Politics – ಬಿಜೆಪಿ ಹೈಕಮಾಂಡ್ನಿಂದ ಬಸನಗೌಡ ಪಾಟೀಲ್ ಯತ್ನಾಳ್ ಅವರ ಉಚ್ಛಾಟನೆ ಪ್ರಕಟವಾದ ಬೆನ್ನಲ್ಲೇ ರಾಜ್ಯ ರಾಜಕೀಯದಲ್ಲಿ ಭಾರೀ ಚರ್ಚೆ ಆರಂಭವಾಗಿದೆ. ಬಿಜೆಪಿಯ ಕೇಂದ್ರ ಶಿಸ್ತು ಸಮಿತಿಯ ಶೋಕಾಸ್ ನೋಟಿಸ್ಗೆ ಯಾವುದೇ ಉತ್ತರ ನೀಡದ ಕಾರಣಕ್ಕೆ, ತಕ್ಷಣದಿಂದ ಜಾರಿಗೆ ಬರುವಂತೆ ಯತ್ನಾಳ್ ಅವರನ್ನು 6 ವರ್ಷಗಳ ಕಾಲ ಪಕ್ಷದಿಂದ ಉಚ್ಛಾಟನೆ ಮಾಡಲಾಗಿದೆ. ಈ ನಿರ್ಧಾರದ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಪ್ರತಿಕ್ರಿಯಿಸಿದ್ದು, ಪಕ್ಷದ ಶಿಸ್ತು ಮತ್ತು ತ್ಯಾಗಕ್ಕೆ ಮೊದಲ ಆದ್ಯತೆ ಎಂದು ಪರೋಕ್ಷವಾಗಿ ವಿರೋಧಿಗಳಿಗೆ ಸಂದೇಶ ರವಾನಿಸಿದ್ದಾರೆ. ಇತ್ತ ಉಚ್ಛಾಟನೆಯಾದ ಬಸನಗೌಡ ಯತ್ನಾಳ್, ಪುರಂದರದಾಸರ ಕೀರ್ತನೆಯ ಮೂಲಕ ಬಿಜೆಪಿ ನಾಯಕರನ್ನು ಕುಟುಕಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.
Politics – ವಿಜಯೇಂದ್ರರಿಂದ ಶಿಸ್ತಿನ ಸಂದೇಶ
ಯತ್ನಾಳ್ ಉಚ್ಛಾಟನೆ ಆದೇಶ ಹೊರಬೀಳುತ್ತಿದ್ದಂತೆ ಟ್ವೀಟ್ ಮಾಡಿರುವ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ, ಪಕ್ಷದ ಶಿಸ್ತು ಮತ್ತು ಸಂಘದ ಸಂಸ್ಕಾರವನ್ನು ಎತ್ತಿ ಹಿಡಿದಿದ್ದಾರೆ. “ಭಾರತೀಯ ಜನತಾ ಪಾರ್ಟಿಯು ಲಕ್ಷಾಂತರ ಕಾರ್ಯಕರ್ತರ ಬೆವರಿನ ಪರಿಶ್ರಮದಿಂದ ಸಮೃದ್ಧ ವೃಕ್ಷದಂತೆ ಬೆಳೆದಿದೆ. ಇಲ್ಲಿ ಶಿಸ್ತು ಮತ್ತು ತ್ಯಾಗಕ್ಕೆ ಮೊದಲ ಆದ್ಯತೆ ಇದೆ. ಪಕ್ಷದ ಹಿರಿಯರು ಮತ್ತು ವರಿಷ್ಠರು ಈ ವಿಷಯದಲ್ಲಿ ಎಂದಿಗೂ ರಾಜಿ ಮಾಡಿಕೊಂಡಿಲ್ಲ. ಯತ್ನಾಳ್ ವಿರುದ್ಧ ತೆಗೆದುಕೊಂಡ ಈ ಕ್ರಮವು ಸುದೀರ್ಘ ಅವಧಿಯ ಸ್ಥಿತಿ-ಗತಿಗಳ ಅವಲೋಕನದ ನಂತರ ಅನಿವಾರ್ಯವಾಗಿ ತೆಗೆದುಕೊಂಡ ನಿರ್ಧಾರವಾಗಿದೆ,” ಎಂದು ಅವರು ಬರೆದಿದ್ದಾರೆ. ಈ ಮೂಲಕ ಬಿಜೆಪಿಯ ಶಿಸ್ತಿನ ನೀತಿಯನ್ನು ಮತ್ತೊಮ್ಮೆ ಜನರ ಮುಂದಿಟ್ಟಿದ್ದಾರೆ.
Politics – ಬಿ.ವೈ. ವಿಜಯೇಂದ್ರ ಹಂಚಿಕೊಂಡ ಟ್ವೀಟ್ ನಲ್ಲಿರುವಂತೆ
ಬಿ.ವೈ.ವಿಜಯೇಂದ್ರ ರವರ ಟ್ವೀಟ್ ಇಲ್ಲಿದೆ ನೋಡಿ: Click Here
Politics – ಯತ್ನಾಳ್ ಹಂಚಿಕೊಂಡ ಟ್ವೀಟ್ ನಲ್ಲಿ ಏನಿದೆ?
ಬಿಜೆಪಿಯಿಂದ ಉಚ್ಛಾಟನೆಯಾದ ಬಳಿಕ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ತಮ್ಮ ಟ್ವೀಟ್ನಲ್ಲಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. “ಕುಟುಂಬ ರಾಜಕಾರಣ, ಭ್ರಷ್ಟಾಚಾರ, ಪಕ್ಷದಲ್ಲಿ ಸುಧಾರಣೆ ಮತ್ತು ಏಕವ್ಯಕ್ತಿ ನಾಯಕತ್ವವನ್ನು ಬದಲಾಯಿಸಿ ಎಂದು ಹೇಳಿದ್ದಕ್ಕಾಗಿ ಪಕ್ಷ ನನ್ನನ್ನು 6 ವರ್ಷಗಳ ಕಾಲ ಉಚ್ಛಾಟಿಸಿದೆ. ಸತ್ಯವಂತರಿಗಿದು ಕಾಲವಲ್ಲ ಎಂದು ಪುರಂದರದಾಸರ ಕೀರ್ತನೆಯ ಸಾಲನ್ನು ಉಲ್ಲೇಖಿಸಿ, ಬಿಜೆಪಿ ನಾಯಕರನ್ನು ಪರೋಕ್ಷವಾಗಿ ಕುಟುಕಿದ್ದಾರೆ.”
ಯತ್ನಾಳ್ ಹಂಚಿಕೊಂಡ ಪೋಸ್ಟ್ ಇಲ್ಲಿದೆ ನೋಡಿ : Click Here
ಯತ್ನಾಳ್ ತಮ್ಮ ಟ್ವೀಟ್ನಲ್ಲಿ ಮತ್ತಷ್ಟು ವಿವರಿಸಿ, “ವಂಶಪಾರಂಪರ್ಯ ರಾಜಕೀಯ, ಭ್ರಷ್ಟಾಚಾರ, ಉತ್ತರ ಕರ್ನಾಟಕದ ಅಭಿವೃದ್ಧಿ ಮತ್ತು ಪಕ್ಷದೊಳಗಿನ ಸುಧಾರಣೆಗಾಗಿ ಮಾತನಾಡಿದ್ದಕ್ಕೆ ಈ ಶಿಕ್ಷೆ ದೊರೆತಿದೆ. ಇದ್ದದ್ದನ್ನು ಇದ್ದ ಹಾಗೆ ಹೇಳಿದ್ದಕ್ಕೆ ಪಕ್ಷ ನನಗೆ ಪ್ರತಿಫಲ ನೀಡಿದೆ. ಕೆಲವು ಸ್ಥಾಪಿತ ಹಿತಾಸಕ್ತಿಗಳು ತಮ್ಮ ಕಾರ್ಯಸೂಚಿಯನ್ನು ಯಶಸ್ವಿಯಾಗಿ ಮುಂದುವರಿಸಿದ್ದಾರೆ. ಆದರೆ ಈ ಉಚ್ಛಾಟನೆ ನನ್ನ ಹೋರಾಟವನ್ನು ತಡೆಯಲಾರದು,” ಎಂದು ಸ್ಪಷ್ಟಪಡಿಸಿದ್ದಾರೆ.