Monday, June 30, 2025
HomeStateMurder Case : ಪ್ರೀತಿಸಿ ಮದುವೆಯಾದ ಪತಿಯ ಶೀಲ ಸಂಕಿಸಿ ಪತಿ, ಪತ್ನಿಗೆ ಚಿತ್ರಹಿಂಸೆ ...

Murder Case : ಪ್ರೀತಿಸಿ ಮದುವೆಯಾದ ಪತಿಯ ಶೀಲ ಸಂಕಿಸಿ ಪತಿ, ಪತ್ನಿಗೆ ಚಿತ್ರಹಿಂಸೆ ಕೊಟ್ಟು ಕೊಲೆ ಮಾಡಿಬಿಟ್ಟ….!

Murder Case – ಕಳೆದ ಮೂರು ವರ್ಷಗಳ ಹಿಂದೆಯಷ್ಟೇ ಪ್ರೀತಿಸಿ (Love Story) ಮದುವೆಯಾಗಿದ್ದ ಪತ್ನಿಯನ್ನು ಪತಿಯೇ ಚಿತ್ರಹಿಂಸೆ ಕೊಟ್ಟು ಕೊಂದಿರುವ ಘಟನೆ ಬೆಂಗಳೂರಿನ ಕೆಂಗೇರಿಯ (Bangalore Kengeri) ವಿಶ್ವೇಶ್ವರಯ್ಯ ಬಡಾವಣೆಯಲ್ಲಿ ನಡೆದಿದೆ. ಪತ್ನಿಯ ಶೀಲ ಶಂಕಿಸಿದ ಪತಿ, ಆಕೆಯನ್ನು ಕ್ರೂರವಾಗಿ ಹಿಂಸಿಸಿ ಕೊಲೆ (Murder Case) ಮಾಡಿದ್ದಾನೆ. ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ಕೆಂಗೇರಿ ಪೊಲೀಸರು ಕೊಲೆ ಮಾಡಿ ಪರಾರಿಯಾಗಿದ್ದ ಪತಿಯನ್ನು ಬಂಧಿಸಿ ಠಾಣೆಗೆ ಕರೆತಂದಿದ್ದಾರೆ. (Murder Case)  ಬಳಿಕ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ ಎನ್ನಲಾಗಿದೆ.

Navya murderd in bangalore 2

ಇನ್ನೂ ಮೃತ ದುರ್ದೈವಿಯನ್ನು ನವ್ಯಾ (25) (Murder Case)  ಎಂದು ಗುರ್ತಿಸಲಾಗಿದೆ. ಆಕೆಯ ಪತಿ ಕಿರಣ್ ಎಂಬಾತನೆ ಕೊಲೆ ಮಾಡಿದ್ದಾನೆ. ಈ ಜೋಡಿ ಬೆಂಗಳೂರಿನ ಕೆಂಗೇರಿಯ ವಿಶ್ವೇಶ್ವರಯ್ಯ ಲೇಔಟ್ ನಲ್ಲಿ (Murder Case) ವಾಸವಿದ್ದರು. ಪತ್ನಿ ನವ್ಯಾಳನ್ನು ಚೇರ್‍ ಗೆ ಕಟ್ಟಿಹಾಕಿ ಚಿತ್ರಹಿಂಸೆ ಕೊಟ್ಟಿದ್ದಾನೆ. ನೀನು ಬೇರೊಬ್ಬರೊಂದಿಗೆ ಅನೈತಿಕ ಸಂಬಂಧ ಹೊಂದಿದ್ದೀಯಾ, (Murder Case) ಯಾರು ಹೇಳು ಎಂದು ಕೇಳಿದ್ದಾನೆ. ಬಳಿಕ ಆಕೆಯನ್ನು ಕೊಲೆ ಮಾಡಿದ್ದಾನೆ.  (Murder Case) ಈ ಘಟನೆ ಆ.28ರ ಮದ್ಯಾಹ್ನದ ಜಾವ ನಡೆದಿದೆ ಎನ್ನಲಾಗಿದೆ.

Navya murderd in bangalore 0

ಇನ್ನೂ ಕಿರಣ್ ಹಾಗೂ ನವ್ಯಾ ಕಳೆದ ಮೂರು ವರ್ಷಗಳ ಹಿಂದೆ (Murder Case) ಪ್ರೀತಿಸಿ ಮದುವೆಯಾಗಿದ್ದರು. ನವ್ಯಾ ಸಿನಮಾ ರಂಗದಲ್ಲಿ ಕೊರಿಯೋಗ್ರಾಫರ್‍ ಆಗಿ ಕೆಲಸ ಮಾಡುತ್ತಿದ್ದಳು ಎನ್ನಲಾಗಿದೆ. ಪತಿ ಕಿರಣ್ ಕಾರು ಚಾಲಕನಾಗಿ ಕೆಲಸ ಮಾಡುತ್ತಿದ್ದನಂತೆ. (Murder Case) ಸಿನೆಮಾ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದ ನವ್ಯಾ ಮನೆಗೆ ಸಮಯಕ್ಕೆ ಸರಿಯಾಗ ಬರುತ್ತಿರಲಿಲ್ಲ. ಈ ಕಾರಣದಿಂದ ಹೆಂಡತಿಯೊಂದಿಗೆ ಜಗಳ ಮಾಡುತ್ತಿದ್ದ. ಇನ್ನೂ ಕೆಲಸದ ಒತ್ತಡದ ಕಾರಣದಿಂದ ಮನೆಗೆ (Murder Case)  ಲೇಟ್ ಆಗಿ ಬರುತ್ತಿದ್ದ ಕಾರಣದಿಂದ ಇಬ್ಬರ ನಡುವೆ ಆಗಾಗ ಜಗಳ ಆಗುತ್ತಿತ್ತು. ಇದನ್ನು ಅರ್ಥ ಮಾಡಿಕೊಳ್ಳದ ಪತಿ ಕಿರಣ್ ಹೆಂಡತಿಗೆ ಅನೈತಿಕ ಸಂಬಂಧವಿದೆ ಎಂದು ಆಕೆಯ ಶೀಲದ ಮೇಲೆ ಶಂಕೆ ವ್ಯಕ್ತಪಡಿಸುತ್ತಲೇ ಇದ್ದ. (Murder Case) ಆದರೆ ಪತ್ನಿ ಆಕೆಗೆ ಎಷ್ಟೇ ಪ್ರೀತಿಯಿಂದ ಹೇಳಿದರೂ ಆತನಿಗೆ ಮಾತ್ರ ಅನುಮಾನ ಹೋಗಿಲ್ಲ ಎನ್ನಲಾಗಿದೆ.

Navya murderd in bangalore 4

ಇನ್ನೂ ಶಿವಮೊಗ್ಗ ಜಿಲ್ಲೆಯ (Murder Case)  ಭದ್ರಾವತಿ ಮೂಲದವಳಾದ ನವ್ಯಾ ಕಿರಣ್ ನನ್ನು ಪ್ರೀತಿಸಿ ಮದುವೆಯಾದಳು. ಪೋಷಕರ ವಿರೋಧದ ನಡುವೆ ಮದುವೆಯಾದ ಈ ಜೋಡಿ ಬೆಂಗಳೂರಿನಲ್ಲಿ ವಾಸವಿದ್ದರು. (Murder Case) ತನ್ನ ಪತಿಯೇ ತನ್ನ ಮೇಲೆ ಅನುಮಾನ ಪಡುತ್ತಿದ್ದರೂ ಸಹ ನವ್ಯಾ ತಮ್ಮ ಮನೆಯವರನ್ನು ಕರೆಸಿ ರಾಜಿ ಮಾಡಿಸುವಂತೆ ಕೇಳುವುದು ಸಹ ಕಷ್ಟಕರವಾಗಿತ್ತು. (Murder Case) ಈ ಕಾರಣದಿಂದ ಪತಿ ಅನುಮಾನಿಸುತ್ತಿದ್ದರೂ ಸಹ ಸಹಿಸಿಕೊಂಡು ಹೋಗುತ್ತಿದ್ದಳು ಎನ್ನಲಾಗಿದೆ. (Murder Case) ಇದೀಗ ಕಿರಣ್ ತನ್ನ ಪತ್ನಿಯ ಮೇಲಿನ ಅನುಮಾನದ ಕಾರಣದಿಂದ ಆಕೆಗೆ ಚಿತ್ರಹಿಂಸೆ ಕೊಟ್ಟು ಕೊಲೆ ಮಾಡಿದ್ದಾನೆ. (Murder Case) ನೂರು ಕಾಲ ಬದುಕಬೇಕೆಂದು ಆಸೆಯಿಟ್ಟುಕೊಂಡಿದ್ದ ಯುವತಿಯ ಜೀವನ ದುರಂತ ಅಂತ್ಯ ಕಂಡಿದೆ.

by Adminhttp://ismkannadanews.com
Welcome to ISM Kannada News, if you want to contact us, then feel free to say anything about www.ismkannadanews.com
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular