೆ. ಆದರೆ ಸೋಷಿಯಲ್ ಮಿಡಿಯಾದ ಅತಿಯಾದ ಬಳಕೆಯಿಂದ ಅನೇಕ ಅನಾಹುತಗಳೂ ಸಹ ಸಂಭವಿಸಿದೆ. ಕೆಲವರು ಸೋಷಿಯಲ್ ಮಿಡಿಯಾ (Shocking News) ಮೂಲಕ ಸಕ್ಸಸ್ ಕಂಡರೇ, ಕೆಲವರು ದುರಂತ ಅಂತ್ಯವೇ ಕಂಡಿದ್ದಾರೆ. ಇದಕ್ಕೆ ಈ ಘಟನೆ ಸಹ ಉತ್ತಮ ಉದಾಹರಣೆಯಾಗಿದೆ ಎನ್ನಬಹುದಾಗಿದೆ. ಉಡುಪಿಯಲ್ಲಿ ಪತಿಯೊಬ್ಬ ತನ್ನ ಪತ್ನಿಯನ್ನೇ ಕೊಲೆ ಮಾಡಿದ್ದಾನೆ. ಪತ್ನಿಯ ರೀಲ್ಸ್ ಹುಚ್ಚಿಗೆ ಬೇಸತ್ತ ಪತಿ ಈ ಕೊಲೆ (Shocking News) ಮಾಡಿದ್ದಾನೆ ಎಂದು ತಿಳಿದುಬಂದಿದೆ.

husband killed wife in udupi 1

ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಸಾಲಿಗ್ರಾಮ ಪಟ್ಟಣ ಪಂಚಾಯತಿ ವ್ಯಾಪ್ತಿಯ ಕಾರ್ಕಡ ಪಡುಹೋಳಿ ಎಂಬಲ್ಲಿ ಈ ಘಟನೆ (Shocking News) ನಡೆದಿದೆ. ಕೊಲೆಯಾದ ದುರ್ದೈವಿಯನ್ನು ಬೀದರ್‍ ಮೂಲದ ಜಯಶ್ರೀ ಎಂದು ಗುರ್ತಿಸಲಾಗಿದೆ. ಆಕೆಯ ಪತಿ ಕಿರಣ್ ಉಪಾಧ್ಯಾಯ ಪತ್ನಿಯನ್ನು ಕೊಲೆ ಮಾಡಿದ್ದಾನೆ. ತನ್ನ ಪತ್ನಿಗೆ ಇನ್ಸ್ಟಾಗ್ರಾಂನಲ್ಲಿ ರೀಲ್ಸ್ (Shocking News) ಮಾಡುವ ಹುಚ್ಚು ಹೆಚ್ಚಾಗಿತ್ತಂತೆ. ಹೆಚ್ಚು ಸಮಯ ಇನ್ಸ್ಟಾಗ್ರಾಂನಲ್ಲೇ ಕಾಲ ಕಳೆಯುತ್ತಿದ್ದಳಂತೆ. ಇನ್ಸ್ಟಾಗ್ರಾಂನಲ್ಲಿ ಕೇವಲ 16 ಮಂದಿ ಫಾಲೋವರ್ಸ್ ಹೊಂದಿದ್ದ ಮೃತ ಜಯಶ್ರೀ ರೀಲ್ಸ್ ಹುಚ್ಚಿನಿಂದ ಇದೀಗ (Shocking News) ಇಹಲೋಕ ತ್ಯೆಜಿಸುವಂತಾಗಿದೆ.

ಸೋಷಿಯಲ್ ಮಿಡಿಯಾದಲ್ಲಿ ರೀಲ್ಸ್ ಮಾಡುವ ಮೂಲಕ(Shocking News)  ಫೇಮಸ್ ಆಗಲು ಬಯಸುತ್ತಾರೆ. ಅದರಂತೆ ಜಯಶ್ರೀ ಸಹ ಸುಂದರವಾದ ಮೈಕಟ್ಟು ಹೊಂದಿದ್ದು, ರೀಲ್ಸ್ ಮಾಡಲು ಶುರು ಮಾಡಿದ್ದಾಳೆ. ಮೊಬೈಲ್ ನಲ್ಲಿ ರೀಲ್ಸ್ ಮಾಡಿಕೊಂಡು ಸಂತೋಷದಿಂದ ಜೀವನ ಸಾಗಿಸುತ್ತಿದ್ದ ಈ ಜೋಡಿಯ ನಡುವೆ ಅದು ಏನಾಯ್ತೋ (Shocking News) ತಿಳಿಯದು. ಮೊಬೈಲ್ ಬಳಕೆಯ ವಿಚಾರವಾಗಿ ಇಬ್ಬರ ನಡುವೆ ಜಗಳವಾಗಿದೆ. ಜಗಳ ಮಿತಿಮೀರಿದ್ದು, ಪತಿ ಪತ್ನಿಗೆ ಹೊಡೆದಿದ್ದಾನೆ. ಈ ಕಾರಣದಿಂದ ಪತ್ನಿ ಸಾವನ್ನಪ್ಪಿದ್ದಾಳೆ. ಆ.23 ರ ಬೆಳಿಗನ ಜಾವ 4 ಗಂಟೆಯ ಸಮಯದಲ್ಲಿ ಈ ಘಟನೆ ನಡೆದಿದೆ (Shocking News) ಎನ್ನಲಾಗಿದೆ.

husband killed wife in udupi 0

ಕಳೆದ 9 ತಿಂಗಳ ಹಿಂದೆಯಷ್ಟೆ ಕಿರಣ್ ಉಪಾಧ್ಯಾಯ ಹಾಗೂ ಜಯಶ್ರೀ (Shocking News) ಮದುವೆಯಾಗಿತ್ತು. ಕಳೆದ 3 ತಿಂಗಳುಗಳಿಂದ ಸಾಲಿಗ್ರಾಮ ಪಟ್ಟಣ ಪಂಚಾಯತಿ ವ್ಯಾಪ್ತಿಯ ಪಡುಹೋಳಿಯ ಕಡಿದ ಹೆದ್ದಾರಿ ಎಂಬಲ್ಲಿ ತಾರಾನಾಥ ಹೊಳ್ಳ ಎಂಬುವವರ ಮನೆಯಲ್ಲಿ ಬಾಡಿಗೆಗೆ ಇದ್ದರು. ಪತ್ನಿ ಜಯಶ್ರೀಗೆ ಮೊಬೈಲ್ ನಲ್ಲಿ ರೀಲ್ಸ್ ಮಾಡುವ ಹುಚ್ಚು (Shocking News) ತುಂಬಾನೆ ಇತ್ತು ಎನ್ನಲಾಗಿದೆ. ಜೊತೆಗೆ ಆನ್ ಲೈನ್ ವ್ಯವಹಾರದಲ್ಲಿ ತೊಡಗಿದ್ದ ಪತ್ನಿಯಿಂದ ಬೇಸತ್ತ ಕಿರಣ್ ಇದೆಲ್ಲವನ್ನು ನಿಲ್ಲಿಸುವಂತೆ ತಿಳಿಸಿದ್ದನಂತೆ. ಈ ಕಾರಣದಿಂದ ಪ್ರತಿನಿತ್ಯ ದಂಪತಿಯ ನಡುವೆ ಜಗಳ ನಡೆಯುತ್ತಿತ್ತಂತೆ. ಕಳೆದ ಗುರುವಾರ ರಂದು (Shocking News) ಇದೇ ವಿಚಾರವಾಗಿ ಇಬ್ಬರ ನಡುವೆ ನಡೆದಿದ್ದು, ಶುಕ್ರವಾರ ಆ.23 ರ ಮುಂಜಾನೆ ಪತಿ ಕತ್ತಿಯಿಂದ ಪತ್ನಿಯ ಮೇಲೆ ಹಲ್ಲೆ ಮಾಡಿದ್ದಾನೆ. ಇದರಿಂದಾಗಿ ಪತ್ನಿ ಜಯಶ್ರೀ ಗಂಭೀರವಾಗಿ ಗಾಯಗೊಂಡು ಮೃತಪಟ್ಟಿದ್ದಾಳೆ. (Shocking News) ಇನ್ನೂ ಸ್ಥಳಕ್ಕೆ ಕೋಟ ಪೊಲೀಸರು ಭೇಟಿ ನೀಡಿ, ಆರೋಪಿ ಕಿರಣ್ ನನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ ಎನ್ನಲಾಗಿದೆ.

by Baluhttp://ismkannadanews.com
ನಮಸ್ಕಾರ, ನಾನು ಬಾಲಾಜಿ ಆರ್. 10+ ವರ್ಷಗಳ ಅನುಭವ ಹೊಂದಿರುವ ಕಂಟೆಂಟ್ ರೈಟರ್ ಹಾಗೂ ಕಾಪಿ ಎಡಿಟರ್ ಆಗಿದ್ದು, ಹಣಕಾಸು, ಸರ್ಕಾರಿ ಯೋಜನೆಗಳು, ತಂತ್ರಜ್ಞಾನ, ವೈರಲ್ ಸುದ್ದಿ, ರಾಜಕೀಯ ಸುದ್ದಿ ಮತ್ತು ಸಿನಿಮಾ ಸುದ್ದಿಗಳ ಬಗ್ಗೆ ಬರೆಯುತ್ತೇನೆ. ಸಂಕೀರ್ಣ ಮಾಹಿತಿಯನ್ನು ಸರಳವಾಗಿ ನೀಡುವುದು ನನ್ನ ಉದ್ದೇಶ. ISM Kannada News ಮೂಲಕ ನಿಖರ ಮತ್ತು ಉಪಯುಕ್ತ ಮಾಹಿತಿಯನ್ನು ಹಂಚಿಕೊಳ್ಳುತ್ತೇನೆ.
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular