ಪ್ರೀತಿ ಎನ್ನುವುದು ನಂಬಿಕೆಯ ಮೇಲೆ ನಿಂತಿರುತ್ತದೆ. ಆದರೆ ಅದೇ ಪ್ರೀತಿ ವಿಕೃತ ರೂಪ ತಾಳಿದಾಗ ಎಂತಹ ಘೋರ ಅನಾಹುತ ಸಂಭವಿಸಬಹುದು ಎಂಬುದಕ್ಕೆ ಇಂದೋರ್ ನ (Indore Murder Case) ಈ ಘಟನೆಯೇ ಸಾಕ್ಷಿ. ಎಂಬಿಎ ವಿದ್ಯಾರ್ಥಿನಿಯೊಬ್ಬಳನ್ನು ಆಕೆಯ ಸಹಪಾಠಿಯೇ ಬರ್ಬರವಾಗಿ ಹತ್ಯೆಗೈದ ಪ್ರಕರಣ ಈಗ ಇಡೀ ನಗರವನ್ನೇ ನಡುಗಿಸಿದೆ. ಕೇವಲ ಕೊಲೆ ಮಾತ್ರವಲ್ಲದೆ, ಆ ಬಳಿಕ ಆರೋಪಿ ನಡೆಸಿದ ಕೃತ್ಯಗಳು ಮನುಕುಲವೇ ತಲೆತಗ್ಗಿಸುವಂತಿವೆ.

Indore Murder Case – ಚಾಕು ಮುರಿಯುವವರೆಗೂ ಇರಿದ ವಿಕೃತ ಮತಿ
ಇಂದೋರ್ನ ದ್ವಾರಕಾಪುರಿ ಪ್ರದೇಶದಲ್ಲಿ ನಡೆದ ಈ ಘಟನೆಯ ಆರೋಪಿ ಪಿಯೂಷ್ ಧಮ್ನೋಟಿಯಾ ಈಗ ಪೊಲೀಸ್ ಕಸ್ಟಡಿಯಲ್ಲಿದ್ದಾನೆ. ತನಿಖೆಯ ವೇಳೆ ಆತ ನೀಡುತ್ತಿರುವ ಹೇಳಿಕೆಗಳು ಪೊಲೀಸರನ್ನೇ ದಂಗಾಗಿಸಿವೆ. ಫೆಬ್ರವರಿ 10ರಂದು ನಡೆದ ಈ ಕೃತ್ಯದಲ್ಲಿ, ಪಿಯೂಷ್ ತನ್ನ ಗೆಳತಿಯನ್ನು ನಂಬಿಸಿ ಕೋಣೆಗೆ ಕರೆತಂದಿದ್ದ. ಲೈಂಗಿಕವಾಗಿ ಕಿರುಕುಳ ನೀಡಲು ಯತ್ನಿಸಿದಾಗ ಆಕೆ ವಿರೋಧಿಸಿದ್ದಾಳೆ. ಇದರಿಂದ ಆಕ್ರೋಶಗೊಂಡ ಆತ, ಆಕೆಯ ಎದೆಯ ಮೇಲೆ ಹತ್ತಿ ಕುಳಿತು ಚಾಕುವಿನಿಂದ ಎಷ್ಟು ಬಲವಾಗಿ ಇರಿದಿದ್ದಾನೆಂದರೆ, ಚಾಕುವಿನ ಹಿಡಿಕೆಯೇ ಮುರಿದು ಹೋಗಿದೆ!
ಕೊಲೆಯ ನಂತರ ಬಿಯರ್ ಪಾರ್ಟಿ, ಶವದ ಮೇಲೆ ದೌರ್ಜನ್ಯ!
ಈ ಪ್ರಕರಣದ ಅತ್ಯಂತ ಭೀಕರ ಭಾಗವೆಂದರೆ ಕೊಲೆಯ ನಂತರದ ಆರೋಪಿಯ ನಡವಳಿಕೆ. ಆಕೆ ಪ್ರಾಣ ಬಿಟ್ಟಿದ್ದಾಳೆ ಎಂದು ತಿಳಿದ ಮೇಲೂ ಪಿಯೂಷ್ಗೆ ಪಶ್ಚಾತ್ತಾಪವಾಗಲಿಲ್ಲ. (Indore Murder Case) ಬದಲಿಗೆ ಕೋಣೆಯಿಂದ ಹೊರಬಂದು ಮದ್ಯದ ಅಂಗಡಿಯಿಂದ ಬಿಯರ್ ಖರೀದಿಸಿ ತಂದಿದ್ದಾನೆ. ನಿರ್ಜೀವ ದೇಹದ ಪಕ್ಕದಲ್ಲೇ ಕುಳಿತು ಮದ್ಯ ಸೇವಿಸಿದ್ದಾನೆ. ಅಷ್ಟೇ ಅಲ್ಲದೆ, ಶವದ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವುದಾಗಿ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾನೆ. Read this also : ಇಂದೋರ್ನಲ್ಲಿ ಭೀಕರ ಕೃತ್ಯ: ಪಾರ್ಟಿ ಮುಗಿಸಿ ಬರುತ್ತಿದ್ದ ಯುವತಿ ಮೇಲೆ ನಾಲ್ವರು ಕಾಮುಕರಿಂದ ಹಲ್ಲೆ!
