Local News – ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪಟ್ಟಣದ ಪ್ರಾಥಮಿಕ ಕೃಷಿ ಪತ್ತಿನ ಸೇವಾ ಸಹಕಾರ ಸಂಘದ ಅಧ್ಯಕ್ಷ ಹೆಚ್.ಎನ್.ಮಂಜುನಾಥ್ ರವರ ಅಧ್ಯಕ್ಷತೆಯಲ್ಲಿ ಆಯೋಜಿಸಿದ್ದ ಸಾಮಾನ್ಯ ಸಭೆಯನ್ನು ಸಂಘದ ಕಾಂಗ್ರೇಸ್ ಬೆಂಬಲಿತ ನಿರ್ದೇಶಕರು ಬಹಿಷ್ಕರಿಸಿದ ಘಟನೆ ನಡೆಯಿತು. ಕಳೆದ ಡಿಸಿಸಿ ಬ್ಯಾಂಕ್ ನಿರ್ದೇಶಕರ ಚುನಾವಣೆಯಲ್ಲಿ ಹೆಚ್.ಎನ್.ಮಂಜುನಾಥ್ ರವರು ಬಿಜೆಪಿ-ಜೆಡಿಎಸ್ ಮೈತ್ರಿ ಸೇರಿದ್ದ ಹಿನ್ನೆಲೆಯಲ್ಲಿ ಸಭೆಯನ್ನು ಬಹಿಷ್ಕರಿಸಲಾಗಿದೆ. ಪ್ರಾಥಮಿಕ ಕೃಷಿ ಪತ್ತಿನ ಸೇವಾ ಸಹಕಾರ ಸಂಘದ ಉಪಾಧ್ಯಕ್ಷ ಜಿ.ವಿ.ಗಂಗಪ್ಪ, ನಿರ್ದೇಶಕರಾದ ಶ್ರೀನಿವಾಸ, ನರಸಿಂಹಮೂರ್ತಿ, ಜಾಕೀರ್, ರಾಜಾರೆಡ್ಡಿ, ಶಾಂತಮ್ಮ ಸಭೆಯನ್ನು ಬಹಿಷ್ಕರಿಸಿದರು.
Local News – ಅಧಿಕಾರಕ್ಕಾಗಿ ಪಕ್ಷಕ್ಕೆ ಮೋಸ ಮಾಡುವುದು ಸರಿಯಲ್ಲ: ಗಂಗಪ್ಪ
ಈ ಕುರಿತು ಗುಡಿಬಂಡೆ ಪಟ್ಟಣದ ಪ್ರಾಥಮಿಕ ಕೃಷಿ ಪತ್ತಿನ ಸೇವಾ ಸಹಕಾರ ಸಂಘದ ಉಪಾಧ್ಯಕ್ಷ ಜಿ.ವಿ.ಗಂಗಪ್ಪ ಮಾತನಾಡಿ, ಕಾಂಗ್ರೆಸ್ ಬೆಂಬಲದಿಂದ ಅವಿರೋಧವಾಗಿ ಅಧ್ಯಕ್ಷರಾಗಿ ಹಾಗೂ ಡೆಲಿಗೇಟ್ ಸದಸ್ಯನಾಗಿ ಹೆಚ್.ಎನ್.ಮಂಜುನಾಥರೆಡ್ಡಿಯನ್ನು ಆಯ್ಕೆ ಮಾಡಿದ್ದೇವೆ, ಆದರೆ ಅವರು ತನ್ನನ್ನು ಬೆಳೆಸಿದ ಪಕ್ಷಕ್ಕೆ ಹಾಗೂ ಅವರಿಗೆ ಬೆಂಬಿಸಿದ್ದ ನಮಗೆ ಮೋಸಮಾಡಿ ಬಿಜೆಪಿ-ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾಗಿ ಡಿಸಿಸಿ ಬ್ಯಾಂಕ್ ನಿರ್ದೇಶಕರ ಪಟ್ಟಕಟ್ಟಿಕೊಂಡಿದ್ದಾರೆ, ಸಹಕಾರ ಸಂಘವನ್ನುರಾಜಕೀಯವಾಗಿ ಬಳಸಿಕೊಂಡಿದ್ದಾರೆ, ಅಪರೇಷನ್ ಕಮಲ ಎಂದು ಬಂಡವಾಳ ಶಾಹಿಗಳು ಇಂದು ಸಹಕಾರ ಕ್ಷೇತ್ರಕ್ಕೆಎಂಟ್ರಿಕೊಟ್ಟಿದ್ದಾರೆ. ಇದು ಶಾಶ್ವತವಲ್ಲ ಕಾಂಗ್ರೆಸ್ ಪಕ್ಷಕ್ಕೆ ಹಾಗೂ ಅವರನ್ನುಆಯ್ಕೆ ಮಾಡಿದ ನಮಗೆ ಮೋಸ ಮಾಡಿದ ವ್ಯಕ್ತಿಯ ಅಧ್ಯಕ್ಷತೆಯಲ್ಲಿ ನಡೆಯುವ ಸಭೆಗೆ ನಮ್ಮ ಪಕ್ಷದ ಬೆಂಬಲಿತ 6 ನಿರ್ದೇಶಕರು ಸಭೆಯನ್ನು ಬಹಿಷ್ಕರಿಸಿ ಈ ಬಗ್ಗೆ ಶಾಸಕರೊಂದಿಗೆ ಮುಂದಿನ ದಿನಗಳಲ್ಲಿ ಅವಿಶ್ವಾಸ ಮಂಡನೆ ಮಾಡುವ ಬಗ್ಗೆ ಚರ್ಚೆಗಳನ್ನು ಮಾಡಿ ಮುಂದಿನ ತೀರ್ಮಾನ ತೆಗೆದುಕೊಳ್ಳುತ್ತೇವೆಂದು ಅಸಮದಾನ ವ್ಯಕ್ತಪಡಿಸಿದರು.
Local News – ರೈತರ ಹಿತ ಮುಖ್ಯ, ಪಕ್ಷಾಂತರ ಸರಿಯಲ್ಲ
ಬಳಿಕ ಕಾಂಗ್ರೇಸ್ ಮುಖಂಡ ಹೆಚ್.ಪಿ.ಲಕ್ಷ್ಮೀನಾರಾಯಣ ಮಾತನಾಡಿ, ಇತ್ತಿಚಿನ ರಾಜಕೀಯ ಬೆಳೆವಣಿಗೆಗಳಲ್ಲಿ ಅವಿಭಜಿತ ಕೋಲಾರ ಚಿಕ್ಕಬಳ್ಳಾಪುರ ದೊಡ್ಡ ಮಟ್ದದ ಸದ್ದು ಮಾಡುತ್ತಿದೆ, ಡಿಸಿಸಿ ಬ್ಯಾಂಕ್ ಚುನಾವಣೆಗೆ ನಮ್ಮ ಪಕ್ಷದ ಬೆಂಬಲಿತ ನಿರ್ದೇಶಕರನ್ನುಡೆಲಿಗೇಟ್ ಸದಸ್ಯನಾಗಿ ಸರ್ವಾನುಮತದಿಂದ ಆಯ್ಕೆ ಮಾಡಲಾಗಿತ್ತು, ಆದರೆ ಅವರು ಇದನ್ನುರಾಜಕಾರಣಕ್ಕೆ ಉಪಯೋಗಿಸಿಕೊಂಡು ಬೇರೆ ಪಕ್ಷಕ್ಕೆ ಹೋಗಿರುವುದರಿಂದ ಕ್ಷೇತ್ರದ ಅನೇಕ ಕಾಂಗ್ರೆಸ್ ಮುಖಂಡರಿಗೆ ನೋವು ಉಂಟು ಮಾಡುವಂತಾಗಿದೆ, ತಾಲೂಕಿನ ರೈತರಿಗೆ ಉತ್ತಮವಾದ ಸೇವೆ ಮಾಡುವ ಉದ್ದೇಶದಿಂದ ನಾವು ಅವರನ್ನುಆಯ್ಕೆ ಮಾಡಲಾಗಿತ್ತು, ಆದರೆ ಅವರು ರೈತರ ಅಭಿವೃದ್ದಿ ಕೆಲಸಗಳನ್ನು ಮಾಡದ ಪಕ್ಷದೊಂದಿಗೆ ಸೇರಿಕೊಂಡಿದ್ದಾರೆ.
