Lokayukta : ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದ ಗುಡಿಬಂಡೆ ಗ್ರಾಮ ಆಡಳಿತಾಧಿಕಾರಿ…!

Lokayukta – ರೈತರೊಬ್ಬರಿಂದ ತಮ್ಮ ಜಮೀನು ಪೋಡಿ ಮಾಡಲು ಹಣ ಪಡೆಯುತ್ತಿದ್ದಾಗ ಗ್ರಾಮ ಆಡಳಿತಾಧಿಕಾರಿ ಲೋಕಾ ಬಲೆಗೆ ಬಿದ್ದಿದ್ದಾರೆ. ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲೂಕಿನ ಹಂಪಸಂದ್ರ ಕಂದಾಯ ವೃತ್ತದ ಗ್ರಾಮ ಆಡಳಿತಾಧಿಕಾರಿ ನಾಗರಾಜ್ ಜಮೀನು ಪೋಡಿ ಮಾಡಲು ಹಣ ಪಡೆಯುತ್ತಿದ್ದಾಗ ಸಿಕ್ಕಿಬಿದಿದ್ದಾನೆ.

Lokayukta officials catch Village Revenue Officer red-handed while accepting bribe

Lokayukta – ರೈತರ ಕೆಲಸ ಮಾಡಿಕೊಡಲು ಹಣಕ್ಕೆ ಬೇಡಿಕೆ

ಗುಡಿಬಂಡೆ ತಾಲೂಕಿನ ಬೆಣ್ಣೆಪರ್ತಿ ಗ್ರಾಮದ ರೈತ ಮಂಜುನಾಥ್ ರವರು ತಮ್ಮ 2.20 ಗುಂಟೆ ಜಮೀನನ್ನು ಪೋಡಿ ಹಾಗೂ ದುರಸ್ಥಿ ಮಾಡಿಸಲು ಗ್ರಾಮ ಆಡಳಿತಾಧಿಕಾರಿ ನಾಗರಾಜ್ ರವರಿಗೆ ಮನವಿ ಮಾಡಿದ್ದರು. ಆದರೆ ನಾಗರಾಜ್ ಈ ಕಾರ್ಯಕ್ಕಾಗಿ ಹಣಕ್ಕೆ ಬೇಡಿಕೆಯಿಟ್ಟಿದ್ದರಂತೆ. ಈ ಸಂಬಂಧ ರೈತ ಲೋಕಾಯುಕ್ತರಿಗೆ ದೂರು ನೀಡಿದ್ದಾರೆ. ಅದರಂತೆ ಡಿ.ವೈ.ಎಸ್.ಪಿ ವೀರೇಂದ್ರ ಕುಮಾರ್‍ ನೇತೃತ್ವದಲ್ಲಿ ದಾಳಿ ನಡೆಸಿ, ಹಣ ಪಡೆಯುತ್ತಿದ್ದ ನಾಗರಾಜ್ ರನ್ನು ಹಿಡಿದಿದ್ದಾರೆ.

ಮಾಹಿತಿಯ ಪ್ರಕಾರ ನಾಗರಾಜ್ 55 ಸಾವಿರ ಹಣ ಪಡೆಯುತ್ತಿದ್ದಾಗ ಲೋಕಾ ಬಲೆಗೆ ಸಿಲುಕಿದ್ದಾನೆ. ಈ ದಾಳಿಯಲ್ಲಿ ಲೋಕಾಯುಕ್ತ ಇನ್ಸ್‌ ಪೆಕ್ಟರ್‍ ನಿರ್ಮಲ ಹಾಗೂ ಸಿಬ್ಬಂದಿ ಹಾಜರಿದ್ದರು.

Leave a Comment

Your email address will not be published. Required fields are marked *

Scroll to Top