ನಗುಮುಖದ ಅಭಿನಯದ ಮೂಲಕ ಮನೆಮಾತಾಗಿದ್ದ ತಮಿಳು ಕಿರುತೆರೆಯ ಜನಪ್ರಿಯ ನಟಿ ಸುಭಾಷಿಣಿ ಬಾಲಸುಬ್ರಮಣ್ಯಂ (Subashini Balasubramaniam) ಅವರ ಸಾವಿನ ಸುದ್ಧಿ ಈಗ ಇಡೀ ದಕ್ಷಿಣ ಭಾರತದ ಚಿತ್ರರಂಗವನ್ನು ಬೆಚ್ಚಿಬೀಳಿಸಿದೆ. ‘ಕಯಲ್’ ಅಂತಹ ಹಿಟ್ ಧಾರಾವಾಹಿಯಲ್ಲಿ ನಟಿಸುತ್ತಿದ್ದ ಪ್ರತಿಭೆ, ಹೀಗೆ ಅರ್ಧದಲ್ಲೇ ಬದುಕಿನ ಪಯಣ ಮುಗಿಸುತ್ತಾರೆ ಎಂದು ಯಾರೂ ಊಹಿಸಿರಲಿಲ್ಲ. ಅದರಲ್ಲೂ ಅವರು ಪ್ರಾಣ ಬಿಡುವಾಗ ನಡೆದ ಘಟನೆಗಳು ಮಾತ್ರ ಮೈ ನಡುಗಿಸುವಂತಿದೆ.

Subashini Balasubramaniam – ಏನಿದು ಘಟನೆ?
ಮೂಲತಃ ಶ್ರೀಲಂಕಾದವರಾದ 36 ವರ್ಷದ ಸುಭಾಷಿಣಿ ಅವರು ವೃತ್ತಿ ಬದುಕಿಗಾಗಿ ಚೆನ್ನೈನಲ್ಲಿ ನೆಲೆಸಿದ್ದರು. ಇವರು ಬೆಂಗಳೂರು ಮೂಲದ ಬಿಪಿನ್ ಚಂದ್ರನ್ ಎಂಬುವವರನ್ನು ಪ್ರೀತಿಸಿ ಮದುವೆಯಾಗಿದ್ದರು. ಏಪ್ರಿಲ್ 5ರ ರಾತ್ರಿ ಸುಭಾಷಿಣಿ ಹಾಗೂ ಅವರ ಪತಿ ಬಿಪಿನ್ ನಡುವೆ ವಿಡಿಯೋ ಕಾಲ್ನಲ್ಲಿ ಸಂಭಾಷಣೆ ನಡೆಯುತ್ತಿತ್ತು. ಆದರೆ ಆ ಸಂಭಾಷಣೆ ಸುಖಾಂತ್ಯಗೊಳ್ಳುವ ಬದಲು ಭೀಕರ ದುರಂತದಲ್ಲಿ ಕೊನೆಯಾಗಿದೆ. ವಿಡಿಯೋ ಕಾಲ್ನಲ್ಲಿ ದಂಪತಿಗಳ ನಡುವೆ ಯಾವುದೋ ವಿಷಯಕ್ಕೆ ಮಾತಿನ ಚಕಮಕಿ ನಡೆದಿದ್ದು, ಜಗಳ ಜೋರಾದಾಗ ಆವೇಶಕ್ಕೆ ಒಳಗಾದ ಸುಭಾಷಿಣಿ ಅವರು ಕ್ಯಾಮೆರಾ ಆನ್ ಇರುವಾಗಲೇ ನೇಣು ಬಿಗಿದುಕೊಳ್ಳಲು ಮುಂದಾಗಿದ್ದಾರೆ.
ಪೊಲೀಸರು ಬರುವಷ್ಟರಲ್ಲಿ ಮುಗಿದಿತ್ತು ಬದುಕು
ಪರದೆಯ ಮೇಲೆ ಹೆಂಡತಿ ಪ್ರಾಣ ಕಳೆದುಕೊಳ್ಳುವುದನ್ನು ಲೈವ್ ಆಗಿ ನೋಡಿದ ಬಿಪಿನ್ ಅವರು ಗಾಬರಿಯಿಂದ ಕೂಡಲೇ ಚೆನ್ನೈನ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪತಿ ನೀಡಿದ ತುರ್ತು ಮಾಹಿತಿಯ ಮೇರೆಗೆ ಪೋರೂರ್ ಪೊಲೀಸರು (Subashini Balasubramaniam) ಕೂಡಲೇ ಸುಭಾಷಿಣಿ ಅವರ ಫ್ಲಾಟ್ಗೆ ಧಾವಿಸಿದರು. ಬಾಗಿಲು ಒಡೆದು ಒಳಹೋಗುವಷ್ಟರಲ್ಲಿ ಸುಭಾಷಿಣಿ ಅಸುನೀಗಿದ್ದರು. ಕೂಡಲೇ ಅವರನ್ನು ಆಸ್ಪತ್ರೆಗೆ ಕೊಂಡೊಯ್ಯುವ ಪ್ರಯತ್ನ ನಡೆಸಿದರೂ ಸಹ ಅಷ್ಟರಲ್ಲೇ ಅವರ ಉಸಿರು ನಿಂತಿತ್ತು ಎಂಬ ಕಹಿ ಸತ್ಯ ಹೊರಬಂದಿದೆ.
ತನಿಖೆಯ ಹಾದಿಯಲ್ಲಿ ಪೊಲೀಸ್ ಪಡೆ
ಸದ್ಯ ಸುಭಾಷಿಣಿ ಅವರ ಮೊಬೈಲ್ ಫೋನ್ ಅನ್ನು ಪೊಲೀಸರು ವಶಕ್ಕೆ ಪಡೆದಿದ್ದು ತನಿಖೆ ಚುರುಕುಗೊಳಿಸಿದ್ದಾರೆ. ಈ ಸಾವಿನ ಹಿಂದೆ ಕೇವಲ ಕ್ಷಣಿಕ ಜಗಳವಿದೆಯೇ ಅಥವಾ ದೀರ್ಘಕಾಲದ ಮಾನಸಿಕ ಒತ್ತಡ ಅಥವಾ ಕೌಟುಂಬಿಕ ಕಲಹವಿತ್ತೇ ಎಂಬ ನಿಟ್ಟಿನಲ್ಲಿ ಪೊಲೀಸರು ಮಾಹಿತಿ ಕಲೆಹಾಕುತ್ತಿದ್ದಾರೆ. ಕಾಲ್ ರೆಕಾರ್ಡ್ಸ್ ಮತ್ತು ಸಂದೇಶಗಳನ್ನು (Subashini Balasubramaniam) ಪರಿಶೀಲಿಸಲಾಗುತ್ತಿದ್ದು, ಬೆಂಗಳೂರಿನಲ್ಲಿರುವ ಪತಿ ಬಿಪಿನ್ ಅವರನ್ನು ಶೀಘ್ರದಲ್ಲೇ ವಿಚಾರಣೆಗೆ ಒಳಪಡಿಸಿ ಹೆಚ್ಚಿನ ಮಾಹಿತಿ ಪಡೆಯಲಾಗುವುದು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. Read this also : ರೈಲಿನ ಶೌಚಾಲಯದಲ್ಲಿ ನಡುಗುತ್ತಾ ಅಳುತ್ತಿದ್ದ ನವಜಾತ ಶಿಶು! ಬಾಗಿಲು ತೆರೆದ ಪ್ರಯಾಣಿಕನಿಗೆ ಕಾದಿತ್ತು ಬಿಗ್ ಶಾಕ್!

ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳ ಕಂಬನಿ
ಸುಭಾಷಿಣಿ (Subashini Balasubramaniam) ಅವರ ಅನಿರೀಕ್ಷಿತ ಸಾವು ಅವರ ಸಹನಟರು ಮತ್ತು ಸಾವಿರಾರು ಅಭಿಮಾನಿಗಳಲ್ಲಿ ತೀವ್ರ ಆಘಾತ ಮೂಡಿಸಿದೆ. ಇಷ್ಟು ಚಿಕ್ಕ ವಯಸ್ಸಿಗೆ ಇಂತಹ ಕಠಿಣ ನಿರ್ಧಾರ ತೆಗೆದುಕೊಳ್ಳಬಾರದಿತ್ತು ಎಂದು ನೆಟ್ಟಿಗರು ಸಾಮಾಜಿಕ ಜಾಲತಾಣಗಳಲ್ಲಿ ಕಂಬನಿ ಮಿಡಿಯುತ್ತಿದ್ದಾರೆ. ಬದುಕಿನಲ್ಲಿ ಎಷ್ಟೇ ದೊಡ್ಡ ಸಮಸ್ಯೆಗಳಿದ್ದರೂ ಸಾವು ಎಂದಿಗೂ ಅಂತಿಮ ಪರಿಹಾರವಲ್ಲ ಎಂಬ ಸಂದೇಶಗಳೊಂದಿಗೆ ಅಭಿಮಾನಿಗಳು ತಮ್ಮ ನೆಚ್ಚಿನ ನಟಿಗೆ ಸಂತಾಪ ಸೂಚಿಸುತ್ತಿದ್ದಾರೆ. ಒಬ್ಬ ಪ್ರತಿಭಾವಂತ ಕಲಾವಿದೆಯನ್ನು ಕಳೆದುಕೊಂಡಿರುವುದು ಕಿರುತೆರೆ ಲೋಕಕ್ಕೆ ನಿಜಕ್ಕೂ ತುಂಬಲಾರದ ನಷ್ಟವಾಗಿದೆ.

ನಮಸ್ಕಾರ, ನಾನು ಬಾಲಾಜಿ ಆರ್. 10+ ವರ್ಷಗಳ ಅನುಭವ ಹೊಂದಿರುವ ಕಂಟೆಂಟ್ ರೈಟರ್ ಹಾಗೂ ಕಾಪಿ ಎಡಿಟರ್ ಆಗಿದ್ದು, ಹಣಕಾಸು, ಸರ್ಕಾರಿ ಯೋಜನೆಗಳು, ತಂತ್ರಜ್ಞಾನ, ವೈರಲ್ ಸುದ್ದಿ, ರಾಜಕೀಯ ಸುದ್ದಿ ಮತ್ತು ಸಿನಿಮಾ ಸುದ್ದಿಗಳ ಬಗ್ಗೆ ಬರೆಯುತ್ತೇನೆ. ಸಂಕೀರ್ಣ ಮಾಹಿತಿಯನ್ನು ಸರಳವಾಗಿ ನೀಡುವುದು ನನ್ನ ಉದ್ದೇಶ. ISM Kannada News ಮೂಲಕ ನಿಖರ ಮತ್ತು ಉಪಯುಕ್ತ ಮಾಹಿತಿಯನ್ನು ಹಂಚಿಕೊಳ್ಳುತ್ತೇನೆ.
