ಯುಎಇಯ ಶಾರ್ಜಾದಲ್ಲಿ ನೆರೆಹೊರೆಯವರನ್ನು ಬೆಚ್ಚಿಬೀಳಿಸುವಂತಹ ಘಟನೆಯೊಂದು ನಡೆದಿದೆ. ಭಾರತೀಯ ಮೂಲದ ಮಹಿಳೆಯೊಬ್ಬರು ತಮ್ಮ 5 ವರ್ಷದ ಮುಗ್ಧ ಮಗಳನ್ನು 22ನೇ (Sharjah Tragedy) ಮಹಡಿಯಿಂದ ಕೆಳಗೆ ತಳ್ಳಿ, ಆ ಬಳಿಕ ತಾವೂ ಧುಮುಕಿ ಆತ್ಮ**ತ್ಯೆ ಮಾಡಿಕೊಂಡಿದ್ದಾರೆ. ಶಾರ್ಜಾದ ಅಲ್ ನಹ್ದಾ ಪ್ರದೇಶದ ವಸತಿ ಸಮುಚ್ಚಯದಲ್ಲಿ ಬುಧವಾರ ಮುಂಜಾನೆ ಸುಮಾರು 7:15 ಕ್ಕೆ ಈ ಧೃತಿಗೆಡಿಸುವ ಘಟನೆ ಸಂಭವಿಸಿದೆ ಎಂದು ಗಲ್ಫ್ ನ್ಯೂಸ್ ವರದಿ ಮಾಡಿದೆ.

Sharjah Tragedy – ಕೇರಳ ಮೂಲದ ಕುಟುಂಬ: ಏನಿದು ಘಟನೆ?
ಮೃತ ಮಹಿಳೆಯನ್ನು ಕೇರಳದ ಕಣ್ಣೂರು ಜಿಲ್ಲೆಯ ಆರ್ಷಾ (35) ಎಂದು ಗುರುತಿಸಲಾಗಿದೆ. ಇವರು ಪತಿ ನಿಹಾಲ್ ಮತ್ತು 5 ವರ್ಷದ ಮಗಳು ರುಹಿ ಜೊತೆ ಶಾರ್ಜಾದಲ್ಲಿ ವಾಸಿಸುತ್ತಿದ್ದರು. ಆರ್ಷಾ ಅವರು ಸ್ವತಃ ಆನ್ಲೈನ್ ವ್ಯವಹಾರವನ್ನೂ ನಡೆಸುತ್ತಿದ್ದರು. ವಿಶೇಷವೆಂದರೆ ಆರ್ಷಾ ಅವರ ಸಹೋದರಿಯ ಕುಟುಂಬವೂ ಸಹ ಪಕ್ಕದ ನಿವಾಸದಲ್ಲೇ ವಾಸವಾಗಿತ್ತು.
ಬುಧವಾರ ಮುಂಜಾನೆ ಮನೆಯ ಬಾಲ್ಕನಿಯಿಂದ ಮೊದಲು ಮಗಳು ರುಹಿಯನ್ನು ಕೆಳಗೆ ತಳ್ಳಿದ ಆರ್ಷಾ, ತಕ್ಷಣವೇ ತಾವೂ ಸಹ ಅಲ್ಲಿಂದಲೇ ಕೆಳಗೆ ಬಿದ್ದಿದ್ದಾರೆ. ಕಟ್ಟಡದ ಕೆಳಗೆ ಭಾರಿ ಶಬ್ದ ಕೇಳಿ ಕಾವಲುಗಾರ ಓಡಿ ಬಂದು ನೋಡಿದಾಗ ತಾಯಿ-ಮಗಳು ರಕ್ತದ ಮಡುವಿನಲ್ಲಿ ಬಿದ್ದಿದ್ದರು. ಇಬ್ಬರೂ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.
ತನಿಖೆ ಕೈಗೆತ್ತಿಕೊಂಡ ಶಾರ್ಜಾ ಪೊಲೀಸರು
ವಿಷಯ ತಿಳಿಯುತ್ತಿದ್ದಂತೆಯೇ ಶಾರ್ಜಾ ಪೊಲೀಸರು ಸ್ಥಳಕ್ಕೆ ಧಾವಿಸಿ ಮೃತದೇಹಗಳನ್ನು ವಶಕ್ಕೆ ಪಡೆದಿದ್ದಾರೆ. ಪ್ರಸ್ತುತ ಈ ಪ್ರಕರಣವನ್ನು ಮುಂದಿನ ತನಿಖೆಗಾಗಿ ಸಾರ್ವಜನಿಕ ಅಭಿಯೋಜನೆಗೆ (ಪಬ್ಲಿಕ್ ಪ್ರಾಸಿಕ್ಯೂಷನ್) ಒಪ್ಪಿಸಲಾಗಿದೆ. ಆದರೆ, ಇಷ್ಟು ದೊಡ್ಡ ನಿರ್ಧಾರ ತೆಗೆದುಕೊಳ್ಳಲು ಆರ್ಷಾ ಅವರಿಗೆ ಇದ್ದ ಕೌಟುಂಬಿಕ ಅಥವಾ ವೈಯಕ್ತಿಕ ಸಮಸ್ಯೆ ಏನು? (Sharjah Tragedy) ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಪೊಲೀಸರು ಎಲ್ಲ ಆಯಾಮಗಳಿಂದಲೂ ತನಿಖೆ ನಡೆಸುತ್ತಿದ್ದಾರೆ.
