Sunday, June 29, 2025
HomeStateLocal News: ನಿಂತಿದ್ದ KSRTC ಬಸ್ ಗೆ ಟಿಪ್ಪರ್ ಡಿಕ್ಕಿ ಇಬ್ಬರು ಪ್ರಯಾಣಿಕರಿಗೆ ಗಾಯ…!

Local News: ನಿಂತಿದ್ದ KSRTC ಬಸ್ ಗೆ ಟಿಪ್ಪರ್ ಡಿಕ್ಕಿ ಇಬ್ಬರು ಪ್ರಯಾಣಿಕರಿಗೆ ಗಾಯ…!

Local News – ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ – ಗೌರಿಬಿದನೂರು ಮಾರ್ಗದ ಚಿಮಕಲಹಳ್ಳಿ ಬಳಿ KSRTC ಬಸ್ ಪ್ರಯಾಣಿಕರನ್ನು ಇಳಿಸಲು ನಿಲ್ಲಿಸಿದ್ದಾಗ  ವೇಗವಾಗಿ ಅಜಾಗರೂಕತೆಯಿಂದ ಬಂದ ಟಿಪ್ಪರ್ ಬಸ್ ನ ಹಿಂಬದಿಗೆ  ಟಿಪ್ಪರ್ ಡಿಕ್ಕಿಹೊಡೆದ ಪರಿಣಾಮ ksrtc ಬಸ್ ನಲ್ಲಿ ಇರುವ ಕೆಲವು ಪ್ರಯಾಣಿಕರಿಗೆ ಗಾಯವಾಗಿದ್ದು. ಇಬ್ಬರಿಗೆ ಗಂಭೀರವಾದ ಗಾಯಗೊಂಡು ಗುಡಿಬಂಡೆ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆ ಗೆ ಚಿಕ್ಕಬಳ್ಳಾಪುರ ಜಿಲ್ಲೆಯ ಆಸ್ಪತ್ರೆಗೆ ರವಾನಿಸಲಾಯಿತು.

Bus and Tipper accident 1

ಬಾಗೇಪಲ್ಲಿ-ಗುಡಿಬಂಡೆ- ಗೌರಿಬಿದನೂರು ತುಮಕೂರು ಮಾರ್ಗದ KSRTC ಬಸ್ ಎಂದಿನಂತೆ ಬಾಗೇಪಲ್ಲಿ, ಗುಡಿಬಂಡೆಯಲ್ಲಿ ಪ್ರಯಾಣಿಕರನ್ನು ಹತ್ತಿಸಿಕೊಂಡು ಗೌರಿಬಿದನೂರು ಗೆ ಹೋಗುವ ಮಾರ್ಗದಲ್ಲಿ ಚಿಮಕಲಹಳ್ಳಿ ಗ್ರಾಮದಲ್ಲಿ ಬಸ್ ನಲ್ಲಿ ಪ್ರಯಾಣಿಕರನ್ನು ಇಳಿಸುತ್ತಿರುವಾಗ ನಿಂತಿದ್ದ ಬಸ್ ಗೆ ಟಿಪ್ಪರ್ ಏಕಾ ಏಕಿ ಬಸ್ ನ ಹಿಂಬದಿಗೆ ಡಿಕ್ಕಿ ಹೊಡೆದಿದೆ. ಇಬ್ಬರು ಪ್ರಯಾಣಿಕರಿಗೆ ಗಂಭೀರವಾಗಿ ಗಾಯಗೊಂಡು ಚಿಕ್ಕಬಳ್ಳಾಪುರ ಜಿಲ್ಲೆಯ ಆಸ್ಪತ್ರೆಗೆ ರವಾನಿಸಲಾಗಿದೆ.

Bus and Tipper accident 2

ಗಾಯಗಳು ಗೌರಿಬಿದನೂರು ತಾಲ್ಲೂಕಿನ ಕೃಷ್ಣರಾಜಪುರ ಗ್ರಾಮದ ನರೇಂದ್ರ, ಮತ್ತು ಕೊಂಡರೆಡ್ಡಿ ಗ್ರಾಮದ ಶಿಲ್ಪ ಎಂದು ಗುರುತಿಸಲಾಗಿದೆ. ಟಿಪ್ಪರ್ ಗಳ ಹಾವಳಿ ಹೆಚ್ಚಾಗಿದ್ದು ಓವರ್ ಸ್ಪೀಡ್, ಓವರ್ ಟನೇಜ್ ಹಾಕಿಕೊಂಡು ಯಮದೂತರಂತೆ ಜೋರಾಗಿ ವಾಹನ ಓಡಿಸುತ್ತಾರೆ. ಈಗಾಗಲೇ ಇದೇ ರಸ್ತೆಯಲ್ಲಿ ಸುಮಾರು 6-7 ಜನರ ಸಾವು ಟಿಪ್ಪರ್ ಗಳಿಂದ ಆಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಈ ರಸ್ತೆಯಲ್ಲಿ ಬರುವ ಟಿಪ್ಪರ್ ಗಳನ್ನು ತಡೆದು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

by Adminhttp://ismkannadanews.com
Welcome to ISM Kannada News, if you want to contact us, then feel free to say anything about www.ismkannadanews.com
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular