ಸರ್ಕಾರ ಆಪರೇಷನ್ ಮಾಡೋಕೆ ಬಿಡೊಲ್ಲ ಎಂದ ಸಿಎಂ ಸಿದ್ದರಾಮಯ್ಯ, ಆಪರೇಷನ್ ವಿಚಾರಕ್ಕೆ ಫೈರ್ ಆದ ಸಿಎಂ ಸಿದ್ದು……!

ಕರ್ನಾಟಕದಲ್ಲಿ ಲೋಕಸಭಾ ಚುನಾವಣೆಯ ಬಳಿಕ ಕಾಂಗ್ರೇಸ್ ಸರ್ಕಾರ ಬೀಳಲಿದೆ ಎಂಬ ಹೇಳಿಕೆಗಳು ಕೇಳಿಬರುತ್ತಲೇ ಇದೆ. ಇದೀಗ ಮಹಾರಾಷ್ಟ್ರ ಸಿಎಂ ಏಕನಾಥ ಶಿಂಧೆ ರವರು ಆಪರೇಷನ್ ಕುರಿತಂತೆ ಸುಳಿವು ನೀಡಿದ್ದು, ಈ ಕುರಿತು ಕರ್ನಾಟಕ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದಾರೆ. ರಾಜ್ಯದಲ್ಲಿ ಆಪರೇಷನ್ ಮಾಡೋಕೆ ಬಿಡುವ ಪ್ರಶ್ನೆಯೇ ಇಲ್ಲ ಎಂದು ಸಿಎಂ ಸಿದ್ದು ಕೌಂಟರ್‍ ಕೊಟ್ಟಿದ್ದಾರೆ.

CM siddaramaiah counter to operation kamala

ಮಹಾರಾಷ್ಟ್ರ ಮುಖ್ಯಮಂತ್ರಿ (Ekanath Shinde) ಕಾರ್ಯಕ್ರಮವೊಂದರಲ್ಲಿ ಕರ್ನಾಟಕ ಸರ್ಕಾರ ಪತನದ ಬಗ್ಗೆ ಮಾತನಾಡಿದ್ದಾರೆ. ಕರ್ನಾಟಕ ಸರ್ಕಾರ ಪತನ ಮಾಡೋಕೆ ತೆರೆಮೆರೆಯಲ್ಲಿ ಪ್ರಯತ್ನಗಳು ನಡೆಯುತ್ತಿವೆ ಎಂಬ ಸ್ಪೋಟಕ ಹೇಳಿಕೆಯೊಂದನ್ನು ನೀಡಿದ್ದಾರೆ. ಇತ್ತೀಚಿಗೆ ಕರ್ನಾಟಕದ ಸಭೆಯೊಂದಕ್ಕೆ ತೆರಳಿದೆ. ಕರ್ನಾಟಕದಲ್ಲಿಯೂ ’ನಾಥ’ ಆಪರೇಷನ್ ಮಾಡೋದಿದೆ ಎಂದು ಹೇಳಿದರು. ಅದಕ್ಕೆ ನಾನು ನಾಥ ಆಪರೇಷನ್ ಅಂದರೇ ಏನು ಅಂತಾ ಕಳಿದ್ದೆ, ಅದಕ್ಕೆ ನೀವು ಮಹಾರಾಷ್ಟ್ರದ ಮಹಾಘಟಬಂಧನ ಸರ್ಕಾರ ಪತನ ಮಾಡಿದ್ರಿ, ಹೀಗಾಗಿ ನಿಮ್ಮ ಅನುಭವ ಸಲಹೆ ನಮಗೆ ತುಂಬಾ ಅವಶ್ಯಕತೆಯಿದೆ ಎಂದು ಹೇಳಿದರು. ಅದಕ್ಕೆ ಖಂಡಿತ ನಾನು ಬರುತ್ತೇನೆ ಎಂದು ಹೇಳಿದ್ದೇನೆ ಎಂದು ಹೇಳುವ ಮೂಲಕ ಆಪರೇಷನ್ ಮಾಡುವ ಬಗ್ಗೆ ಸುಳಿವು ಕೊಟ್ಟಿದ್ದರು.

CM siddaramaiah counter to operation kamala 2

ಇನ್ನೂ ಈ ಕುರಿತು ಮಾತನಾಡಿದ ಸಿಎಂ ಸಿದ್ದರಾಮಯ್ಯ ಮಹಾರಾಷ್ಟ್ರ ಸಿಎಂ ಆಪರೇಷನ್ ಬಗ್ಗೆ ಸುಳಿವು ನೀಡಿದ್ದು, ಅದು ಅವರ ಭ್ರಮೆಯಷ್ಟೆ. ಆಪರೇಷನ್ ಕಮಲ್ ಮಾಡಲು ಸಾಧ್ಯವೇ ಇಲ್ಲ. ಪಾರ್ಲಿಮೆಂಟ್ ನಲ್ಲಿ ಸೋಲುತ್ತಿದ್ದಾರೆ, ಎನ್.ಡಿ.ಎ ಸೋಲುತ್ತಿದೆ. ಅವರು ಕಳೆದ ಒಂದು ವರ್ಷದಿಂದ ಪ್ರಯತ್ನ ಮಾಡಿ ವಿಫಲರಾಗಿದ್ದಾರೆ ಆದರೂ ಸಹ ಆಪರೇಷನ್ ಮಾಡುತ್ತಲೇ ಇದ್ದಾರೆ. ಆದರೆ ಅವರ ಪ್ರಯತ್ನಗಳು ಯಶಸ್ವಿಯಾಗುವುದಿಲ್ಲ. ಲೋಕಸಭಾ ಚುನಾವಣೆಯಲ್ಲಿ ನಾವು 20 ಕ್ಷೇತ್ರಗಳನ್ನು ಗೆಲ್ಲುತ್ತೇವೆ. ಅವರು ಲೋಕಸಭಾ ಚುನಾವಣೆಯಲ್ಲಿ ಸೋಲುತ್ತಾರೆ. ಈ ಹತಾಶೆಯಿಂದ ಸರ್ಕಾರ ಪತನ ಮಾಡುವ ಹೇಳಿಕೆ ಕೊಡುತ್ತಿದ್ದಾರೆ ಎಂದು ಕೌಂಟರ್‍ ಕೊಟ್ಟಿದ್ದಾರೆ.

Leave a Comment

Your email address will not be published. Required fields are marked *

Scroll to Top