ಆತ್ಮವನ್ನು ಕರೆಯಲು ಯೂಟ್ಯೂಬ್ ಮೊರೆ ಹೋದ ಹಂತಕ!
ಕೊಲೆ ಮಾಡಿ ಮುಂಬೈಗೆ ಪರಾರಿಯಾಗಿದ್ದ ಪಿಯೂಷ್, ಅಲ್ಲಿ ಹೋಟೆಲ್ಗಳಲ್ಲಿ ತಂಗಿದ್ದ. ಅಲ್ಲಿ ಆತ ಗೂಗಲ್ ಮತ್ತು ಯೂಟ್ಯೂಬ್ನಲ್ಲಿ “ಆತ್ಮವನ್ನು ಕರೆಯುವುದು ಹೇಗೆ?” ಎಂದು ಸರ್ಚ್ ಮಾಡಿದ್ದಾನೆ. ಧೂಪ ಬೆಳಗಿ ಆಕೆಯ ಆತ್ಮದೊಂದಿಗೆ ಮಾತನಾಡಲು ಸಂಚು ರೂಪಿಸಿದ್ದ. ತಾನು ಮಾಡಿದ ಕೃತ್ಯಕ್ಕೆ ಕ್ಷಮೆಯಾಚಿಸಿ, ಮತ್ತೆ (Indore Murder Case) ಆಕೆಯೊಂದಿಗೆ ಸಂವಹನ ನಡೆಸಲು ಬಯಸಿದ್ದಾಗಿ ಪೊಲೀಸರ ಮುಂದೆ ಹೇಳಿಕೊಂಡಿದ್ದಾನೆ. “ಆಕೆ ನನ್ನನ್ನು ಪ್ರೀತಿಸುತ್ತಿದ್ದಳು, ಆದರೆ ಕಳೆದ 15 ದಿನಗಳಿಂದ ಬೇರೊಬ್ಬನ ಜೊತೆ ಚಾಟ್ ಮಾಡುತ್ತಿದ್ದಳು. ನಾನು ಆಕೆಯನ್ನು ಮದುವೆಯಾಗಲು ಬಯಸಿದ್ದೆ, ಅದೇ ಕೋಪದಲ್ಲಿ ಈ ಕೃತ್ಯ ಎಸಗಿದೆ” ಎಂದು ಆರೋಪಿ ಸಮರ್ಥಿಸಿಕೊಂಡಿದ್ದಾನೆ.

ಸಿಸಿಟಿವಿ ಮತ್ತು ವಾಟ್ಸಾಪ್ ಗ್ರೂಪ್ ಕೊಂಡಿ
ಆಧಾರ್ ಕಾರ್ಡ್ ಸರಿಪಡಿಸಲು (Indore Murder Case) ಹೋದ ಮಗಳು ಮರಳಿ ಬಾರದಿದ್ದಾಗ ಪೋಷಕರು ದೂರು ನೀಡಿದ್ದರು. ಸಿಸಿಟಿವಿ ದೃಶ್ಯಾವಳಿಗಳನ್ನು ಗಮನಿಸಿದಾಗ ಪಿಯೂಷ್ ಜೊತೆ ಆಕೆ ಹೋಗಿರುವುದು ಪತ್ತೆಯಾಯಿತು. ಇನ್ನು ಆಕೆಯ ಮೊಬೈಲ್ನಿಂದ “ಅಪ್ಪಾ ನಾನು ಮನೆಗೆ ಬರುವುದಿಲ್ಲ” ಎಂಬ ಸಂದೇಶ ಬಂದಿತ್ತು. ಇಬ್ಬರೂ ಕಾಲೇಜಿನ ವಾಟ್ಸಾಪ್ ಗ್ರೂಪ್ನಲ್ಲಿ 11 ವಿಡಿಯೋಗಳನ್ನು ಹಂಚಿಕೊಂಡಿದ್ದರು. ಇವೆಲ್ಲವೂ ತನಿಖೆಗೆ ಪ್ರಮುಖ ಸಾಕ್ಷ್ಯಗಳಾಗಿವೆ. ಪ್ರಸ್ತುತ ಪೊಲೀಸರು ಆರೋಪಿಯನ್ನು ಹೆಚ್ಚಿನ ವಿಚಾರಣೆಗಾಗಿ ಮೂರು ದಿನಗಳ ಕಸ್ಟಡಿಗೆ ಪಡೆದಿದ್ದು, ಈ ವಿಕೃತ ಹತ್ಯಾಕಾಂಡದ ಹಿಂದಿರುವ ಇನ್ನಷ್ಟು ಕರಾಳ ಸತ್ಯಗಳು ಹೊರಬರಬೇಕಿದೆ.