ಹೆಚ್ಚುತ್ತಿರುವ ಭಾರತೀಯ ಮಹಿಳೆಯರ ನಿಗೂಢ ಸಾವುಗಳು
ಇತ್ತೀಚಿನ ದಿನಗಳಲ್ಲಿ ಯುಎಇಯಲ್ಲಿ ಭಾರತೀಯ ಮಹಿಳೆಯರ ಸಾವುಗಳು ಹೆಚ್ಚಾಗುತ್ತಿರುವುದು ತೀವ್ರ ಕಳವಳಕ್ಕೆ ಕಾರಣವಾಗಿದೆ. ಇದಕ್ಕೂ ಮುನ್ನ ನಡೆದ ಮತ್ತೊಂದು ಘಟನೆಯಲ್ಲಿ ಮಹಿಳೆಯೊಬ್ಬರು ಮಗುವಿನೊಂದಿಗೆ ಶವವಾಗಿ ಪತ್ತೆಯಾಗಿದ್ದರು. ಇನ್ನೊಂದು ಪ್ರಕರಣದಲ್ಲಿ ಕೌಟುಂಬಿಕ ದೌರ್ಜನ್ಯದ ಹಿನ್ನೆಲೆಯಲ್ಲಿ ಮಹಿಳೆಯೊಬ್ಬರ ಮೃತದೇಹ ಪತ್ತೆಯಾಗಿತ್ತು. (Sharjah Tragedy) ಅಲ್ ನಹ್ದಾ ಪ್ರದೇಶವು ದಕ್ಷಿಣ ಏಷ್ಯಾದ (ಮುಖ್ಯವಾಗಿ ಭಾರತೀಯರು) ಕುಟುಂಬಗಳು ಹೆಚ್ಚಾಗಿ ವಾಸಿಸುವ ಜಾಗವಾಗಿದೆ. ಇಲ್ಲಿ ಇಂತಹ ಘಟನೆಗಳು ಮರುಕಳಿಸುತ್ತಿರುವುದು ಆತಂಕ ಮೂಡಿಸಿದೆ. Read this also : ರೈಲು ಹಳಿಗೆ ತಲೆಕೊಟ್ಟು ಒಂದೇ ಕುಟುಂಬದ ಅಕ್ಕ ತಮ್ಮ ಆತ್ಮಹತ್ಯೆ

ನೆರವಿಗೆ ನಿಂತ ‘ರೈಸ್ ಅಭಿಯಾನ’
ಈ ಬೆನ್ನಲ್ಲೇ ಶಾರ್ಜಾದಲ್ಲಿರುವ ಸಾಮಾಜಿಕ ಸಂಸ್ಥೆಗಳು ಮಾನಸಿಕ ಆರೋಗ್ಯ ಮತ್ತು ಗೃಹ ಸುರಕ್ಷತೆಯ ಬಗ್ಗೆ ಜಾಗೃತಿ ಮೂಡಿಸಲು ಮುಂದಾಗಿವೆ. ಸಂಕಷ್ಟದಲ್ಲಿರುವ ಭಾರತೀಯರಿಗೆ ನೆರವಾಗಲು ಶಾರ್ಜಾದ ಭಾರತೀಯ ಸಂಘಟನೆಯು ‘ರೈಸ್ ಅಭಿಯಾನ’ (RISE Campaign) ಅನ್ನು ಪ್ರಾರಂಭಿಸಿದೆ. ಮಾನಸಿಕ ಒತ್ತಡ, ಕೌಟುಂಬಿಕ ಸಮಸ್ಯೆ (Sharjah Tragedy) ಎದುರಿಸುತ್ತಿರುವವರು ಯಾವುದೇ ಮುಜುಗರವಿಲ್ಲದೆ ಸಹಾಯವನ್ನು ಕೇಳಲು ಮತ್ತು ಸಾಮಾಜಿಕ ಬೆಂಬಲವನ್ನು ಪಡೆಯಲು ಈ ಅಭಿಯಾನ ಪ್ರೇರೇಪಿಸುತ್ತದೆ.
ಗಮನಿಸಿ: ಮಾನಸಿಕ ಒತ್ತಡ ಅಥವಾ ಖಿನ್ನತೆಯಿಂದ ಬಳಲುತ್ತಿರುವವರು ತಕ್ಷಣವೇ ಸಹಾಯವಾಣಿ ಅಥವಾ ಆಪ್ತರನ್ನು ಸಂಪರ್ಕಿಸಿ ಆಪ್ತಸಮಾಲೋಚನೆ ಪಡೆಯುವುದು ಇಂತಹ ದುರಂತಗಳನ್ನು ತಡೆಯಲು ಇರುವ ಏಕೈಕ ಮಾರ್ಗವಾಗಿದೆ.
