“ಕಲೆಕ್ಟರ್ ಸಾಹೇಬ್ರು ನಮ್ಮಂತ ಬಡವರನ್ನು ಭೇಟಿಯೇ ಮಾಡಲ್ಲ…” – ಇದು ಮಧ್ಯಪ್ರದೇಶದ ಇಂದೋರ್ ಜಿಲ್ಲಾಧಿಕಾರಿ ಕಚೇರಿಯಲ್ಲಿ ಕೇಳಿಬಂದ ಒಬ್ಬ ಅಸಹಾಯಕ ಮಗನ ಆಕ್ರೋಶದ ನುಡಿಗಳು. ತನ್ನ ವೃದ್ಧ ತಾಯಿಯ ಕೈಹಿಡಿದು, ಕಣ್ಣೀರು ಹಾಕುತ್ತಲೇ ವ್ಯವಸ್ಥೆಯ ವಿರುದ್ಧ ಆತ ಕಿಡಿಕಾರುತ್ತಿರುವ ವಿಡಿಯೋ (Viral Video) ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.
Viral Video – ನಡೆದದ್ದೇನು?
ಇಂದೋರ್ನಲ್ಲಿ ಗುರುವಾರ ನಡೆದ ಸಾರ್ವಜನಿಕ ಕುಂದುಕೊರತೆ ಆಲಿಸುವ (Public Hearing) ಕಾರ್ಯಕ್ರಮದಲ್ಲಿ ಈ ಘಟನೆ ನಡೆದಿದೆ. ದಿನಗೂಲಿ ಕೆಲಸ ಮಾಡುವ ವ್ಯಕ್ತಿಯೊಬ್ಬರು ತಮ್ಮ ವೃದ್ಧ ತಾಯಿಯನ್ನು ಕರೆದುಕೊಂಡು ಕಲೆಕ್ಟರ್ ಕಚೇರಿಗೆ ಬಂದಿದ್ದರು. ಕಾರಣವಿಷ್ಟೇ, ಮತದಾರರ ಪಟ್ಟಿಯಿಂದ (SIR list) ಅವರ ಹೆಸರನ್ನು ಕೈಬಿಡಲಾಗಿತ್ತು. ಎಲ್ಲಾ ಅಗತ್ಯ ದಾಖಲೆಗಳಿದ್ದರೂ ಅಧಿಕಾರಿಗಳು ಸರಿಯಾಗಿ ಸ್ಪಂದಿಸುತ್ತಿಲ್ಲ ಎಂಬುದು ಅವರ ಅಳಲಾಗಿತ್ತು.
ಅಧಿಕಾರಿಗಳ ನಿರ್ಲಕ್ಷ್ಯದ ಆರೋಪ:
ವೈರಲ್ ಆಗಿರುವ ವಿಡಿಯೋದಲ್ಲಿ ಆ ವ್ಯಕ್ತಿ (Viral Video) ಅತಿಯಾದ ನೋವು ಮತ್ತು ಕೋಪದಿಂದ ಕಿರುಚುತ್ತಿರುವುದನ್ನು ಕಾಣಬಹುದು. “ನನ್ನ ತಂದೆ ತೀರಿಹೋಗಿದ್ದಾರೆ, ತಾಯಿಗೆ ಕಣ್ಣು ಕಾಣಿಸಲ್ಲ. ನಾನೊಬ್ಬ ದಿನಗೂಲಿ ಕಾರ್ಮಿಕ, ಪ್ರತಿ ದಿನ ಕೆಲಸ ಬಿಟ್ಟು ಇಲ್ಲಿಗೆ ಅಲೆಯಲು ನನಗಾಗುವುದಿಲ್ಲ. ಬೂತ್ ಮಟ್ಟದ ಅಧಿಕಾರಿಗಳು (BLO) ನನ್ನ ದೂರಿಗೆ ಬೆಲೆ ಕೊಡುತ್ತಿಲ್ಲ. ಕಲೆಕ್ಟರ್ ಸಾಹೇಬರು ನಮ್ಮನ್ನು ಭೇಟಿ ಮಾಡುತ್ತಿಲ್ಲ,” ಎಂದು ಅವರು ಅಳಲು ತೋಡಿಕೊಂಡಿದ್ದಾರೆ. Read this also : ಮಗುವಿನ ಮೇಲೆಯೇ ಕಾಮದೃಷ್ಟಿ: ಕಿವುಡ-ಮೂಕ ಯುವತಿ ಮೇಲೆ ತಂದೆಯಿಂದಲೇ ಅತ್ಯಾ**ಚಾರ, ಡಿಎನ್ಎ ಟೆಸ್ಟ್ನಿಂದ ಬಯಲಾಯ್ತು ಸತ್ಯ!