ಈ ನಿಟ್ಟಿನಲ್ಲಿ ನಮ್ಮಕಾಂಗ್ರೆಸ್ ಬೆಂಬಲಿತ ನಿರ್ದೇಶಕರು ಸಾಮಾನ್ಯ ಸಭೆಯನ್ನು ಬಹಿಷ್ಕರಿಸಿದ್ದಾರೆ, ಇದರ ಜತೆಗೆ ಇತ್ತಿಚಿಗೆ ಎಲ್ಲಾ ಕ್ಷೇತ್ರಗಳಲ್ಲು ಸ್ವಷ್ಟ ಬಹುಮತ ಇದ್ದರು ಸಹ ಕಾಂಗ್ರೆಸ್ ಬೆಂಬಲಿತರಿಗೆ ಅನ್ಯಾಯಆಗುತ್ತಿರುವುದರಿಂದ ಈ ಬಗ್ಗೆ ಎಲ್ಲಾ ಕಾರ್ಯಕರ್ತರು ಶಾಸಕರೊಂದಿಗೆ ಸಭೆ ಸೇರಿ ಕೆಲ ತಿರ್ಮಾನಗಳನ್ನು ತೆಗೆದುಕೊಂಡು ಪಕ್ಷದ ಗೌರವ ಕಾಪಾಡಲು ಮುಂದಾಗುತ್ತೇವೆಂದು ತಿಳಿಸಿದರು.
Read this also : ಗುಡಿಬಂಡೆಯ ಸ್ಥಳೀಯ ಸಮಸ್ಯೆಗಳಿಗಾಗಿ ಸಿಪಿಎಂ ಹೋರಾಟ: ಜೂನ್ 20 ರಂದು ಬೃಹತ್ ಪ್ರತಿಭಟನೆ..!
Local News – ಅಧ್ಯಕ್ಷರ ಪ್ರತಿಕ್ರಿಯೆ: ಸಭೆ ಸಂಘದ ಅಭಿವೃದ್ಧಿಗಾಗಿ
ಪ್ರಾಥಮಿಕ ಕೃಷಿ ಪತ್ತಿನ ಸೇವಾ ಸಹಕಾರ ಸಂಘದ ಚುನಾವಣೆಯಲ್ಲಿ ನನ್ನನ್ನು ಸೇರಿಕೊಂಡಂತೆ 8 ನಿರ್ದೇಶಕರು ಕಾಂಗ್ರೆಸ್ ಪಕ್ಷದ ಬೆಂಬಲಿತದಿಂದ ಆಯ್ಕೆಯಾಗಿದ್ದೇವು, ಇದರಲ್ಲಿ ನನ್ನನ್ನು ಅಧ್ಯಕ್ಷರನ್ನಾಗಿ ಅವಿರೋಧವಾಗಿ ಆಯ್ಕೆ ಮಾಡಿದರು, ಆದರೆ ಕೆಲ ಅಂತರಿಕ ಒಪ್ಪಂದಗಳಿಂದ ನಾನು ಬೇರೆ ಪಕ್ಷಕ್ಕೆ ಹೋಗಬೇಕಾಗಿತ್ತು, ವಿಶೇಷವಾಗಿ ಇಂದಿನ ಸಭೆ ಸಂಘದ ಅಭಿವೃದ್ದಿಗೆ ವಿಚಾರಗಳನ್ನು ಮಾತನಾಡಲು ಕರೆದಿದ್ದು, ಸಭೆಯನ್ನು ನಡೆಸುತ್ತೇವೆ ಎಂದರು.