ವರದಿಗಳ ಪ್ರಕಾರ, ಅಧಿಕಾರಿಗಳನ್ನು ಭೇಟಿ ಮಾಡಲು ಬೇಕಾದ ‘ಸ್ಲಿಪ್’ ಪಡೆಯದ ಕಾರಣ ಅವರನ್ನು ಒಳಗೆ ಬಿಡಲಾಗಿರಲಿಲ್ಲ. ಇದೇ ವಿಷಯಕ್ಕೆ ಅಲ್ಲಿ ಮಾತಿನ ಚಕಮಕಿ ನಡೆದು, (Viral Video) ಪರಿಸ್ಥಿತಿ ಕೈಮೀರಿ ಹೋಗಿದೆ.
ನೆಟ್ಟಿಗರ ಆಕ್ರೋಶ:
ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದಂತೆ, ಜನರು ಆಡಳಿತ ವ್ಯವಸ್ಥೆಯ ವಿರುದ್ಧ ಕಿಡಿಕಾರುತ್ತಿದ್ದಾರೆ. “ಬಡವರಿಗೆ ನ್ಯಾಯ ಸಿಗುವುದು ಇಷ್ಟೊಂದು ಕಷ್ಟವೇ?” ಎಂದು ನೆಟ್ಟಿಗರು ಪ್ರಶ್ನಿಸುತ್ತಿದ್ದಾರೆ. ಒಂದು ಕಡೆ ಸರ್ಕಾರ ಮತದಾನದ ಬಗ್ಗೆ ಜಾಗೃತಿ ಮೂಡಿಸುತ್ತಿದ್ದರೆ, ಇನ್ನೊಂದೆಡೆ ಅರ್ಹ (Viral Video) ಮತದಾರರ ಹೆಸರುಗಳು ಪಟ್ಟಿಯಿಂದ ಮಾಯವಾಗುತ್ತಿರುವುದು ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿದೆ.
ವೈರಲ್ ವಿಡಿಯೋ ಇಲ್ಲಿದೆ ನೋಡಿ : Click Here
ಮುಂದೇನು?
ಸದ್ಯಕ್ಕೆ ಜಿಲ್ಲಾಡಳಿತದಿಂದ ಈ ಬಗ್ಗೆ ಯಾವುದೇ ಅಧಿಕೃತ ಹೇಳಿಕೆ (Viral Video) ಹೊರಬಂದಿಲ್ಲ. ವಿಡಿಯೋದಲ್ಲಿರುವ ವ್ಯಕ್ತಿ ಮತ್ತು ಅವರ ತಾಯಿಯನ್ನು ಪತ್ತೆ ಹಚ್ಚುವ ಪ್ರಯತ್ನಗಳು ನಡೆಯುತ್ತಿವೆ ಎಂದು ತಿಳಿದುಬಂದಿದೆ. ಅಧಿಕಾರಿಗಳು ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಆ ಬಡ ಕುಟುಂಬಕ್ಕೆ ನ್ಯಾಯ ಒದಗಿಸುತ್ತಾರೆಯೇ ಎಂದು ಕಾದು ನೋಡಬೇಕಿದೆ.


